ಬಾಗಲಕೋಟೆ ಅಲ್ಪಸಂಖ್ಯಾತ ಪತ್ತಿನ‌ ಸಹಕಾರಿ ಬ್ಯಾಂಕ್​ನಲ್ಲಿ 10 ಕೋಟಿ ಗೋಲ್‌ಮಾಲ್, ಏನಿದು ಅಕ್ರಮ

ಸಹಕಾರಿ ಸಂಘದ ನಿಯಮಾನುಸಾರ ಸಮೂಹ ರಚಿಸಿಕೊಂಡು ಸಾಲ ನೀಡಲು ಅವಕಾಶವಿಲ್ಲ. ಆದರೆ ಸಮೂಹ ರಚಿಸಿಕೊಂಡು 10 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಮೂರು ಸಮೂಹದಿಂದ ಇದುವರೆಗೂ ಸಾಲ ವಸೂಲಿ ಮಾಡಿಲ್ಲ. ಕೇವಲ ಬಡ್ಡಿ ಮಾತ್ರ ವಸೂಲಿ ಮಾಡಲಾಗಿದೆ. ಅಕ್ರಮ ಬಯಲಾಗಿದ್ದು ಅಲ್ಪಸಂಖ್ಯಾತ ಪತ್ತಿನ‌ ಸಹಕಾರಿ ಬ್ಯಾಂಕ್​ಗೆ ನೋಟಿಸ್ ನೀಡಲಾಗಿದೆ.

ಬಾಗಲಕೋಟೆ ಅಲ್ಪಸಂಖ್ಯಾತ ಪತ್ತಿನ‌ ಸಹಕಾರಿ ಬ್ಯಾಂಕ್​ನಲ್ಲಿ 10 ಕೋಟಿ ಗೋಲ್‌ಮಾಲ್, ಏನಿದು ಅಕ್ರಮ
ಬಾಗಲಕೋಟೆ ಸಹಕಾರಿ ಇಲಾಖೆ‌ ಉಪನಿಬಂಧಕ ಮಲ್ಲಿಕಾರ್ಜುನ ಪೂಜಾರ, ಅವ್ಯವಹಾರದ ಬಗ್ಗೆ ದೂರು ನೀಡಿದ್ದ ನಾಮದೇವ ಸಾಲಾಪುರ
Follow us
| Edited By: Ayesha Banu

Updated on: Nov 18, 2023 | 9:38 AM

ಬಾಗಲಕೋಟೆ, ನ.18: ಜಿಲ್ಲೆಯ ಅಲ್ಪಸಂಖ್ಯಾತ ಪತ್ತಿನ‌ ಸಹಕಾರಿ ಬ್ಯಾಂಕ್​ನಲ್ಲಿ 10 ಕೋಟಿಗೂ (10 crore Golmaal) ಅಧಿಕ ಸಾಲದಲ್ಲಿ ಗೋಲ್‌ಮಾಲ್ ನಡೆದಿದೆ. ಆಡಳಿತ ಮಂಡಳಿ, ಮ್ಯಾನೇಜರ್, ಸಿಇಒಗಳಿಂದ ಗೋಲ್ ಮಾಲ್ ನಡೆದಿದ್ದು ಬಾಗಲಕೋಟೆ ಸಾಮಾಜಿಕ ಕಾರ್ಯಕರ್ತ ನಾಮದೇವ ಸಾಲಾಪುರ ಎಂಬುವವರು ಲೋಕಾಯುಕ್ತರಿಗೆ ದೂರು ನೀಡಿದ ಬಳಿಕ ಈ ಅಕ್ರಮ ಬಯಲಾಗಿದೆ. ಸದ್ಯ ಇಡೀ ಅಕ್ರಮದ ಕುರಿತು ತನಿಖೆ ನಡೆಸಲಾಗಿದ್ದು ತನಿಖೆಯಲ್ಲಿ ಅಕ್ರಮ ಬಯಲಾಗಿದೆ. ಹೀಗಾಗಿ ಬ್ಯಾಂಕ್ ಆಡಳಿತ ಮಂಡಳಿಗೆ ನೊಟೀಸ್‌ ನೀಡಲಾಗಿದೆ.

ಇದೇ ವರ್ಷ ಜೂನ್ 27ರಂದು ನಾಮದೇವ ಸಾಲಾಪುರ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಬೆನ್ನಲ್ಲೆ ಬೆಂಗಳೂರು ಲೋಕಾಯುಕ್ತ ಕಚೇರಿಯಿಂದ ಬಾಗಲಕೋಟೆ ಸಹಕಾರ ಇಲಾಖೆ ಉಪನಿಬಂಧಕರಿಗೆ ತನಿಖೆ ನಡೆಸಲು ಸೂಚನೆ ನೀಡಲಾಗಿತ್ತು. ಸೂಚನೆ ಮೇರೆಗೆ ತನಿಖೆ ನಡೆಸಿದ್ದು ಅಕ್ರಮ ಬಯಲಾಗಿದೆ. ಸಹಕಾರಿ ಬ್ಯಾಂಕ್ ನಿಯಮ ಉಲ್ಲಂಘಿಸಿ ಕೋಟಿ ಕೋಟಿ ಹಣ ಸಾಲ ವಿತರಣೆ ಮಾಡಿರುವುದು ಪತ್ತೆಯಾಗಿದೆ. ಸಮೂಹ ರಚಿಸಿಕೊಂಡು ಒಂದು ಕುಟುಂಬದ 24 ಜನರು, ಇನ್ನೊಂದು ಕುಟುಂಬ ಸಮೂಹ ರಚಿಸಿಕೊಂಡು 15 ಜನರಿಗೆ ಹಾಗೂ ಮತ್ತೊಂದು ಕುಟುಂಬದ 3 ಜನರಿಗೆ ಸಾಲ ನೀಡಲಾಗಿದೆ. ಮೂರು ಪ್ರತ್ಯೇಕ ಕುಟುಂಬ ಸಮೂಹ ರಚಿಸಿಕೊಂಡು ಒಟ್ಟು 10 ಕೋಟಿ 66 ಲಕ್ಷ ಸಾಲ ಪಡೆದಿದ್ದಾರೆ. ಬಡ್ಡಿಯಲ್ಲೂ ಒಬ್ಬೊಬ್ಬರಿಗೆ ಮನಬಂದಂತೆ ಬಡ್ಡಿ ಫಿಕ್ಸ್ ಮಾಡಲಾಗಿದೆ. ಈ ಮೂಲಕ ಭಾರೀ ಅಕ್ರಮ ನಡೆದಿರುವುದು ಬಹಿರಂಗವಾಗಿದೆ.

ಬಡ್ಡಿಯಲ್ಲಿ ವ್ಯತ್ಯಸ

ಒಬ್ಬರಿಗೆ 14%, ಮತ್ತೊಬ್ಬರಿಗೆ 12%, ಇನ್ನೊಬ್ಬರಿಗೆ 16% ರಂತೆ ಬಡ್ಡಿ ವಿಧಿಸಿ ಬ್ಯಾಂಕ್​ನ ನಿಯಮ ಉಲ್ಲಂಘನೆ ಮಾಡಲಾಗಿದೆ. ಉಸ್ಮಾನ್ ಸಾಗರ ಎಂಬುವರ ಹೆಸರಿನಲ್ಲಿ ಸಮೂಹ ರಚಿಸಿಕೊಂಡು ಅವರ ಕುಟುಂಬ ಹಾಗೂ ಸಂಬಂಧಿಕರ ಹೆಸರಿನಲ್ಲಿ ಎರಡು ಆಸ್ತಿ ಮೇಲೆ 2018ರಲ್ಲಿ 5 ಕೋಟಿ 59 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಇದುವರೆಗೂ ಕೇವಲ ಬಡ್ಡಿ ಮಾತ್ರ ವಸೂಲಿ ಮಾಡಲಾಗಿದೆ. ತೌಫಿಕ್ ಪಾರ್ಥನಳ್ಳಿ ಹೆಸರಲ್ಲಿ ಕುಟುಂಬ ಹಾಗೂ ಸಂಬಂಧಿಕರ 15 ಜನರ ಸಮೂಹ ರಚಿಸಿಕೊಂಡು ಮೂರು ಜನರ ಆಸ್ತಿ ಮೇಲೆ 4 ಕೋಟಿ 7 ಲಕ್ಷ ಸಾಲ ವಿತರಿಸಲಾಗಿದೆ.

ಇದನ್ನೂ ಓದಿ: Karnataka Breaking Kannada News Live: ‘ಕಾಸಿಗಾಗಿ ಹುದ್ದೆ&ಕಾಂಗ್ರೆಸ್‌ ಹುಂಡಿ’ ಎಂಬ ಸಿನಿಮಾ ಮಾಡಿ -ಹೆಚ್​ಡಿಕೆ ಟ್ವೀಟ್ ದಾಳಿ

ರೇಣುಕಾ ತೇಲಿ ಹೆಸರಲ್ಲಿ ಸಮೂಹ ರಚಿಸಿಕೊಂಡು ಅವರ ಕುಟುಂಬದ 3 ಜನರಿಗೆ 1 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಸಹಕಾರಿ ಸಂಘದ ನಿಯಮಾನುಸಾರ ಒಬ್ಬರಿಗೆ ಕನಿಷ್ಟ 25 ಲಕ್ಷ ಸಾಲ ಮಾತ್ರ ನೀಡಬೇಕು. ಆದರೆ ಪಾರ್ತನಳ್ಳಿ ಮೌಲಾಸಾಬ್ ಅವರಿಗೆ 37 ಲಕ್ಷ 59 ಸಾವಿರ ಸಾಲ ನೀಡಲಾಗಿದೆ. ಸಹಕಾರಿ ಸಂಘದ ನಿಯಮಾನುಸಾರ ಸಮೂಹ ರಚಿಸಿಕೊಂಡು ಸಾಲ ನೀಡಲು ಅವಕಾಶವಿಲ್ಲ. ಆದರೆ ಸಮೂಹ ರಚಿಸಿಕೊಂಡು 10 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಮೂರು ಸಮೂಹದಿಂದ ಇದುವರೆಗೂ ಸಾಲ ವಸೂಲಿ ಮಾಡಿಲ್ಲ. ಕೇವಲ ಬಡ್ಡಿ ಮಾತ್ರ ವಸೂಲಿ ಮಾಡಲಾಗಿದೆ. ಸಂಘದ ಸದಸ್ಯರ ಸಂಖ್ಯೆ 15% ರಷ್ಟು ಮೀರಬಾರದು. ಆದರೆ ಸದಸ್ಯರ ಸಂಖ್ಯೆ 84.54% ಮೀರಿದೆ.

ಕಾರಣ ಕೇಳಿ ನೋಟಿಸ್ ಜಾರಿ

ಒಟ್ಟು 9 ನ್ಯೂನ್ಯತೆ, ನಿಯಮ ಉಲ್ಲಂಘನೆ ಬಹಿರಂಗವಾಗಿದೆ. ಬ್ಯಾಂಕ್ ನಿಯಮ ಉಲ್ಲಂಘನೆ ಹಿನ್ನೆಲೆ ಬ್ಯಾಂಕ್ ಆಡಳಿತ ಮಂಡಲಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಬಾಗಲಕೋಟೆ ಸಹಕಾರಿ ಸಂಘದ ಉಪ ನಿಬಂಧಕರಿಂದ ನೊಟೀಸ್ ಜಾರಿ ಮಾಡಲಾಗಿದೆ. ಬ್ಯಾಂಕ್ ಅಧ್ಯಕ್ಷ ಅಲ್ ಹಾಜಿ ದೊಡ್ಡಮನಿ, ಉಪಾಧ್ಯಕ್ಷ ಹೆಚ್ ಡಿ ಚೌಧರಿ, ಬ್ಯಾಂಕ್ ನಿರ್ದೇಶಕರಾದ ಆಯ್ ಎ ಮಮದಾಪೂರ, ಎ ಆರ್ ಭಾಗವಾನ್.ಎಮ್ ಎಮ್ ಭಾಗವಾನ್, ಅಮೀನಸಾಬ್ ಬೀಳಗಿ, ಗಿಡ್ಡುಸಾಬ್ ಮೇಲಿನಮನಿ, ರಸುಲ್ ಸಾಬ್ ಭಾಗವಾನ್. ಹೆಚ್ ಜಿ ಭಾಗವಾನ್, ಬ್ಯಾಂಕ್ ಮ್ಯಾನೇಜರ್ ಹೆಚ್ ಬಿ ಪಿಂಜಾರ್ ಅವರಿಗೆ ನವೆಂಬರ್ 3ರಂದು ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಮುಟ್ಟಿದ 15 ದಿನದೊಳಗೆ ಲಿಖಿತ ಹೇಳಿಕೆ ನೀಡುವಂತೆ ಸೂಚನೆ ನೀಡಲಾಗಿದೆ. ಬಹುತೇಕ ಬ್ಯಾಂಕ್ ಆಡಳಿತ ಮಂಡಲಿ ಸುಫರ್ ಸೀಡ್ ಮಾಡುವ ಸಾಧ್ಯತೆ ಇದೆ. ಸಣ್ಣಪುಟ್ಟ ವ್ಯಾಪಾರಿಗಳು,ಕೂಲಿಕಾರ್ಮಿಕರು ಹಣವಿಟ್ಟಿರುವ ಬ್ಯಾಂಕ್ ಇದಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ ಬಾಗಲಕೋಟೆ ಸಹಕಾರಿ ಇಲಾಖೆ‌ ಉಪನಿಬಂಧಕ ಮಲ್ಲಿಕಾರ್ಜುನ ಪೂಜಾರ, “ಸಹಕಾರಿ ಇಲಾಖೆ ನಿಯಮ ಗಾಳಿಗೆ ತೂರಿ 10 ಕೋಟಿಗೂ ಅಧಿಕ ಆಕ್ರಮ ಸಾಲ‌ ನೀಡಲಾಗಿದೆ. ಸಮೂಹ ರಚಿಸಿಕೊಂಡು ಸಾಲ ಕೊಡಲು ಬರೋದಿಲ್ಲ. ಆದರೆ ಮೂರ ಪ್ರತ್ಯೇಕ ಸಮೂಹ ರಚಿಸಿ ಕುಟುಂಬಸ್ಥರಿಗೆ ಸಾಲ ನೀಡಲಾಗಿದೆ. ಸಹಕಾರಿ ಸಂಘದ ರೂಲ್ಸ್ ಪ್ರಕಾರ ಒಬ್ಬರಿಗೆ ಗರಿಷ್ಟ 25 ಲಕ್ಷ ಸಾಲ ನೀಡಬೇಕು, ಆದರೆ ಇಲ್ಲಿ ಒಬ್ಬ ವ್ಯಕ್ತಿಗೆ 37 ಲಕ್ಷ 59 ಸಾವಿರ ಸಾಲ‌ ನೀಡಲಾಗಿದೆ. ಬಡ್ಡಿಯಲ್ಲಿ ವ್ಯತ್ಯಾಸಗಳಿವೆ. ಕೊಟ್ಟ ಸಾಲಕ್ಕೆ ಬಡ್ಡಿ ಮಾತ್ರ ವಸೂಲಿ ಮಾಡಿದ್ದಾರೆ. ಲೋಕಾಯುಕ್ತರ ನಿರ್ದೇಶನದ ಪ್ರಕಾರ ತನಿಖೆ ನಡೆಸಿದ್ದು ಈ ತರಹ ಆಕ್ರಮ ಕಂಡುಬಂದಿದೆ. ಬ್ಯಾಂಕ್ ಆಡಳಿತ ಮಂಡಳಿಗೆ ನೊಟೀಸ್‌ ನೀಡಿದ್ದು, ಶೀಘ್ರದಲ್ಲೇ ಈ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸಲಾಗುವುದು” ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ಚೆನ್ನೈ ಮನೆಯೊಂದರಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್
ಚೆನ್ನೈ ಮನೆಯೊಂದರಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್
‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’; ಸ್ನೇಹಿತ್​ ಬದಲಾಗೋದೇ ಇಲ್ಲ
‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’; ಸ್ನೇಹಿತ್​ ಬದಲಾಗೋದೇ ಇಲ್ಲ
ವಿನಯ್ ಮೇಲೆ ಸಂಗೀತಾ-ಕಾರ್ತಿಕ್ ‘ದಾಳಿ’: ಮುಂದೆ ಕಾದಿದೆ ಎಂದ ‘ಆನೆ’
ವಿನಯ್ ಮೇಲೆ ಸಂಗೀತಾ-ಕಾರ್ತಿಕ್ ‘ದಾಳಿ’: ಮುಂದೆ ಕಾದಿದೆ ಎಂದ ‘ಆನೆ’
ಸಿದ್ದರಾಮಯ್ಯ ಜೊತೆ ನಾವಿದ್ದೇವೆ ಅಂತ ಬಸನಗೌಡ ಯತ್ನಾಳ್ ಹೇಳಿದ್ದು ಯಾಕೆ?
ಸಿದ್ದರಾಮಯ್ಯ ಜೊತೆ ನಾವಿದ್ದೇವೆ ಅಂತ ಬಸನಗೌಡ ಯತ್ನಾಳ್ ಹೇಳಿದ್ದು ಯಾಕೆ?
ಮಗಳ ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಪತ್ನಿ ಜತೆ ಕುಣಿದ ಬಿ ಶ್ರೀರಾಮುಲು
ಮಗಳ ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಪತ್ನಿ ಜತೆ ಕುಣಿದ ಬಿ ಶ್ರೀರಾಮುಲು