AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Kidney Day 2022: ಮೂತ್ರಪಿಂಡ ಜೋಪಾನ

ಕಿಡ್ನಿಯ ಬಗೆಗಿನ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2006ರಲ್ಲಿ ವಿಶ್ವ ಕಿಡ್ನಿ ದಿನವನ್ನು ಜಾರಿಗೆ ತರಲಾಯಿತು. 

World Kidney Day 2022: ಮೂತ್ರಪಿಂಡ ಜೋಪಾನ
ಪ್ರಾತಿನಿಧಿಕ ಚಿತ್ರImage Credit source: Tv9 Hindi
TV9 Web
| Edited By: |

Updated on:Mar 10, 2022 | 10:47 AM

Share

ಮಾನವನ ದೇಹದಲ್ಲಿ ಹೃದಯದಷ್ಟೇ ಸೂಕ್ಷ್ಮ ಮತ್ತು ಪ್ರಮುಖ ಅಂಗ ಕಿಡ್ನಿ (Kidney). ದೇಹದಲ್ಲಿ ಪಿಲ್ಟರ್​ನಂತೆ ಕೆಲಸ ಮಾಡುವ ಕಿಡ್ನಿಗಳು ನಿರುಪಯುಕ್ತ ವಸ್ತುಗಳನ್ನು ದೇಹದಿಂದ ಹೊರಹಾಕುವ ಕೆಲಸ ಮಾಡುತ್ತದೆ. ಇಂದಿನ ಬದಲಾದ ಜೀವನಶೈಲಿಯಲ್ಲಿ ಆಹಾರ ಪದ್ಧತಿಗಳು ಕಿಡ್ನಿಯ ಮೇಲೆ ಪರಿಣಾಮ ಬೀರುತ್ತಿವೆ. ಅನೇಕರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ಆಲ್ಕೂಹಾಲ್​ ಸೇವನೆ, ಜಂಕ್​ ಫುಡ್​ಗಳ ಸೇವನೆ ಕಿಡ್ನಿಗಳಿಗೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ಕಿಡ್ನಿಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿದೆ.

ಕಿಡ್ನಿಯ ಕಾರ್ಯವೈಖರಿ, ಅದರ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀವರ್ಷ ಮಾರ್ಚ್​ 10ರಂದು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತದೆ.  ಕಿಡ್ನಿಯ ಬಗೆಗಿನ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2006ರಲ್ಲಿ ವಿಶ್ವ ಕಿಡ್ನಿ ದಿನವನ್ನು ಜಾರಿಗೆ ತರಲಾಯಿತು.  ದೇಹದಲ್ಲಿನ ಉಷ್ಣತೆ ಜಾಸ್ತಿಯಾದಾಗ ಅಥವಾ ಲವಣಗಳ ಅಂಶ ಅತಿಯಾದಾಗ ಕಿಡ್ನಿ ಸ್ಟೋನ್​ಗಳಂತಹ ಸಮಸ್ಯೆ ಕಾಡುತ್ತದೆ. ಆದ್ದರಿಂದ ಕೆಲವು ಆಹಾರಗಳು ನಿಮ್ಮನ್ನು ಕಿಡ್ನಿ ಸಮಸ್ಯೆಯಿಂದ ದೂರವಿಡಬಹುದು.

ಕ್ಯಾಬೀಜ್​: ಕಡಿಮೆ ಸೋಡಿಯಂ ಅಂಶವಿರುವ ಎಲೆಕೋಸು ಅಥವಾ ಕ್ಯಾಬೀಜ್​ ವಿಟಮಿನ್ ಕೆ, ಸಿ, ಬಿ 6 ಅನ್ನು ಹೊಂದಿದೆ. ಇದು ಫೈಬರ್ ಮತ್ತು ಫೋಲಿಕ್ ಆಮ್ಲವನ್ನು ಸಹ ಹೊಂದಿದೆ. ಕ್ಯಾಬೀಜ್​ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡಲು ಬೇಕಾದ  ಫೈಟೊಕೆಮಿಕಲ್‌ಗಳನ್ನು ಹೊಂದಿದೆ. ಕ್ಯಾಬೀಜ್​ ಅನ್ನು ನೀವು ಸೂಪ್​, ಸಲಾಡ್​ಗಳನ್ನು ತಯಾರಿಸಿ ಸೇವಿಸಬಹುದು.

ಕೊತ್ತಂಬರಿ ಬೀಜಗಳು: ಕಿಡ್ನಿ ಸಮಸ್ಯೆಗೆ ಕೊತ್ತಂಬರಿ ಬೀಜಗಳು ಉತ್ತಮ ಆಹಾರವಾಗಿದೆ. ನೀರನೊಂದಿಗೆ ಕೊತ್ತಂಬರಿ ಬೀಜಗಳನ್ನು ಹಾಕಿ ಕುದಿಸಿ ಪ್ತಿದಿನ ಸೇವಿಸಿದರೆ ಕಿಡ್ನಿ ಸಮಸ್ಯೆ ಎದುರಾಗುವುದಿಲ್ಲ. ಮೂತ್ರಕೋಶದ ಸಮಸ್ಯೆಗಳನ್ನೂ ಕೂಡ ಕೊತ್ತಂಬರಿ ಬೀಜಗಳು ಸರಿಪಡಿಸುತ್ತದೆ. ಮೂತ್ರಪಿಂಡಗಳ ಸಮಸ್ಯೆಯನ್ನು ಸರಿಪಡಿಸಿ, ಪಿಲ್ಟರ್​ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಕ್ಯಾನ್ಬೆರಿ ಹಣ್ಣುಗಳು:

ಕ್ರ್ಯಾನ್‌ಬೆರಿ ಹಣ್ಣುಗಳಲ್ಲಿ ಫ್ಲೇವನಾಯ್ಡ್‌ಗಳು ಮತ್ತು ಇತರ ಪಾಲಿಫಿನಾಲ್‌ಗಳಲ್ಲಿ ಉತ್ಕರ್ಷಣ ನಿರೋಧಕವನ್ನು  ಶಕ್ತಿ ಹೊಂದಿದೆ.  ಉರಿಯೂತದ ಗುಣಲಕ್ಷಣಗಳು ಯುಟಿಐಗಳನ್ನು ನಿರ್ವಹಿಸಲು ಉತ್ತಮ ಆಹಾರವಾಗಿದೆ.  ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಿದೆ.

ಹೂಕೋಸು:

ಕಿಡ್ನಿ ಆರೋಗ್ಯವನ್ನು ಉತ್ತಮಪಡಿಸಲು ಹೂಕೋಸು ಉತ್ತಮ ತರಕಾರಿಯಾಗಿದೆ.  ಹೇರಳವಾದ ವಿಟಮಿನ್​, ಸಿ, ಕೆ ಮತ್ತು ಬಿಯನ್ನು ಹೊಂದಿರುವ ಹೂಕೋಸು ಕಿಡ್ನಿಯ ಕಾರ್ಯವನ್ನು ಸುಗಮಗೊಳಿಸುತ್ತದೆ. ಹೀಗಾಗಿ ನಿಮ್ಮ ಅಡುಗೆಯಲ್ಲಿ ಹೂಕೋಸನ್ನು ಹೆಚ್ಚು  ಬಳಸಿ.

ಬೆರಿ ಹಣ್ಣಗಳು: ಸ್ಟ್ರಾಬೆರಿ, ಬ್ಲ್ಯೂ ಬೆರಿಯಂತಹ ಹಣ್ಣುಗಳು ಕಿಡ್ನಿಯ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.  ಯಥೇಚ್ಚವಾದ ಆ್ಯಂಟಿಆಕ್ಸಿಡೆಂಟ್​ಗಳನ್ನು ಹೊಂದಿರುವ ಬೆರಿ ಹಣ್ಣುಗಳು ಕಿಡ್ನಿಯ ಅಪಾಯವನ್ನು ತಡೆಗಟ್ಟುತ್ತದೆ.

 ಇದನ್ನೂ ಓದಿ:

Joint Pain: ಕೀಲು ನೋವಿನ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ: ಇಲ್ಲಿದೆ ಮಾಹಿತಿ

Published On - 10:41 am, Thu, 10 March 22

Follow Us
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ