AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಬಲ್ ಡೆಕ್ಕರ್ ಬಸ್‌ನಲ್ಲಿ ಬೆಂಗಳೂರು ದರ್ಶನ: ರಾಜಧಾನಿಯ ಪ್ರಮುಖ ತಾಣಗಳಿಗೆ ವಿಶೇಷ ಟೂರ್

ಬೆಂಗಳೂರು ಡಬಲ್ ಡೆಕ್ಕರ್ ಸಿಟಿ ಟೂರ್ ಮೂಲಕ ಸಿಲಿಕಾನ್ ಸಿಟಿಯ ಭವ್ಯ ಪರಂಪರೆ, ಆಡಳಿತ ಕೇಂದ್ರಗಳು, ಹಸಿರು ತಾಣಗಳು ಮತ್ತು ಕ್ರೀಡಾಂಗಣಗಳನ್ನು ಕಣ್ತುಂಬಿಕೊಳ್ಳಿ. ಮುಕ್ತ ಮೇಲ್ಚಾವಣಿ (Open-top) ಬಸ್‌ನ ಮೇಲಿನ ಡೆಕ್‌ನಿಂದ ಬೆಂಗಳೂರಿನ ವೈಭವವನ್ನು ಅನುಭವಿಸಿ. ವಿಧಾನ್ ಸೌಧ, ಕಬ್ಬನ್ ಪಾರ್ಕ್, ಯುಬಿ ಸಿಟಿಯಂತಹ ಪ್ರಮುಖ ಸ್ಥಳಗಳನ್ನು ಮಾರ್ಗದರ್ಶನ ಸಹಿತ ವೀಕ್ಷಿಸಿ. ಹಗಲು ಅಥವಾ ರಾತ್ರಿ ಪ್ರವಾಸ ಆಯ್ಕೆ ಮಾಡಿ ಸ್ಮರಣೀಯ ಅನುಭವ ಪಡೆಯಿರಿ.

ಡಬಲ್ ಡೆಕ್ಕರ್ ಬಸ್‌ನಲ್ಲಿ ಬೆಂಗಳೂರು ದರ್ಶನ: ರಾಜಧಾನಿಯ ಪ್ರಮುಖ ತಾಣಗಳಿಗೆ ವಿಶೇಷ ಟೂರ್
, ಬೆಂಗಳೂರು ಡಬಲ್ ಡೆಕ್ಕರ್ ಟೂರ್Image Credit source: kstdc
ಅಕ್ಷಯ್​ ಪಲ್ಲಮಜಲು​​
|

Updated on: Aug 31, 2026 | 9:19 AM

Share

ಬೆಂಗಳೂರು, ಆ.31: ಸಿಲಿಕಾನ್ ಸಿಟಿ ಬೆಂಗಳೂರಿನ ಭವ್ಯ ಪರಂಪರೆ, ಆಡಳಿತ ಕೇಂದ್ರಗಳು, ಹಸಿರು ತಾಣಗಳು ಮತ್ತು ಕ್ರೀಡಾಂಗಣಗಳನ್ನು ಕಣ್ಣುಂಬಿಕೊಳ್ಳಲು ಬಯಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗಾಗಿ ‘ಬೆಂಗಳೂರು ಡಬಲ್ ಡೆಕ್ಕರ್ ಸಿಟಿ ಟೂರ್’ (Bengaluru Double Decker City Tour) ಶೈಲಿಯ ಪ್ರವಾಸ ಸೌಲಭ್ಯ ಲಭ್ಯವಿದೆ. ಮುಕ್ತ ಮೇಲ್ಚಾವಣಿ (Open-top) ಹೊಂದಿರುವ ಡಬಲ್ ಡೆಕ್ಕರ್ ಬಸ್‌ನ ಮೇಲಿನ ಡೆಕ್‌ನಲ್ಲಿ ಕುಳಿತು ಬೆಂಗಳೂರು ನಗರದ ವೈಭವವನ್ನು ಕಣ್ಣುಂಬಿಕೊಳ್ಳಬಹುದಾಗಿದೆ.

ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣಗಳಾದ ರವೀಂದ್ರ ಕಲಾಕ್ಷೇತ್ರ, ಟೌನ್ ಹಾಲ್, ಸರ್ಕಾರಿ ವಸ್ತುಸಂಗ್ರಹಾಲಯ (Government Museum) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಸ್ತುಸಂಗ್ರಹಾಲಯಗಳನ್ನು ನೋಡಬಹುದು. ಹಾಗೂ ಆಡಳಿತಾತ್ಮಕ ಮತ್ತು ಐತಿಹಾಸಿಕ ಕೇಂದ್ರಗಳಾದ ಬಿಬಿಎಂಪಿ ಮಹಾನಗರ ಪಾಲಿಕೆ ಕಚೇರಿ, ಕರ್ನಾಟಕ ಹೈಕೋರ್ಟ್ (ಕೆಂಪು ಕಟ್ಟಡ), ವಿಧಾನ್ ಸೌಧ, ವಿಕಾಸ ಸೌಧ ಹಾಗೂ ಎಂ.ಎಸ್. ಬಿಲ್ಡಿಂಗ್​​​ಗಳನ್ನು ನೋಡಬಹುದು.

ಪ್ರಕೃತಿ ಮತ್ತು ಹಸಿರು ತಾಣಗಳಾದ ಕಬ್ಬನ್ ಪಾರ್ಕ್, ಕ್ವೀನ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆಯ ಹಸಿರು ಸೌಂದರ್ಯವನ್ನು ನೋಡಬಹುದು. ಆಧುನಿಕ ಹಾಗೂ ಕ್ರೀಡಾ ಸಂಕೀರ್ಣ ಕಂಟೀರವ ಕ್ರೀಡಾಂಗಣ, ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ಹಾಗೂ ಯುಬಿ ಸಿಟಿಗೂ ಭೇಟಿ ನೋಡಬಹುದು.

ಇದನ್ನೂ ಓದಿ: ಸೆಪ್ಟೆಂಬರ್‌ ತಿಂಗಳಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳಿವು

ಇನ್ನು ಡಬಲ್ ಡೆಕ್ಕರ್ ಸಿಟಿ ಟೂರ್ ಎಲ್ಲಿಂದ ಎಲ್ಲಿಗೆ?

ರವೇಂದ್ರ ಕಲಾಕ್ಷೇತ್ರದಿಂದ ಶುರುವಾಗಿ ಟೌನ್ ಹಾಲ್ ಅಲ್ಲಿಂದ ಕಾರ್ಪೊರೇಷನ್, ನಂತರ ಹಡ್ಸನ್ ವೃತ್ತ, ಕಸ್ತೂರಿಬಾ ರಸ್ತೆ , ಕಂಟೀರವ ಕ್ರೀಡಾಂಗಣ, ವಿಠಲ್ ಮಲ್ಯ ರಸ್ತೆ, ಯುಬಿ ಸಿಟಿ (UB City), ಸರ್ಕಾರಿ ವಸ್ತುಸಂಗ್ರಹಾಲಯ, ವಿಶ್ವೇಶ್ವರಯ್ಯ ಮ್ಯೂಸಿಯಂ, ಅನಿಲ್ ಕುಂಬ್ಳೆ ವೃತ್ತ, ಕಬ್ಬನ್ ಪಾರ್ಕ್, ಕ್ವೀನ್ಸ್ ರಸ್ತೆ, ಚಿನ್ನಸ್ವಾಮಿ ಕ್ರೀಡಾಂಗಣ, ಕಬ್ಬನ್ ರಸ್ತೆ, ಮಿನ್ಸ್ಕ್ ಸ್ಕ್ವೇರ್, ಪ್ರಧಾನ ಅಂಚೆ ಕಚೇರಿ (GPO), ಯುಟಿಲಿಟಿ ಬಿಲ್ಡಿಂಗ್, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಬಾರ್ ಕೌನ್ಸಿಲ್, ಹೈಕೋರ್ಟ್, ವಿಧಾನ್ ಸೌಧ, ವಿಕಾಸ ಸೌಧ, ಎಂ.ಎಸ್. ಬಿಲ್ಡಿಂಗ್, ಕೆ.ಆರ್. ವೃತ್ತ , ನೃಪತುಂಗ ರಸ್ತೆ, ಅಲ್ಲಿಂದ ಮರಳಿ ರವೀಂದ್ರ ಕಲಾಕ್ಷೇತ್ರ.

ಇನ್ನು ಈ ಪ್ರವಾಸದಲ್ಲಿ ಮಾರ್ಗದರ್ಶನ ಸಹಿತ ನಗರ ವೀಕ್ಷಣೆ ಮಾಡಬಹುದು. ವೃತ್ತಾಕಾರದ ಮಾರ್ಗಗಳನ್ನು ಕೂಡ ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಹಗಲು ಮತ್ತು ರಾತ್ರಿ ವೇಳೆಯ ಪ್ರವಾಸಗಳನ್ನು ಕೂಡ ಮಾಡಬಹುದು. ಉನ್ನತ ನೋಟದ (Panoramic views) ಅನುಭವಕ್ಕಾಗಿ ಮೇಲಿನ ಡೆಕ್‌ನಲ್ಲಿ ಕುಳಿತುಕೊಳ್ಳಿ ಹಾಗೂ ವಿಧಾನ್ ಸೌಧ, ಕಬ್ಬನ್ ಪಾರ್ಕ್, ಯುಬಿ ಸಿಟಿ ಬಳಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಿ ಎಂಬ ಸಲಹೆಯನ್ನು ಕೂಡ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನೀಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್
ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್
ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
ಇಂದು ಹೇರಂಭ ಸಂಕಷ್ಟ ಚತುರ್ಥಿ; ಸಿಂಹವಾಹನಸ್ಥ ವಿನಾಯಕನ ಆರಾಧನೆಯ ದಿನ
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಪ್ರಕಾಶ್ ರಾಜ್​​​ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 13 ಸುದ್ದಿಗೋಷ್ಠಿ ಲೈವ್
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಬಗ್ಗೆ ಪುಷ್ಪ ಮಾತು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು