AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gemini Yearly Horoscope 2025: 2025ರ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ?

ಮಿಥುನ ರಾಶಿ ವರ್ಷ ಭವಿಷ್ಯ 2025: 2025ರಲ್ಲಿ ಮಿಥುನ ರಾಶಿಯವರಿಗೆ ಆರ್ಥಿಕ ಹಿನ್ನಡೆ ಮತ್ತು ಆರೋಗ್ಯ ಸಮಸ್ಯೆಗಳು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಲಿದೆ. ಪ್ರೇಮ ಮತ್ತು ವಿವಾಹದ ವಿಚಾರದಲ್ಲಿ ಸ್ವಲ್ಪ ಅನಿಶ್ಚಿತತೆ ಇರುತ್ತದೆ. ಕುಟುಂಬದಲ್ಲಿ ಸಮಾಧಾನವಿರುತ್ತದೆ. ಶತ್ರುಗಳಿಂದ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಒಟ್ಟಾರೆಯಾಗಿ, ಲಕ್ಷ್ಮೀನಾರಾಯಣ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು.

Gemini Yearly Horoscope 2025: 2025ರ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ?
Gemini Yearly Horoscope 2025
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 28, 2024 | 1:14 PM

Share

ರಾಶಿ ಚಕ್ರದ ಮೂರನೇ ರಾಶಿಯಾದ ಮಿಥುನ ರಾಶಿವರಿಗೆ ಸ್ವಲ್ಪ ನಿರಾಳವಾಗಲಿದೆ. ಕಳೆದ ವರ್ಷದ ಬೇಸರ, ಹತಾಶೆ, ಅಪಮಾನ, ಆರ್ಥಿಕ ಹಿನ್ನಡೆ ಇವು ಕಡಿಮೆಯೇ. ಅಲ್ಪ ಗುರು ಬಲವು ಬರವುದರಿಂದ ನಿಮ್ಮಲ್ಲಿ ನೆಮ್ಮದಿ ಗಾಳಿ ಆಗಾಗ ಬೀಸಿ, ಆರಾಮೆನಿಸುವುದು. ಇನ್ನು ಶನಿಯು ಎರಡು ವರೆ ವರ್ಷಗಳ ಅನಂತರ ಸ್ಥಾನ ಬದಲಾವಣೆ ಆಗಲಿದೆ. ನವಮ ಸ್ಥಾನದಲ್ಲಿ ಇದ್ದ ಶನಿಯು ಏಕಾದಶಕ್ಕೆ ಬರುವನು. ದಶಮದಲ್ಲಿ ಇದ್ದ ರಾಹುವು ನವಮಕ್ಕೆ ಹೋಗುವನು ಮತ್ತು ಚತುರ್ಥದಲ್ಲಿ ಕೇತುವಿದ್ದು ಅವನು ತೃತೀಯಕ್ಕೆ ಬರುವನು. ಇವೆಲ್ಲ ಬದಲಾವಣೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಆಗುವುದರಿಂದ ಅಲ್ಲಿಯವರೆಗೆ ಯಥಾಸ್ಥಿತಿ ಇರುವುದು.

ಮಿಥುನ ರಾಶಿಯವರ ಆರೋಗ್ಯ:

ಅರೋಗ್ಯ ಅಧಿಪತಿ ಸದ್ಯ ನೀಚನಾಗಿಯೇ ಇರುವನು. ವರ್ಷದ ಮಧ್ಯದವರೆಗೂ ಆರೋಗ್ಯದಲ್ಲಿ ಕಿರಿಕಿರಿ ಇರುವುದು. ಸಣ್ಣ ಔಷಧೋಪಚಾರಗಳ ಮೂಲಕ ಅದನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಮತ್ತೆ ಹೆಚ್ಚಾಗುವುದು ಅಥವಾ ಮತ್ತೇನೋ ಆರಂಭವಾಗುವುದು. ರಕ್ತಸ್ರಾವ ಮೊದಲಾದ ಶಾರೀರಿಕ ಏರುಪೇರು ಕಾಣಿಸುವುದು.

ಮಿಥುನ ರಾಶಿಯವರ ಪ್ರೇಮ ಮತ್ತು ವಿವಾಹ:

ವಿವಾಹಕ್ಕೆ ವರ್ಷದ ಮಧ್ಯಾವಧಿಯವೆರೆಗೆ ಸೂಕ್ತ ಕಾಲವಿಲ್ಲ. ಅನಂತರ ಅನಿವಾರ್ಯವಾದರೆ ಪರಿಹಾರದ ಮೂಲಕ ವಿವಾಹವನ್ನು ಮಾಡಿಕೊಳ್ಳಿ. ಪ್ರೇಮವು ಆದಂತೆ ಅನಿಸಿದರೂ ಕಾರಣಾಂತರಗಳಿಂದ ತಪ್ಪುವುದು. ದುಃಖವು ನಿಮ್ಮನ್ನು ಕೆಲಕಾಲ ಜಿಗುಪ್ಸೆ ತರಿಸುವುದು. ಅನ್ಯ ಕಾರ್ಯದಲ್ಲಿ ತೊಡಗಿದರೆ ಉತ್ತಮ.

ಮಿಥುನ ರಾಶಿಯವರ ಉದ್ಯೋಗ ಮತ್ತು ಆರ್ಥಿಕತೆ:

ಈ ವರ್ಷ ನಿಮ್ಮ ಉದ್ಯೋಗದಲ್ಲಿ ಯಾವುದೇ ಬದಲಾವಣೆ ಕಾಣಿಸದು. ಉದ್ಯೋಗವನ್ನು ಬದಲಿಸಿ ಮತ್ತೆ ಅಂತದ್ದೆ ಉದ್ಯೋಗಕ್ಕೆ ಹೋಗಬೇಕಾಗುವುದು. ಹಾಗಾಗಿ ಇದ್ದಲ್ಲೇ ಇರುವುದು ಕ್ಷೇಮ. ಆರ್ಥಿಕತೆಯು ವರ್ಷಾರಂಭದಲ್ಲಿ ಕಷ್ಟ.‌ ಬರಬೇಕಾದ ಹಣವು ಶ್ರಮ ಹಾಕಿದರೂ ಸಿಗುವುದು ಸುಲಭವಿಲ್ಲ.

ಇದನ್ನೂ ಓದಿ: 2025ರಲ್ಲಿ ವೃಷಭ ರಾಶಿಯವರ ಭವಿಷ್ಯ ಹೇಗಿರಲಿದೆ? ಲಾಭವೋ, ನಷ್ಟವೋ?

ಮಿಥುನ ರಾಶಿಯವರ ಕುಟುಂಬ ವ್ಯವಸ್ಥೆ:

ಕೌಟುಂಬಿಕ ಅಸಮಾಧಾನವು ಸರಿಯಾಗುವುದು. ನಿಮ್ಮ ಪರವಾಗಿ ನಿಲ್ಲುವರು. ಚತುರ್ಥದ ಅಧಿಪತಿ ಬುಧನೇ ಆಗಿದ್ದು ಬಾಂಧವರ ಸಹವಾಸ ಸಿಗಲಿದೆ.

ಮಿಥುನ ರಾಶಿಯವರ ಶತ್ರುಬಾಧೆ:

ನಿಮಗೆ ಶತ್ರುಗಳ ಕಾಟ ಹಣಕಾಸಿನ ವಿಚಾರದಲ್ಲಿ ಇರುವುದು. ನಿಮಗೆ ಸಿಗಬೇಕಾದ ಹಣವನ್ನು ಪಡೆಯುವುದಾದರೂ ಕೇಳುವ ರೀತಿಯಲ್ಲಿ ಕೇಳಿ.‌‌ ಇಲ್ಲವಾದರೇ ಅದೇ ಶತ್ರುತ್ವಕ್ಕೆ ಕಾರಣವಾಗುವುದು.

ಮಿಥುನ ರಾಶಿಯವರ ಅದೃಷ್ಟ:

ಅದೃಷ್ಟ ಈ ವರ್ಷ ನಿಮ್ಮ ಪಾಲಿಗೆ ಇದೆ. ಆದರೆ ಯಾರಿಗೆ ರಾಹು ದಶಾ ನಡೆಯುತ್ತದೆಯೋ ಅವರಿಗೆ ಈ ಅದೃಷ್ಟ ಸಿಗಲಿದೆ. ಆರಂಬಿಸಿದ ಕಾರ್ಯಕ್ಕೆ ಉತ್ತಮ ವೇಗ ಸಿಕ್ಕಿ, ಅಂದುಕೊಂಡಿದ್ದನ್ನು ಸಾಧಿಸುವುದು ಆಗುವುದು.

ಒಟ್ಟಾರೆಯಾಗಿ ಈ ವರ್ಷ ಲಕ್ಷ್ಮೀನಾರಾಯಣರ ಉಪಾಸನೆಯಿಂದ ವರ್ಷದಲ್ಲಿ ಉಂಟಾಗುವ ಅಲ್ಪ ವ್ಯತ್ಯಾಸ ಮನಸ್ತಾಪ, ಕಿರಿಕಿರಗಳನ್ನು ಸರಿ ಮಾಡಿಕೊಳ್ಳಲು ಸಾಧ್ಯವಾಗುವುದು. ಸುಬ್ರಹ್ಮಣ್ಯನ ಆರಾಧನೆಯಿಂದ ಆರ್ಥಿಕ ವಿಚಾರದಲ್ಲಿ ಪ್ರಗತಿ ಕಾಣಲು ಸಾಧ್ಯ.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ