AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ ದುರಂತಕ್ಕೆ ಇನ್ನೊಂದು ಟ್ವಿಸ್ಟ್​; ಸ್ಫೋಟಕ ಸಾಗಿಸಿದ್ದ ಇನ್ನೂ ಒಂದು ವಾಹನದ ಚಾಲಕ ನಾಪತ್ತೆ!

ಘಟನೆಯ ಬಳಿಕ ಶಶಿ, ತನ್ನ ಬೊಲೆರೋ ಸಮೇತ ನಾಪತ್ತೆಯಾಗಿದ್ದಾನೆ. ತಂದೆ ಬೋರೇಗೌಡನಿಗೆ ಕರೆ ಮಾಡಿ ತಾನು ಬದುಕಿದ್ದಾಗಿಯೂ ಹೇಳಿಕೊಂಡಿದ್ದಾನೆ. ಈತ ಭದ್ರಾವತಿ ತಾಲೂಕಿನ ಆರ್​.ಎಚ್​.ನಗರ ಗ್ರಾಮದ ನಿವಾಸಿಯಾಗಿದ್ದು, ಆಟೋ ಓಡಿಸುತ್ತಿದ್ದ.

ಶಿವಮೊಗ್ಗ ದುರಂತಕ್ಕೆ ಇನ್ನೊಂದು ಟ್ವಿಸ್ಟ್​; ಸ್ಫೋಟಕ ಸಾಗಿಸಿದ್ದ ಇನ್ನೂ ಒಂದು ವಾಹನದ ಚಾಲಕ ನಾಪತ್ತೆ!
ಸ್ಫೋಟಗೊಂಡು ಛಿದ್ರವಾಗಿರುವ ವಾಹನ
Lakshmi Hegde
|

Updated on:Jan 23, 2021 | 11:23 AM

Share

ಶಿವಮೊಗ್ಗ: ಹುಣಸೋಡಿನಲ್ಲಿ ಜನವರಿ 21ರ ರಾತ್ರಿ ಭಾರೀ ಪ್ರಮಾಣದಲ್ಲಿ ಜಿಲಿಟಿನ್ ಕಡ್ಡಿಗಳು ತುಂಬಿದ್ದ ಬೊಲೆರೋ ವಾಹನ ಸ್ಫೋಟವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಶಿ ಎನ್ನುವ ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಶಶಿಯ ತಂದೆ ಬೋರೆಗೌಡರನ್ನು ವಶಕ್ಕೆ ಪಡೆದಿದ್ದಾರೆ.

ಜ. 21ರಂದು ಬೊಲೆರೋ ವಾಹನ ಸ್ಫೋಟಗೊಂಡು ಅದರಲ್ಲಿದ್ದ ಪ್ರವೀಣ ಮತ್ತು ಮಂಜುನಾಥ್​ ಇಬ್ಬರೂ ಮೃತಪಟ್ಟಿದ್ದರು. ಅಂದು ಈ ಶಶಿ ಮತ್ತೊಂದು ಬೊಲೆರೋದಲ್ಲಿ ಸ್ಫೋಟಕಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಅನ್​ಲೋಡ್​ ಮಾಡಿ ವಾಪಸ್ ಬಂದಿದ್ದಾನೆ. ಶಶಿ ಇತ್ತ ಬಂದ ಕೂಡಲೆ ಅತ್ತ ಹುಣಸೋಡಿನಲ್ಲಿ ಭಯಾನಕ ಸ್ಫೋಟ ಸಂಭವಿಸಿದೆ.

ತಂದೆಗೆ ಫೋನ್ ಮಾಡಿ ತಾನು ಬದುಕಿದ್ದಾಗಿ ಹೇಳಿಕೊಂಡ ಬೊಲೆರೋ ವಾಹನದ ಚಾಲಕ ಈ ಘಟನೆಯ ಬಳಿಕ ಶಶಿ, ತನ್ನ ಬೊಲೆರೋ ವಾಹನದ ಸಮೇತ ನಾಪತ್ತೆಯಾಗಿದ್ದಾನೆ. ತಂದೆ ಬೋರೇಗೌಡನಿಗೆ ಕರೆ ಮಾಡಿ ತಾನು ಬದುಕಿದ್ದಾಗಿಯೂ ಹೇಳಿಕೊಂಡಿದ್ದಾನೆ. ಈತ ಭದ್ರಾವತಿ ತಾಲೂಕಿನ ಆರ್​.ಎಚ್​.ನಗರ ಗ್ರಾಮದ ನಿವಾಸಿಯಾಗಿದ್ದು, ಆಟೋ ಓಡಿಸುತ್ತಿದ್ದ. ಇತ್ತೀಚೆಗೆ ಹೊಸ ಕಾರನ್ನೂ ಖರೀದಿಸಿದ್ದ. ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ಸೈಟ್ ಕೂಡ ಖರೀದಿ ಮಾಡಿದ್ದ. ಕಡಿಮೆ ಅವಧಿಯಲ್ಲಿ ಇಷ್ಟು ಪ್ರಮಾಣದ ಆಸ್ತಿ ಮಾಡಿದ್ದು, ಗ್ರಾಮಸ್ಥರಲ್ಲಿ ಅಚ್ಚರಿಯನ್ನು ಮೂಡಿಸಿತ್ತು. ಇದೀಗ ಶಶಿಯ ಫೋನ್ ಕೂಡ ಸ್ವಿಚ್ ಆಫ್​ ಆಗಿದೆ. ಆತನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.

Shivamogga Blast ಪ್ರಕರಣಕ್ಕೆ ತಮಿಳುನಾಡು ಲಿಂಕ್​, ಮೃತಪಟ್ಟವರೆಲ್ಲರು ಭದ್ರಾವತಿ ಮೂಲದವರು..!

Published On - 11:22 am, Sat, 23 January 21

ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ