AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reheating Tea: ಚಹಾ ಮಾಡಿ 15 ನಿಮಿಷಕ್ಕಿಂತ ಹೆಚ್ಚಾದರೆ ಮತ್ತೆ ಬಿಸಿ ಮಾಡಬೇಡಿ, ಆರೋಗ್ಯಕ್ಕೆ ಅಪಾಯವಾಗಬಹುದು

ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಹಲವರಿಗಿರಬಹುದು, ಅಮ್ಮ ಹಾಸಿಗೆ ಬಳಿಯೇ ಚಹಾ ಕಪ್​ ಅನ್ನು ತಂದಿಟ್ಟ ಬಳಿಕವೂ ಸ್ವಲ್ಪ ನಿದ್ದೆ ಮಾಡಿ ಬಳಿಕ ಚಹಾ ತಣ್ಣಗಾಗಿದೆ ಎಂದು ಕೂಗುವುದುಂಟು, ಬಳಿಕ ಮತ್ತೆ ಅದನ್ನು ಬಿಸಿ ಮಾಡಿ ಕುಡಿಯುತ್ತೀರಿ.

Reheating Tea: ಚಹಾ ಮಾಡಿ 15 ನಿಮಿಷಕ್ಕಿಂತ ಹೆಚ್ಚಾದರೆ ಮತ್ತೆ ಬಿಸಿ ಮಾಡಬೇಡಿ, ಆರೋಗ್ಯಕ್ಕೆ ಅಪಾಯವಾಗಬಹುದು
Tea
ನಯನಾ ರಾಜೀವ್
|

Updated on: Mar 17, 2023 | 9:00 AM

Share

ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಹಲವರಿಗಿರಬಹುದು, ಅಮ್ಮ ಹಾಸಿಗೆ ಬಳಿಯೇ ಚಹಾ ಕಪ್​ ಅನ್ನು ತಂದಿಟ್ಟ ಬಳಿಕವೂ ಸ್ವಲ್ಪ ನಿದ್ದೆ ಮಾಡಿ ಬಳಿಕ ಚಹಾ ತಣ್ಣಗಾಗಿದೆ ಎಂದು ಕೂಗುವುದುಂಟು, ಬಳಿಕ ಮತ್ತೆ ಅದನ್ನು ಬಿಸಿ ಮಾಡಿ ಕುಡಿಯುತ್ತೀರಿ. ಇಲ್ಲವಾದರೆ ನೀವು ಚಹಾ ಮಾಡಬೇಕಿದ್ದರೆ ಸ್ವಲ್ಪ ಚಹಾ ಮಿಕ್ಕಿದ್ದರೆ ಸ್ವಲ್ಪ ಸಮಯದ ಬಳಿಕ ಆ ಚಹಾವನ್ನು ಬಿಸಿಮಾಡುತ್ತೀರಿ, ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ನೀವು ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತಿದ್ದರೆ, ಅದರಲ್ಲಿ ಬ್ಯಾಕ್ಟೀರಿಯಾದ ದಾಳಿ ಇರುತ್ತದೆ. ನಿಜವಾಗಿ ಟೀ ಮಾಡಿದಾಗ ಚೆನ್ನಾಗಿರುತ್ತೆ ಆದರೆ ಅದು ತಣ್ಣಗಾಗುತ್ತಿದ್ದಂತೆ ಬ್ಯಾಕ್ಟೀರಿಯಾಗಳು ಒಳಸೇರುತ್ತಲೇ ಇರುತ್ತವೆ ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಸಮಯದ ನಂತರ ಮತ್ತೆ ಬಿಸಿ ಮಾಡಿದಾಗ ಈ ಬ್ಯಾಕ್ಟೀರಿಯಾಗಳು ಕ್ರಿಯಾಶೀಲವಾಗಿ ಟೀಯಲ್ಲಿ ಕರಗುತ್ತವೆ ಮತ್ತು ಟೀ ಮೂಲಕ ನಮ್ಮ ಹೊಟ್ಟೆಯ ಮೇಲೆ ದಾಳಿ ಮಾಡಬಹುದು.

ಮತ್ತಷ್ಟು ಓದಿ: Immunity Boosting Foods: ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ 5 ಆಹಾರ ಪದಾರ್ಥಗಳಿವು

ತಣ್ಣನೆಯ ಚಹಾವನ್ನು ಮತ್ತೆ ಬಿಸಿಮಾಡಿದಾಗ, ಚಹಾದ ಎಲ್ಲಾ ಉತ್ತಮ ಕಿಣ್ವಗಳು ನಾಶವಾಗುತ್ತವೆ ಮತ್ತು ಚಹಾದ ಕೆಟ್ಟ ಕಿಣ್ವಗಳು ಹೊಟ್ಟೆಯ ಮೇಲೆ ದಾಳಿ ಮಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಆ್ಯಸಿಡಿಟಿ ಸಮಸ್ಯೆ, ಹೊಟ್ಟೆಯಲ್ಲಿ ಉರಿ, ಅಜೀರ್ಣ, ವಾಂತಿ ಅಥವಾ ಭೇದಿ ಉಂಟಾಗುತ್ತದೆ.

ಟ್ಯಾನಿನ್ ಚಹಾದಲ್ಲಿನ ಸಂಯುಕ್ತವಾಗಿದ್ದು, ಪುನಃ ಬಿಸಿಮಾಡಿದಾಗ, ಈ ಟ್ಯಾನಿನ್ ಚಹಾದಿಂದ ನಾಶವಾಗುತ್ತದೆ ಮತ್ತು ಚಹಾದ ರುಚಿ ಬದಲಾಗುತ್ತದೆ, ಅಂದರೆ ಅದು ಕಹಿಯಾಗುತ್ತದೆ. ಅಂತಹ ಚಹಾವು ಹೊಟ್ಟೆಯನ್ನು ಹಾಳುಮಾಡುವುದು ಮಾತ್ರವಲ್ಲದೆ ದೇಹದ ಉಳಿದ ಭಾಗಗಳಿಗೆ ಪ್ರಯೋಜನವನ್ನು ನೀಡುವುದಿಲ್ಲ.

ಚಹಾವನ್ನು ಮಾಡಿ 15 ನಿಮಿಷಗಳಾದರೆ ಅದನ್ನು ಬಿಸಿ ಮಾಡಬೇಡಿ, ಹೊಟ್ಟೆಗೆ ಹಾನಿ ಮಾಡುವ ಚಹಾದಲ್ಲಿ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗುತ್ತವೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್