AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಿ ನಕ್ಷತ್ರದ ಗುಣ ಇದು, ನೀರಿನಿಂದ ಮೊಸರು ಮಾಡಲು ಈ ನಕ್ಷತ್ರದಲ್ಲಿ ಮಳೆಯಾಗಬೇಕು

ಇದು ಮಳೆ ನಕ್ಷತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದುದಾಗಿದೆ. ಸೂರ್ಯ ಈ ನಕ್ಷತ್ರವನ್ನು ಪ್ರವೇಶಿಸಿದಾಗ ಸುರಿದ ಮಳೆಯ ನೀರು ಸಮುದ್ರದ ಕಪ್ಪೆಚಿಪ್ಪಿನಲ್ಲಿ ಬಿದ್ದರೆ ಅದೇ ಮುತ್ತಾಗುತ್ತದೆ ಎನ್ನುವುದು ಕವಿಸಮಯ. ಸ್ವಾತಿಯ ಮಳೆಯಿಂದ ವರ್ಷದ ಮೊಸರನ್ನು ಮಾಡುತ್ತಾರೆ. ಹೊಸ ಮೊಸರು ತಯಾರಾಗುವುದು ಸ್ವಾತಿ ಮಳೆಯ ನೀರಿನಿಂದ ಎಂದರೆ ಅಚ್ಚರಿಯಾದೀತು. ಎಷ್ಟೋ ಕಡೆಗಳಲ್ಲಿ ಈ ಕ್ರಮ ಇನ್ನೂ ಇದೆ.

ಸ್ವಾತಿ ನಕ್ಷತ್ರದ ಗುಣ ಇದು, ನೀರಿನಿಂದ ಮೊಸರು ಮಾಡಲು ಈ ನಕ್ಷತ್ರದಲ್ಲಿ ಮಳೆಯಾಗಬೇಕು
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 22, 2025 | 3:38 PM

Share

ಖಗೋಳದಲ್ಲಿ ಕ್ರಾಂತಿವೃತ್ತದ ಸಮೀಪದಲ್ಲಿ ಕುಂಕುಮದ ಬಣ್ಣದಲ್ಲಿ ಒಂದು ನಕ್ಷತ್ರ ಮಿನುಗುತ್ತಿದ್ದರೆ ಅದು ಸ್ವಾತೀ. ಇದು ನಕ್ಷತ್ರ ಚಕ್ರದ ಐದನೇ ನಕ್ಷತ್ರ. ವಾಯು ಇದರ ಅಧಿದೇವತೆ. ಇದು ಮಳೆ ನಕ್ಷತ್ರಗಳಲ್ಲಿ ಅತ್ಯಂತ ಪ್ರಸಿದ್ಧವಾದುದಾಗಿದೆ. ಸೂರ್ಯ ಈ ನಕ್ಷತ್ರವನ್ನು ಪ್ರವೇಶಿಸಿದಾಗ ಸುರಿದ ಮಳೆಯ ನೀರು ಸಮುದ್ರದ ಕಪ್ಪೆಚಿಪ್ಪಿನಲ್ಲಿ ಬಿದ್ದರೆ ಅದೇ ಮುತ್ತಾಗುತ್ತದೆ ಎನ್ನುವುದು ಕವಿಸಮಯ. ಸ್ವಾತಿಯ ಮಳೆಯಿಂದ ವರ್ಷದ ಮೊಸರನ್ನು ಮಾಡುತ್ತಾರೆ. ಹೊಸ ಮೊಸರು ತಯಾರಾಗುವುದು ಸ್ವಾತಿ ಮಳೆಯ ನೀರಿನಿಂದ ಎಂದರೆ ಅಚ್ಚರಿಯಾದೀತು. ಎಷ್ಟೋ ಕಡೆಗಳಲ್ಲಿ ಈ ಕ್ರಮ ಇನ್ನೂ ಇದೆ. ಅಂತಹ ಶ್ರೇಷ್ಠ ನಕ್ಷತ್ರ ಇದು. ದೇವಗಣಕ್ಕೆ ಸೇರಿದ ನಕ್ಷತ್ರವಿದು. ರೂ ರೇ ರೋ ತಾ ನಾಮಾಕ್ಷರಗಳನ್ನು ಇಟ್ಟುಕೊಂಡಿರುವ ಇದು ಅಂತ್ಯನಾಡಿ. ಸ್ತ್ರೀಲಿಂಗ ಹಾಗೂ ಸ್ಥಿರನಕ್ಷತ್ರ.

ದಾನಿ :

ಈ ನಕ್ಷತ್ರದವರಲ್ಲಿ ದಾನದ ಸ್ವಾಭಾವವಿದ್ದು, ತಮ್ಮ ಕೈಲಾಯದ ಸಹಕಾರವನ್ನು ಮಾಡುವರು. ಏನಿದೆಯೋ ಅದನ್ನು ಇನ್ನೊಬ್ಬರಿಗೆ ನೀಡುವ ಗುಣ ಇವರಲ್ಲಿ ಇರುವುದು.

ವ್ಯಾಪಾರಿ :

ಇದು ತುಲಾ ರಾಶಿಯಲ್ಲಿ ಪೂರ್ಣವಾಗಿ ಬರುವ ನಕ್ಷತ್ರವಾಗಿದ್ದು ತುಲಾರಾಶಿಗೆ ಹೇಳಿದ ಎಲ್ಲ ಸ್ವಭಾವವೂ ಇರುವುದು. ಅದರಲ್ಲಿ ವ್ಯಾಪಾರವೂ ಒಂದಾಗಿದ್ದು, ಕ್ರಯ ವಿಕ್ರಯಗಳ ಬಗ್ಗೆ ವಿಶೇಷ ಮಾಹಿತಿ, ಆಲೋಚನೆ, ಯೋಜನೆಗಳನ್ನು ಹಾಕಿಕೊಳ್ಳುವರು. ಲಾಭ ನಷ್ಟಗಳ ಬಗೆಗೂ ವಿವೇಚನೆ ಇರಲಿದೆ.

ಕರುಣೆ :

ಕಠೋರತೆ ಇವರಲ್ಲಿ ಇರದು. ತುಂಬ ಮೃದು ಹೃದಯ ಇವರದ್ದು. ಅನ್ಯರ ಸಂಕಟಕ್ಕೆ ಕರಗುವರು, ಸಹಾಯವನ್ನೂ ನೀಡುವರು.

ಪ್ರಿಯವಾದ ಮಾತು :

ಇವರ ಮಾತು ಪ್ರಿಯವಾಗಲಿದೆ. ಅಂದರೆ ಹೇಳಬೇಕಾದ ರೀತಿಯಲ್ಲಿ ಹೇಳಿ, ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುತ್ತಾರೆ ಅಥವಾ ಆಗಬೇಕಾದ ಕೆಲಸವು ಆಗಲಿದೆ.

ಧರ್ಮದ ಆಶ್ರಯ :

ಧರ್ಮವನ್ನು ಬಿಟ್ಟು ಅಧರ್ಮದ ಕಾರ್ಯವನ್ನು ಮಾಡಲು ಮನಸ್ಸು ಒಪ್ಪದು. ಒಮ್ಮತದಿಂದ ಮಾಡಿದರೂ ಪಾಪಪ್ರಜ್ಞೆ ಕಾಡುವುದು.

ವಿದಗ್ಧ :

ಕಾರ್ಯದಲ್ಲಿ ಕುಶಲತೆಯೇ ವಿದಗ್ಧತೆ. ಎಂತಹ ಕೆಲಸವನ್ನು ಬುದ್ಧಿಶಕ್ತಿಯಿಂದ ಸ್ಮಾರ್ಟ್ ಆಗಿ ಮಾಡುವ ತಜ್ಞತೆ ಇರಲಿದೆ.

ಪ್ರಿಯವಲ್ಲಭ :

ಹೆಂಡತಿಗೆ ಪ್ರೀತಿಪಾತ್ರನಾಗಿ ಇರುವನು. ಸ್ವತಂತ್ರವಾಗಿ ಮಾಡಿದರೂ ಸಂಗಾತಿಗೆ ಪ್ರಿಯವಾದುದನ್ನೇ ಮಾಡಿ ಸಂತೋಷಪಡಿಸುವನು.

ದೇವಭಕ್ತ :

ದೇವರಲ್ಲಿ ನಂಬಿಕೆ, ಶ್ರದ್ಧೆ ಇರಲಿದೆ. ದೇವತೋಪಾಸನೆ, ದೇವಾಲಯ, ಪುಣ್ಯಸ್ಥಳಗಳ ಭೇಟಿ ಪ್ರಿಯವಾಗಲಿದೆ. ಧಾರ್ಮಿಕ ಕಾರ್ಯವನ್ನು ಹೆಚ್ಚು ಮಾಡುವಿರಿ ಅಥವಾ ಪಾಲ್ಗೊಳ್ಳುವಿರಿ.

ಹೀಗೆ ಅಪರೂಪದ ನಕ್ಷತ್ರ ಈ ಸ್ವಾತಿ. ಸೃಷ್ಟಿಯ ವಿಸ್ಮಯವನ್ನು ತೆರೆಯುತ್ತ ಹೋದರೆ, ಮುಗಿದ ಒರತೆ. ಒಂದನ್ನು ಹಿಡಿದರೆ, ಅದು ಆಳಕ್ಕೆ ಸೆಳೆದು ಮತ್ತೆಲ್ಲಿಗೋ ಕೊಂಡೊಯ್ಯುತ್ತದೆ. ಇಂತಹ ಖಗೋಲಕ್ಕೆ ಏನೆಂದರೂ ಕಡಿಮೆ.

ಲೋಹಿತ ಹೆಬ್ಬಾರ್ – 8762924271

Follow Us
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ಪೂಜೆ ನೆಪದಲ್ಲಿ 43 ಗ್ರಾಂ ಚಿನ್ನ, ನಗದು ಕದ್ದು ಸ್ವಾಮೀಜಿ ಎಸ್ಕೇಪ್​​!
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ರೇಷನ್ ಕಾರ್ಡ್ ಕರೆಕ್ಟ್ ಮಾಡಿಕೊಳ್ಳಲು 15 ದಿನ ಟೈಮ್ ಕೊಟ್ಟ ಮುನಿಯಪ್ಪ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಕೋರ್ಟ್ ಆರ್ಡರ್ ತಂದು ಸಿನಿಮಾ ರಿಲೀಸ್ ಮಾಡಬೇಕಾಗುತ್ತೆ: ಡಾಲಿ ಧನಂಜಯ್
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಗ್ ಅಪ್ಡೇಟ್ ಕೊಟ್ಟ KPCC ಅಧ್ಯಕ್ಷ
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?
ಸಂಪುಟ ವಿಸ್ತರಣೆ: ದೆಹಲಿಯಲ್ಲಿ ಮಹತ್ವದ ಸಭೆ, ಯಾರಿಗೆಲ್ಲಾ ಮಂತ್ರಿ ಸ್ಥಾನ?