AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಪ್ಪಳ ಮತ್ತು ಜಿಎಸ್​ಟಿ: ವೈರಲ್ ಆಯ್ತು ಉದ್ಯಮಿ ಹರ್ಷ್ ಗೋಯೆಂಕ ಟ್ವೀಟ್, ಫ್ಯಾಕ್ಟ್​ಚೆಕ್ ಮಾಡಿದ ತೆರಿಗೆ ಇಲಾಖೆ

ದೇಶದ ಮುಂಚೂಣಿ ಉದ್ಯಮ ಸಮೂಹ ಆರ್​ಪಿಜಿ ಎಂಟರ್​ಪ್ರೈಸಸ್​ನ ಅಧ್ಯಕ್ಷ ಹರ್ಷ್​ ಗೋಯೆಂಂಕ ತಮ್ಮ ಟ್ವೀಟ್​ನಲ್ಲಿ ಎರಡು ಹಪ್ಪಳಗಳ ಚಿತ್ರವನ್ನು ಟ್ವೀಟ್ ಮಾಡಿದ್ದರು.

ಹಪ್ಪಳ ಮತ್ತು ಜಿಎಸ್​ಟಿ: ವೈರಲ್ ಆಯ್ತು ಉದ್ಯಮಿ ಹರ್ಷ್ ಗೋಯೆಂಕ ಟ್ವೀಟ್, ಫ್ಯಾಕ್ಟ್​ಚೆಕ್ ಮಾಡಿದ ತೆರಿಗೆ ಇಲಾಖೆ
ಹರ್ಷ್​ ಗೊಯೆಂಕಾ ಟ್ವೀಟ್ ಮಾಡಿರುವ ವೃತ್ತಾಕಾರ ಮತ್ತು ಚಚೌಕದ ಹಪ್ಪಳಗಳು
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Sep 01, 2021 | 10:27 PM

Share

ಹಪ್ಪಳ ಮತ್ತು ಸರಕು ಸೇವಾ ಸುಂಕದ (ಜಿಎಸ್​ಟಿ) ಬಗ್ಗೆ ಉದ್ಯಮಿ ಹರ್ಷ್​ ಗೋಯೆಂಕ ಮಾಡಿದ ಟ್ವೀಟ್​ ಬುಧವಾರ ವೈರಲ್ ಆಗಿತ್ತು. ಈ ಟ್ವೀಟ್​ನಲ್ಲಿ ವ್ಯಕ್ತವಾದ ಮಾಹಿತಿಯ ಸತ್ಯಪರಿಶೀಲನೆ ಮಾಡಿದ ಕೇಂದ್ರ ಪರೋಕ್ಷ ತೆರಿಗೆ ಮತ್ತು ಸೀಮಾ ಸುಂಕ ಇಲಾಖೆಯು (Central Board of Indirect Taxes Customs – CBIC) ಗೋಯೆಂಕ ಟ್ವೀಟ್​ನಲ್ಲಿ ಪ್ರಸ್ತಾಪಿಸಿದ್ದ ಮಾಹಿತಿ ತಪ್ಪು ಎಂದು ಹೇಳಿತು.

ಅಕ್ಕಿ ಸೇರಿದಂತೆ ವಿವಿಧ ಧಾನ್ಯಗಳ ಬೆಂದ ಹಿಟ್ಟನ್ನು ಹದವಾಗಿ ಬಿಸಿಲಿನಲ್ಲಿ ಒಣಗಿಸಿ ಹಪ್ಪಳ ತಯಾರಿಸಲಾಗುತ್ತದೆ. ಇದನ್ನು ಬಿಸಿ ಎಣ್ಣೆಯಲ್ಲಿ ಕರಿದು ಅಥವಾ ಸುಟ್ಟು ಗರಿಗರಿ ಇರುವಾಗಲೇ ತಿನ್ನುವುದು ರೂಢಿ.

ದೇಶದ ಮುಂಚೂಣಿ ಉದ್ಯಮ ಸಮೂಹ ಆರ್​ಪಿಜಿ ಎಂಟರ್​ಪ್ರೈಸಸ್​ನ ಅಧ್ಯಕ್ಷ ಹರ್ಷ್​ ಗೋಯೆಂಂಕ ತಮ್ಮ ಟ್ವೀಟ್​ನಲ್ಲಿ ಎರಡು ಹಪ್ಪಳಗಳ ಚಿತ್ರವನ್ನು ಟ್ವೀಟ್ ಮಾಡಿದ್ದರು. ಒಂದು ವೃತ್ತಾಕಾರದಲ್ಲಿದ್ದರೆ ಮತ್ತೊಂದು ಚಚೌಕವಾಗಿತ್ತು. ವೃತ್ತಾಕಾರದ ಹಪ್ಪಳಕ್ಕೆ ಜಿಎಸ್​ಟಿಯಿಂದ ವಿನಾಯ್ತಿಯಿದೆ. ಚಚೌಕದ ಹಪ್ಪಳಕ್ಕೆ ಜಿಎಸ್​ಟಿ ಅನ್ವಯವಾಗುತ್ತದೆ ಎಂದು ಹರ್ಷ್​ ಗೊಯೆಂಕ ಹೇಳಿದ್ದರು. ‘ಈ ತೆರಿಗೆ ವಿಧಿಸುವ ತರ್ಕದ ಬಗ್ಗೆ ಯಾರಾದರೂ ಲೆಕ್ಕ ಪರಿಶೋಧಕರು ನನಗೆ ಅರ್ಥ ಮಾಡಿಸಬಲ್ಲಿರಾ’ ಎಂದು ಹರ್ಷ್​ ಗೋಯೆಂಕಾ ವ್ಯಂಗ್ಯವಾಡಿದ್ದರು.

ಹರ್ಷ್​ ಗೊಯೆಂಕಾ ಅವರ ಪೋಸ್ಟ್​ ಇಲ್ಲಿದೆ

ಹರ್ಷ್​ ಗೊಯೆಂಕಾ ಅವರ ಟ್ವೀಟ್​ನಲ್ಲಿದ್ದ ಮಾಹಿತಿ ತಪ್ಪು ಎಂದು ಹೇಳಿದ ಸಿಬಿಐಸಿ, ಹಪ್ಪಳವು ಯಾವುದೇ ಹೆಸರಿನಲ್ಲಿದ್ದರೂ ಅದಕ್ಕೆ ಜಿಎಸ್​ಟಿ ವಿಧಿಸುವುದಿಲ್ಲ. ಈ ವಿಷಯವನ್ನು ಜಿಎಸ್​ಟಿ ಅಧಿಸೂಚನೆಯ 96ನೇ ಎಂಟ್ರಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಯಾವುದೇ ಹಪ್ಪಳವನ್ನು ಅದರ ಆಕಾರದ ಮೇಲೆ ಪ್ರತ್ಯೇಕಿಸುವುದಿಲ್ಲ ಎಂದು ಸಿಬಿಐಸಿ ಹೇಳಿದೆ. ಈ ವಿಷಯವು ಸಿಬಿಐಸಿ ವೆಬ್​ಸೈಟ್​ನಲ್ಲಿ ಲಭ್ಯವಿದೆ ಎಂದು ಹೇಳಿದೆ.

ಸಿಬಿಐಸಿ ಮಾಡಿರುವ ಫ್ಯಾಕ್ಟ್​ಚೆಕ್​ ಇಲ್ಲಿದೆ

(Viral Tweet Harsh Goenka posts about papad and GST in viral tweet CBIC dept fact checks updates the truth)

ಇದನ್ನೂ ಓದಿ: Afghanistan Update: ತಾಲಿಬಾನ್ ಹಿಡಿತದಲ್ಲಿ 2ನೇ ದಿನ; ಪಂಜಶಿರ್​ ಸಂಘರ್ಷ, ಅಲ್​ಖೈದಾ ಅಭಿನಂದನೆ, ಬೈಡೆನ್ ಸಮರ್ಥನೆ

ಇದನ್ನೂ ಓದಿ: 30 ತಾಸು ಕೊರೆಯುವ ಚಳಿಯಲ್ಲಿ ನಿಂತು ಅಫ್ಘಾನಿಸ್ತಾನದಲ್ಲಿ ಬೈಡೆನ್ ಜೀವ ಕಾಪಾಡಿದ್ದವಗೆ ವಿಸಾ ಕೊಡಲು ಅಮೆರಿಕ ಮೀನಮೇಷ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ