AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cancer: ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್​​ಗೆ ಬಲಿ: ದೇಶದಲ್ಲಿ ಹೇಗಿದೆ ಕ್ಯಾನ್ಸರ್​ ಮಹಾಮಾರಿ ಕಾಟ

ಯುವಕರು, ವಯಸ್ಸಾದವರಲ್ಲಿ ಕ್ಯಾನ್ಸರ್​​ ಕಂಡುಬಂದರೆ ಅವರಿಗೆ ಅದರ ಅರಿವಾಗುತ್ತದೆ. ಕ್ಯಾನ್ಸರ್​​ನಿಂದ ದೇಹದಲ್ಲಾಗುವ ಬದಲಾವಣೆಗಳನ್ನು ಅವರು ಗಮನಿಸಬಹುದು. ತಕ್ಷಣವೇ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಬಹುತೇಕ ಪ್ರಕರಣಗಳಲ್ಲಿ ಸಾವನ್ನು ಜಯಿಸಬಹುದಾಗಿದೆ. ಆದರೆ ಮಕ್ಕಳಲ್ಲಿ ಹಾಗೆ ಹೇಳಲು ಬರುವುದಿಲ್ಲ. ಹಾಗಾದರೆ ಮಕ್ಕಳಲ್ಲಿ ವಿಶೇಷವಾಗಿ ಕ್ಯಾನ್ಸರ್ ಮಾರಿಯನ್ನು ಪತ್ತೆ ಹಚ್ಚುವುದು

Cancer: ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್​​ಗೆ ಬಲಿ: ದೇಶದಲ್ಲಿ ಹೇಗಿದೆ ಕ್ಯಾನ್ಸರ್​ ಮಹಾಮಾರಿ ಕಾಟ
Cancer: ರಾಜ್ಯದ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್​​ಗೆ ಬಲಿ: ದೇಶದಲ್ಲಿ ಹೇಗಿದೆ ಕ್ಯಾನ್ಸರ್​ ಮಹಾಮಾರಿ ಕಾಟ
TV9 Web
| Edited By: |

Updated on: Sep 27, 2021 | 10:01 AM

Share

ನಿನ್ನೆ ರಾಜ್ಯದಲ್ಲಿ ಯುವ ಐಪಿಎಸ್ ಅಧಿಕಾರಿಯೊಬ್ಬರು ಕ್ಯಾನ್ಸರ್​​ಗೆ ಬಲಿಯಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಸಾಧನೆಗಳಾಗಿದ್ದರೂ ಕ್ಯಾನ್ಸರ್​ ಮಹಾಮಾರಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಕ್ಯಾನ್ಸರ್​ಗೆ ಯಾವುದೇ ವಯಸ್ಸು, ಜಾತಿ, ಬಡವ ಬಲ್ಲಿದ ಎಂಬ ಬೇಧ ಭಾವ ಇಲ್ಲ. ಮಕ್ಕಳಲ್ಲಿ ಅಂದರೆ 14 ವರ್ಷದೊಳಗಿನ ಬಾಲಕ-ಬಾಲಕಿಯರನ್ನು ಕ್ಯಾನ್ಸರ್ ಹೆಚ್ಚಾಗಿ ಬಾಧಿಸದು. ಒಂದೊಮ್ಮೆ ಕಾಡಿದರೂ ಸಕಾಲದಲ್ಲಿ ಸಮಗ್ರ ಚಿಕಿತ್ಸೆ ನೀಡಿದರೆ ಮಕ್ಕಳು ಕ್ಯಾನ್ಸರ್​​ನಿಂದ ಗುಣಮುಖರಾಗುತ್ತಾರೆ. ಆದರೂ ನೂರಾಋಉ ಮಕ್ಕಳು ದೇಶದಲ್ಲಿ ಕ್ಯಾನ್ಸರ್​​ಗೆ ಬಲಿಯಾಗುತ್ತಿದ್ದಾರೆ.

ಭಾರತದಲ್ಲಿ ಬಾಲ್ಯದ ಕಾಲದಲ್ಲಿ ಮಕ್ಕಳಿಗೆ ಕ್ಯಾನ್ಸರ್​ ಯಾವ ಪ್ರಮಾಣದಲ್ಲಿ ಕಾಡುತ್ತಿದೆ. ಅದರ ಲಕ್ಷಣಗಳು ಏನು? ಯಾವ ಪ್ರಮಾಣದಲ್ಲಿ ಕಾಡುತ್ತಿದೆ ಎಂದು ನೋಡುವ ಮುನ್ನ… ಪ್ರತಿ ವರ್ಷ ವಿಶ್ಯದಾದ್ಯಂತ 3 ಲಕ್ಷಕ್ಕೂಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್​​ ಕಾಡುತ್ತದೆ. ಭಾರತದಲ್ಲಿಯೂ ಪ್ರತಿ ವರ್ಷ ಕನಿಷ್ಠ ಅರ್ಧ ಲಕ್ಷದಷ್ಟು ಮಕ್ಕಳಲ್ಲಿ ಕ್ಯಾನ್ಸರ್​​ ಕಂಡುಬರುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶೇ. 80-90 ಮಂದಿ ಕ್ಯಾನ್ಸರ್​​ನಿಂದ ಗುಣಮುಖರಾಗುತ್ತಾರೆ.

ಯುವಕರು, ವಯಸ್ಸಾದವರಲ್ಲಿ ಕ್ಯಾನ್ಸರ್​​ ಕಂಡುಬಂದರೆ ಅವರಿಗೆ ಅದರ ಅರಿವಾಗುತ್ತದೆ. ಕ್ಯಾನ್ಸರ್​​ನಿಂದ ದೇಹದಲ್ಲಾಗುವ ಬದಲಾವಣೆಗಳನ್ನು ಅವರು ಗಮನಿಸಬಹುದು. ತಕ್ಷಣವೇ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಬಹುತೇಕ ಪ್ರಕರಣಗಳಲ್ಲಿ ಸಾವನ್ನು ಜಯಿಸಬಹುದಾಗಿದೆ. ಆದರೆ ಮಕ್ಕಳಲ್ಲಿ ಹಾಗೆ ಹೇಳಲು ಬರುವುದಿಲ್ಲ. ಬನ್ನೀ ಹಾಗಾದರೆ ಮಕ್ಕಳಲ್ಲಿ ವಿಶೇಷವಾಗಿ ಕ್ಯಾನ್ಸರ್ ಮಾರಿಯನ್ನು ಪತ್ತೆ ಹಚ್ಚುವುದು (Cancer symptoms in children) ಹೇಗೆ ತಿಳಿಯೋಣ:​

1. ನಿರಂತರ, ವಿವರಿಸಲಾಗದ ದೇಹ ತೂಕ ಕಡಿಮೆಯಾಗುವುದು 2. ತಲೆ ನೋವು, ಬೆಳಗಿನ ವೇಳೆಯೇ ವಾಂತಿ ಬರುವುದು 3. ಮೂಳೆಗಳು, ಕೀಲುಗಳು, ಬೆನ್ನು ಅಥವಾ ಕಾಲುಗಳಲ್ಲಿ ಊತ, ನಿರಂತರ ನೋವು ಕಾಣಿಸುವುದು 4. ಹೊಟ್ಟೆ, ಎದೆ ಭಾಗ, ಪೃಷ್ಠ ಅಥವಾ ಕಂಕುಳಲ್ಲಿ ಗಡ್ಡೆ, ಗಂಟು ಕಾಣಿಸಿಕೊಳ್ಳುವುದು 5. ಕಣ್ಣು ಗುಡ್ಡೆಯಲ್ಲಿ ಬಿಳಿ ಬಣ್ಣ ಮೂಡುವುದು ಅಥವಾ ಕಣ್ಣಿನ ದೃಷ್ಟಿ ಕುಂದುವುದು 6. ಸೋಂಕು ಇಲ್ಲದಿದ್ದರೂ ಜ್ವರ ಮತ್ತೆ ಮತ್ತೆ ಬರುವುದು 7. ಇದ್ದಕ್ಕಿದ್ದಂತೆ ಗಾಯ ಆಗುವುದು, ರಕ್ತ ಸುರಿಯುವುದು 8. ಕಳೆಗುಂದುವುದು ಅಥವಾ ದೀರ್ಘಕಾಲದ ಬಳಲಿಕೆ ಕಂಡುಬರುವುದು

Also Read: ಕ್ಯಾನ್ಸರ್ ಚಿಕಿತ್ಸೆ ಪಡೆದು ಮತ್ತೆ ಒಂದಾದ 3 ವರ್ಷದ ಸ್ನೇಹಿತರು; ಮನಕಲಕುವ ವಿಡಿಯೊ ನೋಡಿ Also Read: ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ರೇಡಿಯೋ ಥೆರಪಿ ಚಿಕಿತ್ಸೆ ಪುನಾರಂಭ.. ತಪ್ಪಿತು ಕ್ಯಾನ್ಸರ್ ರೋಗಿಗಳ ಪರದಾಟ (Symptoms of Childhood Cancer in india)

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!