ಈ ನಾಲ್ಕು ಗ್ರಹಗಳು ಗ್ರಹನಾಯಕ ಸೂರ್ಯನ ಮನೆಯಲ್ಲಿ, ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲ?

ಸಿಂಹರಾಶಿಯಲ್ಲಿ ಅದಾಗಲೇ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಆಗಲಿದೆ. ಒಂದು ದಿನಗಳ ಕಾಲ ಈ ಯೋಗವು ಇರಲಿದ್ದು, ಇಂದು ಜನಿಸಿದವರ ಭವಿಷ್ಯವು ಚೆನ್ನಾಗಿ ಇರಲಿದೆ. ಇದಲ್ಲದೇ ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲವು ಇರಲಿದೆ ಎನ್ನುವುದನ್ನು ನೋಡೋಣ.

ಈ ನಾಲ್ಕು ಗ್ರಹಗಳು ಗ್ರಹನಾಯಕ ಸೂರ್ಯನ ಮನೆಯಲ್ಲಿ, ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲ?
ಸಿಂಹರಾಶಿಯಲ್ಲಿ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಆಗಲಿದೆ
Edited By: Rakesh Nayak Manchi

Updated on: Aug 15, 2023 | 8:38 PM

ಇದೇ ತಿಂಗಳ ಹದಿನಾರರಂದು ಸೂರ್ಯನು ಸ್ವಸ್ಥಾನವಾದ ಸಿಂಹರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈ ಸಿಂಹರಾಶಿಯಲ್ಲಿ ಅದಾಗಲೇ ಚಂದ್ರ, ಕುಜ, ಬುಧರು ಪ್ರತಿಷ್ಠಾಪಿತರಾಗಿದ್ದು ಸೂರ್ಯನ ಆಗಮನವೂ ಸೇರಿ ಒಟ್ಟು ನಾಲ್ಕು ಗ್ರಹಗಳು (Planets) ಇರಲಿದೆ. ಸರಿಸುಮಾರು ಒಂದು ದಿನಗಳ ಕಾಲ ಈ ಯೋಗವು ಇರಲಿದ್ದು, ಇಂದು ಜನಿಸಿದವರ ಭವಿಷ್ಯವು ಚೆನ್ನಾಗಿ ಇರಲಿದೆ. ಬುದ್ಧಿವಂತರೂ, ಎಲ್ಲ ಕಾರ್ಯಗಳಲ್ಲಿ ನಿಪುಣರೂ, ರಾಜಸಮಾನರಿಂದ ಪೂಜಿತರೂ ಆಗುವರು. ಈ ರಾಶಿಯ (Rashi) ಮೇಲೆ ಗುರುವಿನ ಪೂರ್ಣದೃಷ್ಟಿಯು ಇರಲಿದೆ.

ಇದಲ್ಲದೇ ಈ ಸಂದರ್ಭದಲ್ಲಿ ವರ್ತಮಾನದಲ್ಲಿ ಯಾವ ರಾಶಿಯವರಿಗೆ ಶುಭಫಲವು ಇರಲಿದೆ ಎನ್ನುವುದನ್ನು ನೋಡೋಣ.

ಮೇಷ ರಾಶಿ:

ರಾಶ್ಯಧಿಪತಿಯಾದ ಕುಜನು ಮಿತ್ರನಾದ ಸೂರ್ಯನ‌ ಜೊತೆ ಇರುವನು. ಮೇಷವು ಸೂರ್ಯನ ಉಚ್ಚಕ್ಷೇತ್ರವೂ ಆಗಿರುವ ಕಾರಣ ಮಾನ ಸಮ್ಮಾನಗಳು ಹೆಚ್ಚು ಸಿಗಲಿವೆ. ಈ ರಾಶಿಯವರ ವರ್ಚಸ್ಸು ಎಲ್ಲ ಕಡೆಗೂ ಇರಲಿದೆ. ಪ್ರತಿಭೆಗೆ ಸಂಬಂಧಿಸಿದಂತೆ ಯಶಸ್ಸನ್ನು ಗಳಿಸುವಿರಿ. ನಿಮ್ಮ ಇಷ್ಟವನ್ನು ಪೂರ್ಣಗೊಳಿಸಿಕೊಳ್ಳುವಿರಿ. ಉನ್ನತ ಅಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ.

ಮಿಥುನ ರಾಶಿ:

ರಾಶ್ಯಧಿಪತಿಯಾದ ಬುಧನು ಸೂರ್ಯನ ಜೊತೆ ಇರುವುದು ಬಹಳ ಶುಭ. ಬುಧನು ಬುದ್ಧಿಯನ್ನು ತೀಕ್ಷ್ಣ ಮಾಡಿದರೆ, ರವಿಯು ಅದನ್ನು ಪ್ರಕಾಶಗೊಳಿಸಲು ಸಹಾಯ ಮಾಡುವನು. ಬುಧಾದಿತ್ಯ ಯೋಗವು ಉತ್ತಮವಾದುದಾಗಿದೆ. ತೃತೀಯದಲ್ಲಿ ಬುಧನು ರವಿಯ‌ ಜೊತೆ ಇರುವ ಕಾರಣ ನಿಮ್ಮ ಪ್ರತಿಭೆಯ ಬೃಹದ್ರೂಪದ ದರ್ಶನವು ಆಗುವುದು.

ತುಲಾ ರಾಶಿ:

ಈ ರಾಶಿಗೆ ಸೂರ್ಯನು ಏಕಾದಶಕ್ಕೆ ಬರುವ ಕಾರಣ ಸರ್ಕಾರಿ ಉದ್ಯೋಗಪ್ರಾಪ್ತಿಯಾಗುವುದು. ತಂದೆಯಿಂದ ಅಥವಾ ಹಿರಿಯರಿಂದ ಧನಲಾಭವಾಗುವುದು. ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸುವ ಯೋಗವು ಬರುವುದು.

ವೃಶ್ಚಿಕ ರಾಶಿ:

ರಾಶ್ಯಧಿಪತಿಯು ದಶಮಸ್ಥಾನದಲ್ಲಿ ಇರುವುದರಿಂದ ತಂತ್ರಜ್ಞರು ಹೆಚ್ಚಿನ ಲಾಭವನ್ನು ಗಳಿಸುವರು. ಯಂತ್ರೋಪಕರಣ ಮಾರಾಟಗಾರರಿಗೆ ಆರ್ಥಿಕ ವ್ಯವಸ್ಥೆ ವ್ಯವಹಾರವು ಬಹಳ ಚುರುಕಿನಿಂದ ಆಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us