AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾವೇಶ ಜನಸ್ತೋಮದ ಮಧ್ಯೆ ಎಡವಟ್ಟು! ಅಮ್ಮನ ಕಳೆದುಕೊಂಡು ಕಣ್ಣೀರು ಹಾಕ್ತಿರುವ ಪುಟ್ಟ ಬಾಲಕ ಮನ್ವಂತ್!

ಸಮಾವೇಶದ ಜನಸ್ತೋಮದಲ್ಲಿ ಅಮ್ಮನ ಕಳೆದುಕೊಂಡು ಕಣ್ಣೀರುಹಾಕಿ ಕಾಯ್ತಿರೋ ಮನ್ವಂತ್, ರಾಧಾ ಮತ್ತು ವೀರಜ್ ದಂಪತಿಯ ಪುತ್ರ. ಚಿಕ್ಕಬಳ್ಳಾಪುರ ಮೂಲದ ಬಾಲಕ ಮನ್ವಂತ್ ವಯಸ್ಸು ಇನ್ನೂ 7 ವರ್ಷ.

ಸಮಾವೇಶ ಜನಸ್ತೋಮದ ಮಧ್ಯೆ ಎಡವಟ್ಟು! ಅಮ್ಮನ ಕಳೆದುಕೊಂಡು ಕಣ್ಣೀರು ಹಾಕ್ತಿರುವ ಪುಟ್ಟ ಬಾಲಕ ಮನ್ವಂತ್!
ಅಮ್ಮನ ಕಳೆದುಕೊಂಡು ಕಣ್ಣೀರು ಹಾಕ್ತಿರುವ ಪುಟ್ಟ ಬಾಲಕ ಮನ್ವಂತ್!
TV9 Web
| Edited By: |

Updated on:Sep 10, 2022 | 2:52 PM

Share

ದೊಡ್ಡಬಳ್ಳಾಪುರ: ಪಕ್ಕದ ತಾಲೂಕಿನಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಬೃಹತ್ ಸಮಾವೇಶ ನಡೆಯುತ್ತಿದೆ ಎಂದು ನೆರೆಯ ತಾಲೂದು ಚಿಕ್ಕಬಳ್ಳಾಪುರದ ದಂಪತಿ ತಮ್ಮ ಪುಟ್ಟ ಕಂದಮ್ಮನ್ನೂ ಕರೆದುಕೊಂಡು ಸಮಾವೇಶಕ್ಕೆ ಬಂದಿದ್ದಾರೆ. ಆದರೆ ಅಲ್ಲೊಂದು ಎಡವಟ್ಟು ನಡೆದಿದೆ. ಅದು ಹೇಗೋ ಆ ಜನಜಂಗುಳಿಯಲ್ಲಿ ಕಂದಮ್ಮ ಅಮ್ಮಅಪ್ಪನಿಂದ ದೂರವಾಗಿದೆ. ಇದೀಗ ಕಂದ ಅಮ್ಮನಿಗಾಗಿ ಹಂಬಲಿಸ್ತಿದೆ

ಸಮಾವೇಶದ ಜನಸ್ತೋಮದಲ್ಲಿ ಅಮ್ಮನ ಕಳೆದುಕೊಂಡು ಕಣ್ಣೀರುಹಾಕಿ ಕಾಯ್ತಿರೋ ಮನ್ವಂತ್, ರಾಧಾ ಮತ್ತು ವೀರಜ್ ದಂಪತಿಯ ಪುತ್ರ. ಚಿಕ್ಕಬಳ್ಳಾಪುರ ಮೂಲದ ಬಾಲಕ ಮನ್ವಂತ್ ವಯಸ್ಸು ಇನ್ನೂ 7 ವರ್ಷ. ಊಟದ ಕೌಂಟರ್ ಬಳಿ ಬಂದ ವೇಳೆ ಅಮ್ಮನಿಂದ ತಪ್ಪಿಸಿಕೊಂಡ ಬಾಲಕ ಮನ್ವಂತ್ ಕಣ್ಣೀರು ಹಾಕುತ್ತಾ ಕಾಯ್ತಿದಾನೆ.

ತಾಜಾ ಮಾಹಿತಿ ಪ್ರಕಾರ ಮಗುವನ್ನು ಅವರ ಊರಿನ ಮಹಿಳೆಯೊಬ್ಬರು ಜೋಪಾನವಾಗಿ ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ವರದಿ: ಜಗ್ಗಿನ್ ಮಾಲ್ತೇಶ್, ಟಿವಿ9

Published On - 2:32 pm, Sat, 10 September 22