AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Kidney Day 2022: ಮೂತ್ರಪಿಂಡ ಜೋಪಾನ

ಕಿಡ್ನಿಯ ಬಗೆಗಿನ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2006ರಲ್ಲಿ ವಿಶ್ವ ಕಿಡ್ನಿ ದಿನವನ್ನು ಜಾರಿಗೆ ತರಲಾಯಿತು. 

World Kidney Day 2022: ಮೂತ್ರಪಿಂಡ ಜೋಪಾನ
ಪ್ರಾತಿನಿಧಿಕ ಚಿತ್ರImage Credit source: Tv9 Hindi
TV9 Web
| Edited By: |

Updated on:Mar 10, 2022 | 10:47 AM

Share

ಮಾನವನ ದೇಹದಲ್ಲಿ ಹೃದಯದಷ್ಟೇ ಸೂಕ್ಷ್ಮ ಮತ್ತು ಪ್ರಮುಖ ಅಂಗ ಕಿಡ್ನಿ (Kidney). ದೇಹದಲ್ಲಿ ಪಿಲ್ಟರ್​ನಂತೆ ಕೆಲಸ ಮಾಡುವ ಕಿಡ್ನಿಗಳು ನಿರುಪಯುಕ್ತ ವಸ್ತುಗಳನ್ನು ದೇಹದಿಂದ ಹೊರಹಾಕುವ ಕೆಲಸ ಮಾಡುತ್ತದೆ. ಇಂದಿನ ಬದಲಾದ ಜೀವನಶೈಲಿಯಲ್ಲಿ ಆಹಾರ ಪದ್ಧತಿಗಳು ಕಿಡ್ನಿಯ ಮೇಲೆ ಪರಿಣಾಮ ಬೀರುತ್ತಿವೆ. ಅನೇಕರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ಆಲ್ಕೂಹಾಲ್​ ಸೇವನೆ, ಜಂಕ್​ ಫುಡ್​ಗಳ ಸೇವನೆ ಕಿಡ್ನಿಗಳಿಗೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ಕಿಡ್ನಿಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿದೆ.

ಕಿಡ್ನಿಯ ಕಾರ್ಯವೈಖರಿ, ಅದರ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀವರ್ಷ ಮಾರ್ಚ್​ 10ರಂದು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತದೆ.  ಕಿಡ್ನಿಯ ಬಗೆಗಿನ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 2006ರಲ್ಲಿ ವಿಶ್ವ ಕಿಡ್ನಿ ದಿನವನ್ನು ಜಾರಿಗೆ ತರಲಾಯಿತು.  ದೇಹದಲ್ಲಿನ ಉಷ್ಣತೆ ಜಾಸ್ತಿಯಾದಾಗ ಅಥವಾ ಲವಣಗಳ ಅಂಶ ಅತಿಯಾದಾಗ ಕಿಡ್ನಿ ಸ್ಟೋನ್​ಗಳಂತಹ ಸಮಸ್ಯೆ ಕಾಡುತ್ತದೆ. ಆದ್ದರಿಂದ ಕೆಲವು ಆಹಾರಗಳು ನಿಮ್ಮನ್ನು ಕಿಡ್ನಿ ಸಮಸ್ಯೆಯಿಂದ ದೂರವಿಡಬಹುದು.

ಕ್ಯಾಬೀಜ್​: ಕಡಿಮೆ ಸೋಡಿಯಂ ಅಂಶವಿರುವ ಎಲೆಕೋಸು ಅಥವಾ ಕ್ಯಾಬೀಜ್​ ವಿಟಮಿನ್ ಕೆ, ಸಿ, ಬಿ 6 ಅನ್ನು ಹೊಂದಿದೆ. ಇದು ಫೈಬರ್ ಮತ್ತು ಫೋಲಿಕ್ ಆಮ್ಲವನ್ನು ಸಹ ಹೊಂದಿದೆ. ಕ್ಯಾಬೀಜ್​ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿಡಲು ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡಲು ಬೇಕಾದ  ಫೈಟೊಕೆಮಿಕಲ್‌ಗಳನ್ನು ಹೊಂದಿದೆ. ಕ್ಯಾಬೀಜ್​ ಅನ್ನು ನೀವು ಸೂಪ್​, ಸಲಾಡ್​ಗಳನ್ನು ತಯಾರಿಸಿ ಸೇವಿಸಬಹುದು.

ಕೊತ್ತಂಬರಿ ಬೀಜಗಳು: ಕಿಡ್ನಿ ಸಮಸ್ಯೆಗೆ ಕೊತ್ತಂಬರಿ ಬೀಜಗಳು ಉತ್ತಮ ಆಹಾರವಾಗಿದೆ. ನೀರನೊಂದಿಗೆ ಕೊತ್ತಂಬರಿ ಬೀಜಗಳನ್ನು ಹಾಕಿ ಕುದಿಸಿ ಪ್ತಿದಿನ ಸೇವಿಸಿದರೆ ಕಿಡ್ನಿ ಸಮಸ್ಯೆ ಎದುರಾಗುವುದಿಲ್ಲ. ಮೂತ್ರಕೋಶದ ಸಮಸ್ಯೆಗಳನ್ನೂ ಕೂಡ ಕೊತ್ತಂಬರಿ ಬೀಜಗಳು ಸರಿಪಡಿಸುತ್ತದೆ. ಮೂತ್ರಪಿಂಡಗಳ ಸಮಸ್ಯೆಯನ್ನು ಸರಿಪಡಿಸಿ, ಪಿಲ್ಟರ್​ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಕ್ಯಾನ್ಬೆರಿ ಹಣ್ಣುಗಳು:

ಕ್ರ್ಯಾನ್‌ಬೆರಿ ಹಣ್ಣುಗಳಲ್ಲಿ ಫ್ಲೇವನಾಯ್ಡ್‌ಗಳು ಮತ್ತು ಇತರ ಪಾಲಿಫಿನಾಲ್‌ಗಳಲ್ಲಿ ಉತ್ಕರ್ಷಣ ನಿರೋಧಕವನ್ನು  ಶಕ್ತಿ ಹೊಂದಿದೆ.  ಉರಿಯೂತದ ಗುಣಲಕ್ಷಣಗಳು ಯುಟಿಐಗಳನ್ನು ನಿರ್ವಹಿಸಲು ಉತ್ತಮ ಆಹಾರವಾಗಿದೆ.  ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಿದೆ.

ಹೂಕೋಸು:

ಕಿಡ್ನಿ ಆರೋಗ್ಯವನ್ನು ಉತ್ತಮಪಡಿಸಲು ಹೂಕೋಸು ಉತ್ತಮ ತರಕಾರಿಯಾಗಿದೆ.  ಹೇರಳವಾದ ವಿಟಮಿನ್​, ಸಿ, ಕೆ ಮತ್ತು ಬಿಯನ್ನು ಹೊಂದಿರುವ ಹೂಕೋಸು ಕಿಡ್ನಿಯ ಕಾರ್ಯವನ್ನು ಸುಗಮಗೊಳಿಸುತ್ತದೆ. ಹೀಗಾಗಿ ನಿಮ್ಮ ಅಡುಗೆಯಲ್ಲಿ ಹೂಕೋಸನ್ನು ಹೆಚ್ಚು  ಬಳಸಿ.

ಬೆರಿ ಹಣ್ಣಗಳು: ಸ್ಟ್ರಾಬೆರಿ, ಬ್ಲ್ಯೂ ಬೆರಿಯಂತಹ ಹಣ್ಣುಗಳು ಕಿಡ್ನಿಯ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.  ಯಥೇಚ್ಚವಾದ ಆ್ಯಂಟಿಆಕ್ಸಿಡೆಂಟ್​ಗಳನ್ನು ಹೊಂದಿರುವ ಬೆರಿ ಹಣ್ಣುಗಳು ಕಿಡ್ನಿಯ ಅಪಾಯವನ್ನು ತಡೆಗಟ್ಟುತ್ತದೆ.

 ಇದನ್ನೂ ಓದಿ:

Joint Pain: ಕೀಲು ನೋವಿನ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರ: ಇಲ್ಲಿದೆ ಮಾಹಿತಿ

Published On - 10:41 am, Thu, 10 March 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್