Horoscope Today 28 December: ಇಂದು ಈ ರಾಶಿಯವರು ತಂತ್ರಕ್ಕೆ ಬಲಿ ಹಾಗೂ ಅತಿಯಾದ ಪ್ರಯತ್ನದಿಂದ ಗೆಲವು
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ ಭಾನುವಾರ ಹೊಸ ಕಾರ್ಯ, ಮಾರಾಟದಲ್ಲಿ ಚುರುಕು, ಖಾಸಗಿಯಾಗಿ ದುಡಿಮೆ, ಪ್ರತಿಕೂಲ, ಸಾಹಸಕ್ಕೆ ಮುನ್ನಡೆ, ಅಗತ್ಯ ಪೂರೈಕೆ, ಸಂಚು ಬಯಲು ಎಲ್ಲವೂ ಇಂದಿನ ವಿಶೇಷ.

ಮೇಷ ರಾಶಿ:
ಸ್ವಾಭಿಮಾನ ಇಂದು ನಿಮ್ಮ ಆತ್ಮರಕ್ಷಣೆಗೆ ದಾರಿ. ಶತ್ರುಕಾಟ ಇದ್ದರೂ ಮನೋಬಲ ಕುಗ್ಗಿಸಿಕೊಳ್ಳಬೇಡಿ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಮತ್ತು ಸಹಾನುಭೂತಿ. ಬಹಳ ಪರಿಶ್ರಮದಿಂದ ಇಂದು ಸ್ಥಳವನ್ನು ತಲುಪುವಿರಿ. ಇಂದು ಕೆಲಸದಲ್ಲಿ ಯಾವುದೇ ಅನಾನುಕೂಲತೆ ಇರುವುದಿಲ್ಲ. ವಾಣಿಜ್ಯದಲ್ಲೂ ಕೆಲಸ ಸುಗಮವಾಗಿ ನಡೆಯುವುದು. ಹಿಂದಿನ ತಪ್ಪುಗಳು ಪಾಠವಾಗುವುದು. ದೈವಾನುಗ್ರಹವನ್ನು ಪಡೆದು ಮುಂದಿನ ಹೊಸ ಕಾರ್ಯಕ್ಕೆ ಅಣಿಯಾಗಿ. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ಇಂದು ತಂದೆ ಹೇಳಿದ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಅಪವಾದದಿಂದ ಸಂಘರ್ಷ ಸಾಧ್ಯ. ರಾಜಕೀಯ ವಿಷಯಗಳು ಗೊಂದಲ ತರುತ್ತವೆ. ಸ್ವಾವಲಂಬನೆಯಿಂದ ಸೋಲು ದೂರವಾಗಿ ಗೆಲುವು ಸಮೀಪಿಸುತ್ತದೆ. ಕೆಲವು ಸಮಯದಲ್ಲಿ ಪರಿಸ್ಥಿತಿ ಸಹ ಸಾಮಾನ್ಯವಾಗಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದೀರಿ. ಆರ್ಥಿಕವಾಗಿ ಉತ್ತಮ ದಿನವಾಗಿದೆ. ಹೊಸ ಪ್ರದೇಶದಿಂದ ನಿಮಗೆ ಉತ್ಸಾಹ ಬರಲಿದೆ. ಇಂದು ವಿಘಟನೆಗೆ ಆಗಲು ಅವಕಾಶವು ಕೊಡುವುದು ಬೇಡ.
ವೃಷಭ ರಾಶಿ:
ಅಪವಾದದ ಮಾತುಗಳು ಪರಿಸ್ಥಿತಿ ಕಠಿಣಗೊಳಿಸಬಹುದು. ಶತ್ರುಕಾಟದಿಂದ ಸಂಘರ್ಷ ಅವಕಾಶವಾಗಲಿದೆ. ಅಪರಿಚಿತ ವ್ಯಕ್ತಿಯಿಂದ ಅಚ್ಚರಿ ಸಹಾಯ ಸಿಗುತ್ತದೆ. ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ಪರಸ್ಥಳದಲ್ಲಿ ವಾಸ ಮಾಡುವ ಸಂದರ್ಭವು ಬರಲಿಸೆ. ನಿಮಗೆ ಯಾರಿಂದಲೋ ರಕ್ಷಣೆ ಇದೆ ಎನ್ನಿಸಬಹುದು. ಮನೆಯಲ್ಲೂ ತಾಳ್ಮೆಯನ್ನು ಇಟ್ಟುಕೊಳ್ಳಿ. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ಖಾಸಗಿ ಸಂಸ್ಥೆ ದೂರದೃಷ್ಟಿಯ ಯೋಜನೆಯು ಪ್ರಯೋಜನವಾದೀತು. ರಾಜಕೀಯ ಸ್ಥಿತಿಯಲ್ಲಿ ಅಸ್ಥಿರತೆ. ನಿಮ್ಮ ಸ್ವಾಭಿಮಾನ ಬಲವಾಗಿರಲಿ. ಹೊಸ ತಂತ್ರಗಳಿಂದ ಸೋಲನ್ನು ಗೆಲುವಾಗಿ ಮಾಡಬಹುದು. ಇಂದು ಅವಲಂಬನೆ ತಪ್ಪಿಸಲಾಗದು. ಬೇಗನೆ ಹಣವನ್ನು ಸಂಪಾದಿಸಲು ಅನ್ಯ ಮಾರ್ಗವನ್ನು ಹಿಡಿಯಬಹುದು. ಹೊಸ ಸಂಪರ್ಕದಿಂದ ಅದೃಷ್ಟ ಬದಲಾಗುತ್ತದೆ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಹಳೆಯ ವಸ್ತುವನ್ನು ಪುನಃ ಉಪಯೋಗಿಸುವಿರಿ.
ಮಿಥುನ ರಾಶಿ:
ಇಂದಿನ ಸಂಘರ್ಷ ನಿಮ್ಮ ಸಹನೆಯನ್ನು ಪರೀಕ್ಷಿಸುತ್ತದೆ. ಶತ್ರುಕಾಟ ಇದ್ದರೂ ವರ್ತನೆಯಿಂದ ವ್ಯಕ್ತಿತ್ವ ಪರಿಚಯವಾಗಲಿದೆ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಮತ್ತು ಸಂಪರ್ಕ ಸಾಧ್ಯತೆ. ಇಂದು ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ದೈವದ ಭೀತಿಯು ನಿಮ್ಮನ್ನು ಕಾಡಬಹುದು. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣವಾಗಲಿದೆ. ದುಃಸ್ವಪ್ನಗಳು ಬೀಳಬಹುದು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ಕೈ ಮತ್ತು ಕಾಲುಗಳಲ್ಲಿ ನೋವು ಕಾಣಿಸಿಕೊಂಡು ದೈನಂದಿನ ಕೆಲಸಗಳೂ ಕಷ್ಟವಾದೀತು. ಇಂದು ವ್ಯವಹಾರದಲ್ಲಿ, ಮಾತುಗಳು ಹೆಚ್ಚು ತೀವ್ರವಾಗಿರಲಿದ್ದು, ಅದರ ಸರಿಯಾದ ಪ್ರಯೋಜನು ವಿಳಂಬದಿಂದ ಬರುವುದು. ರಾಜಕೀಯ ಜವಾಬ್ದಾರಿ ಹೆಚ್ಚಾಗುತ್ತದೆ. ಸ್ವಾಭಿಮಾನ ಉಳಿಸಿಕೊಂಡರೆ ಸೋಲಿನ ಅನಂತರವೂ ಅಂತಿಮ ಗೆಲುವು ನಿಮ್ಮದೇ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಕಾಣಿಸಿಕೊಳ್ಳುವುದು. ಹಿರಿಯ ಅಧಿಕಾರಿಗಳ ಜೊತಡ ವೈಮನಸ್ಸು ಬರಬಹುದು. ಹಿರಿಯರ ಎದುರು ವಿನಯದಿಂದ ಮಾತನಾಡಿ.
ಕರ್ಕಾಟಕ ರಾಶಿ:
ರಾಜಕೀಯದಲ್ಲಿ ಅವಕಾಶಗಳು ನಿಮ್ಮತ್ತ ಬರುತ್ತವೆ. ಅಪರಿಚಿತ ವ್ಯಕ್ತಿಯಿಂದ ಮಾರ್ಗದರ್ಶನ ಸಿಗಬಹುದು. ಶತ್ರುಕಾಟದ ಮಾತುಗಳು ಸಂಘರ್ಷಕ್ಕೆ ಕಾರಣವಾಗಬಹುದು. ವೈವಾಹಿಕ ಜೀವನದ ಚಿಂತೆ ಅತಿಯಾಗಿ ಕಾಡಬಹುದು. ಪಾಲುದಾರಿಕೆಯಲ್ಲಿ ಉಂಟಾದ ವಿವಾದವನ್ನು ದೊಡ್ಡ ಮಾಡಿಕೊಳ್ಳುವಿರಿ. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ಮಕ್ಕಳಿಂದ ಧನಸಹಾಯದ ನಿರೀಕ್ಷೆ ಇರಲಿದೆ. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು. ಈ ದಿನ ನೀವು ಸಂತೋಷವಾಗಿರುವಿರಿ. ಆದರೆ ಅಸಭ್ಯ ವರ್ತನೆಯು ಕೆಲವರಿಂದ ಮಾತುಗಳು ಕೇಳಿಬರಬಹುದು. ಅಪವಾದದಿಂದ ದೂರವಿರಲು ಪ್ರಯತ್ನಿಸುವಿರಿ. ಸ್ವಾಭಿಮಾನ ಕಾಪಾಡಿಕೊಂಡರೆ ಸೋಲು ನಿಮ್ಮನ್ನು ಮುಟ್ಟದು. ಅತಿಯಾದ ಅವಲಂಬನೆ ಬಿಟ್ಟು ಸ್ವತಂತ್ರ ನಿರ್ಧಾರ ಕೈಗೊಳ್ಳಿ. ಕೆಲಸದ ಬಿಡುವಿಲ್ಲದಿದ್ದರೂ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸುವಿರಿ. ಇಂದು ನೀವು ಯಾವುದೇ ಒಂದು ಸರಿಯಾದ ನಿರ್ಧಾರಕ್ಕೆ ಬರಲಾಗದು. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು.
ಸಿಂಹ ರಾಶಿ :
ಶತ್ರುಕಾಟ ಇಂದು ತೀವ್ರವಾದಂತೆ ಅನುಭವಕ್ಕೆ ಬರಲಿದೆ. ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಂದರ್ಭ. ಅಪವಾದದಿಂದ ಸಂಘರ್ಷ ಉಂಟಾಗುವ ಸಾಧ್ಯತೆ. ನಿಮ್ಮ ಸಂಕಟವನ್ನು ಆಪ್ತರ ಜೊತೆ ಹಂಚಿಕೊಂಡು ಸಮಾಧಾನ ಪಟ್ಟುಕೊಳ್ಳುವಿರಿ. ಎಂದೋ ಮಾಡಿದ ಕಾರ್ಯಕ್ಕೆ ಇಂದು ಪಶ್ಚಾತ್ತಾಪಪಡಬೇಕಾದೀತು. ಈ ದಿನ ನೀವು ತಾಳ್ಮೆಯನ್ನು ಅಭ್ಯಾಸ ಮಾಡುವುದರ ಮೂಲಕ ನಿರೀಕ್ಷೆಗಿಂತ ಹೆಚ್ಚಿನದನ್ನು ಗಳಿಸಬಹುದು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು. ಈ ಕಾರಣದಿಂದಾಗಿ ಜನರಿಂದ ಟೀಕೆ ಬರುವುದು. ಇಂದು, ನೀವು ವಾಸ್ತವಕ್ಕಿಂತ ಕಾಲ್ಪನಿಕತೆಯಲ್ಲಿ ಹೆಚ್ಚು ಇರುತ್ತೀರಿ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಇದ್ದರೂ ಎಚ್ಚರ. ರಾಜಕೀಯ ವಿಚಾರಗಳು ಒತ್ತಡ ತರುತ್ತವೆ. ತಾತ್ಕಾಲಿಕ ಸೋಲಿನ ಅನಂತರ ದೃಢ ನಿಲುವಿನಿಂದ ಗೆಲುವು ಸಾಧ್ಯ. ಖರ್ಚು ಆದಾಯಕ್ಕಿಂತ ಹೆಚ್ಚಾಗುತ್ತದೆ. ದೇಶೀಯ ಸಂತೋಷ ಮತ್ತು ಆನಂದದ ಸಾಧನಗಳನ್ನು ಪ್ರದರ್ಶನಕ್ಕಾಗಿ, ಹವ್ಯಾಸಗಳಿಗಾಗಿ ಖರ್ಚು ಮಾಡಲಾಗುವುದು.
ಕನ್ಯಾ ರಾಶಿ:
ಆಕರ್ಷಣೆ ಮತ್ತು ವಿರೋಧ ಎರಡೂ ಒಂದೇ ಸಮಯದಲ್ಲಿ ಎದುರಾಗಬಹುದು. ಶತ್ರುಕಾಟದಿಂದ ಸಂಘರ್ಷ ಉಂಟಾಗುವ ಸಾಧ್ಯತೆ. ಅಪವಾದದ ಭಯ ಇದೆ. ಅಧಿಕಾರಿಗಳಿಗೆ ಬೇಕಾದುದನ್ನು ನೀಡಿ ಅವರನ್ನು ಖುಷಿಪಡಿಸುವಿರಿ. ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಇಂದು ನಿಮಗೆ ಸಾಮಾಜಿಕವಾಗಿ ಗೌರವವನ್ನು ಪಡೆಯುವಿರಿ. ಆದರೆ ಕೆಲವು ತಪ್ಪುಗ್ರಹಿಕೆಯಿಂದಾಗಿ ಅಸಮಾಧಾನ ಇರಲಿದೆ. ಇಂದಿನ ಉದ್ಯಮವು ನಿಮ್ಮ ಹಿಡಿತದಲ್ಲಿ ಇರುತ್ತದೆ. ಲಾಭವೂ ಹೆಚ್ಚಾಗುವುದು. ರಾಜಕೀಯ ಚರ್ಚೆಗಳಿಂದ ಒಂದು ತೀರ್ಮಾನಕ್ಕೆ ಬರುವಿರಿ. ಸ್ವಾಭಿಮಾನ ಸಮತೋಲನದಲ್ಲಿರಲಿ. ಸೋಲು, ಗೆಲವು ಎರಡರ ಅನಂತರವೂ ನ್ಯಾಯವೇ ನಿಮ್ಮ ಜಯ. ಕಾರ್ಯಕ್ಷೇತ್ರದ ಗೆಳೆಯರು ನಿಮ್ಮ ನಡವಳಿಕೆಯಿಂದ ಸಂತೋಷವಾಗಿರುತ್ತಾರೆ. ಇದರಿಂದ ಅವರು ತಮ್ಮ ಕೆಲಸವನ್ನು ಒಂದು ನಿರ್ದಿಷ್ಟ ಅವಧಿಯಲ್ಲಿ ಪೂರ್ಣವಾಗುವುದು. ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಬಹುದು.
ತುಲಾ ರಾಶಿ:
ಸಂಘರ್ಷ ತಪ್ಪಿಸಲು ಇಂದು ಜಾಣ್ಮೆ ತೋರಿಸುವಿರಿ. ಅಪವಾದದ ಮಾತುಗಳು ಮನಸ್ಸನ್ನು ಕಾಡಬಹುದು. ಅಪರಿಚಿತ ವ್ಯಕ್ತಿಯಿಂದ ಸಹಕಾರ ಸಿಗುವ ಸೂಚನೆ. ರಾಜಕೀಯ ವಿಷಯಗಳಲ್ಲಿ ಎಚ್ಚರ. ವಿದ್ಯಾಭ್ಯಾಸದಲ್ಲಿ ಅಸ್ಥಿರತೆ ಕಾಡಬಹುದು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಒಪ್ಪಿಸಿ ಮಾಡಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಎಲ್ಲಾ ಕೆಲಸಗಳನ್ನು ಮಾಡಿದರೂ ಯಶಸ್ಸಿನಲ್ಲಿ ವಿಳಂಬವಾಗಬಹುದು. ಮನಸ್ಸಿನ ನಕಾರಾತ್ಮಕ ಭಾವನೆಗಳು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಚಲಿತರನ್ನಾಗಿ ಮಾಡುತ್ತವೆ. ಶತ್ರುಕಾಟದ ನಡುವೆ ಲೆಕ್ಕಾಚಾರದಿಂದ ನಡೆದು ಸೋಲು ತಪ್ಪಿಸಬಹುದು. ಸ್ವಾಭಿಮಾನ ಕಾಪಾಡಿ, ಅವಲಂಬನೆ ಕಡಿಮೆ ಮಾಡಿರಿ. ಮನೆಯವರ ಸಮಸ್ಯೆ ಬಗೆಹರಿಯಲಿದ್ದು, ಮುಖಂಡರ ಸಹಾಯವನ್ನೂ ಪಡೆಯಬೇಕಾಗುವುದು. ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಕೋಪವನ್ನು ನಿಯಂತ್ರಿಸಿ.
ವೃಶ್ಚಿಕ ರಾಶಿ :
ಸ್ವಾಭಿಮಾನ ಇಂದು ಪ್ರಮುಖ ಪಾತ್ರ ವಹಿಸುತ್ತದೆ. ಶತ್ರುಕಾಟ ಎದುರಾದರೂ ನಿಮ್ಮ ಪ್ರಭಾವ ಕಡಿಮೆಯಾಗದು. ರಾಜಕೀಯ ವಿಚಾರಗಳು ಚರ್ಚೆಗೆ ಬರುತ್ತವೆ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಬರಲಿದೆ. ಇಂದು ನಿಮ್ಮ ಬಾಕಿ ಉಳಿದ ಸಾಲಗಳನ್ನು ಪೂರ್ಣ ಮಾಡಿ. ಸ್ವಯಂಕೃತ ಅಪರಾಧಗಳಿಂದ ಕಿಂಚಿತ್ತೂ ಬೇಸರವಾಗದು. ನಿಮ್ಮ ಸೋಮಾರಿತನವೇ ನಿಮ್ಮ ದೊಡ್ಡ ಶತ್ರುವಾಗಲಿದೆ. ದೈಹಿಕ ದೋಷಗಳನ್ನು ಸಕಾರಾತ್ಮಕವಾಗಿ ಎದುರಿಸುವಿರಿ. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸಕ್ಕೆ ಕಷ್ಟವಾಗುವುದು. ಆರ್ಥಿಕತೆಯು ನಿಮಗೆ ತೃಪ್ತಿ ಕೊಡುವುದು. ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಸಾಮಾಜಿಕ ಚಿತ್ರಣವನ್ನು ಬದಲಿಸುವಿರಿ. ಅಪವಾದದಿಂದ ಸಂಘರ್ಷ ಸಾಧ್ಯ. ಸೋಲು ಕಂಡರೂ ನಾಯಕತ್ವದಿಂದ ಮತ್ತೆ ಗೆಲುವು ನಿಮ್ಮದಾಗುತ್ತದೆ. ಹಣವು ಒಮ್ಮೆ ಕೈಗೆ ಬಂದರೆ, ಸಾಹಸಕಾರ್ಯಗಳಲ್ಲಿ ತೊಡಗುವಿರಿ. ಸ್ವಲ್ಪ ಕುಟುಂಬದ ಸಮಸ್ಯೆಗಳಿಂದಾಗಿ, ಮನಸ್ಸು ಚಂಚಲವಾಗಿರುತ್ತದೆ.
ಧನು ರಾಶಿ :
ಇಂದು ಅವಲಂಬನೆ ನಿಮ್ಮ ದುರ್ಬಲತೆಯಾಗಲಿದೆ. ಶತ್ರುಕಾಟ ಗುಪ್ತವಾಗಿ ನಡೆಯುತ್ತದೆ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಇದ್ದರೂ ನಂಬಿಕೆಗೆ ಪರೀಕ್ಷಿಸುವಿರಿ. ಅಪವಾದದ ಮೂಲಕ ಸಂಘರ್ಷ ಸಾಧ್ಯ. ನಿಮಗೆ ಇಂದು ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ಆರ್ಥಿಕ ಚಿಂತೆಗಳು ಸಕಾರಾತ್ಮಕ ಮಾರ್ಗದಲ್ಲಿ ಇರಲಿ. ನಷ್ಟದ ಪ್ರಮಾಣಗಳು ಅಧಿಕವಾಗಬಹುದು. ಮರೆವಿನಿಂದ ನಿಮ್ಮ ವಸ್ತುಗಳು ಕಷ್ಟವಾಗಬಹುದು. ಅಪರಿಚಿತರ ವ್ಯವಹಾರವನ್ನು ಕಡಿಮೆ ಮಾಡಿ. ಅಧಿಕಾರಿ ವರ್ಗದವರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ರಾಜಕೀಯ ಮಾತುಗಳಿಂದ ದೂರವಿರುವುದು ಒಳಿತು. ಸ್ವಾಭಿಮಾನ ಕಾಯ್ದುಕೊಂಡರೆ ಸೋಲನ್ನು ಗೆಲುವಾಗಿ ಮಾಡಬಹುದು. ಲೇಖನ ಸಾಮಗ್ರಿಗಳು ಅಥವಾ ಮುದ್ರಣ ಕೆಲಸಕ್ಕೆ ಸಂಬಂಧಿಸಿದ ಜನರು ಹೊಸ ಉದ್ಯೋಗಗಳನ್ನು ಪಡೆಯುವರು.
ಮಕರ ರಾಶಿ :
ಸೋಲು, ಗೆಲವು ಒಂದೇ ದಿನ ಕಂಡುಬರುವ ಸೂಚನೆ. ಅಪರಿಚಿತ ವ್ಯಕ್ತಿಯಿಂದ ಸಹಾಯ ಸಿಗಬಹುದು. ಶತ್ರುಕಾಟದ ಮಾತುಗಳು ಸಂಘರ್ಷ ಹುಟ್ಟುಹಾಕಬಹುದು. ಅಪವಾದದಿಂದ ಹೆಸರು ಹಾನಿಯಾಗುವ ಸಾಧ್ಯತೆ. ಮಾನಸಿಕ ಅಸಮತೋಲನದಿಂದ ಎಲ್ಲ ಕಾರ್ಯವೂ ಅಸ್ತವ್ಯಸ್ತ ಆಗಬಹುದು. ಸ್ನೇಹಿತರಿಂದ ಸಹಾಯದ ನಿರೀಕ್ಷೆ ಇದ್ದು, ಹುಸಿಯಾಗುವುದು. ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯವರಾಗುವಿರಿ. ನಾನಾ ಪ್ರಕಾರದ ಖರ್ಚುಗಳಿಂದ ಇಂದಿನ ದಿನದ ಸಮಯವು ದುಬಾರಿ ಎನಿಸಬಹುದು. ನಿಮ್ಮ ಲಾಭಕ್ಕೆ ಪೂರಕವಾದ ಅವಕಾಶಗಳು ಸಿಗುತ್ತವೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಪ್ರಮುಖ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳುವುದು ಬೇಡ. ರಾಜಕೀಯ ವಿಷಯಗಳಲ್ಲಿ ತಟಸ್ಥವೇ ಇಂದು ಉತ್ತಮ. ಸ್ವಾಭಿಮಾನ ಉಳಿಸಿಕೊಂಡರೆ ಪರಿಸ್ಥಿತಿ ನಿಮ್ಮತ್ತ ತಿರುಗುತ್ತದೆ. ಸಹೋದರಿಯರು ಮತ್ತು ಸಂಗಾತಿಯ ಬೆಂಬಲ ಪಡೆಯುವಿರಿ. ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಮಾಡಲು ಅವಕಾಶ ಬರುವುದು.
ಕುಂಭ ರಾಶಿ :
ಆಕರ್ಷಣೆಯಿಂದ ಹೊಸ ಪರಿಚಯ ಆರಂಭವಾಗಬಹುದು. ಅಪವಾದದಿಂದ ಮನಸ್ತಾಪ ಸಾಧ್ಯ. ಶತ್ರುಕಾಟ ಹೆಚ್ಚಾದರೂ ರಾಜಕೀಯ ಚಟುವಟಿಕೆಯಲ್ಲಿ ಎಚ್ಚರ ಅಗತ್ಯ. ಉದ್ಯೋಗದಲ್ಲಿನ ಒತ್ತಡಗಳು ಮನೆಯವರ ಮೇಲೆ ಸಿಟ್ಟಗುವಂತೆ ಮಾಡಬಹುದು. ಸಂಗಾತಿಯಿಂದ ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು. ಆರೋಗ್ಯವು ಸಾಮಾನ್ಯವಾಗಿ ಇರಲಿದೆ. ಇಂದು ನಿಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ಹಣ ಗಳಿಸುವ ಬಯಕೆ ಅಪೂರ್ಣವಾಗಬಹುದು. ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದ ಅನಂತರವೂ ಕೆಲಸ ತಡವಾಗಿ ಪೂರ್ಣಗೊಳ್ಳುತ್ತದೆ. ಸಂಘರ್ಷ ತಪ್ಪಿಸಲು ಮಿತವಾದ ಸಂಭಾಷಣೆ ಮುಖ್ಯ. ಸ್ವಾಭಿಮಾನ ಕಾಯ್ದುಕೊಂಡರೆ ತಾತ್ಕಾಲಿಕ ಸೋಲಿನ ಬಳಿಕ ಗೆಲುವು ಸಾಧ್ಯ. ಅನವಶ್ಯಕ ಅವಲಂಬನೆ ಕಡಿಮೆ ಮಾಡಿರಿ. ಹೊಸ ಸಂಬಂಧದ ಮೂಲಕ ಅದೃಷ್ಟ ಬರಬಹುದು. ಸಾಮಾಜಿಕ ಕಾರ್ಯಕ್ಕೆ ಗೌರವ ನಿಮ್ಮನ್ನು ಅರಸಿ ಬರಲಿದೆ. ಮನೆಯವರು ನಿಮ್ಮ ಗುಣವನ್ನು ಅಪಾರ್ಥ ಮಾಡಿಕೊಂಡಾರು.
ಮೀನ ರಾಶಿ :
ಇಂದು ಶತ್ರುಕಾಟ ಸ್ಪಷ್ಟವಾಗಿ ಗೊತ್ತಾಗಬಹುದು. ಸ್ವಾಭಿಮಾನಕ್ಕೆ ಸವಾಲು ಬಂದರೂ ಹಿಂದೆ ಸರಿಯಬೇಡಿ. ಅಪರಿಚಿತ ವ್ಯಕ್ತಿಯಿಂದ ಆಕರ್ಷಣೆ ಉಂಟಾಗುತ್ತದೆ. ರಾಜಕೀಯ ವಿಚಾರಗಳು ಸಂಘರ್ಷಕ್ಕೆ ಕಾರಣವಾಗಬಹುದು. ನಿಮಗೆ ಹಿರಿಯರ ಆಸೆಯನ್ನು ಪೂರೈಸಿದ ಸಂತೃಪ್ತಿ ಇರುವುದು. ಹಠಾತ್ ಬದಲಾವಣೆಯನ್ನು ಕುಟುಂಬ ನಿಮ್ಮಿಂದ ನಿರೀಕ್ಷಿಸದು. ಗುರು ಹಿರಿಯರಿಂದ ಸಿಕ್ಕ ಉಪದೇಶವು ಪ್ರಯೋಜನಕಾರಿಯಾಗುವುದು. ತಂದೆಯಿಂದ ಮಾನಸಿಕವಾಗಿ ನೋವಾಗಲಿದೆ. ಪ್ರಯಾಣದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ಸ್ನೇಹಿತರಿಂದ ಅಸಹಕಾರದಿಂದ ಅವರ ಮೇಲೆ ಪ್ರೀತಿ ಕಡಿಮೆ ಆಗಬಹುದು. ಆರ್ಥಿಕತೆಯ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಗಿಂತ ಇಂದು ಉತ್ತಮವಾಗಿದೆ. ಅಪವಾದದ ಭಯ ಇದೆ. ಸೋಲು, ಗೆಲವು ಎರಡೂ ಅನುಭವಿಸಿ ಕೊನೆಗೆ ಧೈರ್ಯವೇ ಜಯ ತರುತ್ತದೆ. ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವುದರಿಂದ ಸಂಪತ್ತಿನ ಮೂಲವು ಹೆಚ್ಚಾಗುತ್ತವೆ. ಸಾಮಾಜಿಕ ಚಟುವಟಿಕೆಗಳಿಗೆ ಸಮಯವನ್ನು ಕೊಡಲಾಗದೇ ಜನರು ನಿಮ್ಮಿಂದ ದೂರವಿರಬಹುದು.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಭಾನುವಾರ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಭ, ಕರಣ : ಬವ, ಸೂರ್ಯೋದಯ – 06 – 48 am, ಸೂರ್ಯಾಸ್ತ – 06 – 03 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:39 – 18:04, ಯಮಗಂಡ ಕಾಲ 12:26 – 13:50, ಗುಳಿಕ ಕಾಲ 15:15 – 16:39
-ಲೋಹಿತ ಹೆಬ್ಬಾರ್ – 8762924271 (what’s app only)




