AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಹಂಕಾರ ಹೆಚ್ಚಿದರೆ ವಿಚ್ಛೇದನ, ಸಂಯಮವಿದ್ದರೆ ಸಂಬಂಧ ಸ್ಥಿರ, ಧನುವಿನಲ್ಲಿ ಶುಕ್ರಾಂಗಾರಕರ ಸಂಯೋಗದಿಂದ ಹನ್ನೆರಡು ರಾಶಿಯವರಿಗೆ ಏನು ಫಲ?

ಧನು ರಾಶಿಯಲ್ಲಿ ಶುಕ್ರ ಹಾಗೂ ಕುಜರ ಸಂಯೋಗ ಡಿಸೆಂಬರ್ 20 ರಿಂದ ಜನವರಿ 13ರ ವರೆಗೆ ಸಂಭವಿಸಲಿದೆ. ಪ್ರೀತಿ, ಪ್ರೇಮ, ದಾಂಪತ್ಯಕ್ಕೆ ಸಂಬಂಧಿಸಿದ ಈ ಗ್ರಹಗಳ ಪ್ರಭಾವದಿಂದ 12 ರಾಶಿಗಳ ವೈವಾಹಿಕ ಮತ್ತು ಪ್ರೇಮ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಕೆಲವು ರಾಶಿಗಳಿಗೆ ಪ್ರೇಮ ವಿವಾಹ ಯೋಗವಿದ್ದರೆ, ಮತ್ತೆ ಕೆಲವು ರಾಶಿಗಳಿಗೆ ಸಂಬಂಧಗಳಲ್ಲಿ ಸಂಘರ್ಷ ಮತ್ತು ವಿಚ್ಛೇದನದ ಸಾಧ್ಯತೆಗಳಿವೆ. ಸೂಕ್ತ ಮಾರ್ಗದರ್ಶನದಿಂದ ಶುಭವಾಗಲಿದೆ.

ಅಹಂಕಾರ ಹೆಚ್ಚಿದರೆ ವಿಚ್ಛೇದನ, ಸಂಯಮವಿದ್ದರೆ ಸಂಬಂಧ ಸ್ಥಿರ, ಧನುವಿನಲ್ಲಿ ಶುಕ್ರಾಂಗಾರಕರ ಸಂಯೋಗದಿಂದ ಹನ್ನೆರಡು ರಾಶಿಯವರಿಗೆ ಏನು ಫಲ?
Venus MarsImage Credit source: Ganeshaspeaks
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 09, 2026 | 10:01 AM

Share

ಶುಕ್ರ ಹಾಗೂ ಕುಜರು ಪ್ರೀತಿ, ಪ್ರೇಮ, ದಾಂಪತ್ಯ ವಿಚಾರಕ್ಕೆ ಹೆಚ್ಚು ಸಮೀಪದಲ್ಲಿ ಇರುವವರು. ವಂಶಾಭಿವೃದ್ಧಿ ಮೊದಲಾದವುಗಳಿಗೆ ಈ ಗ್ರಹಗಳ ಪ್ರಭಾವವನ್ನೂ ನೋಡುವುದುಂಟು. ಈ ಎರಡೂ ಗ್ರಹಗಳು ಧನುವಿನಲ್ಲಿ ಅಂದರೆ ಗುರವಿನ ರಾಶಿಯಲ್ಲಿ ಗುರುದೃಷ್ಟಿಯಿಂದ ಇರುವವರು. ಹಾಗಾಗಿ ಒಬ್ಬರಿಗೆ ಶತ್ರುವಿನ ರಾಶಿ ಇನ್ನೊಬ್ಬರಿಗೆ ಮಿತ್ರನ ರಾಶಿ. ಡಿಸೆಂಬರ್ 20ರಿಂದ ಜನವರಿಯ 13ರವರೆಗೆ ಧನುರಾಶಿಯಲ್ಲಿ ಈ ಯೋಗವಿರಲಿದೆ. ಯೋಗ್ಯ ಮಾರ್ಗದರ್ಶನ ಸಿಕ್ಕರೆ ಎಲ್ಲವೂ ಸರಿಯಾಗುವುದು. ಸಿಗುತ್ತದೆ ಕೂಡ. ಅದನ್ನು ಸರಿಯಾಗಿ ಬಳಲಿಕೊಳ್ಳುವುದು ಅವರಿಗೆ ಬಿಟ್ಟಿದ್ದು. ಎಲ್ಲರಿಗೂ ಶುಭವಾಗಲಿ.

ಮೇಷ ರಾಶಿ:

ಧಾರ್ಮಿಕ ಅಥವಾ ವಿದೇಶಿ ಸಂಗಾತಿ ಯೋಗ, ಪ್ರೀತಿಯಲ್ಲಿ ಆದರ್ಶಭಾವ, ದಾಂಪತ್ಯದಲ್ಲಿ ಮೌಲ್ಯಭೇದ ಸಾಧ್ಯ, ಸಂಯಮ ಇದ್ದರೆ ಸಂಬಂಧ ಸ್ಥಿರ, ವಿಚ್ಛೇದನ ಅಪರೂಪ.

ವೃಷಭ ರಾಶಿ:

ಗುಪ್ತ ಪ್ರೀತಿ, ತೀವ್ರ ಆಕರ್ಷಣೆ, ದಾಂಪತ್ಯದಲ್ಲಿ ಅನುಮಾನ ಮತ್ತು ಭಯ, ಲೈಂಗಿಕ ಅಸಮತೋಲನ ಇದ್ದು ಕಲಹವಾಗಲಿದೆ. ನಿಯಂತ್ರಣ ಇಲ್ಲದೇ ವಿಚ್ಛೇದನ ಸಂಭವಿಸುವುದು.

ಮಿಥುನ ರಾಶಿ:

ಬಲವಾದ ಪ್ರೇಮವಿವಾಹ ಯೋಗ, ಆಕರ್ಷಕ ಸಂಗಾತಿ ಪ್ರಾಪ್ತಿ, ದಾಂಪತ್ಯದಲ್ಲಿ ಉತ್ಸಾಹ, ಆದರೆ ಅಧಿಪತ್ಯಭಾವ ಮತ್ತು ಅಹಂಕಾರ ಹೆಚ್ಚಿದರೆ ವಿಚ್ಛೇದನ ಸಾಧ್ಯ.

ಕರ್ಕಾಟಕ ರಾಶಿ:

ಪ್ರೀತಿಗೆ ಕುಟುಂಬ ಅಥವಾ ಸಮಾಜ ವಿರೋಧ, ದಾಂಪತ್ಯದಲ್ಲಿ ನಿರಂತರ ವಾದ, ಕಾನೂನು ಹಸ್ತಕ್ಷೇಪ ಸಾಧ್ಯ, ಸಹನೆ ಕಡಿಮೆಯಾದರೆ ದೂರಾಗುವ ಯೋಗ ಉಂಟಾಗುತ್ತದೆ.

ಸಿಂಹ ರಾಶಿ:

ಗಾಢ ಪ್ರೀತಿ, ಪ್ರೇಮವಿವಾಹ ಸಾಧ್ಯತೆ, ಉತ್ಸಾಹಿ ದಾಂಪತ್ಯ, ಅಹಂಕಾರ ಮತ್ತು ಸ್ವಾಭಿಮಾನ ನಿಯಂತ್ರಿಸದಿದ್ದರೆ ಕಲಹ ಬೆಳೆಯುತ್ತದೆ, ವಿಚ್ಛೇದನ ಬೀಜ ಬಿತ್ತಬಹುದು.

ಕನ್ಯಾ ರಾಶಿ:

ಪ್ರೀತಿಯಲ್ಲಿ ಗೊಂದಲ, ದಾಂಪತ್ಯದಲ್ಲಿ ಮನಶ್ಶಾಂತಿ ಕೊರತೆ, ಕುಟುಂಬ ಒತ್ತಡ, ಭಾವನಾತ್ಮಕ ತಣ್ಣನೆ ಇದ್ದರೆ ಸಂಬಂಧ ದುರ್ಬಲವಾಗಿ ದೂರವಾಗುವ ಸಾಧ್ಯತೆ.

ತುಲಾ ರಾಶಿ:

ಧೈರ್ಯವಾಗಿ ಪ್ರೀತಿ ವ್ಯಕ್ತ, ಸ್ನೇಹದಿಂದ ಸಂಬಂಧ, ದಾಂಪತ್ಯದಲ್ಲಿ ಮಾತಿನ ಘರ್ಷಣೆ, ಅಹಂ‌ ಮತ್ತು ಆಸೆ ಸಂಘರ್ಷ ಅಧಿಕ. ವಿಚ್ಛೇದನಕ್ಕಿಂತ ಮನಸ್ತಾಪ ಹೆಚ್ಚು.

ವೃಶ್ಚಿಕ ರಾಶಿ:

ಕುಟುಂಬ ವಿರೋಧದ ಪ್ರೀತಿ, ಮಾತಿನ ಕಠೋರತೆ, ದಾಂಪತ್ಯದಲ್ಲಿ ಹಣ ಮತ್ತು ಆಸ್ತಿಯ ವಿಚಾರಕ್ಕೆ ಕಲಹ, ಸಂಯಮ ಇಲ್ಲದಿದ್ದರೆ ಬೇರ್ಪಡುವ ಯೋಗ ಉಂಟಾಗಬಹುದು.

ಧನು ರಾಶಿ:

ತೀವ್ರ ಆಕರ್ಷಣೆ, ಬಹುಸಂಬಂಧ ಪ್ರೇರಣೆ, ಪ್ರೇಮವಿವಾಹ ಯೋಗ, ದಾಂಪತ್ಯದಲ್ಲಿ ಅಧಿಪತ್ಯದ ಭಾವ ಬರಲಿದೆ. ಮಿತಿ ಮೀರಿದರೆ ವಿಚ್ಛೇದನ ಸಂಭವಿಸುವ ಸಾಧ್ಯತೆ.

ಮಕರ ರಾಶಿ:

ಗುಪ್ತ ಅಥವಾ ದೂರದ ಪ್ರೀತಿ, ವಿದೇಶಿ ಸಂಗಾತಿ ಯೋಗ, ದಾಂಪತ್ಯದಲ್ಲಿ ಭಾವನಾತ್ಮಕ ಅಂತರ, ನಿರ್ಲಕ್ಷ್ಯ ಹೆಚ್ಚಿದರೆ ವಿಚ್ಛೇದನ ಸೂಚನೆ ಕಾಣಿಸುತ್ತದೆ.

ಕುಂಭ ರಾಶಿ :

ಸ್ನೇಹದಿಂದ ಪ್ರೀತಿ, ಸಮಾಜದ ಮೂಲಕ ಸಂಗಾತಿ ಪ್ರಾಪ್ತಿ, ದಾಂಪತ್ಯ ಲಾಭದಾಯಕ ಮತ್ತು ಸಹಕಾರಿ, ಪರಸ್ಪರ ಗೌರವ ಇದ್ದರೆ ವಿಚ್ಛೇದನ ಯೋಗ ಕಡಿಮೆ.

ಮೀನ ರಾಶಿ:

ಉದ್ಯೋಗ ಅಥವಾ ಸಾರ್ವಜನಿಕ ವಲಯದಲ್ಲಿ ಪ್ರೀತಿ, ಪ್ರಭಾವಿ ಸಂಗಾತಿ, ದಾಂಪತ್ಯದಲ್ಲಿ ಒಬ್ಬರದೇ ಕೆಲಸ. ಅಹಂ ಒಂದಿಗೆ ಘರ್ಷಣೆ. ಸಮಯ ಕೊರತೆಯಿಂದ ದೂರವಾಗುವ ಸಾಧ್ಯತೆ.

ಲೋಹಿತ ಹೆಬ್ಬಾರ್

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?