AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿಯಲ್ಲಿ ಆರ್ಧಕ್ಕೇ ನಿಂತಿದೆ ಅತಿ ಎತ್ತರದ ಟವರ್ ಕ್ಲಾಕ್ ಕಾಮಗಾರಿ, ನಿರ್ವಹಣೆ ತೊಂದರೆ ನೆಪವೊಡ್ಡಿ ಎತ್ತರ ಮೊಟಕುಗೊಳಿಸಲು ಚಿಂತನೆ

ಬಳ್ಳಾರಿಯ ಕ್ಲಾಕ್ ಟವರ್ಗೆ ತನ್ನದೇ ಆದ ಇತಿಹಾಸವಿದೆ. ಹಾಗಾಗಿ ಅದರ ಪ್ರಸ್ತಾವಿತ ಎತ್ತರ ಮೊಟಕುಗೊಳಿಸದೆ, ಕಾಂಗ್ರೆಸ್ ಕಾಮಗಾರಿಯೆಂದು ಬಿಜೆಪಿಯವರು, ಬಿಜೆಪಿ ಕಾಮಗಾರಿಯೆಂದು ಕಾಂಗ್ರೆಸ್ ನವರು ನಿರ್ಲಕ್ಷ್ಯ ಮಾಡದೇ ಅರ್ಧಕ್ಕೆ ನಿಂತ ಟವರ್ ಪೂರ್ಣಗೊಳಿಸಿ ಎದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಳ್ಳಾರಿಯಲ್ಲಿ ಆರ್ಧಕ್ಕೇ ನಿಂತಿದೆ ಅತಿ ಎತ್ತರದ ಟವರ್ ಕ್ಲಾಕ್ ಕಾಮಗಾರಿ, ನಿರ್ವಹಣೆ ತೊಂದರೆ ನೆಪವೊಡ್ಡಿ ಎತ್ತರ ಮೊಟಕುಗೊಳಿಸಲು ಚಿಂತನೆ
ಬಳ್ಳಾರಿಯಲ್ಲಿ ಆರ್ಧಕ್ಕೇ ನಿಂತಿದೆ ಅತಿ ಎತ್ತರದ ಟವರ್ ಕ್ಲಾಕ್ ಕಾಮಗಾರಿ
ವಿನಾಯಕ ಬಡಿಗೇರ್​
| Updated By: ಸಾಧು ಶ್ರೀನಾಥ್​|

Updated on: Dec 02, 2023 | 3:29 PM

Share

ಅದು ಬಳ್ಳಾರಿಗೆ ಐಕಾನ್ ನಂತಿರೋ ವೃತ್ತ. ಅಲ್ಲಿ ದಶಕಗಳಿಂದಲೂ ಒಂದು ಟವರ್​ ಇತ್ತು. ಅದನ್ನು ಕೆಡವಿ ರಾಜ್ಯದಲ್ಲಿಯೇ ಅತಿ ಎತ್ತರದ ಟವರ್ ಕ್ಲಾಕ್ ನಿರ್ಮಾಣ ಮಾಡಬೇಕೆನ್ನುವ ಪ್ಲಾನ್ ಮಾಡಿ ಅಂದಿನ ಬಿಜೆಪಿ ಸರ್ಕಾರದಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಅರ್ಧ ಕಾಮಗಾರಿಗೆ ನಿಂತಿರೋ ಟವರ್ ನ ಎತ್ತರವನ್ನು ಕಡಿಮೆ ಮಾಡಬೇಕೆನ್ನುವ ಚಿಂತನೆ ನಡೆದಿದೆ. ಇದು ಆಡಳಿತಾರೂಢ ಮತ್ತು ವಿರೋಧ ಪಕ್ಷದ ನಾಯಕರ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಬಿಜೆಪಿ ಸರ್ಕಾರದ ಕಾಮಗಾರಿ ಪೂರ್ಣಗೊಳಿಸಲು ಹಾಲು ಕಾಂಗ್ರೆಸ್​ ಸರ್ಕಾರ ಮೀನಾಮೇಷ ಎಣಿಸುತ್ತಿದೆಯೇ? ತರಾತುರಿಯಲ್ಲಿ ಚುನಾವಣೆಗೂ ಕೆಲ ತಿಂಗಳ ಮುನ್ನ ಟವರ್ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಹೌದು, ಬಳ್ಳಾರಿ ನಗರದ ಹೃದಯ ಭಾಗದಲ್ಲಿರೋ ರಾಯಲ್ ವೃತ್ತದಲ್ಲಿ ಲೆಬೆನಾನ್ ದೇಶದ ಮಾದರಿಯಲ್ಲಿ 140 ಅಡಿ ಎತ್ತರದ ಟವರ್ ನಿರ್ಮಾಣ ಮಾಡುವುದಕ್ಕೆ ಬಿಜೆಪಿ ಸರ್ಕಾರದಲ್ಲಿ ಪ್ಲಾನ್ ಮಾಡಲಾಗಿತ್ತು.

7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರೋ ಈ ಟವರಿಗೆ ಹತ್ತು ಹಲವು ವಿಶೇಷಗಳಿವೆ. 7ನೇ ಮಹಡಿಯಲ್ಲಿ ವ್ಯೂ ಪಾಯಿಂಟ್ 8ನೇ ಮಹಡಿಯಲ್ಲಿ ಕ್ಲಾಕ್ ಮತ್ತು ಒಟ್ಟು ಹತ್ತು ಮಹಡಿ ಎತ್ತರದಲ್ಲಿ ನಿರ್ಮಿಸೋ ಮೂಲಕ ಬಳ್ಳಾರಿಗೆ ದೊಡ್ಡದೊಂದು ಐಕಾನ್ ಪಾಯಿಂಟ್ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಚುನಾವಣೆ ವೇಳೆ ನೀತಿ ಸಂಹಿತೆ ಹೆಸರಲ್ಲಿ, ಮತ್ತು ನಂತರ ಬೇಕಾದ ಮೆಟರಿಯಲ್ ಸಿಗಲಿಲ್ಲವೆಂದು ಕಾಮಗಾರಿಯನ್ನು ನಿಲ್ಲಿಸಲಾಗಿದೆ.

ಇದರ ಜೊತೆಗೆ ಇದೀಗ ತಾಂತ್ರಿಕ ತೊಂದರೆ ಮತ್ತು 140 ಅಡಿ ಎತ್ತರದಲ್ಲಿ ನಿರ್ಮಾಣ ಮಾಡಿದರೆ, ನಿರ್ವಹಣೆ ಮಾಡುವುದು ಕಷ್ಟವೆಂದು ಸದ್ಯ 80 ಅಡಿಯಷ್ಟು ನಿರ್ಮಾಣವಾಗಿರೋ ಟವರ್ ಕೆಲಸ 140 ಅಡಿಯ ಬದಲು 117 ಅಡಿಗೆ ನಿಲ್ಲಿಸಲು ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರೋ ಮಾಜಿ ಸಚಿವ ಶ್ರೀರಾಮುಲು ದ್ವೇಷದ ರಾಜಕೀಯ ಬಿಟ್ಟು ಅರ್ಧಕ್ಕೆ ನಿಂತಿರೋ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: ರಾಮುಲು ಆಸಕ್ತಿ ವಹಿಸಿ ರಾಯಲ್ ವೃತ್ತದಲ್ಲಿ ಆರಂಭಿಸಿದ್ದ ಲೆಬೆನಾನ್ ಕ್ಲಾಕ್ ಟವರ್ ನಿರ್ಮಾಣಕ್ಕೆ ಕಾಂಗ್ರೆಸ್​​ ಸರ್ಕಾರದಿಂದ ಬ್ರೇಕ್

ಬಳ್ಳಾರಿಯ ಕ್ಲಾಕ್ ಟವರ್ಗೆ ತನ್ನದೇ ಆದ ಇತಿಹಾಸವಿದೆ. ಸ್ವಾತ್ಯಂತ್ರ ಹೋರಾಟಗಾರ ಗಡಿಗಿ ಚೆನ್ನಪ್ಪ ಅವರ ಹೆಸರಲ್ಲಿ ದಶಕಗಳ ಹಿಂದೆಯೇ ಚಿಕ್ಕದೊಂದು ಕ್ಲಾಕ್ ಟವರ್ ನಿರ್ಮಾಣ ಮಾಡಲಾಗಿತ್ತು. ಅದನ್ನು 2009ರಲ್ಲಿ ಜನಾರ್ದನ ರೆಡ್ಡಿ ಕಾಲದಲ್ಲಿ ರಾತ್ರೋರಾತ್ರಿ ಒಡೆದು ಹಾಕೋ ಮೂಲಕ ಹೊಸದು ಮಾಡುತ್ತೇವೆಂದು ಮಾಡಲೇ ಇಲ್ಲ. ನಂತರ 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ನಲವತ್ತು ಅಡಿಯ ಕ್ಲಾಕ್ ಟವರ್ ನಿರ್ಮಾಣ ಮಾಡಿದ್ರು. ಅದನ್ನು ಕೂಡ ಕಳೆದ ವರ್ಷ ಶ್ರೀರಾಮುಲು ಉಸ್ತುವಾರಿ ಸಚಿವರಿದ್ದಾಗ ರಾತ್ರೋರಾತ್ರಿ ಕೆಡವಿ 2022 ಆಗಸ್ಟ್ 15ರಂದು ಏಳು ಕೋಟಿ ವೆಚ್ಚದಲ್ಲಿ ಲೆಬನಾನ್ ಮಾದರಿಯಲ್ಲಿ 140 ಅಡಿ ಎತ್ತರದ ಟವರ್ ನಿರ್ಮಾಣಕ್ಕೆ ಚಾಲನೆ ನೀಡಿದ್ರು. ಆದರೆ ಅದು ಕೂಡ ಇದೀಗ ಅರ್ಧಕ್ಕೆ ನಿಂತಿದೆ. ಆದರೆ ಹಾಲಿ ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಮಾತ್ರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡೋದಿಲ್ಲ. ಕಾಮಗಾರಿ ಪೂರ್ಣಗೊಳಿಸುತ್ತೇವೆ ಎನ್ನುತ್ತಿದ್ದಾರೆ.

ಬಳ್ಳಾರಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ