AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕಳು ಕರುವಿಗೆ ಹಾಲುಣಿಸಿ ಮುದ್ದು ಮಾಡಿದ ಎಮ್ಮೆ; ಬಾಗಲಕೋಟೆಯಲ್ಲೊಂದು ಅಪರೂಪದ ಘಟನೆ

ಬಾಗಲಕೋಟೆಯ ತುಳಸಿಗೇರಿ ಗ್ರಾಮದ ರೈತ ಶ್ರೀಶೈಲ ಹೊಸಕೋಟಿ ಎಂಬುವರಿಗೆ ಸೇರಿದ ಎಮ್ಮೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಎಮ್ಮೆ ಅದೇ ಕೊಟ್ಟಿಗೆಯಲ್ಲಿರುವ ಆಕಳು ಕರುವಿಗೆ ತನ್ನ ಸ್ವಂತ ಕರುವಿನಂತೆ ಪ್ರೀತಿ ತೋರಿಸುತ್ತಿದ್ದು, ಹಾಲುಣಿಸಿ ಆರೈಕೆ ಮಾಡುತ್ತಿದೆ.

ಆಕಳು ಕರುವಿಗೆ ಹಾಲುಣಿಸಿ ಮುದ್ದು ಮಾಡಿದ ಎಮ್ಮೆ; ಬಾಗಲಕೋಟೆಯಲ್ಲೊಂದು ಅಪರೂಪದ ಘಟನೆ
ಆಕಳು ಕರುವಿಗೆ ಹಾಲುಣಿಸಿದ ಎಮ್ಮೆ
Skanda
| Edited By: |

Updated on: Apr 15, 2021 | 8:19 AM

Share

ಬಾಗಲಕೋಟೆ: ಪ್ರಾಣಿ ಪ್ರಪಂಚ ಅತ್ಯಂತ ಕುತೂಹಲಕಾರಿಯಾದದ್ದು. ಅವುಗಳಿಗೆ ನಮ್ಮಂತೆ ಮಾತು ಬಾರದಿದ್ದರೂ ಎಷ್ಟೋ ಸಂದರ್ಭಗಳಲ್ಲಿ ತಮ್ಮ ನಡವಳಿಕೆಯ ಮೂಲಕವೇ ಹೃದಯ ಗೆಲ್ಲುತ್ತವೆ. ಈ ತೆರನಾಗಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಚಿತ್ರ ವಿಚಾರಗಳು ನಮ್ಮ ಕಣ್ಣು, ಕಿವಿಗೆ ಬೀಳುತ್ತಲೇ ಇರುತ್ತವೆ. ಬೆಕ್ಕಿನ ಮರಿಯನ್ನು ತನ್ನ ಮರಿಯಂತೆಯೇ ಸಾಕುವ ನಾಯಿ, ನಾಯಿ ಮರಿಗಳಿಗೆ ಹಾಲುಣಿಸಿ ಹಸಿವು ನೀಗಿಸುವ ಆಕಳು, ಒಮ್ಮೊಮ್ಮೆ ತಮ್ಮ ಬೇಟೆಯನ್ನೂ ಕರುಣಾಮಯಿಗಳಂತೆ ನೋಡುವ ಹುಲಿ, ಚಿರತೆಗಳು.. ಹೀಗೆ ಕೆದಕಿದಷ್ಟೂ ವಿಸ್ಮಯ. ಇದೀಗ ಇಂಥದ್ದೇ ಒಂದು ಘಟನೆ ನಮ್ಮ ಕರ್ನಾಟಕದ ಬಾಗಲಕೋಟೆಯಲ್ಲಿಯೇ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಬಾಗಲಕೋಟೆಯ ತುಳಸಿಗೇರಿ ಗ್ರಾಮದ ರೈತ ಶ್ರೀಶೈಲ ಹೊಸಕೋಟಿ ಎಂಬುವರಿಗೆ ಸೇರಿದ ಎಮ್ಮೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಎಮ್ಮೆ ಅದೇ ಕೊಟ್ಟಿಗೆಯಲ್ಲಿರುವ ಆಕಳು ಕರುವಿಗೆ ತನ್ನ ಸ್ವಂತ ಕರುವಿನಂತೆ ಪ್ರೀತಿ ತೋರಿಸುತ್ತಿದ್ದು, ಹಾಲುಣಿಸಿ ಆರೈಕೆ ಮಾಡುತ್ತಿದೆ. ಮೊದಮೊದಲು ಎಲ್ಲೋ ಗೊತ್ತಿಲ್ಲದೇ ಹಾಲುಣಿಸಿರಬಹುದೆಂದು ಕೆಲವರು ಭಾವಿಸಿದ್ದರಾದರೂ ನಂತರ ಆ ಘಟನೆಯನ್ನು ಕಣ್ಣಾರೆ ಕಂಡಾಗ ಹುಬ್ಬೇರಿಸಿದ್ದಾರೆ.

A Buffalo feed milk to cow calf

ಎಮ್ಮೆಯ ಹಾಲು ಕುಡಿಯುತ್ತಿರುವ ಮುದ್ದಾದ ಆಕಳು ಕರು

ಸಾಧಾರಣವಾಗಿ ಎಮ್ಮೆ, ಆಕಳು ಯಾವುದೇ ಆದರೂ ತನ್ನ ಕರುವನ್ನು ಹೊರತುಪಡಿಸಿ ಬೇರೊಂದಕ್ಕೆ ಹಾಲು ನೀಡುವುದು ಅಪರೂಪ. ಅದರಲ್ಲೂ ಸಂಪೂರ್ಣ ಬೇರೆ ಬೇರೆ ಜಾತಿಗೆ ಸೇರಿದ ಆಕಳು ಹಾಗೂ ಎಮ್ಮೆ ನಡುವೆ ಇಂಥದ್ದೊಂದು ಬಾಂಧವ್ಯ ಹುಟ್ಟಿಕೊಳ್ಳುವುದು ತೀರಾ ವಿರಳ. ಆದ ಕಾರಣ ಶ್ರೀಶೈಲ ಅವರ ಮನೆಯ ಎಮ್ಮೆ ಆಕಳು ಕರುವಿಗೆ ಹಾಲುಣಿಸುತ್ತಿರುವ ವಿಡಿಯೋವನ್ನು ತೆಗೆದಿರುವ ಗ್ರಾಮಸ್ಥರು ಅವರೆಡರ ಮಧ್ಯೆ ಇರುವ ಪ್ರೀತಿ ಕಂಡು ಖುಷಿಪಟ್ಟಿದ್ದಾರೆ. ಎಮ್ಮೆಯ ಮಮತೆಯನ್ನು ಕೊಂಡಾಡಿದ್ದಾರೆ.

A Buffalo feed milk to cow calf

ತನ್ನ ಸ್ವಂತ ಕರುವಿನಂತೆ ಆಕಳು ಕರುವನ್ನು ಆರೈಕೆ ಮಾಡುತ್ತಿರುವ ಎಮ್ಮೆ

ಇದನ್ನೂ ಓದಿ: Viral Video: ಒಂದೇ ಕೈಯಲ್ಲಿ ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ಎತ್ತುವ ಈತನೇ ಕಲಿಯುಗದ ಭೀಮ! 

ಹಾಲು ಕದಿಯುವ ಬೆಕ್ಕಿಗೆ ಕಳ್ಳರ ಭಯ: ಗದಗ ಜಿಲ್ಲೆಯ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಕಳ್ಳತನದ ದೃಶ್ಯ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್