AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರಿಗೆಲ್ಲ ಊಟ ಹಾಕಿಸಿ ಮಗನಂತಿರುವ ಕೋಣದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ರೈತ

ಬೆಳಗಾವಿಯ ಚಿಕ್ಕಲವಾಳ ಗ್ರಾಮದ ಸಂಜಯ್ ಸತಾಳೆ ತಮ್ಮ ಕೋಣ ಶಾಮ್‌ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಮಗನ ಮದುವೆಯಂತೆ ಮನೆ ಮುಂದೆ ಪೆಂಡಾಲ್ ಹಾಕಿ, ಕೇಕ್ ಕತ್ತರಿಸಿ, ಊರಿನ 300ಕ್ಕೂ ಹೆಚ್ಚು ಜನರಿಗೆ ಊಟ ಹಾಕಿಸಿದ್ದಾರೆ. ಪ್ರಾಣಿಗಳ ಮೇಲೆ ಸಂಜಯ್ ಅವರ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ಈ ಘಟನೆ ಎತ್ತಿ ತೋರಿಸುತ್ತದೆ, ಇದು ಇತರರಿಗೆ ಮಾದರಿಯಾಗಿದೆ.

ಊರಿಗೆಲ್ಲ ಊಟ ಹಾಕಿಸಿ ಮಗನಂತಿರುವ ಕೋಣದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ರೈತ
ಸಾಂದರ್ಭಿಕ ಚಿತ್ರ
Sahadev Mane
| Edited By: |

Updated on: Feb 07, 2026 | 9:57 PM

Share

ಬೆಳಗಾವಿ, ಫೆ.7: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕಲವಾಳ ಗ್ರಾಮದಲ್ಲಿ ಒಂದು ಅಪರೂಪದ ಘಟನೆಯೊಂದು ನಡೆದಿದೆ. ಮನೆಯ ಮುಂದೆ ಹಾಕಿರುವ ಪೆಂಡಾಲ್ , ಸಂಭ್ರಮ ನೋಡಿ ಮದುವೆ ಇರಬೇಕು ಎಂದುಕೊಳ್ಳಬೇಕು. ಅಷ್ಟೊಂದು ಸಡಗರ ಇತ್ತು ಈ ಮನೆಯಲ್ಲಿ. ಇಷ್ಟಕ್ಕೂ ಈ ಸಂಭ್ರಮಕ್ಕೆ ಕಾರಣವೇನು? ಎಂದು ಒಮ್ಮೆ ಯೋಚನೆ ಮಾಡಬಹುದು. ಇದಕ್ಕೆ ಅಸಲಿ ಕಾರಣ ಚಿಕ್ಕಲವಾಳ ಗ್ರಾಮದ ಸಂಜಯ್ ಸತಾಳೆ ಎಂಬುವವರ ಮನೆಯ ಕೋಣ. ಹೌದು ಅವರ ತನ್ನ ಕೋಣ ವರ್ಷ ಪೂರೈಸಿದಕ್ಕೆ ಈ ಸಂಭ್ರಮವನ್ನು ಮಾಡಿದ್ದಾರೆ. ಊರಿಗೆಲ್ಲಾ ಊಟ ಹಾಕಿ, ಕೋಣದ (buffalo birthday celebration) ಮುಂದೆ ಕೇಕ್ ಇಟ್ಟು ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. 39ವರ್ಷದ ಸಂಜಯ್ ತಮ್ಮದೇ ಜಮೀನಿನಲ್ಲಿ ಉಳುಮೆ ಮಾಡ್ತಾ, ಜಾನುವಾರುಗಳನ್ನ ಸಾಕುತ್ತಾ ಜೀವನ ನಡೆಸುತ್ತಿದ್ದಾರೆ.

ವರ್ಷದ ಹಿಂದೆ ತಂದಿದ್ದ ಕೋಣಕ್ಕೆ ಇಂದಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಅದ್ದೂರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಈ ಕೋಣಕ್ಕೆ ಶಾಮ್ ಎಂಬ ಹೆಸರು ಕೂಡ ಇಟ್ಟಿದ್ದಾರೆ. ಇದನ್ನು ಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಸಂಜಯ್ ಗೆ ಇನ್ನೂ ಮದುವೆಯಾಗಿಲ್ಲ ಆ ಕಾರಣಕ್ಕೆ ಕೋಣವನ್ನೇ ಮಗನ ರೀತಿಯಲ್ಲಿ ಸಾಕುತ್ತಿದ್ದಾರೆ. ಒಂದು ವೇಳೆ ಮದುವೆಯಾಗಿ ಮಗ ಇದ್ದಿದ್ರೆ ಹೇಗೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಸೆಲೆಬ್ರೇಷನ್​ ಮಾಡುತ್ತಿದ್ದರೂ, ಅದೇ ರೀತಿಯಲ್ಲಿ ಮಾಡಿದ್ದಾರೆ. ಇದೀಗ ಕೋಣದ ಹುಟ್ಟು ಹಬ್ಬ ಮಾಡಿ ಇಡೀ ಗ್ರಾಮದ ಗಮನ ಸೆಳೆದಿದ್ದಾರೆ.

ಇನ್ನೂ ಕೋಣಕ್ಕೆ ಒಂದು ವರ್ಷ ಪೂರೈಕೆ ಆಗ್ತಿದ್ದಂತೆ ಗ್ರಾಮದ ಎಲ್ಲರನ್ನೂ ಕರೆದು ಹುಟ್ಟು ಹಬ್ಬ ಆಚರಣೆಗೆ ಪ್ಲ್ಯಾನ್ ಮಾಡಿದ್ದ ಸಂಜಯ್ ಗೆ ಕುಟುಂಬಸ್ಥರು ಸಾಥ್ ನೀಡಿದ್ದಾರೆ. ಶಾಮ್​​ನ ಹುಟ್ಟು ಹಬ್ಬವನ್ನ ಮಗನ ಮದುವೆ ಮಾದರಿಯಲ್ಲಿ ಮಾಡಿದ್ದಾರೆ. ಮನೆ ಮುಂದೆ ಪೆಂಡಾಲ್ ಹಾಕಿಸಿ ಅಲಂಕರಿಸಿ, ಇಡೀ ಊರ ಜನರನ್ನ ಕರೆದಿದ್ದಾರೆ, ಹತ್ತು ಕೆಜಿ ಕೇಕ್ ತಂದು ಕೋಣದ ಕಡೆಯಿಂದ ಕಟ್ ಮಾಡಿಸಿದ್ದಾರೆ. ಹುಗ್ಗಿ, ಪಲ್ಯ, ಅನ್ನ ಸಾಂಬಾರ್ ಅಡುಗೆ ಮಾಡಿಸಿ ಮುನ್ನೂರಕ್ಕೂ ಅಧಿಕ ಜನರಿಗೆ ಊಟ ಹಾಕಿಸಿದ್ದಾರೆ. ಎಲ್ಲಿಯೂ ಹೆಣ್ಣು ಸಿಗದಿದ್ದಾಗ ನೊಂದುಕೊಳ್ಳದೇ ತನ್ನೊಟ್ಟಿಗೆ ನಿತ್ಯವೂ ಇರುವ ಪ್ರಾಣಿಗಳನ್ನ ತಮ್ಮ ಮಕ್ಕಳಂತೆ ನೋಡಿಕೊಂಡು ಸಂಜಯ್ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ

ಸದ್ಯ ಸಂಜಯ್ ಮಾಡಿರುವ ಹುಟ್ಟು ಹಬ್ಬ ಗ್ರಾಮೀಣ ಭಾಗದ ರೈತರು, ಯುವಕರಿಗೆ ಮಾದರಿಯಾಗಿದೆ. ಪ್ರಾಣಿಗಳನ್ನ ಪ್ರಾಣಿಗಳಂತೆ ನೋಡದೇ ಮಕ್ಕಳಂತೆ ನೋಡುವುದಷ್ಟೇ ಅಲ್ಲದೇ ಮಕ್ಕಳಿದಿದ್ರೇ ಎನೂ ಮಾಡ್ತಿದ್ರೂ ಅದನ್ನ ಮೂಕ ಪ್ರಾಣಿಗಳ ಮೇಲೆ ಮಾಡಿ ಸಂತಸ ಪಡ್ತಿರುವುದು ರೈತರ ಮುಗ್ದತೆ ಎತ್ತಿ ಹಿಡಿಯುತ್ತೆ. ಅದೇನೆ ಮೋಜು ಮಸ್ತಿ ಮಾಡಲು ಎನೆಲ್ಲಾ ಮಾಡೋರ ಮಧ್ಯೆ ಇಲ್ಲೊಬ್ಬ ಮೂಕ ಪ್ರಾಣಿಯದ್ದು ಹುಟ್ಟು ಹಬ್ಬ ಮಾಡಿ ಎಲ್ಲರಿಗೂ ಮಾದಿರಿಯಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೊಮಾರಿಯೊ ಶೆಫರ್ಡ್​ಗೆ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ
ರೊಮಾರಿಯೊ ಶೆಫರ್ಡ್​ಗೆ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ