AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Long Covid Symptoms: ದೀರ್ಘಕಾಲಿಕ ಕೊವಿಡ್​ ರೋಗ ಲಕ್ಷಣಗಳು ಹಾಗೂ ನಿರ್ವಹಿಸುವ ಕೆಲವು ಸಲಹೆಗಳು

ಕೆಮ್ಮು, ಉಸಿರಾಟಕ್ಕೆ ತೊಂದರೆಯಾಗುವುದು, ಮೂಗು ಕಟ್ಟುವುದು, ಹೆಚ್ಚಿನ ಆಯಾಸ ಅಥವಾ ಸುಸ್ತು, ತಲೆನೋವು, ಕೀಲು ಅಥವಾ ಸ್ನಾಯು ಸೋವು, ಆತಂಕ ಮತ್ತು ಖಿನ್ನತೆಗಳು ದೀರ್ಘ ಕೊವಿಡ್​ ಲಕ್ಷಣಗಳಾಗಿವೆ.

Long Covid Symptoms: ದೀರ್ಘಕಾಲಿಕ ಕೊವಿಡ್​ ರೋಗ ಲಕ್ಷಣಗಳು ಹಾಗೂ ನಿರ್ವಹಿಸುವ ಕೆಲವು ಸಲಹೆಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 07, 2021 | 1:13 PM

Share

ಕೊವಿಡ್​ ಸಮಸ್ಯೆಯಿಂದ ಹೊರಬಂದರೂ ಕೂಡಾ ಕೊವಿಡ್​​ ಲಕ್ಷಣಗಳು ಇನ್ನೂ ಕಂಡು ಬರುತ್ತಿವೆ ಎಂದಾದರೆ ಅದನ್ನು ಲಾಂಗ್​ ಕೊವಿಡ್​ ಅಥವಾ ದೀರ್ಘ ಕೊವಿಡ್​ ಎಂದು ಕರೆಯಲಾಗುತ್ತದೆ. ಕೊವಿಡ್​ ಸೋಂಕಿನಿಂದ ಮುಕ್ತರಾದ ಮೇಲೂ ಸುಮಾರು 3-4 ವಾರ ಅಥವಾ ತಿಂಗಳುಗಳವರೆಗೆ ಸೋಂಕಿನ ಲಕ್ಷಣಗಳು ಕಂಡು ಬರುತ್ತವೆ. ದೀರ್ಘ ಕೊವಿಡ್​ ಲಕ್ಷಣದ ಕುರಿತಾಗಿ ಹಾಗೂ ಯಾರಲ್ಲಿ ಹೆಚ್ಚು ಕಂಡು ಬರುತ್ತದೆ ಎಂಬುದರ ಕುರಿತಾಗಿ ಸಂಶೋಧನೆಗಳು ನಡೆದಿವೆ. ಅನಾರೋಗ್ಯಕ್ಕೆ ಒಳಗಾದ ಮಯಸ್ಸಾದವರು, ಮಹಿಳೆಯರು, ಐದಕ್ಕಿಂತ ಹೆಚ್ಚಿನ ರೋಗಲಕ್ಷಣ ಹೊಂದಿರುವವರಲ್ಲಿ ದೀರ್ಘ ಕೊವಿಡ್​ ಹೆಚ್ಚು ಕಂಡು ಬರುತ್ತದೆ ಎಂಬುದು ತಿಳಿದು ಬಂದಿದೆ.

ಕೆಮ್ಮು, ಉಸಿರಾಟ ಸಮಸ್ಯೆ, ಮೂಗು ಕಟ್ಟುವುದು, ಹೆಚ್ಚಿನ ಆಯಾಸ ಅಥವಾ ಸುಸ್ತು, ತಲೆನೋವು, ಕೀಲು ಅಥವಾ ಸ್ನಾಯು ಸೋವು, ಆತಂಕ ಮತ್ತು ಖಿನ್ನತೆಗಳು ದೀರ್ಘ ಕೊವಿಡ್​ ಲಕ್ಷಣಗಳಾಗಿವೆ. ಹಾಗೂ ಮನಸ್ಸನ್ನು ನಿರ್ದಿಷ್ಟವಾಗಿ ಕೇಂದ್ರಿಕರಿಸಲು ಅಡೆತಡೆಗಳು ಉಂಟಾಗುತ್ತವೆ. ಹಾಗಾಗಿ ಕೊವಿಡ್​ ಸೋಂಕು ನಿವಾರಣೆಗೆ ಆರೈಕೆ ಮಾಡಿದಷ್ಟೇ ಲಾಂಕ್​ ಕೊವಿಡ್​ ಲಕ್ಷಣಗಳಿಗೂ ಕೂಡಾ ಚಿಕಿತ್ಸೆ ಮುಖ್ಯ.

ದೀರ್ಘ ಕೊವಿಡ್​ ರೋಗಲಕ್ಷಣಗಳನ್ನು ನಿರ್ವಹಿಸಲು ಕೆಲವು ಸಲಹೆಗಳು ಆಯಾಸ ಸುಸ್ತಿಗೆ ಪರಿಹಾರ ಅನಗತ್ಯವಾದ ಚಿಂತೆಯನ್ನು ಬಿಟ್ಟುಬಿಡಿ. ಹಾಗೆಯೇ ಮನಸ್ಸಿಗೆ ಖುಷಿ ನೀಡುವ ವಿಚಾರವನ್ನಷ್ಟೇ ಯೋಚಿಸಿ. ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಡಿ. ಕೆಲಸದ ಮಧ್ಯೆ ಆಗಾಗ ವಿಶ್ರಾಂತಿ ಪಡೆಯಿರಿ. ಅತಿಯಾದ ಅವಸರದ ಕೆಲಸ ಅಥವಾ ಹೆಚ್ಚಿನ ಭಾರವುಳ್ಳ ಪಾತ್ರೆಗಳನ್ನು ಎತ್ತುವುದು. ಬಿಸಿಲಿನಲ್ಲಿ ಹೆಚ್ಚು ಓಡಾಡುವಂತಹ ಹಾಗೂ ಉಸಿರಾಟಕ್ಕೆ ಕಷ್ಟವಾಗುವಂತಹ ಕೆಲಸಗಳನ್ನು ಮಾಡಬೇಡಿ. ಹೆಚ್ಚು ಮಾನಸಿಕ ಆರೋಗ್ಯದ ಮೇಲೆ ಕಾಳಜಿ ಇರಲಿ. ಜನರೊಂದಿಗೆ ಹೆಚ್ಚು ಮಾತನಾಡಿ. ಖುಷಿಯ ಮಾತುಗಳಿಂದ ಮಾನಸಿಕ ಸ್ಥಿತಿಯನ್ನು ಚೈತ್ಯದಿಂದ ಇರಿಸಿಕೊಳ್ಳಲು ಸಹಾಯಕವಾಗುತ್ತದೆ.

ಯೋಚನೆ ಮತ್ತು ನೆನಪಿನ ಶಕ್ತಿ ಉಳಿಸಿಕೊಳ್ಳಲು ಸಲಹೆ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ನೆನಪಿಟ್ಟುಕೊಳ್ಳುವಂತಹ ವಿಷಯಗಳ ಪಟ್ಟಿ ತಯಾರಿಸಿಕೊಳ್ಳಿ. ಹೆಚ್ಚು ಗೊಂದಲಗಳಿಗೆ ಒಳಗಾಗಬೇಡಿ. ಯಾವುದೇ ಒಂದು ವಿಷಯವನ್ನು ಆದಷ್ಟು ಗಮನವಿಟ್ಟು ಆಲಿಸಿ. ಈ ಮೂಲಕ ವಿಷಯ ನಿಮಗೆ ಸರಿಯಾಗಿ ನೆನಪಿರುತ್ತದೆ.

ಕೀಲು ಅಥವಾ ಸ್ನಾಯು ನೋವಿಗೆ ಪರಿಹಾರ ಯೋಗ ಅಥವಾ ವ್ಯಾಯಾಮವನ್ನು ದಿನನಿತ್ಯದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿ. ಆರೋಗ್ಯದಲ್ಲಿ ಏನೇ ಏರು-ಪೇರಾದರೂ ವೃದ್ಯರ ಸಲಹೆ ಪಡೆಯಿರಿ. ವ್ಯಾಯಾಮ ಮತ್ತು ಯೋಗದ ಕುರಿತಾಗಿಯೂ ವೈದ್ಯರಲ್ಲಿ ಸಲಹೆ ಪಡೆದು ಬಳಿಕ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಉತ್ತಮ.

ಇದನ್ನೂ ಓದಿ:

ದೀರ್ಘಕಾಲಿಕ ಸುರಕ್ಷತೆಯ ಭರವಸೆಯನ್ನು ಕೊರೊನಾ ಲಸಿಕೆ ಒದಗಿಬೇಕು: ಡಾ. ಹರೀಶ್ ಅಯ್ಯರ್

Self Quarantine Tips: ಕೊರೊನಾ ಕಾಲಘಟ್ಟದಲ್ಲಿ ಓದುವ ಹವ್ಯಾಸವನ್ನು ಉತ್ತಮವಾಗಿಸಲು ಅನುಸರಿಸಬೇಕಾದ ಕ್ರಮಗಳು

Published On - 1:12 pm, Mon, 7 June 21

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ