AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆಯ ಮತ್ತೊಂದು ಇಲಾಖೆಯಲ್ಲಿ ಭ್ರಷ್ಟಾಚಾರ; ಆಡಿಟ್ ರಿಪೋರ್ಟ್​ನಿಂದ ಹೊರಬಿತ್ತು ಕೋಟಿ ಕೋಟಿ ಗೋಲ್ಮಾಲ್

ಬಾಗಲಕೋಟೆ ಜಿಲ್ಲೆಯಲ್ಲಿ ಸಾಲು ಸಾಲಾಗಿ ಕೋಟ್ಯಾಂತರ ರೂಪಾಯಿ ಅಕ್ರಮಗಳು ಹೊರಬರುತ್ತಿವೆ. ಪ್ರವಾಸೋದ್ಯಮ ಇಲಾಖೆ, ಕಾರ್ಮಿಕ ಇಲಾಖೆ ಆಯ್ತು, ಈಗ ಜ್ಞಾನದ ಭಂಡಾರ ಗ್ರಂಥಾಲಯದಲ್ಲೂ ಕೋಟಿ ಕೋಟಿ ಅಕ್ರಮ ಬೆಳಕಿಗೆ ಬಂದಿದೆ. ಸಾಲು ಸಾಲು ಅಕ್ರಮಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಈಡಾಗಿವೆ.

ಬಾಗಲಕೋಟೆಯ ಮತ್ತೊಂದು ಇಲಾಖೆಯಲ್ಲಿ ಭ್ರಷ್ಟಾಚಾರ; ಆಡಿಟ್ ರಿಪೋರ್ಟ್​ನಿಂದ ಹೊರಬಿತ್ತು ಕೋಟಿ ಕೋಟಿ ಗೋಲ್ಮಾಲ್
ಬಾಗಲಕೋಟೆಯ ಸಾರ್ವಜನಿಕ ಜಿಲ್ಲಾ ಗ್ರಂಥಾಲಯದಲ್ಲೂ ಕೋಟಿ ಕೋಟಿ ಗೋಲ್ಮಾಲ್
ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 19, 2024 | 9:42 PM

Share

ಬಾಗಲಕೋಟೆ, ಜು.19: ಬಾಗಲಕೋಟೆ(Bagalakote)ಯಲ್ಲಿ ಪ್ರವಾಸೋದ್ಯಮ ಇಲಾಖೆ, ಕಾರ್ಮಿಕ‌ ಇಲಾಖೆಯಲ್ಲಿ ಕೋಟಿ ಕೋಟಿ ಅಕ್ರಮವಾಗಿದೆ. ಇದರ ಬೆನ್ನಲ್ಲೇ ಗ್ರಂಥಾಲಯ(Library)ದಲ್ಲೂ ಕೋಟ್ಯಾಂತರ ರೂ. ಅಕ್ರಮ ಹೊರಬಿದ್ದಿದೆ. 2020-21, 2021-22 ಎರಡು ವರ್ಷದ ಅಡಿಟ್‌ನಲ್ಲಿ, ಬುಕ್ ಖರೀದಿ, ಕರೆಂಟ್ ಬಿಲ್, ಫರ್ನಿಚರ್ ಕೆಲಸಕ್ಕೆ ಬಳಸಿದ 1 ಕೋಟಿ 61 ಲಕ್ಷ ರೂ.ಗೆ ಬಿಲ್ ಗಳನ್ನು ಕೊಟ್ಟಿಲ್ಲ. ಹಿಂದಿನ ಗ್ರಂಥಾಲಯ ಅಧಿಕಾರಿ ಈಗ ನಿವೃತ್ತಿ ಮೇಲಿರುವ ಎನ್.ಎಸ್. ರೆಬಿನಾಳ ಹಾನೂ ಇನ್ನೋರ್ವ ಅಧಿಕಾರಿ ಸುನೀಲ್ ಮುದುಗಲ್‌ಗೆ ಈ ಬಗ್ಗೆ ಈಗಿನ ಜಿಲ್ಲಾ ಗ್ರಂಥಾಲಯ ಅಧಿಕಾರಿ ಆಗಿರುವ ಹಾಜರಾ ನಸ್ರೀನ್ ನೋಟಿಸ್ ನೀಡಿದ್ದಾರೆ. ಪ್ರಸ್ತುತ ಅಧಿಕಾರಿ ನೋಟಿಸ್‌ಗೆ ಇಬ್ಬರು ಅಧಿಕಾರಿಗಳು ಉತ್ತರ ಕೊಡದೆ ಬೇಜವಾಬ್ದಾರಿ ತೋರಿದ್ದಾರೆ. ಈ ಬಗ್ಗೆ ಗ್ರಂಥಾಲಯ ಆಯುಕ್ತರಿಗೂ ವರದಿ ನೀಡಿದ್ದಾರೆ.

ಉತ್ತರ ಕೊಡದೆ ಬೇಜವಾಬ್ದಾರಿ ತೋರಿರುವ ಎನ್.ಎಸ್.ರೆಬಿನಾಳ, ಸುನಿಲ್ ಮುದಗಲ್ ವಿರುದ್ಧ ದೂರು ನೀಡುವ ಕುರಿತು ಹಾಜರಾ ಅವರು ಮೇಲಾಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಆಯುಕ್ತರ ನಿರ್ದೇಶನದಂತೆ ಮುಂದಿನ ಕ್ರಮ ಎಂದಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿದ ಜಿಲ್ಲಾಧಿಕಾರಿ ಕೆ ಎಮ್‌ ಜಾನಕಿ ಅವರು, ‘ಈ ಅಕ್ರಮದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೊಟೀಸ್ ಕೊಡಲಾಗಿದೆ. ಆದರೂ ಕೂಡ ಅಧಿಕಾರಿಗಳು ಉತ್ತರ ನೀಡಿಲ್ಲ. ಅವರ ಮೇಲೆ‌ ಕ್ರಮ ‌ಕೂಡ ಆಗಿಲ್ಲ ಎನ್ನೋದು ಕಂಡುಬಂದಿದೆ. ಗ್ರಂಥಾಲಯ ಅಧಿಕಾರಿಗಳ ಕರೆದು‌ ಮಾತಾಡಿದ್ದೇನೆ. ಅವರು ಹಿಂದಿನ ಅಧಿಕಾರಿಗಳಿಗೆ ನೊಟೀಸ್ ನೀಡಿದ್ದಾಗಿ ಹೇಳಿದ್ದಾರೆ. ಅದನ್ನು ಪರಿಶೀಲನೆ ಮಾಡಿ, ಯಾರು ಈ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಾರೆ. ಅವರ ಮೇಲೆ‌ ಕ್ರಮ‌ ಕೈಗೊಳ್ಳುವುದಕ್ಕಾಗಿ ನಾನು ಕೂಡ ಮಾನ್ಯ ಆಯುಕ್ತರಿಗೆ ಶಿಪಾರಸ್ಸು ಮಾಡಿ ಪತ್ರ ಬರೆಯೋದಕ್ಕೆ ಸೂಚನೆ ನೀಡಿದ್ದೇನೆ ಎಂದರು.

ಇದನ್ನೂ ಓದಿ:ವಿಜಯಪುರ: ಸರ್ಕಾರಿ ಶಾಲಾ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿ; ಬಿಇಒ ಅಮಾನತಿಗೆ ಆದೇಶಿಸಿದ ಎಂಬಿ ಪಾಟೀಲ್

ಇದನ್ನೂ ಓದಿ: ಇನ್ನು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ. ಹಿಂದಿನ ಅಧಿಕಾರಿಗಳಿಗೆ ಕೇವಲ ನೊಟೀಸ್ ಕೊಟ್ಟರೆ ಸಾಲದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ತಪ್ಪು ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು ಅಂತಿದ್ದಾರೆ. ಒಟ್ಟಿನಲ್ಲಿ ‌ಜಿಲ್ಲೆಯಲ್ಲಿ‌ ಸಾಲು ಸಾಲಾಗಿ ಅಕ್ರಮಗಳು ಬಯಲಾಗುತ್ತಿವೆ. ಸದ್ಯ ಇಷ್ಟು ಬಯಲಾಗಿದ್ದು, ಇನ್ನು ಎಷ್ಟು ಇಲಾಖೆಯಲ್ಲಿ ಅಕ್ರಮ ನಡೆದಿದೆಯೊ ಕಾದುನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್