AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ ಪ್ರವಾಸ: ವಿವಿಧ ಟೂರ್​ ಪ್ಯಾಕೇಜ್​ ಘೋಷಿಸಿದ ಏಜೆನ್ಸಿಸ್​​

ಅಯೋಧ್ಯೆಗೆ ತೆರಳಬೇಕು ಶ್ರೀರಾಮನ ದರ್ಶನ ಪಡೆಯಬೇಕೆಂದು ಸಾಕಷ್ಟು ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ. ಕಾಶಿ, ‌ಪ್ರಯಾಗರಾಜ್, ಗಾಯಯಾತ್ರೆ‌ ಮಾಡುತ್ತಿದ್ದವರು ಈಗ ಅಯೋಧ್ಯೆ ಯಾತ್ರೆಗೂ ಸಿದ್ಧತೆ ನಡೆಸಿದ್ದಾರೆ. ಮುಂದಿನ ತಿಂಗಳಿನಿಂದ ಆಯೋಧ್ಯೆಗೆ ತೆರಳಲು ಈಗಿನಿಂದಲೇ ಬುಕ್ಕಿಂಗ್ ಮಾಡುತ್ತಿದ್ದಾರೆ.

ಅಯೋಧ್ಯೆ ಪ್ರವಾಸ: ವಿವಿಧ ಟೂರ್​ ಪ್ಯಾಕೇಜ್​ ಘೋಷಿಸಿದ ಏಜೆನ್ಸಿಸ್​​
ಅಯೋಧ್ಯೆ ರಾಮಮಂದಿರ
Kiran Surya
| Edited By: |

Updated on: Jan 14, 2024 | 12:58 PM

Share

ಬೆಂಗಳೂರು, ಜನವರಿ 14: ಅಯೋಧ್ಯೆಯಲ್ಲಿ (Ayodhya) ಭವ್ಯವಾದ ಶ್ರೀರಾಮ ಮಂದಿರ (Ram Mandir) ನಿರ್ಮಾಣವಾಗಿದೆ. ಜನವರಿ 22 ರಂದು ಈ ಮಂದಿರದಲ್ಲಿ ರಾಮಲಲ್ಲಾ (ಬಾಲರಾಮ)ನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಅಯೋಧ್ಯೆಯಲ್ಲಿ ಅಂತಿಮ‌ ತಯಾರಿ ನಡೆಯುತ್ತಿದೆ. ಇನ್ನು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ನೋಡಲು ಅಸಂಖ್ಯ ಜನರು ಕಾದು ಕುಳಿತಿದ್ದಾರೆ. ಇನ್ನು ಅಯೋಧ್ಯೆಗೆ ತೆರಳಬೇಕು ಶ್ರೀರಾಮನ ದರ್ಶನ ಪಡೆಯಬೇಕೆಂದು ಸಾಕಷ್ಟು ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ.

ಕಾಶಿ, ‌ಪ್ರಯಾಗರಾಜ್, ಗಾಯಯಾತ್ರೆ‌ ಮಾಡುತ್ತಿದ್ದವರು ಈಗ ಅಯೋಧ್ಯೆ ಯಾತ್ರೆಗೂ ಸಿದ್ಧತೆ ನಡೆಸಿದ್ದಾರೆ. ಮುಂದಿನ ತಿಂಗಳಿನಿಂದ ಆಯೋಧ್ಯೆಗೆ ತೆರಳಲು ಈಗಿನಿಂದಲೇ ಬುಕ್ಕಿಂಗ್ ಮಾಡುತ್ತಿದ್ದಾರೆ. ಕಾಶಿಯಾತ್ರೆ ಜೊತೆಗೆ ಆಯೋಧ್ಯೆಗೂ ಕರೆಕೊಂಡು ಹೋಗುವಂತೆ ಜನರು ಟ್ರಾವೆಲ್​ ಏಜೆನ್ಸಿಗಳಿಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಅಯೋಧ್ಯೆ ಯಾತ್ರೆಗಾಗಿ ಟ್ರಾವೆಲ್ಸ್ ಏನಿಜ್ಸಿಗಳಿಗೆ ನಿತ್ಯ ನೂರಕ್ಕೂ ಅಧಿಕ ಕರೆಗಳು ಬರುತ್ತಿವೆ.

ಇದನ್ನೂ ಓದಿ: ಕೊಳಲನೂದುತ ಮನೆಮನೆಗೆ ಬಂದ ಈ ಕಂದ; ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆ ವಿತರಿಸುತ್ತಿರುವ ಬಾಲಕ ವೈರಲ್​​

ಅಯೋಧ್ಯೆಗೆ ತೆರಳುವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮೇಕ್ ಮೈ ಟ್ರಿಪ್, ಯಾತ್ರಾ ಸೇರಿದಂತೆ ವಿವಿಧ ಏಜೆನ್ಸಿಗಳು ಹೊಸ ಹೊಸ ಪ್ಯಾಕೇಜ್​ಗಳನ್ನು ಘೋಷಿಸಿವೆ. ಮೇಕ್ ಮೈ ಟ್ರಿಪ್​ನಲ್ಲಿವೆ ಈಗಾಗಲೇ ಇವೆ 25ಕ್ಕೂ ಹೆಚ್ಚು ಅಯೋಧ್ಯೆ ಪ್ಯಾಕೇಜ್​ಗಳು. ಯಾತ್ರಾ ಸೇರಿದಂತೆ ವಿವಿಧ ಟ್ರಾವೆಲ್ಸ್ ಏಜೆನ್ಸಿಯಿಂದಲೂ ಅಯೋಧ್ಯೆ ಟೂರ್ ಪ್ಯಾಕೇಜ್ ಘೋಷಿಸಿವೆ.

ಇನ್ನು ಟ್ರಾವೆಲ್​ ಏಜೆನ್ಸಿ ಆಫೀಸ್​ಗೆ ಬಂದು ಬುಕ್ ಮಾಡುತ್ತಿರುವ ಸಂಖ್ಯೆ ಹೆಚ್ಚಳವಾಗಿದ್ದು, ಬೆಂಗಳೂರಿನ‌ ಪ್ರತಿ ಖಾಸಗಿ ಟ್ರಾವೆಲ್ಸ್​​​ಗಳಲ್ಲಿ 5-10 ಪ್ಯಾಕೇಜ್​ಗಳು ಅಡ್ವಾನ್ಸ್ ಬುಕ್ ಆಗಿವೆ. ಮುಂದಿನ ದಿನದಲ್ಲಿ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಲ್ಲಿ ಟ್ರಾವೆಲ್ಸ್ ಏಜೆನ್ಸಿಗಳು ಇವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ