AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟರ್ಕಿಯಿಂದ ಬಂತು ಈರುಳ್ಳಿ! ದರ-ಗಾತ್ರ ನೋಡಿ ಮಂಗಳೂರು ಮಂದಿ ಸುಸ್ತೋಸುಸ್ತು!

ಮಂಗಳೂರು: ದರದರನೇ ಏರುತ್ತಿದ್ದ ಈರುಳ್ಳಿ ದರದಿಂದ ಕಣ್ಣೀರು ಸುರಿಸುತ್ತಿದ್ದ ಗ್ರಾಹಕರನ್ನು ಸಮಾಧಾನಪಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಬರೋಬ್ಬರಿ ಆರು ಸಾವಿರ ಮೈಲು ದೂರದ ಟರ್ಕಿ ದೇಶದಿಂದ ಮಂಗಳೂರು ಮಾರುಕಟ್ಟೆಗೆ ಈರುಳ್ಳಿ ಬಂದಿದೆ. ಮೊದಲ ದಿನವೇ ಕೆಜಿಗೆ 120 ರಿಂದ 130 ರೂ. ದರ ನಿಗದಿಯಾಗಿದೆ. ಟರ್ಕಿಯಿಂದ 11,000 ಟನ್‌ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ಸಂಸ್ಥೆ ಎಂಎಂಟಿಸಿಗೆ ಆಮದು ಜವಾಬ್ದಾರಿ ವಹಿಸಲಾಗಿದೆ. ಮಂಗಳೂರಿಗೆ ಬಂತು ಟರ್ಕಿ ಈರುಳ್ಳಿ..! ಟರ್ಕಿಯಿಂದ ಈರುಳ್ಳಿ ಬಂದಾಗ ದರ ಸುಧಾರಿಸಬಹುದು. ಕೆಜಿಗೆ 50ರಿಂದ […]

ಟರ್ಕಿಯಿಂದ ಬಂತು ಈರುಳ್ಳಿ!  ದರ-ಗಾತ್ರ ನೋಡಿ ಮಂಗಳೂರು ಮಂದಿ ಸುಸ್ತೋಸುಸ್ತು!
ಸಾಧು ಶ್ರೀನಾಥ್​
|

Updated on:Dec 05, 2019 | 4:59 PM

Share

ಮಂಗಳೂರು: ದರದರನೇ ಏರುತ್ತಿದ್ದ ಈರುಳ್ಳಿ ದರದಿಂದ ಕಣ್ಣೀರು ಸುರಿಸುತ್ತಿದ್ದ ಗ್ರಾಹಕರನ್ನು ಸಮಾಧಾನಪಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಬರೋಬ್ಬರಿ ಆರು ಸಾವಿರ ಮೈಲು ದೂರದ ಟರ್ಕಿ ದೇಶದಿಂದ ಮಂಗಳೂರು ಮಾರುಕಟ್ಟೆಗೆ ಈರುಳ್ಳಿ ಬಂದಿದೆ. ಮೊದಲ ದಿನವೇ ಕೆಜಿಗೆ 120 ರಿಂದ 130 ರೂ. ದರ ನಿಗದಿಯಾಗಿದೆ. ಟರ್ಕಿಯಿಂದ 11,000 ಟನ್‌ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ಸಂಸ್ಥೆ ಎಂಎಂಟಿಸಿಗೆ ಆಮದು ಜವಾಬ್ದಾರಿ ವಹಿಸಲಾಗಿದೆ.

ಮಂಗಳೂರಿಗೆ ಬಂತು ಟರ್ಕಿ ಈರುಳ್ಳಿ..! ಟರ್ಕಿಯಿಂದ ಈರುಳ್ಳಿ ಬಂದಾಗ ದರ ಸುಧಾರಿಸಬಹುದು. ಕೆಜಿಗೆ 50ರಿಂದ 60ಕ್ಕೆ ಲಭಿಸಬಹುದು ಎಂದೆಲ್ಲ ನಿರೀಕ್ಷಿಸಲಾಗಿತ್ತು. ಆದರೆ ದರ ಮತ್ತಷ್ಟು ದುಬಾರಿಯಾಗಿದೆ. ಜನ ಈರುಳ್ಳಿಯ ದರ ಕೇಳಿಯೇ ಸುಸ್ತಾಗುತ್ತಿದ್ದಾರೆ.

ಈಗ ಮಾರುಕಟ್ಟೆಗೆ ಬಂದಿರುವ ಪ್ರತಿಯೊಂದು ಈರುಳ್ಳಿ ಅರ್ಧ ಕೆಜಿಯಷ್ಟು ಭಾರ ಇದ್ದು, ಒಂದು ಕೆಜಿಗೆ 2-3 ಈರುಳ್ಳಿ ಮಾತ್ರ ತೂಗುತ್ತಿವೆ! ಅತ್ಯಂತ ಶುಭ್ರವಾಗಿದ್ದು, ತುಂಬಾ ಖಾರವೂ ಇದೆ. ಈರುಳ್ಳಿ ಕತ್ತರಿಸಿದಾಗ ದರಕ್ಕೆ ತಕ್ಕಂತೆ ಕಣ್ಣೀರು ಬರಿಸುತ್ತಿದೆ. ಟರ್ಕಿ ಭೂಮಾರ್ಗವಾಗಿ 6,388 ಕಿ.ಮೀ ದೂರವಿದ್ದು, ಸುಮಾರು 54 ದಿನ ಬೇಕಾಗಬಹುದು.

Published On - 11:58 am, Wed, 4 December 19

ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು