AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ನಡುವೆಯೇ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಜ್ಜು!

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ಕೌಂಟ್​ಡೌನ್ ಶುರುವಾಗಿದೆ. ಆದ್ರೆ ಕೊರೊನಾ ಹಾವಳಿ ನಡುವೆ ಹಬ್ಬ ಮಾಡೋದೇ ಕಷ್ಟವಾಗಿದೆ. ಸಿಂಪಲ್ಲಾಗಿ ಲಕ್ಷ್ಮೀ ಪ್ರತಿಷ್ಟಾಪನೆ ಮಾಡ್ತೀವಿ ಅನ್ನೋರಿಗೆ ಬೆಲೆ ಏರಿಕೆಯ ಶಾಕ್ ತಟ್ಟಿದೆ. ಹಬ್ಬದ ತಯಾರಿಯಲ್ಲಿರೋ ಸಿಟಿಮಂದಿಗೆ ಡಬಲ್ ರೇಟ್​ಗೆ ಹೂ ಹಣ್ಣು ಖರೀದಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಬೆಂಗಳೂರಲ್ಲಿ ಖರೀದಿಯ ಭರಾಟೆ ಜೋರು! ಬೆಂಗಳೂರಲ್ಲಿ ಕೊರೊನಾ ಅಬ್ಬರ ಊಹೆಗೂ ನಿಲುಕುತ್ತಿಲ್ಲ. ಹೆಮ್ಮಾರಿ ಅಟ್ಟಹಾಸದ ನಡುವೆಯೂ ಸಿಟಿ ಮಂದಿ ವರಮಹಾಲಕ್ಷ್ಮೀ ಹಬ್ಬ ಮಾಡೋಕೆ ರೆಡಿಯಾಗಿದ್ದಾರೆ. ಹೀಗಾಗಿ ನಿನ್ನೆಯಿಂದಲೇ ಖರೀದಿ ಭರಾಟೆ ಜೋರಾಗಿದೆ. ಗಾಂಧಿ […]

ಕೊರೊನಾ ನಡುವೆಯೇ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಜ್ಜು!
ಆಯೇಷಾ ಬಾನು
| Edited By: |

Updated on:Jul 30, 2020 | 12:48 PM

Share

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ಕೌಂಟ್​ಡೌನ್ ಶುರುವಾಗಿದೆ. ಆದ್ರೆ ಕೊರೊನಾ ಹಾವಳಿ ನಡುವೆ ಹಬ್ಬ ಮಾಡೋದೇ ಕಷ್ಟವಾಗಿದೆ. ಸಿಂಪಲ್ಲಾಗಿ ಲಕ್ಷ್ಮೀ ಪ್ರತಿಷ್ಟಾಪನೆ ಮಾಡ್ತೀವಿ ಅನ್ನೋರಿಗೆ ಬೆಲೆ ಏರಿಕೆಯ ಶಾಕ್ ತಟ್ಟಿದೆ. ಹಬ್ಬದ ತಯಾರಿಯಲ್ಲಿರೋ ಸಿಟಿಮಂದಿಗೆ ಡಬಲ್ ರೇಟ್​ಗೆ ಹೂ ಹಣ್ಣು ಖರೀದಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಬೆಂಗಳೂರಲ್ಲಿ ಖರೀದಿಯ ಭರಾಟೆ ಜೋರು! ಬೆಂಗಳೂರಲ್ಲಿ ಕೊರೊನಾ ಅಬ್ಬರ ಊಹೆಗೂ ನಿಲುಕುತ್ತಿಲ್ಲ. ಹೆಮ್ಮಾರಿ ಅಟ್ಟಹಾಸದ ನಡುವೆಯೂ ಸಿಟಿ ಮಂದಿ ವರಮಹಾಲಕ್ಷ್ಮೀ ಹಬ್ಬ ಮಾಡೋಕೆ ರೆಡಿಯಾಗಿದ್ದಾರೆ. ಹೀಗಾಗಿ ನಿನ್ನೆಯಿಂದಲೇ ಖರೀದಿ ಭರಾಟೆ ಜೋರಾಗಿದೆ. ಗಾಂಧಿ ಬಜಾರ್​ನಲ್ಲಂತೂ ಕಲರ್ ಕಲರ್ ಹೂವಿನ ಹಾರಗಳು, ವೆರೈಟಿ ವೆರೈಟಿ ಹಣ್ಣುಗಳು ಲಕ್ಷ್ಮೀಯನ್ನ ಅಲಂಕರಿಸೋಕೆ ಕಾತರದಿಂದ ಕಾಯ್ತಿವೆ.

ಆದ್ರೆ ರೇಟ್ ಕೇಳಿದ್ರೆನೇ ತಲೆ ತಿರುಗ್ತಿದೆ. ಕೊರೊನಾ ಭೀತಿಯಿಂದ ಹೂ ಹಣ್ಣಿನ ರಫ್ತಿನಲ್ಲಿ ಇಳಿಕೆಯಾಗಿದೆ. ರೈತರು ನೇರವಾಗಿ ಮಾರ್ಕೆಟ್​ಗೆ ಬಂದು ವ್ಯಾಪಾರ ಮಾಡೋದನ್ನ ನಿಲ್ಲಿಸಿದ್ದಾರೆ. ಅದ್ರಲ್ಲೂ ಕೆ.ಆರ್ ಮಾರ್ಕೆಟ್ ಬಂದ್ ಆಗಿದ್ದು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಹೂ ಹಣ್ಣಿನ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ.

ಹೂ/ಹಣ್ಣಿನದರ(ಕೆಜಿಗೆ) ಒಂದು ಕೆಜಿ ಮಲ್ಲಿಗೆ ಹೂವಿನ ರೇಟ್ 600 ರೂಪಾಯಿಯಾದ್ರೆ, ಕನಕಾಂಬರ 3 ಸಾವಿರ ಇದೆ. ಕೆಜಿ ಸೇವಂತಿಗೆ 300 ರೂಪಾಯಿಗೆ ಸಿಕ್ತಿದ್ರೆ. ಬಿಡಿ ಹೂವಿನ ಬೆಲೆ 350ರಿಂದ 400 ರೂಪಾಯಿಯಿದೆ. ಲಕ್ಷ್ಮೀಗೆ ಪ್ರಿಯವಾದ ತಾವರೆ ಹೂವು ಒಂದಕ್ಕೆ 50 ರೂಪಾಯಿ ಇದೆ. ಅದೇ ರೀತಿ ಹಣ್ಣುಗಳ ಬೆಲೆ ನೋಡೋದಾದ್ರೆ, ಕೆಜಿ ಌಪಲ್ ದರ 260 ರೂಪಾಯಿಯಿದ್ರೆ, ದಾಳಿಂಬೆ 160 ರೂಪಾಯಿಗೆ ಸಿಕ್ತಿದೆ. ಜೊತೆಗೆ ಸಪೋಟ/ದ್ರಾಕ್ಷಿ ರೇಟ್ ಕೆಜಿಗೆ 100 ರೂಪಾಯಿಯಾಗಿದೆ.

ಒಟ್ನಲ್ಲಿ ಕೊರೊನಾ ರಣಕೇಕೆ ನಡುವೆ ಸಿಂಪಲ್ಲಾಗಿ ಹಬ್ಬ ಮಾಡಿ ಫ್ಯಾಮಿಲಿ ಜೊತೆ ಖುಷಿಯಾಗಿರಿ. ಆದ್ರೆ ಖುಷಿಯಲ್ಲಿ ಮಾಸ್ಕ್ ಧರಿಸೋದು, ದೈಹಿಕ ಅಂತರ ಕಾಪಾಡೋದು ಮಾತ್ರ ಮರೀಬೇಡಿ.

Published On - 6:41 am, Thu, 30 July 20

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ