AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

September Horoscope 2026: ನಿಮ್ಮ ರಾಶಿಗನುಗುಣವಾಗಿ ​ಸಪ್ಟೆಂಬರ್ ತಿಂಗಳ ಮಾಸ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

ಸೆಪ್ಟೆಂಬರ್ ತಿಂಗಳ ಗ್ರಹಗಳ ಸ್ಥಿತಿ ವಿಶೇಷವಾಗಿದೆ. ಮಂಗಳ ನೀಚನಾಗಿ ಗುರುವಿನ ಜೊತೆ, ಶುಕ್ರ ಸ್ವರಾಶಿಯಲ್ಲಿ, ಹಾಗೂ ಬುಧ ಉಚ್ಚ ರಾಶಿಯಲ್ಲಿ ಇರುತ್ತಾನೆ. ಈ ಗ್ರಹಗಳ ಸಂಚಾರದಿಂದ 12 ರಾಶಿಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ. ಆರ್ಥಿಕ ಪ್ರಗತಿ, ಆರೋಗ್ಯ, ಸಂಬಂಧಗಳು ಮತ್ತು ವೃತ್ತಿಜೀವನದಲ್ಲಿ ಬದಲಾವಣೆಗಳನ್ನು ತಿಳಿಯಿರಿ.

September Horoscope 2026: ನಿಮ್ಮ ರಾಶಿಗನುಗುಣವಾಗಿ ​ಸಪ್ಟೆಂಬರ್ ತಿಂಗಳ ಮಾಸ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ
ಸಪ್ಟೆಂಬರ್ ಮಾಸ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 28, 2026 | 10:52 AM

Share

ಸಪ್ಟೆಂಬರ್ ತಿಂಗಳಲ್ಲಿ ಮಂಗಳನು ನೀಚನಾಗಿ ಗುರುವಿನ ಜೊತೆ ಇರಲಿದ್ದಾನೆ, ಶುಕ್ರನೂ ಸ್ವರಾಶಿಯಲ್ಲಿ ಹಾಗೂ ತಿಂಗಳ ಸ್ವಲ್ಪದಿನ ಬುಧನ ತನ್ನ ಉಚ್ಚರಾಶಿಯಾದ ಕನ್ಯಾದಲ್ಲಿ ಇರುವನು. ವಿಶೇಷವಾಗಿ ಕರ್ಕಾಟಕದಲ್ಲಿ ಇದ್ದು ದಶೆಯಲ್ಲಿ ಇರುವವರಿಗೆ ತನ್ನ ಪೂರ್ಣ ಅನುಗ್ರಹವನ್ನೂ ಮಾಡುವನು.

ಮೇಷ ರಾಶಿ:

ಗುರು, ಮಂಗಳರ ಶುಭ ದೃಷ್ಟಿಯಿಂದ ಉತ್ಸಾಹ ಹೆಚ್ಚಲಿದೆ. ವ್ಯಾಪಾರ ಮತ್ತು ವೃತ್ತಿಯಲ್ಲಿ ಉತ್ತಮ ಪ್ರಗತಿ ಕಾಣಬಹುದು. ಆದರೆ ಶನಿ ೧೨ ನೇ ಮನೆಯಲ್ಲಿರುವುದರಿಂದ ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಒಳ್ಳೆಯದು. ಆರೋಗ್ಯದಲ್ಲಿ ಜಾಗ್ರತೆ ವಹಿಸಿ.

​ವೃಷಭ ರಾಶಿ:

ಚಂದ್ರ ನಿಮ್ಮ ರಾಶಿಯಲ್ಲಿದ್ದಾನೆ. ಕುಟುಂಬದಲ್ಲಿ ಸಂತೋಷ ಮತ್ತು ಧನಲಾಭದ ಯೋಗವಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರಶಂಸೆ ದೊರೆಯುತ್ತದೆ. ಮಾನಸಿಕ ಶಾಂತಿ ಸಿಗಲಿದ್ದು, ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇದು ಅತ್ಯುತ್ತಮ ಸಮಯ.

​ಮಿಥುನ ರಾಶಿ:

ತೃತೀಯ ಭಾವದಲ್ಲಿ ಯಾವುದೇ ದುಷ್ಟ ಗ್ರಹಗಳಿಲ್ಲದೆ, ಪಂಚಮದಲ್ಲಿ ಬುಧ-ಶುಕ್ರರ ಸಪ್ತಮ ದೃಷ್ಟಿ ಬರುವುದರಿಂದ ಬುದ್ಧಿವಂತಿಕೆಯಿಂದ ಕಾರ್ಯ ಸಾಧಿಸುವಿರಿ. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಬಹುದು. ಕೌಟುಂಬಿಕ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಚಾಣಾಕ್ಷತನದಿಂದ ಬಗೆಹರಿಸಿಕೊಳ್ಳಿ.

​ಕರ್ಕಾಟಕ ರಾಶಿ:

ಚತುರ್ಥ ಭಾವದಲ್ಲಿ ಮಂಗಳ ಮತ್ತು ಗುರು ಗ್ರಹಗಳು ಒಟ್ಟಾಗಿರುವುದರಿಂದ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಆಸ್ತಿ ಅಥವಾ ವಾಹನ ಖರೀದಿಯ ಯೋಗವಿದೆ. ಆದರೆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಹೆಚ್ಚಿನ ಲಾಭ ಪಡೆಯಬಹುದು.

​ಸಿಂಹ ರಾಶಿ:

ಪಂಚಮ ಭಾವದಲ್ಲಿ ಕೇತು ಇರುವುದರಿಂದ ಚಿಂತನೆಗಳಲ್ಲಿ ಏರಿಳಿತಗಳಿರಬಹುದು. ಆದರೆ ಸೂರ್ಯನ ಬಲದಿಂದ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಹಿರಿಯರ ಬೆಂಬಲ ಸಿಗಲಿದ್ದು, ದೂರದ ಪ್ರಯಾಣಗಳು ಅನುಕೂಲಕರವಾಗಿರುತ್ತವೆ.

​ಕನ್ಯಾ ರಾಶಿ:

ನಿಮ್ಮ ರಾಶಿಯಲ್ಲಿ ಸೂರ್ಯನಿದ್ದಾನೆ. ಶತ್ರುಗಳ ಮೇಲೆ ಜಯ ಸಿಗಲಿದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಆರೋಗ್ಯ ಸಂಬಂಧಿ ಸಣ್ಣಪುಟ್ಟ ಸಮಸ್ಯೆಗಳಿರಬಹುದು, ಸೂಕ್ತ ಆಹಾರ ಕ್ರಮ ಪಾಲಿಸಿ. ಹಣಕಾಸಿನ ಸ್ಥಿತಿ ಬಲವಾಗಿರುತ್ತದೆ.

​ತುಲಾ ರಾಶಿ:

ಸಪ್ತಮ ಭಾವದಲ್ಲಿ ಬುಧ ಮತ್ತು ಶುಕ್ರರ ಯುತಿಯಿರುವುದರಿಂದ ವ್ಯಾಪಾರ ಮತ್ತು ಸಹಭಾಗಿತ್ವದ ಉದ್ಯೋಗಗಳಲ್ಲಿ ಭಾರಿ ಲಾಭ ಸಿಗಲಿದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಸೌಂದರ್ಯ ಮತ್ತು ಕಲಾತ್ಮಕ ವಸ್ತುಗಳ ಕಡೆಗೆ ಆಸಕ್ತಿ ಹೆಚ್ಚುತ್ತದೆ.

​ವೃಶ್ಚಿಕ ರಾಶಿ:

ಅಷ್ಟಮ ಭಾವವು ಖಾಲಿಯಿದ್ದು, ಗ್ರಹಗಳ ಶುಭ ಸಂಚಾರದಿಂದ ನಿಮ್ಮ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಠಾತ್ ಧನಲಾಭದ ಸಾಧ್ಯತೆಯಿದೆ. ಆದರೆ ವಾಹನ ಚಲಾಯಿಸುವಾಗ ಜಾಗ್ರತೆ ವಹಿಸುವುದು ಸೂಕ್ತ.

​ಧನು ರಾಶಿ:

ಭಾಗ್ಯದ ಭಾವದಲ್ಲಿ ನಿಮಗೆ ಉತ್ತಮ ವಾತಾವರಣವಿದೆ. ಧಾರ್ಮಿಕ ಮತ್ತು ದೈವಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಅದೃಷ್ಟದ ಬೆಂಬಲದಿಂದ ತಡೆಯಲ್ಪಟ್ಟ ಕೆಲಸಗಳು ಪೂರ್ಣಗೊಳ್ಳುತ್ತವೆ. ತಂದೆಯ ಆರೋಗ್ಯದಲ್ಲಿ ಪ್ರಗತಿ ಕಂಡುಬರುತ್ತದೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!

​ಮಕರ ರಾಶಿ:

ದಶಮ ಭಾವವು ಬಲವಾಗಿದ್ದು, ಕರ್ಮ ಕ್ಷೇತ್ರದಲ್ಲಿ ಯಶಸ್ಸು ಕಾಣುವಿರಿ. ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ. ಹಿರಿಯ ಅಧಿಕಾರಿಗಳಿಂದ ಬೆಂಬಲ ದೊರೆಯಲಿದ್ದು, ಆರ್ಥಿಕ ಪ್ರಗತಿ ಸಾಲ ಸಾಲಾಗಿ ಬರಲಿದೆ.

​ಕುಂಭ ರಾಶಿ:

ಏಕಾದಶ ಭಾವದಲ್ಲಿ ರಾಹು ಇರುವುದರಿಂದ ವಿಭಿನ್ನ ಮೂಲಗಳಿಂದ ಹಠಾತ್ ಆದಾಯ ಬರಲಿದೆ. ವ್ಯಾಪಾರಿಗಳಿಗೆ ಇದು ಅತ್ಯಂತ ಲಾಭದಾಯಕ ಸಮಯ. ಸ್ನೇಹಿತರ ಸಹಾಯದಿಂದ ಹೊಸ ಯೋಜನೆಗಳು ಕೈಗೂಡಲಿವೆ.

​ಮೀನ ರಾಶಿ:

ನಿಮ್ಮ ರಾಶಿಯಲ್ಲಿ ಶನಿ ಇರುವುದರಿಂದ ಕೆಲಸಗಳಲ್ಲಿ ಕೊಂಚ ವಿಳಂಬವಾಗಬಹುದು. ದೈಹಿಕ ಆಯಾಸ ಮತ್ತು ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ತಾಳ್ಮೆಯಿಂದ ಕೆಲಸ ಮಾಡಿ, ಶ್ರದ್ಧೆಯಿಂದ ಶ್ರಮಿಸಿದರೆ ಅಂತಿಮವಾಗಿ ಯಶಸ್ಸು ಖಂಡಿತ. ​

ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ!
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ಬೆಂಗಳೂರಿನಲ್ಲಿ ದಕ್ಷಿಣ ಕೊರಿಯಾ ಕಂಪನಿ ಕಾರ್ಯಾರಂಭ: 350 ಜನರಿಗೆ ಉದ್ಯೋಗ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಚಿಕ್ಕಣ್ಣ ಮದುವೆ ಸಂಭ್ರಮ ಶುರು; ಅರಿಶಿಣ ಶಾಸ್ತ್ರದ ಖುಷಿಯಲ್ಲಿ ಪಾವನಾ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​