AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಈ ವಾರ ನಿಮ್ಮ ಪ್ರೇಮ ಜೀವನ ಹೇಗಿರಲಿದೆ? 12ರಾಶಿಗಳ ವಾರದ ಪ್ರೇಮ-ಪ್ರೀತಿ ಭವಿಷ್ಯ ಇಲ್ಲಿದೆ

ಜೂನ್ 28 ರಿಂದ ಜುಲೈ 05 ರವರೆಗಿನ ಪ್ರೇಮ ಭವಿಷ್ಯ ಇಲ್ಲಿದೆ. ಈ ಅವಧಿಯಲ್ಲಿ ಪ್ರೇಮ ಸಂಬಂಧಗಳಲ್ಲಿ ಸಣ್ಣ ಅಪಹಾಸ್ಯಗಳಾಗಬಹುದು ಅಥವಾ ಸವಾಲುಗಳು ಎದುರಾಗಬಹುದು. ಆದರೆ, ಹಲವು ರಾಶಿಗಳಿಗೆ ರೋಮಾಂಚಕ ಕ್ಷಣಗಳು, ವಿವಾಹ ಯೋಗ ಮತ್ತು ಸಂಬಂಧ ಗಟ್ಟಿಗೊಳಿಸುವ ಅವಕಾಶಗಳಿವೆ. ಪ್ರತಿಯೊಂದು ಹೆಜ್ಜೆಯೂ ದೃಢವಾಗಿರಲಿ, ಸಂಬಂಧಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ ಯಶಸ್ಸು ಗಳಿಸಿ.

Weekly Love Horoscope: ಈ ವಾರ ನಿಮ್ಮ ಪ್ರೇಮ ಜೀವನ ಹೇಗಿರಲಿದೆ? 12ರಾಶಿಗಳ ವಾರದ ಪ್ರೇಮ-ಪ್ರೀತಿ ಭವಿಷ್ಯ ಇಲ್ಲಿದೆ
ವಾರದ ಪ್ರೇಮ-ಪ್ರೀತಿ ಭವಿಷ್ಯImage Credit source: Getty Images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jun 26, 2026 | 4:48 PM

Share

ಜೂನ್ 28ರಿಂದ ಜುಲೈ 05ರವರೆಗೆ ಪ್ರೇಮಕ್ಕೆ ಸಂಬಂಧಿಸಿದಂತೆ ಅಪಹಾಸ್ಯಗಳು ನಡೆಯಬಹುದು. ಸಂಬಂಧವನ್ನು ತಪ್ಪಿಸುವ ಬಗ್ಗೆ ಅನ್ಯರಿಂದ ಬಹಳ ಗೌಪ್ಯವಾಗಿರಲಿದೆ. ಎಲ್ಲವನ್ನೂ ಗೆಲ್ಲವು ಸಾಮರ್ಥ್ಯ ಇದ್ದರೂ ಎಡವುವುದೂ ಇರಲಿದೆ. ಇಡುವ ಹೆಜ್ಜೆಗಳು ದೃಢವಾಗಿರಲಿ.

ಮೇಷ ರಾಶಿ:

ನಿಮ್ಮ ಪ್ರೇಮ ಜೀವನದಲ್ಲಿ ಈ ಅವಧಿಯು ಅತ್ಯಂತ ರೋಮಾಂಚನಕಾರಿಯಾಗಿರಲಿದೆ. ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಅಥವಾ ಸುಂದರ ಕ್ಷಣಗಳನ್ನು ಕಳೆಯುವಿರಿ. ಮನಸ್ತಾಪಗಳು ದೂರವಾಗಿ ಪ್ರೀತಿ ಹೆಚ್ಚುತ್ತದೆ. ಹೊಸ ಪ್ರೇಮ ಪ್ರಸ್ತಾಪಕ್ಕೆ ಇದು ಸಕಾಲ.

ವೃಷಭ ರಾಶಿ:

ಮಂಗಳನ ಪ್ರಭಾವದಿಂದ ಪ್ರೇಮದಲ್ಲಿ ಕೊಂಚ ಹಠದ ಸ್ವಭಾವ ಕಾಣಿಸಬಹುದು. ಆದರೆ ಶುಕ್ರನ ಶುಭ ದೃಷ್ಟಿಯಿಂದ ಸಂಗಾತಿಯು ನಿಮ್ಮನ್ನು ಅರ್ಥಮಾಡಿಕೊಳ್ಳುವರು. ಮಾತುಗಳಲ್ಲಿ ಮಧುರತೆ ಇರಲಿ, ಹಳೆಯ ಮುನಿಸುಗಳನ್ನು ಮರೆತು ಒಂದಾಗಲು ಈ ಸಮಯ ಉತ್ತಮವಾಗಿದೆ.

ಮಿಥುನ ರಾಶಿ:

​ಸೂರ್ಯನ ಪ್ರಭಾವದಿಂದ ಪ್ರೀತಿಯಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಸಂಗಾತಿಯೊಂದಿಗೆ ಮುಕ್ತವಾಗಿ ಸಂವಹನ ನಡೆಸಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಿ. ಪ್ರೇಮಿಗಳ ನಡುವೆ ನಂಬಿಕೆ ಗಟ್ಟಿಯಾಗುತ್ತದೆ. ಅವಿವಾಹಿತರಿಗೆ ಮನಸ್ಸಿಗೊಪ್ಪುವ ಸಂಗಾತಿ ಸಿಗುವ ಸುಂದರ ಯೋಗವಿದೆ.

ಕರ್ಕಾಟಕ ರಾಶಿ:

​ಗುರು ಮತ್ತು ಬುಧನ ಆಶೀರ್ವಾದದಿಂದ ನಿಮ್ಮ ಪ್ರೇಮ ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಸಂಗಾತಿಯು ನಿಮ್ಮ ಭಾವನೆಗಳಿಗೆ ಗೌರವ ನೀಡುತ್ತಾರೆ. ಪರಸ್ಪರ ಪ್ರೀತಿ ಮತ್ತು ಬದ್ಧತೆ ಹೆಚ್ಚಾಗಲಿದ್ದು, ಪ್ರೇಮ ಸಂಬಂಧವು ಮುಂದಿನ ಹಂತಕ್ಕೆ ಅಂದರೆ ವಿವಾಹಕ್ಕೆ ತಿರುಗಬಹುದು.

ಸಿಂಹ ರಾಶಿ:

​ನಿಮ್ಮದೇ ರಾಶಿಯಲ್ಲಿ ಶುಕ್ರನಟ್ಟಿರುವುದರಿಂದ ನಿಮ್ಮ ಆಕರ್ಷಣೆ ಹೆಚ್ಚುತ್ತದೆ. ಸಂಗಾತಿ ನಿಮ್ಮ ಪ್ರೀತಿಯ ಜಾಲದಲ್ಲಿ ಬೀಳುವುದು ಖಂಡಿತ. ಪ್ರೇಮ ಜೀವನ ಅತ್ಯಂತ ಮಧುರ ಹಾಗೂ ರೋಮ್ಯಾಂಟಿಕ್ ಆಗಿರುತ್ತದೆ. ಉಡುಗೊರೆಗಳ ವಿನಿಮಯದಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ.

ಕನ್ಯಾ ರಾಶಿ:

​ಪ್ರೇಮ ಜೀವನದಲ್ಲಿ ಮಿಶ್ರ ಫಲ ಇರಲಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಆದರೆ ತಾಳ್ಮೆಯಿಂದ ಬಗೆಹರಿಸಿಕೊಳ್ಳಿ. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ಅತಿಯಾದ ನಿರೀಕ್ಷೆ ಬೇಡ, ಪ್ರೀತಿಯನ್ನು ಸಹಜವಾಗಿ ಹರಿಯಲು ಬಿಟ್ಟರೆ ನೆಮ್ಮದಿ ಸಿಗುತ್ತದೆ.

ತುಲಾ ರಾಶಿ:

​ನಿಮ್ಮ ರಾಶ್ಯಾಧಿಪತಿ ಶುಕ್ರನ ಶುಭ ಸ್ಥಾನದಿಂದಾಗಿ ಪ್ರೇಮ ಜೀವನದಲ್ಲಿ ಸಂತೋಷ ತುಂಬಿರುತ್ತದೆ. ಪ್ರೇಮಿಗಳ ನಡುವೆ ಇದ್ದ ಗೊಂದಲಗಳು ಬಗೆಹರಿಯಲಿವೆ. ಸಂಗಾತಿಯೊಂದಿಗೆ ಸಂತೋಷದ ದಿನಗಳನ್ನು ಕಳೆಯುವಿರಿ. ಹೊಸ ಸಂಬಂಧಗಳು ದೀರ್ಘಕಾಲದವರೆಗೆ ಗಟ್ಟಿಯಾಗಿ ಉಳಿಯಲಿವೆ.

ವೃಶ್ಚಿಕ ರಾಶಿ :

ಭಾವನಾತ್ಮಕವಾಗಿ ಈ ಸಮಯ ಅತ್ಯಂತ ಆಳವಾದ ಪ್ರೀತಿಯನ್ನು ತರಲಿದೆ. ಸಂಗಾತಿಯ ಮೇಲಿನ ನಂಬಿಕೆ ಹೆಚ್ಚಾಗುತ್ತದೆ. ಪರಸ್ಪರರ ಕಷ್ಟ ಸುಖಗಳಲ್ಲಿ ಭಾಗಿಯಾಗುವಿರಿ. ಪ್ರೇಮ ವಿಷಯದಲ್ಲಿ ಕುಟುಂಬದವರ ಬೆಂಬಲ ಸಿಗುವ ಸಾಧ್ಯತೆ ಇದ್ದು, ಮನಸ್ಸು ಪ್ರಫುಲ್ಲವಾಗಿರುತ್ತದೆ.

ಇದನ್ನೂ ಓದಿ: ಶುಕ್ರ-ಕೇತು ಸಂಯೋಗ; ಈ 4 ರಾಶಿಯವರು ಜುಲೈನಲ್ಲಿ ಅತ್ಯಂತ ಜಾಗರೂಕರಾಗಿರಿ

ಧನು ರಾಶಿ :

ಲಗ್ನದಲ್ಲೇ ಧನು ರಾಶಿ ಇರುವುದರಿಂದ ಪ್ರೀತಿಯಲ್ಲಿ ಹೊಸ ಆಶಾಕಿರಣ ಮೂಡಲಿದೆ. ಸಂಗಾತಿಯು ನಿಮ್ಮ ಪ್ರತಿಯೊಂದು ನಿರ್ಧಾರದಲ್ಲೂ ಜೊತೆಯಾಗಿ ನಿಲ್ಲುತ್ತಾರೆ. ದೂರದ ಪ್ರಯಾಣವು ನಿಮ್ಮಿಬ್ಬರ ನಡುವಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಹಳೆಯ ಪ್ರೀತಿ ಮರಳಿ ಬರಬಹುದು.

ಮಕರ ರಾಶಿ :

​ಪ್ರೇಮ ಸಂಬಂಧದಲ್ಲಿ ಪ್ರಬುದ್ಧತೆ ಕಾಣಿಸುತ್ತದೆ. ಸಂಗಾತಿಯೊಂದಿಗೆ ಆಳವಾದ ವಿಷಯಗಳ ಬಗ್ಗೆ ಚರ್ಚಿಸುವಿರಿ. ಅನಗತ್ಯ ಸಂಶಯಗಳಿಗೆ ಇಲ್ಲಿ ಜಾಗ ನೀಡಬೇಡಿ. ಪರಸ್ಪರ ನಂಬಿಕೆಯೇ ನಿಮ್ಮ ಪ್ರೇಮದ ಯಶಸ್ಸಿನ ಸೂತ್ರವಾಗಲಿದೆ. ಪ್ರೀತಿಯಲ್ಲಿ ಜವಾಬ್ದಾರಿ ಹೆಚ್ಚಾಗುವ ಕಾಲವಿದು.

ಕುಂಭ ರಾಶಿ:

​ಚಂದ್ರ ಮತ್ತು ರಾಹುವಿನ ಸ್ಥಿತಿಯಿಂದ ಮನಸ್ಸಿನಲ್ಲಿ ಕೊಂಚ ಗೊಂದಲವಿರಬಹುದು. ಪ್ರೀತಿಯಲ್ಲಿ ಯಾವುದೇ ತರಾತುರಿಯ ನಿರ್ಧಾರ ಬೇಡ. ಸಂಗಾತಿಯ ಭಾವನೆಗಳಿಗೆ ಸ್ಪಂದಿಸಿ. ಕೋಪವನ್ನು ಹತೋಟಿಯಲ್ಲಿಟ್ಟುಕೊಂಡರೆ ಪ್ರೇಮ ಜೀವನವು ಸುಂದರವಾಗಿ ಮತ್ತು ಸುಖಮಯವಾಗಿ ಸಾಗುವುದರಲ್ಲಿ ಸಂಶಯವಿಲ್ಲ.

ಮೀನ ರಾಶಿ:

​ಶನಿಯ ಪ್ರಭಾವವಿದ್ದರೂ ಪ್ರೀತಿಯಲ್ಲಿ ಸ್ಥಿರತೆ ಇರಲಿದೆ. ಸಂಗಾತಿಯು ನಿಮ್ಮ ಕಷ್ಟಗಳಿಗೆ ಹೆಗಲಾಗಲಿದ್ದಾರೆ. ಪ್ರೇಮ ವಿವಾಹ ಆಕಾಂಕ್ಷಿಗಳಿಗೆ ಈ ಅವಧಿಯಲ್ಲಿ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಪರಸ್ಪರ ಗೌರವ ಮತ್ತು ಮಧುರ ಮಾತುಗಳು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತವೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Fri, 26 June 26

Follow Us
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ