AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ ಸಮೀಪ 2 ಎಕರೆ ಜಾಗ ಖರೀದಿಸಿ ತುಳಸಿ ಕೃಷಿ ಮಾಡಿದ ಬೆಂಗಳೂರಿನ ಭಕ್ತ; ಪ್ರಭು ಶ್ರೀರಾಮನಿಗೆ ಸಿದ್ಧವಾಗುತ್ತಿದೆ ವಿಶೇಷ ತುಳಸಿ ಮಾಲೆ

ಅಯೋಧ್ಯೆಯ ಪ್ರಭು ಶ್ರೀರಾಮನಿಗೆ ತುಳಸಿ ಸೇವೆ ಮಾಡಲು ಬೆಂಗಳೂರಿನ ಭಕ್ತರೊಬ್ಬರು ಅಯೋಧ್ಯೆಯಲ್ಲಿ 2 ಎಕರೆ ಜಾಗ ಖರೀದಿಸಿ ತುಳಸಿ ಬೆಳೆದಿದ್ದಾರೆ. ಇದೀಗ, ರಾಮ ಮಂದಿರ ಉದ್ಘಾಟನೆ ದಿನ ಸಮೀಪಿಸುತ್ತಿರುವ ಹಿನ್ನೆಲೆ ಶ್ರೀರಾಮನಿಗಾಗಿ ಬೆಳೆದ ತುಳಸಿಗಳಿಂದ ವಿಶೇಷ ಮಾಲೆ ಸಿದ್ಧಪಡಿಸಲಾಗಿತ್ತಿದ್ದು, ನಿನ್ನೆಯಿಂದ ನಿರಂತರ ತುಳಸಿ ಸೇವೆ ಮಾಡಲಾಗುತ್ತಿದೆ.

ಅಯೋಧ್ಯೆ ಸಮೀಪ 2 ಎಕರೆ ಜಾಗ ಖರೀದಿಸಿ ತುಳಸಿ ಕೃಷಿ ಮಾಡಿದ ಬೆಂಗಳೂರಿನ ಭಕ್ತ; ಪ್ರಭು ಶ್ರೀರಾಮನಿಗೆ ಸಿದ್ಧವಾಗುತ್ತಿದೆ ವಿಶೇಷ ತುಳಸಿ ಮಾಲೆ
ಶ್ರೀರಾಮನಿಗೆ ತುಳಸಿ ಸೇವೆ ಮಾಡಲು ಅಯೋಧ್ಯೆ ಸಮೀಪ 2 ಎಕರೆ ಜಾಗ ಖರೀದಿಸಿದ ಬೆಂಗಳೂರಿನ ಭಕ್ತ; ಸಿದ್ಧವಾಗುತ್ತಿದೆ ವಿಶೇಷ ತುಳಸಿ ಮಾಲೆ
Vinay Kashappanavar
| Updated By: Rakesh Nayak Manchi|

Updated on:Jan 18, 2024 | 12:56 PM

Share

ಬೆಂಗಳೂರು, ಜ.18: ಅಯೋಧ್ಯೆ ಶ್ರೀರಾಮ ಮಂದಿರ (Ayodhya Ram Mandir) ಉದ್ಘಾಟನೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಐದು ಶತಮಾನಗಳ ಕನಸು ಈಡೇರುತ್ತಿರುವ ಸನಿಹದಲ್ಲಿ ರಾಮ ಭಕ್ತರು ವಿವಿಧ ರೀತಿಯಲ್ಲಿ ಭಕ್ತಿಯನ್ನು ಅರ್ಪಿಸುತ್ತಿದ್ದಾರೆ. ಇದೀಗ ಬೆಂಗಳೂರು (Bengaluru) ನಗರದ ಭಕ್ತರೊಬ್ಬರು ಪ್ರಭು ಶ್ರೀರಾಮನಿಗೆ ತುಳಸಿ ಸೇವೆ ಮಾಡಲೆಂದೇ ಅಯೋಧ್ಯೆ ಸಮೀಪ ಎರಡು ಎಕರೆ ಜಾಗ ಖರೀದಿಸಿ ತುಳಸಿ ಬೆಳೆದಿದ್ದು, ನಿನ್ನೆಯಿಂದ ನಿರಂತರವಾಗಿ ತುಳಸಿ ಸೇವೆ ನಡೆಸುತ್ತಿದ್ದಾರೆ.

ಬೆಂಗಳೂರು ನಗರದ ಜಯನಗರದ ನಿವಾಸಿಯಾಗಿರುವ ರಾಮ ಭಕ್ತ ಡಾ. ಶಿವಕಜಮಾರ್ ಅವರು ಪ್ರಭು ಶ್ರೀರಾಮನಿಗೆ ತುಳಸಿ ಸೇವೆ ಮಾಡಲೆಂದೇ ಅಯೋಧ್ಯೆ ಸಮೀಪ 60 ಕಿಲೋಮೀಟರ್ ದೂರದಲ್ಲಿ 2 ಎಕರೆ ಜಾಗ ಖರೀದಿ ಮಾಡಿದ್ದಾರೆ. ಕಳೆದ ಸಪ್ಟೆಂಬರ್​ ತಿಂಗಳಲ್ಲಿ ಗುಜರಾತ್​ನ ತುಳಸಿ ವನದಿಂದ ಕೃಷ್ಣ ತುಳಸಿ ಬೀಜಗಳನ್ನು ತಂದು ನಾಟಿ ಮಾಡಲಾಗಿದೆ.

ಇದನ್ನೂ ಓದಿ: ಅಯೋಧ್ಯೆ, ಮಂಡ್ಯದಲ್ಲಿ ಒಂದೇ ದಿನ ರಾಮ ಮಂದಿರ ಉದ್ಘಾಟನೆ; ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ವಿಗ್ರಹವೇ ಪ್ರತಿಷ್ಠಾಪನೆ

ಸದ್ಯ, ತುಳಸಿ ಗಿಡಗಳಾಗಿ ಬೆಳೆದು ನಿಂತಿದಿದ್ದು, ಶ್ರೀರಾಮನಿಗಾಗಿ ತುಳಸಿ ಮಾಲೆ ಕಟ್ಟಲು ಬೆಂಗಳೂರಿನ ಮೂವರು ಯುವಕರನ್ನು ಕಳುಹಿಸಲಾಗಿದೆ. ವಿಮಾನದ ಮೂಲಕ ತೆರಳಿದ ಯುವಕರು ಅಯೋಧ್ಯೆ ತಲುಪಿದ್ದು, ಹೂವು ಕಟ್ಟುವ ಕಾರ್ಯ ಆರಂಭಿಸಿದ್ದಾರೆ. ಜನವರಿ 17 ರಿಂದ ನಿರಂತರ ತುಳಸಿ ಸೇವೆ ಮಾಡಲಾಗುತ್ತಿದ್ದು, ಜನವರಿ 22 ಕ್ಕೆ ರಾಮಲಲ್ಲಾನಿಗೆ ವಿಶೇಷ ತುಳಸಿ ಮಾಲೆ ಸಿದ್ಧಪಡಿಸಲಾಗುತ್ತಿದೆ.

ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Thu, 18 January 24

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ