Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಕ್ಷೀಣಿಸುತ್ತಿದೆ ಏಲಕ್ಕಿ ಬೆಳೆಗಾರರು/ಮಾರಾಟಗಾರರ ಸಂಖ್ಯೆ.. ಘಮಘಮಿಸುತ್ತಿಲ್ಲ ಏಲಕ್ಕಿ

ಈಗ ರಾಜ್ಯದಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದ್ದು, ಏಲಕ್ಕಿ ಬೆಳೆಯುತ್ತಿದ್ದ ಬಹುತೇಕ ರೈತರು ದುಬಾರಿ ಬೆಲೆಗೆ ಮಾರಾಟವಾಗುವ ಕಾಫಿ ಮತ್ತು ಮೆಣಸು ಬೆಳಿತಿದ್ದಾರೆ. ಹೀಗಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ಬೆಳೆಯುವ ಏಲಕ್ಕಿ ತಂದು ವ್ಯಾಪಾರ ಮಾಡಬೇಕಾಗಿರುವುದರಿಂದ ಏಲಕ್ಕಿ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿದೆ.

ರಾಜ್ಯದಲ್ಲಿ ಕ್ಷೀಣಿಸುತ್ತಿದೆ ಏಲಕ್ಕಿ ಬೆಳೆಗಾರರು/ಮಾರಾಟಗಾರರ ಸಂಖ್ಯೆ.. ಘಮಘಮಿಸುತ್ತಿಲ್ಲ ಏಲಕ್ಕಿ
ಏಲಕ್ಕಿ ರಾಶಿಯ ಚಿತ್ರಣ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Jan 02, 2021 | 1:29 PM

ಹಾವೇರಿ: ಏಲಕ್ಕಿಯ ನಾಡು ಎಂದಾಕ್ಷಣ ತಟ್ಟನೆ ನೆನಪಾಗುವುದು ಹಾವೇರಿ. ಹಾಗೆಂದ ಮಾತ್ರಕ್ಕೆ ಇಲ್ಲಿ ಏಲಕ್ಕಿಯನ್ನು ಹೇರಳವಾಗಿ ಬೆಳೆಯುತ್ತಾರೆ ಎಂದು ಕೊಂಡರೆ ಅದು ತಪ್ಪು. ಬದಲಾಗಿ ಹಾವೇರಿ ಏಲಕ್ಕಿ ವ್ಯಾಪಾರಕ್ಕೆ ಒಂದು ಕಾಲದಲ್ಲಿ ಫೇಮಸ್ ಆಗಿದ್ದು, ನಗರದಲ್ಲಿ ಎಲ್ಲೆಲ್ಲೂ ಏಲಕ್ಕಿ ಕಂಪು ಸೂಸುತ್ತಿತ್ತು. ಆದರೆ ಈಗ ಏಲಕ್ಕಿ ವ್ಯಾಪಾರಸ್ಥರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ರಾಜ್ಯದಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿರುವುದೇ ಇದಕ್ಕೆ ಮೂಲ ಕಾರಣ.

ಹಿಂದೆ ನಗರದಲ್ಲಿ ಎಲ್ಲೆಲ್ಲೂ ಏಲಕ್ಕಿಯ ಕಂಪು ಸೂಸುತ್ತಿತ್ತು. ಘಮಘಮಿಸುವ ಏಲಕ್ಕಿಯನ್ನು ಗ್ರೇಡ್​ಗಳಾಗಿ ಮಾಡುವಲ್ಲಿ ಮತ್ತು ಅವುಗಳನ್ನು ಮಾರಾಟ ಮಾಡುವಲ್ಲಿ ಸುಮಾರು 80 ರಿಂದ 90 ಮಂದಿ ವ್ಯಾಪಾರಸ್ಥರು ಭಾಗಿಯಾಗಿದ್ದರು. ಶಿರಸಿ, ಅರಸೀಕೆರೆ, ಮೂಡಿಗೆರೆ, ಮಡಿಕೇರಿ ಸೇರಿದಂತೆ ರಾಜ್ಯದಲ್ಲಿ ಹಲವೆಡೆ ರೈತರು ಬೆಳೆಯುತ್ತಿದ್ದ ಏಲಕ್ಕಿಯನ್ನು ತಂದು ಸಂಸ್ಕರಿಸಿ, ಗ್ರೇಡ್​ಗಳನ್ನಾಗಿ ಮಾಡಿ ಇಲ್ಲಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ನಗರದಲ್ಲಿ ಎಲ್ಲೆಲ್ಲೂ ಏಲಕ್ಕಿಯ ವಾಸನೆ‌ ಮೂಗಿಗೆ ತಾಗುತ್ತಿತ್ತು.

ಏಲಕ್ಕಿಯನ್ನು ಆರಿಸುತ್ತಿರುವ ದೃಶ್ಯ

ಆದರೆ ಈಗ ರಾಜ್ಯದಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದ್ದು, ಏಲಕ್ಕಿ ಬೆಳೆಯುತ್ತಿದ್ದ ಬಹುತೇಕ ರೈತರು ದುಬಾರಿ ಬೆಲೆಗೆ ಮಾರಾಟವಾಗುವ ಕಾಫಿ ಮತ್ತು ಮೆಣಸು ಬೆಳಿತಿದ್ದಾರೆ. ಹೀಗಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ಬೆಳೆಯುವ ಏಲಕ್ಕಿ ತಂದು ವ್ಯಾಪಾರ ಮಾಡಬೇಕಾಗಿರುವುದರಿಂದ ಏಲಕ್ಕಿ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿದೆ. ಆದರೂ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ವ್ಯಾಪಾರವನ್ನು ಈಗಲೂ ನಗರದ 18 ಜನ ವ್ಯಾಪಾರಸ್ಥರು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಏಲಕ್ಕಿಯ ಗ್ರೇಡ್ ಪ್ರಕ್ರಿಯೆ

ಮೊದಲು ರೈತರಿಂದ ಏಲಕ್ಕಿ ತಂದು ಸಂಸ್ಕರಣೆ ಮಾಡಿ ನಂತರ ಅವುಗಳನ್ನು ಗ್ರೇಡ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಸಂಸ್ಕರಣೆ ಮಾಡುವುದು ನಿಂತು ಹೋಗಿದೆ. ಅದರ ಬದಲು ರೈತರಿಂದ ತಂದ ಹಸಿರು ಏಲಕ್ಕಿಯನ್ನ ತಂದು ಗ್ರೇಡ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಸುಮಾರು 5-6 ಗಾತ್ರದ ಏಲಕ್ಕಿ ಗ್ರೇಡ್ ಮಾಡಲಾಗುತ್ತಿದ್ದು, ಅದರ ಜೊತೆಗೆ ಬಾಯಿ ಬಿಟ್ಟಿರುವುದು, ಬಣ್ಣ ಇಲ್ಲದಿರುವುದು, ರೋಗ ಹತ್ತಿರುವುದು, ಏಲಕ್ಕಿ ಇದ್ದರೂ ಒಳಗೆ ಕಾಳು ಇಲ್ಲದೆ ಇರುವುದು, ಕಾಳಿದ್ದರೂ ಕಪ್ಪು ಬಣ್ಣದ ಬದಲು ಕೆಂಪು ಬಣ್ಣದ ಕಾಳು ಇರುವುದು ಹೀಗೆ ಇಂತಹವೆಲ್ಲವನ್ನು ತೆಗೆದು ಮಾರಾಟ ಮಾಡಲಾಗುತ್ತದೆ.

ಗ್ರೇಡ್ ಮಾಡುವ ಮಿಷನ್

ಏಲಕ್ಕಿಯನ್ನು ಪ್ಯಾಕ್ ಮಾಡುತ್ತಿರುವ ದೃಶ್ಯ

ಏಲಕ್ಕಿ ಪರಿಶೀಲನೆ

ರಾಜ್ಯದಲ್ಲಿ ರೈತರು ಏಲಕ್ಕಿ ಬೆಳೆಯುವುದು ಕಡಿಮೆಯಾಗುತ್ತಿದ್ದಂತೆ ತಮಿಳುನಾಡು, ಕೇರಳದಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸದ್ಯ ತಮಿಳುನಾಡು ಮತ್ತು ಕೇರಳ ಭಾಗದಿಂದ ನೇರವಾಗಿ ಏಲಕ್ಕಿ ಎಲ್ಲಾ ಕಡೆಗಳಿಗೆ ಸರಬರಾಜು ಆಗುವುದರಿಂದ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿದೆ. ರಾಜ್ಯದಲ್ಲಿ ರೈತರು ಏಲಕ್ಕಿ ಬೆಳೆಯುವುದು ಕಡಿಮೆಯಾಗುತ್ತಿದ್ದಂತೆ ಹಾವೇರಿಯಲ್ಲಿ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿದ್ದು, ಏಲಕ್ಕಿಯ ಕಂಪು ಕೂಡ ಕಡಿಮೆಯಾಗುತ್ತಿದೆ.

ಏಲಕ್ಕಿಯ ದೃಶ್ಯ

ಏಲಕ್ಕಿ ವ್ಯಾಪಾರ

ಒಟ್ಟಿನಲ್ಲಿ ಈಗ ವ್ಯಾಪಾರಸ್ಥರ ಸಂಖ್ಯೆ ಕಡಿಮೆಯಾಗಿರುವುದರಿಂದ ಏಲಕ್ಕಿಯ ಕಂಪು ಕೆಲವೇ ಕೆಲವು ಪ್ರದೇಶಕ್ಕೆ ಸೀಮಿತವಾಗಿದ್ದು, ಆ ಮೂಲಕ ಹಾವೇರಿಯಲ್ಲಿ ಎಲ್ಲೆಲ್ಲೂ ಘಮಘಮಿಸುತ್ತಿದ್ದ ಏಲಕ್ಕಿಯ ಪರಿಮಳ ಈಗ ಕ್ಷೀಣಿಸುತ್ತಿದೆ.

ರಾಜ್ಯದಲ್ಲಿ ಏಲಕ್ಕಿ ಬೆಳೆಯೋರ ಸಂಖ್ಯೆ ಕಡಿಮೆ, ಘಮಘಮಿಸುತ್ತಿಲ್ಲ ಏಲಕ್ಕಿ!

ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ