AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ವರ್ಷದಿಂದ 15 ವರ್ಷದವರೆಗೆ ಕಂಡುಬರುವ ಈ ಟುರೆಟ್ ಸಿಂಡ್ರೋಮ್ ಬಗ್ಗೆ ಪೋಷಕರಿಗೆ ತಿಳಿದಿರಲೇಬೇಕು: ಡಾ. ಪ್ರಪುಲ್ಲ

ಪ್ರತಿಯೊಬ್ಬ ಪೋಷಕರು ತಿಳಿದಿರಬೇಕಾದ ವಿಷಯಗಳಲ್ಲಿ ಟುರೆಟ್ ಸಿಂಡ್ರೋಮ್ ಕೂಡ ಒಂದು. ಹೆಸರು ಕೇಳುವಾಗ ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ಈ ಬಗ್ಗೆ ತಿಳಿಯುವುದು ತುಂಬಾ ಇದೆ. ಹೌದು, ಸಾಮಾನ್ಯವಾಗಿ 2 ವರ್ಷದಿಂದ 15 ವರ್ಷದವರೆಗೆ ಕಂಡು ಬರುವ ಈ ಸಿಂಡ್ರೋಮ್ ನಿರ್ಲಕ್ಷ್ಯ ಮಾಡುವಂತದ್ದಲ್ಲ. ಹಾಗಾದರೆ ಟುರೆಟ್ ಸಿಂಡ್ರೋಮ್ ಗುರುತಿಸುವುದು ಹೇಗೆ, ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಹಾಸನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಪ್ರಪುಲ್ಲ ಕೆ ಅವರು ತಿಳಿಸಿದ್ದು ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

2 ವರ್ಷದಿಂದ 15 ವರ್ಷದವರೆಗೆ ಕಂಡುಬರುವ ಈ ಟುರೆಟ್ ಸಿಂಡ್ರೋಮ್ ಬಗ್ಗೆ ಪೋಷಕರಿಗೆ ತಿಳಿದಿರಲೇಬೇಕು: ಡಾ. ಪ್ರಪುಲ್ಲ
Tourette Syndrome
ಪ್ರೀತಿ ಭಟ್​, ಗುಣವಂತೆ
|

Updated on: May 02, 2026 | 3:04 PM

Share

ಇತ್ತೀಚಿನ ದಿನಗಳಲ್ಲಿ ಈ ಟುರೆಟ್ ಸಿಂಡ್ರೋಮ್ (Tourette Syndrome) ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ವಿವಿಧ ರೀತಿಯ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಅದರಲ್ಲಿಯೂ ಪೋಷಕರು ಈ ಸಿಂಡ್ರೋಮ್ ಬಗ್ಗೆ ತಿಳಿಯುವುದು ಅತಿಮುಖ್ಯವಾಗಿದೆ. ಏಕೆಂದರೆ ಇದೊಂದು ನರಮಂಡಲಕ್ಕೆ ಸಂಬಂಧಿಸಿದ ಖಾಯಿಲೆಯಾಗಿದ್ದು, ಇದು ಹದಿಹರೆಯದವರಲ್ಲಿ ಕಂಡುಬರುತ್ತದೆ (ಸಾಮಾನ್ಯವಾಗಿ 2 ವರ್ಷದಿಂದ 15 ವರ್ಷದವರೆಗೆ). ಇದನ್ನು ತಡೆಗಟ್ಟಲು ಮತ್ತು ಇದರ ಲಕ್ಷಣಗಳ ಬಗ್ಗೆ ಅರಿತಿದ್ದರೆ ಮಕ್ಕಳು ಇಂತಹ ಸಿಂಡ್ರೋಮ್ ನಿಂದ ಬಳಲುವುದನ್ನು ತಡೆಯಬಹುದು. ಹಾಗಾದರೆ ಟುರೆಟ್ ಸಿಂಡ್ರೋಮ್ ಗುರುತಿಸುವುದು ಹೇಗೆ, ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಹಾಸನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಪ್ರಪುಲ್ಲ ಕೆ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು ಮತ್ತಷ್ಟು ಮಾಹಿತಿ ನೀಡಿದ್ದಾರೆ.

ಟುರೆಟ್ ಸಿಂಡ್ರೋಮ್ ಎಂದರೇನು?

ಈ ಖಾಯಿಲೆಯಲ್ಲಿ ವ್ಯಕ್ತಿಯು ತನ್ನ ನಿಯಂತ್ರಣವಿಲ್ಲದೆ ದೈಹಿಕ ಚಲನೆಗಳನ್ನು ಅಥವಾ ಶಬ್ದಗಳನ್ನು ಅರಿವಿಲ್ಲದೆಯೇ ಪುನರಾವರ್ತಿಸುತ್ತಾರೆ. ಈ ಸ್ಥಿತಿಯನ್ನು ‘ಟಿಕ್ಸ್’ ಎಂದು ಗುರುತಿಸಲಾಗುತ್ತದೆ. ಇದು ಮೆದುಳಿನ ನರಕೋಶಗಳ ಸಂವಹನದಲ್ಲಿನ ವ್ಯತ್ಯಾಸದಿಂದ ಉಂಟಾಗುತ್ತದೆ. ಟಿಕ್ಸ್‌ನಲ್ಲಿ ಎರಡು ವಿಧಗಳಿವೆ: ಮೋಟಾರ್ ಟಿಕ್ಸ್: ಕಣ್ಣು ಮಿಟುಕಿಸುವುದು, ಅಲುಗಾಡುವ ತಲೆ ಚಲನೆಗಳು, ಭುಜ ಕುಗ್ಗಿಸುವಿಕೆ ಬೇರೆಯವರ ಕ್ರಿಯೆಗಳನ್ನು ಅನುಕರಿಸುವುದು ಮುಂತಾದ ದೈಹಿಕ ಚಲನೆಗಳು. ವೋಕಲ್ ಟಿಕ್ಸ್: ಗಂಟಲು ಸ್ವಚ್ಛಗೊಳಿಸುವ ಶಬ್ದ, ಬಿಕ್ಕಳಿಕೆ, ನಿರಂತರವಾಗಿ ಇತರರ (ಎಕೋಲಾಲಿಯಾ) ಅಥವಾ ಸ್ವತಃ (ಪಾಲಿಲಾಲಿಯಾ) ಒಂದೇ ರೀತಿಯ ಪದಗಳನ್ನು ಪುನರಾವರ್ತಿಸುವುದು ಅಥವಾ ಪದಗಳನ್ನು ಕೂಗುವುದು.

ಟುರೆಟ್ ಸಿಂಡ್ರೋಮ್ ಬಗ್ಗೆ ಇರುವ ತಪ್ಪು ಕಲ್ಪನೆ:

ಸಾಮಾನ್ಯವಾಗಿ ಟುರೆಟ್ ಖಾಯಿಲೆ ಇರುವವರೆಲ್ಲರು ಅಸಭ್ಯವಾಗಿ ವರ್ತಿಸುತ್ತಾರೆ ಎಂಬುದು ತಪ್ಪು ಕಲ್ಪನೆ. ಸಹಜವಾಗಿ 10 -15 % ಜನರಲ್ಲಿ ಮಾತ್ರ ಅಸಭ್ಯ ವರ್ತನೆ ಕಂಡುಬರುತ್ತದೆ. ಇದು ಒಂದು ಬುದ್ದಿಮಾಂಧ್ಯ ಖಾಯಿಲೆ ಅಲ್ಲ. ಇಂತಹ ವ್ಯಕ್ತಿಗಳಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಹೆಚ್ಚಿನ ಬುದ್ಧಿಶಕ್ತಿಯನ್ನು ಹೊಂದಿರುತ್ತಾರೆ. ಟಿಕ್ಸ್ ಮಾಡುವುದು ಸಹಜವಾಗಿ ವ್ಯಕ್ತಿಯ ನಿಯಂತ್ರಣದಲ್ಲಿ ಇರುವುದಿಲ್ಲ. ಇದನ್ನು ಸೀನುವಿಕೆ ಅಥವಾ ಕಣ್ಣು ರೆಪ್ಪೆ ಮಿಟುಕಿಸುವ ಸಹಜ ಕ್ರಿಯೆಗೆ ಹೋಲಿಸಬಹುದು.

ಇದನ್ನೂ ಓದಿ: ಕೋವಿಡ್​ಗಿಂತ ಅಪಾಯಕಾರಿಯೇ ಈ ಗುಯಿಲಿನ್‌ ಬಾರ್‌ ಸಿಂಡ್ರೋಮ್‌? ಲಕ್ಷಣಗಳು ಹೇಗಿರುತ್ತೆ, ತಡೆಗಟ್ಟುವುದು ಹೇಗೆ?

ಈ ಸಲಹೆಯನ್ನು ತಪ್ಪದೆ ಪಾಲಿಸಬೇಕು:

ಸಾಮಾನ್ಯವಾಗಿ ಈ ಸಮಸ್ಯೆ ಹೊಂದಿರುವವರನ್ನು ನೋಡಿದರೂ ಗಮನಿಸದಂತೆ ವರ್ತಿಸಬೇಕು. ಅದನ್ನು ಪದೇ ಪದೇ ತೋರಿಸಿ ಹೀಯಾಳಿಸಬಾರದು. ಅವರೊಂದಿಗೆ ನಾವು ಸಹಜವಾಗಿ ವ್ಯವಹರಿಸಿದರೆ ಅವರಿಗೆ ಮುಜುಗರ ಮತ್ತು ಒತ್ತಡ ಕಡಿಮೆಯಾಗುತ್ತದೆ. ಈ ಕಾಯಿಲೆ ಇಂದ ಬಳಲುತ್ತಿರುವರರ ಜೊತೆ ತಾಳ್ಮೆಯಿಂದ ವರ್ತಿಸಬೇಕು. ಅವರಿಗೆ ಮಾತು ಪೂರ್ಣಗೊಳಿಸಲು ಅಥವಾ ಕೆಲಸ ಪೂರ್ಣಗೊಳಿಸಲು ಸಮಯ ನೀಡಬೇಕು. ಅವರು ಓದುವ ಶಾಲೆ ಅಥವಾ ಕೆಲಸದ ಸ್ಥಳದಲ್ಲಿ ಈ ಸಮಸ್ಯೆಯ ಬಗ್ಗೆ ತಿಳಿಸಿ, ಅಲ್ಲಿ ಅವಮಾನ ಅಥವಾ ಕಿರುಕುಳ ಆಗದಂತೆ ನೋಡಿಕೊಳ್ಳಬೇಕು.

ಆಯುರ್ವೇದ ಮತ್ತು ಜೀವನಶೈಲಿ:

ಟೂರೆಟ್ ಸಿಂಡ್ರೋಮ್ ನಿರ್ವಹಣೆಯಲ್ಲಿ ಆಯುರ್ವೇದದ ಪಂಚಕರ್ಮ ಚಿಕಿತ್ಸೆಗಳು ಬಹಳ ಪರಿಣಾಮಕಾರಿಯಾಗಿದೆ. ಶಿರೋಧಾರಾ ಚಿಕಿತ್ಸೆ ಅಂದರೆ ಹಣೆಯ ಮೇಲೆ ನಿರಂತರವಾಗಿ ಔಷಧೀಯುಕ್ತ ತೈಲವನ್ನು ಸುರಿಯುವ ಮೂಲಕ ಮೆದುಳನ್ನು ಶಾಂತಗೊಳಿಸುತ್ತದೆ ಮತ್ತು ನರಗಳ ಒತ್ತಡವನ್ನು ಕಡಿಮೆ ಮಾಡಿ ‘ಟಿಕ್ಸ್’ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ನಸ್ಯ ಚಿಕಿತ್ಸೆ ಅಂದರೆ ಮೂಗಿನ ಹೊಳ್ಳೆಗಳಿಗೆ ಔಷಧೀಯ ತುಪ್ಪ ಅಥವಾ ತೈಲವನ್ನು ಹಾಕುವುದರಿಂದ ಶಿರೋಭಾಗದ ನರಮಂಡಲವನ್ನು ಬಲಗೊಳಿಸುತ್ತದೆ. ಬಲಾದಿ ಅಥವಾ ಕ್ಷೀರಬಲ ತೈಲದಿಂದ ಮಾಡುವ ಅಭ್ಯಂಗವು, ದೇಹದಲ್ಲಿನ ವಾತ ದೋಷವನ್ನು ಶಮನಗೊಳಿಸಿ ನರಮಂಡಲಕ್ಕೆ ಪುನಶ್ಚೇತನ ನೀಡುತ್ತದೆ. ಬ್ರಾಹ್ಮಿ, ಶಂಖಪುಷ್ಪಿ ಅಥವಾ ಅಶ್ವಗಂಧದಂತಹ ಮೂಲಿಕೆಗಳು ಮತ್ತು ಭ್ರಾಮರಿ ಪ್ರಾಣಾಯಾಮವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಸಮಯೋಚಿತ ಬೆಂಬಲ, ಅರಿವು ಮತ್ತು ಸೂಕ್ತ ಚಿಕಿತ್ಸೆ, ಟೂರೆಟ್ ಲಕ್ಷಣಗಳನ್ನು ಕಡಿಮೆಮಾಡಲು ಹಾಗೂ ವ್ಯಕ್ತಿಯು ಸಾಮಾನ್ಯ ಜೀವನಶೈಲಿ ನಡೆಸಲು ಅತ್ಯಂತ ಮುಖ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ 'ಬಿಳಿ ಜಿಂಕೆ'!
ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ 'ಬಿಳಿ ಜಿಂಕೆ'!
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್
ರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್
ಅಳಿಯನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಅತ್ತೆ: ಕದ್ದ ಬಂಗಾರ ಎಷ್ಟು ಗೊತ್ತಾ?
ಅಳಿಯನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಅತ್ತೆ: ಕದ್ದ ಬಂಗಾರ ಎಷ್ಟು ಗೊತ್ತಾ?
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ
ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ