
ಈ ವಾರ ತೃತೀಯದ ಮಂಗಳ ನಿಮ್ಮ ಉತ್ಸಾಹವನ್ನು ಹೆಚ್ಚಿಸಲಿದ್ದಾನೆ. ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಕುಟುಂಬದ ಬೆಂಬಲ ಮತ್ತು ಸಣ್ಣ ಪ್ರಮಾಣದ ಪ್ರಯಾಣಗಳು ಯಶಸ್ಸು ತರಲಿವೆ. ಹಣಕಾಸಿನ ವಹಿವಾಟಿನಲ್ಲಿ ಜಾಗ್ರತೆ ವಹಿಸಿ.
ರಾಶಿಯಲ್ಲಿ ಉಚ್ಚ ಚಂದ್ರನ ಸಂಚಾರದಿಂದ ಮನಸ್ಸಿನಲ್ಲಿ ಶಾಂತಿ ಮತ್ತು ಆತ್ಮವಿಶ್ವಾಸ ವೃದ್ಧಿಸಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದ್ದು, ಹೂಡಿಕೆಗಳಿಗೆ ಇದು ಸಕ್ತ ಸಮಯ. ಕೌಟುಂಬಿಕವಾಗಿ ಹರ್ಷದಾಯಕ ವಾತಾವರಣವಿರುತ್ತದೆ.
ಧನ ಸ್ಥಾನದ ಮೇಲಿನ ಶುಭ ಗ್ರಹಗಳ ದೃಷ್ಟಿಯಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆದರೆ ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಕೋಪ ನಿಯಂತ್ರಣ ಅಗತ್ಯ. ಮಾತುಗಳಲ್ಲಿ ಮೃದುತ್ವವಿದ್ದರೆ ಎಲ್ಲ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ.
ನಿಮ್ಮ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರುಗಳ ಸಮಾಗಮವಿದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಲಿದೆ. ಶೈಕ್ಷಣಿಕ ಹಾಗೂ ಬೌದ್ಧಿಕ ರಂಗದಲ್ಲಿರುವವರಿಗೆ ಅತ್ಯುತ್ತಮ ಸಫಲತೆ ಸಿಗಲಿದೆ. ಆರೋಗ್ಯದ ಕಡೆ ಸ್ವಲ್ಪ ಗಮನವಿರಲಿ.
ರಾಶಿಯಲ್ಲಿ ಕೇತುವಿನ ಉಪಸ್ಥಿತಿ ಹಾಗೂ ವ್ಯಯ ಸ್ಥಾನದ ಗ್ರಹಕೂಟದಿಂದಾಗಿ ವೆಚ್ಚಗಳು ಹೆಚ್ಚಾಗಬಹುದು. ಧಾರ್ಮಿಕ ಹಾಗೂ ಸಾತ್ವಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ನಿರೀಕ್ಷಿತ ಕಾರ್ಯಗಳು ಕೊಂಚ ತಡವಾಗಿ ನೆರವೇರಬಹುದು.
ಲಾಭ ಸ್ಥಾನದ ಶುಭಫಲಗಳಿಂದ ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ರಾಶಿಯಲ್ಲಿ ಶುಕ್ರನಿದ್ದರೂ ಶುಭ ಗ್ರಹಗಳ ದೃಷ್ಟಿ ಉತ್ತಮ ಫಲ ನೀಡಲಿದೆ. ದೀರ್ಘಕಾಲದ ಕನಸುಗಳು ನನಸಾಗುವ ಹಾದಿ ಸುಗಮವಾಗಲಿದೆ.
ದಶಮ ಸ್ಥಾನ ಬಲವಾಗಿರುವುದರಿಂದ ವೃತ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು, ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ.
ಇದನ್ನೂ ಓದಿ: ಆಗಸ್ಟ್ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!
ಭಾಗ್ಯ ಸ್ಥಾನದಲ್ಲಿ ಗುರುವಿನ ಅನುಗ್ರಹವಿರುವುದರಿಂದ ದೈವಿಕ ಚಿಂತನೆ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ದೂರದ ಪ್ರಯಾಣ ಲಾಭದಾಯಕವಾಗಲಿದೆ. ಕೆಲಸ ಕಾರ್ಯಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.
ಅಷ್ಟಮ ಸ್ಥಾನದಲ್ಲಿ ಗ್ರಹಗಳ ಸಂಚಾರವಿರುವುದರಿಂದ ಆರೋಗ್ಯ ಹಾಗೂ ವಾಹನ ಚಾಲನೆಯಲ್ಲಿ ಜಾಗರೂಕತೆ ಅಗತ್ಯ. ಇದ್ದಕ್ಕಿದ್ದಂತೆ ಶುಭ ಸುದ್ಧಿಯೊಂದು ಬರಲಿದ್ದು, ತಾಳ್ಮೆಯಿಂದ ವ್ಯವಹರಿಸುವುದು ಒಳಿತು.
ಸಪ್ತಮ ಸ್ಥಾನದಲ್ಲಿ ಗ್ರಹಗಳ ಬಲವಿರುವುದರಿಂದ ಪಾಲುದಾರಿಕೆ ಉದ್ಯಮದಲ್ಲಿ ನಿಕಟ ಬಾಂಧವ್ಯ ಬೆಳೆಯಲಿದೆ. ದಾಂಪತ್ಯ ಜೀವನದಲ್ಲಿದ್ದ ಭಿನ್ನಾಭಿಪ್ರಾಯಗಳು ತಿಳಿಯಾಗಿ ಸುಖ-ಶಾಂತಿ ನೆಲೆಸಲಿದೆ.
ನಿಮ್ಮ ರಾಶಿಯಲ್ಲಿ ರಾಹು ಹಾಗೂ ಷಷ್ಠ ಸ್ಥಾನದಲ್ಲಿ ಸೂರ್ಯ, ಬುಧ, ಗುರುಗಳಿರುವುದರಿಂದ ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಸ್ಪರ್ಧಾತ್ಮಕ ವಿಚಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಕಠಿಣ ಶ್ರಮಕ್ಕೆ ತಕ್ಕ ಫಲ ನಿಶ್ಚಿತ.
ರಾಶಿಯಲ್ಲಿ ವಕ್ರ ಶನಿ ಹಾಗೂ ಪಂಚಮದಲ್ಲಿ ಗುರು, ಆದಿತ್ಯ ಯೋಗವಿರುವುದರಿಂದ ಸಂತಾನ ಹಾಗೂ ಶಿಕ್ಷಣದ ವಿಷಯದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಹಳೆಯ ಹೂಡಿಕೆಗಳಿಂದ ನಿರೀಕ್ಷಿತ ಲಾಭ ದೊರೆಯಲಿದೆ.
ಈ ವಾರ ವಿಷ್ಣು ಸಹಸ್ರನಾಮ ಅಥವಾ ಶಿವಪೂಜೆ ಮಾಡುವುದರಿಂದ ಮನಸ್ಸಿಗೆ ಹೆಚ್ಚಿನ ಸ್ಥಿರತೆ ಮತ್ತು ಸರ್ವ ಕಾರ್ಯಗಳಲ್ಲಿ ಸಿದ್ಧಿಯೂ ಲಭಿಸಲಿದೆ.
-ಲೋಹಿತ್ ಹೆಬ್ಬಾರ್-8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ