AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲ್ಕೊರೆತ ತಡೆಯಲು 20 ಸಾವಿರ ಜನರಿಂದ ವಿಷ್ಣು ಸಹಸ್ರನಾಮ ಪಠಣ

ಉಡುಪಿ, ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಭಾನುವಾರ 20,000ಕ್ಕೂ ಹೆಚ್ಚು ಜನರು ಅರಬ್ಬೀ ಸಮುದ್ರದ 108 ಸ್ಥಳಗಳಲ್ಲಿ ಏಕಕಾಲದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ಕಡಲ್ಕೊರೆತ ತಡೆಯುವ ಉದ್ದೇಶದಿಂದ ನಡೆದ ಈ ಸಾಮೂಹಿಕ ಪಾರಾಯಣವು 2005ರಲ್ಲಿ ನಡೆದ ಯಶಸ್ವಿ ಅಭಿಯಾನದ ಮುಂದುವರಿಕೆಯಾಗಿದೆ. ಪಾರಾಯಣದ ಮುನ್ನ ಸಮುದ್ರಕ್ಕೆ ಕ್ಷೀರ ಅರ್ಪಣೆ ಮಾಡಲಾಯಿತು. ಸನಾತನ ಧರ್ಮದ ಉಳಿವಿಗಾಗಿ ಮತ್ತು ಭಾರತದ ಅಭಿವೃದ್ಧಿಗಾಗಿ ಇದನ್ನು ಆಯೋಜಿಸಲಾಗಿತ್ತು.

ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Jan 27, 2025 | 9:58 AM

Share
ಕಡಲ್ಕೊರೆತ ತಡೆಯಲು ಉಡುಪಿ, ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಗಳ ಸಮುದ್ರ ತೀರದಲ್ಲಿ ಭಾನುವಾರ ಏಕಕಾಲಕ್ಕೆ 20 ಸಾವಿರ ಮಂದಿ ಅರಬ್ಬೀ ಸಮುದ್ರದ 108 ಕಡೆ ಏಕಕಾಲಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ಸಂಜೆ 4 ರಿಂದ 6ರವರೆಗೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಯಿತು.

ಕಡಲ್ಕೊರೆತ ತಡೆಯಲು ಉಡುಪಿ, ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು, ಕಣ್ಣೂರು ಜಿಲ್ಲೆಗಳ ಸಮುದ್ರ ತೀರದಲ್ಲಿ ಭಾನುವಾರ ಏಕಕಾಲಕ್ಕೆ 20 ಸಾವಿರ ಮಂದಿ ಅರಬ್ಬೀ ಸಮುದ್ರದ 108 ಕಡೆ ಏಕಕಾಲಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ಸಂಜೆ 4 ರಿಂದ 6ರವರೆಗೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಯಿತು.

1 / 6
ವಿಷ್ಣು ಸಹಸ್ರನಾಮ ಪಾರಾಯಣಕ್ಕೂ ಮುನ್ನ ಸಮುದ್ರಕ್ಕೆ ಕ್ಷೀರ ಅರ್ಪಣೆ ಮಾಡಲಾಯಿತು. ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ನೇತೃತ್ವ ಪಾರಾಯಣ ಮಾಡಲಾಯಿತು. ‌ಈ ಹಿಂದೆ 2005ರಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆದಿತ್ತು.‌ ಆ ಬಳಿಕ ಕಡಲು ಕೊರೆತ ಕಡಿಮೆಯಾಗಿದೆ ಎನ್ನುತ್ತಿದ್ದಾರೆ ಆಯೋಜಕರು. ಬೈಂದೂರು ತಾಲೂಕಿನ ಮರವಂತೆಯಲ್ಲಿ ಸಾಮೂಹಿಕ ಪಠಣದಿಂದ ಕಡಲು ಕೊರೆತ ಕಡಿಮೆಯಾಗಿದೆಯಂತೆ.

ವಿಷ್ಣು ಸಹಸ್ರನಾಮ ಪಾರಾಯಣಕ್ಕೂ ಮುನ್ನ ಸಮುದ್ರಕ್ಕೆ ಕ್ಷೀರ ಅರ್ಪಣೆ ಮಾಡಲಾಯಿತು. ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿ ನೇತೃತ್ವ ಪಾರಾಯಣ ಮಾಡಲಾಯಿತು. ‌ಈ ಹಿಂದೆ 2005ರಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆದಿತ್ತು.‌ ಆ ಬಳಿಕ ಕಡಲು ಕೊರೆತ ಕಡಿಮೆಯಾಗಿದೆ ಎನ್ನುತ್ತಿದ್ದಾರೆ ಆಯೋಜಕರು. ಬೈಂದೂರು ತಾಲೂಕಿನ ಮರವಂತೆಯಲ್ಲಿ ಸಾಮೂಹಿಕ ಪಠಣದಿಂದ ಕಡಲು ಕೊರೆತ ಕಡಿಮೆಯಾಗಿದೆಯಂತೆ.

2 / 6
ಈಗ ಮತ್ತೆ ಪ್ರಕೃತಿಯಲ್ಲಿ ಏರುಪೇರು ಕಾಣಿಸುತ್ತಿದೆ ಹೀಗಾಗಿ ವಿಷ್ಣುವಿನ ಮೊರೆಹೋಗುವುದು ಅನಿವಾರ್ಯವಿದೆ ಎಂದರು. ಅಷ್ಟೇ ಅಲ್ಲದೆ ಸನಾತನ ಧರ್ಮ ಉಳಿಯಬೇಕು, ಭಾರತ ವಿಶ್ವಗುರವಾಗಿ ಮೆರೆಯಬೇಕು, ಪ್ರಕೃತಿ ವಿಕೋಪಗಳು ಉಂಟಾಗಾಬಾರದು, ಸಮುದ್ರದಿಂದ ಯಾವುದೇ ಅಪತ್ತು ಎದುರಾಗಬಾರದು, ಕಡಲ್ಕೊರೆತ ಸಂಭವಿಸಬಾರದು ಎಂಬ ಸಂಕಲ್ಪದೊಂದಿಗೆ ಪಠಣ ಕೈಗೊಳಲಾಯಿತು. ಸಮುದ್ರರಾಜನಿಗೆ ಹಾಲೆರೆಯುವ ಮೂಲಕ ಸಂಕಲ್ಪ ಕೈಗೊಂಡು ಸತತವಾಗಿ ಎರಡು ಗಂಟೆಗಳ ಕಾಲ‌ ಮಂತ್ರ ಪಠಣ ನಡೆಯಿತು.

ಈಗ ಮತ್ತೆ ಪ್ರಕೃತಿಯಲ್ಲಿ ಏರುಪೇರು ಕಾಣಿಸುತ್ತಿದೆ ಹೀಗಾಗಿ ವಿಷ್ಣುವಿನ ಮೊರೆಹೋಗುವುದು ಅನಿವಾರ್ಯವಿದೆ ಎಂದರು. ಅಷ್ಟೇ ಅಲ್ಲದೆ ಸನಾತನ ಧರ್ಮ ಉಳಿಯಬೇಕು, ಭಾರತ ವಿಶ್ವಗುರವಾಗಿ ಮೆರೆಯಬೇಕು, ಪ್ರಕೃತಿ ವಿಕೋಪಗಳು ಉಂಟಾಗಾಬಾರದು, ಸಮುದ್ರದಿಂದ ಯಾವುದೇ ಅಪತ್ತು ಎದುರಾಗಬಾರದು, ಕಡಲ್ಕೊರೆತ ಸಂಭವಿಸಬಾರದು ಎಂಬ ಸಂಕಲ್ಪದೊಂದಿಗೆ ಪಠಣ ಕೈಗೊಳಲಾಯಿತು. ಸಮುದ್ರರಾಜನಿಗೆ ಹಾಲೆರೆಯುವ ಮೂಲಕ ಸಂಕಲ್ಪ ಕೈಗೊಂಡು ಸತತವಾಗಿ ಎರಡು ಗಂಟೆಗಳ ಕಾಲ‌ ಮಂತ್ರ ಪಠಣ ನಡೆಯಿತು.

3 / 6
ಕಾಸರಗೋಡಿನ ಕಣ್ಣೂರಿನಿಂದ ಉಡುಪಿಯ ಶಿರೂರಿನವರೆಗೆ ವಿಷ್ಣು ಸಹಸ್ರನಾಮ ಪಠಣ ನಡೆದಿದೆ. ಏಕಕಾಲದಲ್ಲಿ 108 ಸ್ಥಳಗಳಲ್ಲಿ ಮಂತ್ರ ಪಠಣ ಮಲ್ಪೆ ಬೀಚ್, ಪಡುಕೆರೆ ಬೀಚ್ ಸೇರಿದಂತೆ ಉಡುಪಿ 50 ಕಡೆ ನೂರಾರು ಮಂದಿ ಸೇರಿ 4 ರಿಂದ 6 ಗಂಟೆಯವರೆಗೆ ವಿಷ್ಣು ಸಹಸ್ರ ನಾಮ ಮಂತ್ರ ಪಠಿಸಿದರು.

ಕಾಸರಗೋಡಿನ ಕಣ್ಣೂರಿನಿಂದ ಉಡುಪಿಯ ಶಿರೂರಿನವರೆಗೆ ವಿಷ್ಣು ಸಹಸ್ರನಾಮ ಪಠಣ ನಡೆದಿದೆ. ಏಕಕಾಲದಲ್ಲಿ 108 ಸ್ಥಳಗಳಲ್ಲಿ ಮಂತ್ರ ಪಠಣ ಮಲ್ಪೆ ಬೀಚ್, ಪಡುಕೆರೆ ಬೀಚ್ ಸೇರಿದಂತೆ ಉಡುಪಿ 50 ಕಡೆ ನೂರಾರು ಮಂದಿ ಸೇರಿ 4 ರಿಂದ 6 ಗಂಟೆಯವರೆಗೆ ವಿಷ್ಣು ಸಹಸ್ರ ನಾಮ ಮಂತ್ರ ಪಠಿಸಿದರು.

4 / 6
ಎಲ್ಲಾ ಗುಂಪುಗಳು ಆರು ಬಾರಿ ವಿಷ್ಣು ಸಹಸ್ರನಾಮ ಪಠಿಸಿದರು. ಮಹಿಳೆಯರು, ಪುರುಷರು ಸೇರಿದಂತೆ  20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ‌ವೇದ ಕೃಷಿಕ ಕೆಎಸ್ ನಿತ್ಯಾನಂದ ಮಾರ್ಗದರ್ಶನದಲ್ಲಿ ಮೂರನೇ ಬಾರಿಗೆ ಅಭಿಯಾನ ಕರಾವಳಿ‌‌ ತೀರದಲ್ಲಿ ನಡೆದಿದೆ.

ಎಲ್ಲಾ ಗುಂಪುಗಳು ಆರು ಬಾರಿ ವಿಷ್ಣು ಸಹಸ್ರನಾಮ ಪಠಿಸಿದರು. ಮಹಿಳೆಯರು, ಪುರುಷರು ಸೇರಿದಂತೆ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ‌ವೇದ ಕೃಷಿಕ ಕೆಎಸ್ ನಿತ್ಯಾನಂದ ಮಾರ್ಗದರ್ಶನದಲ್ಲಿ ಮೂರನೇ ಬಾರಿಗೆ ಅಭಿಯಾನ ಕರಾವಳಿ‌‌ ತೀರದಲ್ಲಿ ನಡೆದಿದೆ.

5 / 6
ಒಟ್ಟಾರೆ ಕಡಲತೀರದಲ್ಲಿ ಎದುರಾಗಲಿರುವ ಅಪಾಯವನ್ನ ತಪ್ಪಿಸಲು ವಿಷ್ಣು ಸಹಸ್ರನಾಮ ಪಠಣ ಸಮಿತಿ ಮುಂದಾಗಿದೆ. 72 ಸಾವಿರ ಅಕ್ಷರ ಇರುವ ಸಹಸ್ರನಾಮ ಪಠಣ ಕಡಲತೀರದ ಉದ್ದಗಲಕ್ಕೂ ಮೊಳಗಿದೆ.

ಒಟ್ಟಾರೆ ಕಡಲತೀರದಲ್ಲಿ ಎದುರಾಗಲಿರುವ ಅಪಾಯವನ್ನ ತಪ್ಪಿಸಲು ವಿಷ್ಣು ಸಹಸ್ರನಾಮ ಪಠಣ ಸಮಿತಿ ಮುಂದಾಗಿದೆ. 72 ಸಾವಿರ ಅಕ್ಷರ ಇರುವ ಸಹಸ್ರನಾಮ ಪಠಣ ಕಡಲತೀರದ ಉದ್ದಗಲಕ್ಕೂ ಮೊಳಗಿದೆ.

6 / 6
Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ