AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reheating Tea: ಚಹಾ ಮಾಡಿ 15 ನಿಮಿಷಕ್ಕಿಂತ ಹೆಚ್ಚಾದರೆ ಮತ್ತೆ ಬಿಸಿ ಮಾಡಬೇಡಿ, ಆರೋಗ್ಯಕ್ಕೆ ಅಪಾಯವಾಗಬಹುದು

ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಹಲವರಿಗಿರಬಹುದು, ಅಮ್ಮ ಹಾಸಿಗೆ ಬಳಿಯೇ ಚಹಾ ಕಪ್​ ಅನ್ನು ತಂದಿಟ್ಟ ಬಳಿಕವೂ ಸ್ವಲ್ಪ ನಿದ್ದೆ ಮಾಡಿ ಬಳಿಕ ಚಹಾ ತಣ್ಣಗಾಗಿದೆ ಎಂದು ಕೂಗುವುದುಂಟು, ಬಳಿಕ ಮತ್ತೆ ಅದನ್ನು ಬಿಸಿ ಮಾಡಿ ಕುಡಿಯುತ್ತೀರಿ.

Reheating Tea: ಚಹಾ ಮಾಡಿ 15 ನಿಮಿಷಕ್ಕಿಂತ ಹೆಚ್ಚಾದರೆ ಮತ್ತೆ ಬಿಸಿ ಮಾಡಬೇಡಿ, ಆರೋಗ್ಯಕ್ಕೆ ಅಪಾಯವಾಗಬಹುದು
Tea
ನಯನಾ ರಾಜೀವ್
|

Updated on: Mar 17, 2023 | 9:00 AM

Share

ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಹಲವರಿಗಿರಬಹುದು, ಅಮ್ಮ ಹಾಸಿಗೆ ಬಳಿಯೇ ಚಹಾ ಕಪ್​ ಅನ್ನು ತಂದಿಟ್ಟ ಬಳಿಕವೂ ಸ್ವಲ್ಪ ನಿದ್ದೆ ಮಾಡಿ ಬಳಿಕ ಚಹಾ ತಣ್ಣಗಾಗಿದೆ ಎಂದು ಕೂಗುವುದುಂಟು, ಬಳಿಕ ಮತ್ತೆ ಅದನ್ನು ಬಿಸಿ ಮಾಡಿ ಕುಡಿಯುತ್ತೀರಿ. ಇಲ್ಲವಾದರೆ ನೀವು ಚಹಾ ಮಾಡಬೇಕಿದ್ದರೆ ಸ್ವಲ್ಪ ಚಹಾ ಮಿಕ್ಕಿದ್ದರೆ ಸ್ವಲ್ಪ ಸಮಯದ ಬಳಿಕ ಆ ಚಹಾವನ್ನು ಬಿಸಿಮಾಡುತ್ತೀರಿ, ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ನೀವು ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತಿದ್ದರೆ, ಅದರಲ್ಲಿ ಬ್ಯಾಕ್ಟೀರಿಯಾದ ದಾಳಿ ಇರುತ್ತದೆ. ನಿಜವಾಗಿ ಟೀ ಮಾಡಿದಾಗ ಚೆನ್ನಾಗಿರುತ್ತೆ ಆದರೆ ಅದು ತಣ್ಣಗಾಗುತ್ತಿದ್ದಂತೆ ಬ್ಯಾಕ್ಟೀರಿಯಾಗಳು ಒಳಸೇರುತ್ತಲೇ ಇರುತ್ತವೆ ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಸಮಯದ ನಂತರ ಮತ್ತೆ ಬಿಸಿ ಮಾಡಿದಾಗ ಈ ಬ್ಯಾಕ್ಟೀರಿಯಾಗಳು ಕ್ರಿಯಾಶೀಲವಾಗಿ ಟೀಯಲ್ಲಿ ಕರಗುತ್ತವೆ ಮತ್ತು ಟೀ ಮೂಲಕ ನಮ್ಮ ಹೊಟ್ಟೆಯ ಮೇಲೆ ದಾಳಿ ಮಾಡಬಹುದು.

ಮತ್ತಷ್ಟು ಓದಿ: Immunity Boosting Foods: ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ 5 ಆಹಾರ ಪದಾರ್ಥಗಳಿವು

ತಣ್ಣನೆಯ ಚಹಾವನ್ನು ಮತ್ತೆ ಬಿಸಿಮಾಡಿದಾಗ, ಚಹಾದ ಎಲ್ಲಾ ಉತ್ತಮ ಕಿಣ್ವಗಳು ನಾಶವಾಗುತ್ತವೆ ಮತ್ತು ಚಹಾದ ಕೆಟ್ಟ ಕಿಣ್ವಗಳು ಹೊಟ್ಟೆಯ ಮೇಲೆ ದಾಳಿ ಮಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಆ್ಯಸಿಡಿಟಿ ಸಮಸ್ಯೆ, ಹೊಟ್ಟೆಯಲ್ಲಿ ಉರಿ, ಅಜೀರ್ಣ, ವಾಂತಿ ಅಥವಾ ಭೇದಿ ಉಂಟಾಗುತ್ತದೆ.

ಟ್ಯಾನಿನ್ ಚಹಾದಲ್ಲಿನ ಸಂಯುಕ್ತವಾಗಿದ್ದು, ಪುನಃ ಬಿಸಿಮಾಡಿದಾಗ, ಈ ಟ್ಯಾನಿನ್ ಚಹಾದಿಂದ ನಾಶವಾಗುತ್ತದೆ ಮತ್ತು ಚಹಾದ ರುಚಿ ಬದಲಾಗುತ್ತದೆ, ಅಂದರೆ ಅದು ಕಹಿಯಾಗುತ್ತದೆ. ಅಂತಹ ಚಹಾವು ಹೊಟ್ಟೆಯನ್ನು ಹಾಳುಮಾಡುವುದು ಮಾತ್ರವಲ್ಲದೆ ದೇಹದ ಉಳಿದ ಭಾಗಗಳಿಗೆ ಪ್ರಯೋಜನವನ್ನು ನೀಡುವುದಿಲ್ಲ.

ಚಹಾವನ್ನು ಮಾಡಿ 15 ನಿಮಿಷಗಳಾದರೆ ಅದನ್ನು ಬಿಸಿ ಮಾಡಬೇಡಿ, ಹೊಟ್ಟೆಗೆ ಹಾನಿ ಮಾಡುವ ಚಹಾದಲ್ಲಿ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ