AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಮೇ 03ರಿಂದ 09ರವರೆಗಿನ ವಾರದ ಪ್ರೇಮ -ಪ್ರೀತಿ ಭವಿಷ್ಯವನ್ನು ಇಲ್ಲಿ ತಿಳಿದುಕೊಳ್ಳಿ

ಮೇ 03-09ರ ವಾರದ ಪ್ರೇಮ ಜಾತಕವು ಗ್ರಹಗಳ ಅನುಕೂಲಕರ ಸ್ಥಾನದಿಂದ ಪ್ರೇಮ ಜೀವನಕ್ಕೆ ಶುಭ ಸೂಚನೆ ನೀಡಿದೆ. ಹಳೆಯ ಬೇಸರ, ದುಃಖಗಳು ದೂರಾಗಿ, ಸಂಬಂಧಗಳಲ್ಲಿ ಸಾಮರಸ್ಯ ಹೆಚ್ಚಲಿದೆ. ವಿಚ್ಛೇದನದ ಭೀತಿ ದೂರವಾಗಿ ಹೊಸ ಸಂಬಂಧಗಳಿಗೆ ಅವಕಾಶವಿದೆ. ಪ್ರತಿಯೊಂದು ರಾಶಿ ಚಿಹ್ನೆಗೂ ಪ್ರೀತಿ, ವಿವಾಹ ಮತ್ತು ಸಂಬಂಧಗಳ ಕುರಿತು ವಿವರವಾದ ಮುನ್ಸೂಚನೆಗಳನ್ನು ತಿಳಿಯಿರಿ.

Weekly Love Horoscope: ಮೇ 03ರಿಂದ 09ರವರೆಗಿನ ವಾರದ ಪ್ರೇಮ -ಪ್ರೀತಿ ಭವಿಷ್ಯವನ್ನು ಇಲ್ಲಿ ತಿಳಿದುಕೊಳ್ಳಿ
ವಾರದ ಪ್ರೇಮ - ಪ್ರೀತಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 02, 2026 | 11:03 AM

Share

ಮೇ 03ರಿಂದ ಮೇ 09ರವರೆಗೆ ಮೊದಲೇ ವಾರವಾಗಿದ್ದು ಗ್ರಹಗಳ ಗಮನವು ಪ್ರೇಮಕ್ಕೆ ಹೆಚ್ಚು ಪೂರಕವಾಗಿಯೇ ಇವೆ. ಹಳೆಯ ಬೇಸರ, ದುಃಖ, ಕೋಪ ತಾಪಗಳು ಒಂದೊಂದಾಗಿಯೇ ದೂರಾಗುವುದು. ವಿಚ್ಛೇದನಕ್ಕೆ ಪರಸ್ಪರರ ಒಪ್ಪಿಗೆಯನ್ನು ಎದುರು ನೋಡಿವರು.

​ಮೇಷ ರಾಶಿ:

ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೆ ತರ್ಕ ಬೇಡ. ಪ್ರೇಮ ಜೀವನದಲ್ಲಿ ಉತ್ಸಾಹವಿದ್ದರೂ ತಾಳ್ಮೆ ಅಗತ್ಯ. ಅವಿವಾಹಿತರಿಗೆ ಹಿರಿಯರ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಸಂಬಂಧದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ.

​ವೃಷಭ ರಾಶಿ:

ಪ್ರೇಮಿಗಳ ನಡುವೆ ಮಧುರ ಬಾಂಧವ್ಯವಿರಲಿದೆ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ದಾಂಪತ್ಯದಲ್ಲಿ ಸುಖ ನೆಮ್ಮದಿ ಇರಲಿದ್ದು, ಹೊಸ ಸಂಬಂಧಗಳಿಗೆ ಇದು ಸಕಾಲ. ವಿಚ್ಛೇದನದ ಭೀತಿ ದೂರವಾಗಲಿದೆ.

​ಮಿಥುನ ರಾಶಿ:

ಸಂವಹನದ ಕೊರತೆಯಿಂದ ಪ್ರೇಮದಲ್ಲಿ ವಿರಸ ಮೂಡಬಹುದು. ಮನಬಿಚ್ಚಿ ಮಾತನಾಡುವುದರಿಂದ ಸಮಸ್ಯೆ ಬಗೆಹರಿಯುತ್ತದೆ. ವಿವಾಹದ ಮಾತುಕತೆಗಳು ಸಕಾರಾತ್ಮಕವಾಗಿ ನಡೆಯಲಿವೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ.

​ಕರ್ಕಾಟಕ ರಾಶಿ:

ಹಳೆಯ ಪ್ರೇಮ ಪ್ರಕರಣಗಳು ಮರುಕಳಿಸಬಹುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಲಿದೆ. ವಿಚ್ಛೇದನ ಕೋರಿದವರಿಗೆ ರಾಜೀ ಸಂಧಾನದ ಅವಕಾಶವಿದೆ. ಪ್ರೇಮಿಗಳಿಗೆ ಮನೆಯವರ ಬೆಂಬಲ ಸಿಗುವ ಶುಭ ಕಾಲವಿದು.

​ಸಿಂಹ ರಾಶಿ:

ಸಂಬಂಧದಲ್ಲಿ ಅಹಂಕಾರ ಬೇಡ. ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ. ವಿವಾಹ ಆಕಾಂಕ್ಷಿಗಳಿಗೆ ಸ್ವಲ್ಪ ವಿಳಂಬವಾಗಬಹುದು. ಪ್ರೀತಿಯಲ್ಲಿ ನಂಬಿಕೆ ಮುಖ್ಯವಾಗಿದ್ದು, ಪರಸ್ಪರ ಅರ್ಥಮಾಡಿಕೊಳ್ಳಲು ಸಮಯ ಮೀಸಲಿಡಿ.

​ಕನ್ಯಾ ರಾಶಿ:

ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇದು ಸೂಕ್ತ ಸಮಯ. ದಾಂಪತ್ಯದಲ್ಲಿ ಪ್ರೀತಿ ಮತ್ತು ಕಾಳಜಿ ಹೆಚ್ಚಲಿದೆ. ಕಾನೂನಾತ್ಮಕ ಕೌಟುಂಬಿಕ ಸಮಸ್ಯೆಗಳಿದ್ದರೆ ಬಗೆಹರಿಯುವ ಹಾದಿಯಲ್ಲಿವೆ. ವಿವಾಹ ಯೋಗಗಳು ಪ್ರಬಲವಾಗಿವೆ.

​ತುಲಾ ರಾಶಿ:

ಪ್ರೇಮಿಗಳ ನಡುವೆ ನವಿರಾದ ಬಾಂಧವ್ಯವಿರಲಿದೆ. ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ವಿವಾಹ ಸಂಬಂಧಗಳು ಸ್ಥಿರವಾಗಲಿವೆ. ವೈವಾಹಿಕ ಜೀವನದಲ್ಲಿ ಇದ್ದ ಭಿನ್ನಾಭಿಪ್ರಾಯಗಳು ದೂರಾಗಿ ಸಂತಸ ಮನೆ ಮಾಡಲಿದೆ.

​ವೃಶ್ಚಿಕ ರಾಶಿ:

ಸಂಬಂಧದಲ್ಲಿ ಅನುಮಾನಗಳಿಗೆ ಎಡೆಕೊಡಬೇಡಿ. ಪ್ರೇಮ ಜೀವನದಲ್ಲಿ ಕೆಲವು ಸವಾಲುಗಳು ಎದುರಾಗಬಹುದು. ವಿಚ್ಛೇದನದ ಹಂತದಲ್ಲಿರುವವರು ಸಮಾಧಾನದಿಂದ ಯೋಚಿಸುವುದು ಒಳಿತು. ದಾಂಪತ್ಯದಲ್ಲಿ ಸಮಾಧಾನ ಕಾಪಾಡಿಕೊಳ್ಳಿ.

​ಧನುಸ್ಸು ರಾಶಿ:

ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಬರಲಿವೆ. ಪ್ರೇಮ ಜೀವನದಲ್ಲಿ ಪ್ರಗತಿ ಕಂಡುಬರಲಿದ್ದು, ವಿವಾಹಕ್ಕೆ ಮುದ್ರೆ ಬೀಳಬಹುದು. ಸಂಗಾತಿಯು ನಿಮ್ಮ ಕೆಲಸಗಳಿಗೆ ಬೆನ್ನೆಲುಬಾಗಿ ನಿಲ್ಲುವರು. ಒಟ್ಟಾರೆ ಸುಖದಿನಗಳು.

​ಮಕರ ರಾಶಿ:

ಪ್ರೀತಿಯಲ್ಲಿ ಗಾಂಭೀರ್ಯವಿರಲಿ. ಸಂಗಾತಿಯ ಜೊತೆ ಮನಸ್ತಾಪವಾಗದಂತೆ ಎಚ್ಚರವಹಿಸಿ. ವಿವಾಹ ಪ್ರಯತ್ನಗಳಲ್ಲಿ ಮಂದಗತಿ ಇರಲಿದೆ. ವಿಚ್ಛೇದನದ ವಿಚಾರದಲ್ಲಿ ತೀರ್ಪು ವಿಳಂಬವಾಗಬಹುದು. ತಾಳ್ಮೆಯಿಂದಿರಿ.

​ಕುಂಭ ರಾಶಿ:

ಹೊಸ ವ್ಯಕ್ತಿಯ ಪರಿಚಯ ಪ್ರೇಮಕ್ಕೆ ತಿರುಗಬಹುದು. ವೈವಾಹಿಕ ಜೀವನದಲ್ಲಿ ಹೊಸ ಚೈತನ್ಯ ಬರಲಿದೆ. ಸಂಬಂಧಗಳಲ್ಲಿನ ಕಹಿ ನೆನಪುಗಳನ್ನು ಮರೆತು ಒಂದಾಗಲು ಶುಭ ಕಾಲ. ಕುಟುಂಬದವರಿಂದ ಬೆಂಬಲ ದೊರೆಯಲಿದೆ.

​ಮೀನ ರಾಶಿ:

ಪ್ರೇಮಿಗಳಿಗೆ ಶುಭ ಫಲಗಳು ದೊರೆಯಲಿವೆ. ಸಂಬಂಧದಲ್ಲಿ ಬದ್ಧತೆ ಹೆಚ್ಚಲಿದೆ. ವಿವಾಹದ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ. ಸಂಗಾತಿಯ ನಡುವಿನ ಪ್ರೀತಿ ವೃದ್ಧಿಯಾಗಲಿದ್ದು, ನೆಮ್ಮದಿಯ ಜೀವನ ನಡೆಸುವಿರಿ.

– ಲೋಹಿತ ಹೆಬ್ಬಾರ್

Follow Us
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ
ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್