AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh: ಎದೆ ಹಾಲು ಸೇವಿಸಿ 111 ನವಜಾತ ಶಿಶುಗಳು ಸಾವು! ಇದಕ್ಕೆ ಕಾರಣ ಮಾಂಸಾಹಾರ ಎನ್ನತ್ತಿದ್ದಾರೆ ವೈದ್ಯರು

ಇಂದಿನ ದಿನಗಳಲ್ಲಿ ಎಲ್ಲವೂ ಕಲಬೆರಕೆಯಾಗಿದೆ. ತರಕಾರಿಯಿಂದ ವಿವಿಧ ರೀತಿಯ ವಸ್ತುಗಳಲ್ಲಿ ಕಲಬೆರಕೆ ನಡೆಯುತ್ತಿದೆ. ಅದರಲ್ಲೂ ಹೆಚ್ಚಿನ ಬೆಳೆದ ತರಕಾರಿಗಳಲ್ಲಿ ವಿವಿಧ ಬಗೆಯ ಕೀಟನಾಶಕ ಸಿಂಪಡಿಸಲಾಗುತ್ತದೆ. ಇದನ್ನು ಸೇವಿಸಿದ ನಮ್ಮ ದೇಹದೊಳಗೂ ಮಾರಕ ಕೀಟನಾಶಕಗಳು ಸೇರುತ್ತವೆ.

Uttar Pradesh: ಎದೆ ಹಾಲು ಸೇವಿಸಿ 111 ನವಜಾತ ಶಿಶುಗಳು ಸಾವು! ಇದಕ್ಕೆ ಕಾರಣ ಮಾಂಸಾಹಾರ ಎನ್ನತ್ತಿದ್ದಾರೆ ವೈದ್ಯರು
ಸಾಂದರ್ಭಿಕ ಚಿತ್ರ
TV9 Web
| Updated By: Rakesh Nayak Manchi|

Updated on:Jan 30, 2023 | 11:07 PM

Share

ಇಂದಿನ ದಿನಗಳಲ್ಲಿ ಎಲ್ಲವೂ ಕಲಬೆರಕೆಯಾಗಿದೆ. ತರಕಾರಿಯಿಂದ ವಿವಿಧ ರೀತಿಯ ವಸ್ತುಗಳಲ್ಲಿ ಕಲಬೆರಕೆ ನಡೆಯುತ್ತಿದೆ. ಅದರಲ್ಲೂ ರೈತರು ಬೆಳೆದ ತರಕಾರಿಗಳಲ್ಲಿ ವಿವಿಧ ಬಗೆಯ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಅಂತಹ ಆಹಾರ ಸೇವಿಸಿದ ನಮ್ಮಲ್ಲಿ ವಿವಿಧ ರೋಗಗಳು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಅಲ್ಲದೆ ಮಾಂಸದಲ್ಲಿ ಕಲಬೆರಕೆ ನಡೆಯುತ್ತಿದೆ. ಆಡು, ಕೋಳಿಗಳಿಗೂ ಬೇರೆ ಬೇರೆ ರಾಸಾಯನಿಕಗಳನ್ನು ನೀಡಿ ಬೇಗ ಬೆಳೆಯಲು ಔಷಧ ನೀಡಲಾಗುತ್ತದೆ. ಆಘಾತಕಾರಿ ಸಂಗತಿ ಎಂದರೆ, ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಸುಮಾರು 111 ನವಜಾತ ಶಿಶುಗಳು ಸಾವನ್ನಪ್ಪಿವೆ (Death of newborns). ಈ ಶಿಶುಗಳ ಸಾವಿಗೆ ತಾಯಿಯ ಎದೆಹಾಲು (Breast Milk) ಕಾರಣ ಎಂದು ವೈದ್ಯರು ಹೇಳುತ್ತಾರೆ.

ಲಕ್ನೋದ ಕ್ವೀನ್ ಮೇರಿ ಆಸ್ಪತ್ರೆಯ ಅಧ್ಯಯನವು ಮಹಾರಾಜ್‌ಗಂಜ್‌ನಲ್ಲಿನ ಈ ಸಾವುಗಳಿಗೆ ಮಹಿಳೆಯರ ಹಾಲಿನಲ್ಲಿ ಕಂಡುಬರುವ ಕೀಟನಾಶಕಗಳು ಕಾರಣವೆಂದು ಹೇಳಿದೆ. ಆದರೆ ಕೀಟನಾಶಕಗಳು ತಾಯಿಯ ಹಾಲಿಗೆ ಹೇಗೆ ಬಂದವು ಎಂದು ಯೋಚಿಸುವುದು ತಪ್ಪು. ಏಕೆಂದರೆ ನಾನ್ ವೆಜ್ ತರಕಾರಿಗಳನ್ನು ಕ್ರಿಮಿನಾಶಕ ಬಳಸಿ ಬೆಳೆದು ಅದರ ಪರಿಣಾಮ ತಾಯಿಯ ಹಾಲಿನ ಮೇಲೆ ಬೀಳುತ್ತದೆ. ಈಗ ವೈದ್ಯರು ಕೀಟನಾಶಕಗಳು ಎದೆ ಹಾಲಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಸಂಶೋಧನೆ ನಡೆಸಿದ್ದಾರೆ.

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಆಸ್ಪತ್ರೆ ಕೆಲವು ಗರ್ಭಿಣಿಯರನ್ನು ಪರೀಕ್ಷಿಸಿದೆ. ಈ ಅಧ್ಯಯನದಲ್ಲಿ 130 ಸಸ್ಯಾಹಾರಿ ಮತ್ತು ಮಾಂಸಾಹಾರಿ ಗರ್ಭಿಣಿಯರನ್ನು ಸೇರಿಸಲಾಯಿತು. ಈ ಸಂಶೋಧನೆಯನ್ನು ಪ್ರೊ.ಸುಜಾತಾ ದೇವ್, ಡಾ.ನೈನಾ ದ್ವಿವೇದಿ, ಡಾ.ಅಬ್ಬಾಸ್ ಅಲಿ ಮೆಹಂದಿ ಮಾಡಿದ್ದಾರೆ. ಈ ಅಧ್ಯಯನವನ್ನು ಎನ್ವಿರಾನ್ಮೆಂಟಲ್ ರಿಸರ್ಚ್ ಜನರಲ್​ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆ ಮೂಲಕ ಸಸ್ಯಾಹಾರಿ ಮಹಿಳೆಯರ ಹಾಲಿನಲ್ಲಿ ಮಾಂಸಾಹಾರಿ ಮಹಿಳೆಯರಿಗಿಂತ ಕಡಿಮೆ ಕೀಟನಾಶಕಗಳು ಇರುವುದನ್ನು ಕಂಡುಹಿಡಿಯಲಾಗಿದೆ. ಈ ಕೀಟನಾಶಕದ ಪರಿಣಾಮ ಮಾಂಸ ಮತ್ತು ತರಕಾರಿಗಳಲ್ಲಿಯೂ ಕಂಡುಬಂದಿದೆ.

ಇದನ್ನೂ ಓದಿ: ಋತುಚಕ್ರದ ಸಮಯದಲ್ಲಿ ವ್ಯಾಯಾಮ ಮಾಡಲು ಹಿಂದೇಟು ಹಾಕಬೇಡಿ

ಮಾಂಸಾಹಾರ ತ್ಯಜಿಸುವ ಮಹಿಳೆಯರ ಎದೆಹಾಲು ಕೀಟನಾಶಕಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ. ಹಾಲಿನಲ್ಲಿರುವ ಕೀಟನಾಶಕಗಳಿಗೆ ರಾಸಾಯನಿಕ ಕೃಷಿಯೇ ಕಾರಣ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ವಾಸ್ತವವಾಗಿ ಹಸಿರು ತರಕಾರಿಗಳು ಅಥವಾ ಎಲ್ಲಾ ಬೆಳೆಗಳನ್ನು ಬೆಳೆಯಲು ವಿವಿಧ ರೀತಿಯ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಪ್ರಾಣಿಗಳಿಗೆ ಪೂರಕ ಮತ್ತು ರಾಸಾಯನಿಕಗಳ ಚುಚ್ಚುಮದ್ದನ್ನು ಸಹ ನೀಡಲಾಗುತ್ತದೆ. ಇದರಿಂದಾಗಿ ಮಾಂಸಾಹಾರಿ ಮಹಿಳೆಯರ ತಾಯಿ ಹಾಲಿನಿಂದ ಮಕ್ಕಳಿಗೂ ತೊಂದರೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಾಂಸಾಹಾರಿ ಮಹಿಳೆಯರ ಹಾಲಿನಲ್ಲಿ ಕೀಟನಾಶಕಗಳು ಸಸ್ಯಾಹಾರಿ ಮಹಿಳೆಯರಿಗಿಂತ ಮೂರು ಪಟ್ಟು ಹೆಚ್ಚು ಎಂದು ಕಂಡುಬಂದಿದೆ. ರಾಸಾಯನಿಕ ಔಷಧಗಳ ಬಳಕೆಯ ಪರಿಣಾಮ ತಾಯಿಯ ಹಾಲಿನ ಮೂಲಕ ಮಗುವಿನ ಮೇಲಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಈ ಕೀಟನಾಶಕ ಸ್ಪ್ರೇಗಳು ನವಜಾತ ಶಿಶುಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತವೆ. ಇದರಿಂದಾಗಿ ಅವರ ಸಾವಿಗೆ ಕಾರಣವಾಗಬಹುದು. ಶಿಶುಮರಣ ಹೆಚ್ಚಳದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಅಧ್ಯಕ್ಷತೆಯಲ್ಲಿ 3 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ಮತ್ತಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 pm, Mon, 30 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ