AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Classist Nonsense: ಬೆಂಗಳೂರು ಹೌಸಿಂಗ್ ಸೊಸೈಟಿ ಸೇವಕಿಯರು ಸಾಮಾನ್ಯ ಪ್ರದೇಶಗಳನ್ನು ಬಳಸಬೇಡಿ, ಟ್ವಿಟರ್​​ನಲ್ಲಿ​​​ ವೈರಲ್​​ ಆಗುತ್ತಿದೆ ಅಸ್ಪೃಶ್ಯತೆ ಘಾಟು

ಮನೆಕೆಲಸ ಮಾಡುವವರು ಅಥವಾ ಕಾರ್ಮಿಕರು ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಬಾರದು ಮತ್ತು ಪಾರ್ಕ್, ಆಂಪಿಥಿಯೇಟರ್, ಗೆಜೆಬೋಸ್ ಪ್ರದೇಶಗಳನ್ನು ಬಳಸಬಾರದು ಎಂಬ ಒಂದು ಫೋಸ್ಟರ್ ಹರಿದಾಡುತ್ತಿದೆ.

Classist Nonsense: ಬೆಂಗಳೂರು ಹೌಸಿಂಗ್ ಸೊಸೈಟಿ ಸೇವಕಿಯರು ಸಾಮಾನ್ಯ ಪ್ರದೇಶಗಳನ್ನು ಬಳಸಬೇಡಿ, ಟ್ವಿಟರ್​​ನಲ್ಲಿ​​​ ವೈರಲ್​​ ಆಗುತ್ತಿದೆ ಅಸ್ಪೃಶ್ಯತೆ ಘಾಟು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 23, 2023 | 11:12 AM

ಬೆಂಗಳೂರು: ಇಡಿ ಜಗತ್ತು ಆಧುನಿಕತೆಯ ಕಡೆ ಹೋಗುತ್ತಿದೆ. ಅದರೂ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ ಎಂಬುದಕ್ಕೆ ಬೆಂಗಳೂರು ಒಂದು ದೊಡ್ಡ ಸಾಕ್ಷಿಯಾಗಿದೆ. ಅಯ್ಯೋ ಬೆಂಗಳೂರಿನಲ್ಲಿ ಅಸ್ಪೃಶ್ಯತೆಯ ಎಂದು ನೀವು ಒಂದು ಬಾರಿ ಅಚ್ಚರಿಪಡಬಹುದು, ಆದರೆ ಇದು ಸತ್ಯ, ಈ ಬಗ್ಗೆ ಒಂದು ಟ್ವಿಟರ್​​ ಪೋಸ್ಟ್​​​ ವೈರಲ್​​ ಆಗುತ್ತಿದೆ. ಮನೆಕೆಲಸ ಮಾಡುವವರು ಅಥವಾ ಕಾರ್ಮಿಕರು ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಬಾರದು ಮತ್ತು ಪಾರ್ಕ್, ಆಂಪಿಥಿಯೇಟರ್, ಗೆಜೆಬೋಸ್ ಪ್ರದೇಶಗಳನ್ನು ಬಳಸಬಾರದು ಎಂಬ ಒಂದು ಪೋಸ್ಟರ್ ಹರಿದಾಡುತ್ತಿದೆ.

ನಮ್ಮ ಸಂಪ್ರಾದಾಯಗಳಿಗೆ ಅಪಚಾರವಾಗುತ್ತದೆ. ಇದರಿಂದ ನಾವು ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆಂಗಳೂರಿನ ರೆಸಿಡೆನ್ಶಿಯಲ್ ಸೊಸೈಟಿಯೊಂದು ಬರೆದಿರುವ ಪೋಸ್ಟರ್​​ನ್ನು ಟ್ವೀಟ್ ಹಂಚಿಕೊಳ್ಳಲಾಗಿದೆ. ಕಾರ್ಮಿಕರು ಅಥವಾ ಮನೆಕೆಲಸ ಮಾಡುವವರು, ನಾವು ಬಳಸುವ ಪ್ರದೇಶಗಳನ್ನು ಬಿಟ್ಟು ಬದಲಿಗೆ ಪ್ರದೇಶಗಳನ್ನು ಬಳಸಬೇಕೆಂದು ಈ ಪೋಸ್ಟರ್​​ ಸೂಚಿಸುತ್ತದೆ. ಎಲ್ಲೆಡೆ ಇಂತಹ ಜನರು ಇರುವಾಗ ನಮ್ಮಂತಹ ನಿವಾಸಿಗಳು ಅನಾನುಕೂಲತೆಯನ್ನು ಅನುಭವಿಸುತ್ತೇವೆ ಮತ್ತು ನಮ್ಮ ಸುರಕ್ಷತೆಯು ಸಾಮಾನ್ಯ ಪ್ರದೇಶಗಳಲ್ಲಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ. ಈ ಪೋಸ್ಟರ್​​ ಹೀಗೆ ಹೇಳುತ್ತದೆ, ಅಡುಗೆಗಾರರು, ಬಡಗಿಗಳು, ಕೊಳಾಯಿಗಾರರು ನಮ್ಮ ಸಮಾಜದವರು ಅಥವಾ ಸಂಪ್ರದಾಯಸ್ಥ ಜನರರು ಬಳಸುವ ಆಸನಗಳಲ್ಲಿ ಕುಳಿತುಕೊಳ್ಳುತ್ತಾರೆ. ನಮ್ಮಲ್ಲಿ ಹೆಚ್ಚಿನವರು ಬಹುಶಃ ಈಗ ಈ ಆಸನಗಳ ಮೇಲೆ ಕುಳಿತುಕೊಳ್ಳುವುದನ್ನು ನಿಲ್ಲಿಸಿದ್ದಾರೆ.

ಇದನ್ನೂ ಓದಿ: ಕನಕದಾಸರ ತವರೂರಲ್ಲೇ ಅಸ್ಪೃಶ್ಯತೆ ಜೀವಂತ; ದೇವಸ್ಥಾನ ಪ್ರವೇಶಿಸಿದ ತಾಯಿ, ಮಗನ ಮೇಲೆ ಸವರ್ಣೀಯರಿಂದ ಹಲ್ಲೆ!

ಈ ಪೋಸ್ಟ್​​​​ಗೆ ಅನೇಕರು ಕಮೆಂಟ್​​ ಮಾಡಬಹುದು ಎಂದುಕೊಂಡಿದ್ದರು, ಏಕೆಂದರೆ ನಮ್ಮಂತೆ ಅವರು ಕೂಡ ಈ ಸಮಸ್ಯೆಗಳನ್ನು ಅನುಭವಿಸರಬಹುದು ಎಂಬ ಕಲ್ಪನೆ, ಆದರೆ ಇದು ತಪ್ಪು ಗ್ರಹಿಸಿಕೆ ಎಂಬುದನ್ನು ಕಮೆಂಟ್​​ನಲ್ಲಿ ತಿಳಿಸಿದ್ದಾರೆ. ಭದ್ರತೆಯ ಸೋಗಿನಲ್ಲಿ ಈ ರೀತಿಯ ಫೋಸ್ಟ್​​​​ಗಳನ್ನು ಹಾಕುತ್ತಾರೆ. ವಾಸ್ತವದಲ್ಲಿ ಅವು ಆಧಾರರಹಿತ ಎಂದು ಹೇಳಿದ್ದಾರೆ. ಕಡಿಮೆ ಆದಾಯದ ಗುಂಪಿನಿಂದ ಬಂದವರನ್ನು ಅಪರಾಧಿ ಅಥವಾ ಅಶುದ್ಧ ಎಂದು ನೋಡುತ್ತಾರೆ. ಆದರೆ ಇದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಅನೇಕರು ಕಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರ ಸವಲತ್ತು ಪಡೆದವರು ಅವರು ತಯಾರಿಸುವ ಆಹಾರವನ್ನು ತಿನ್ನಬಹುದು, ಅವರು ಸ್ವಚ್ಛಗೊಳಿಸುವ ಮನೆಯಲ್ಲಿ ವಾಸಿಸಬಹುದು, ಅವರ ಆರೈಕೆಯಲ್ಲಿ ತಮ್ಮ ಮಕ್ಕಳನ್ನು ಬಿಡುತ್ತಾರೆ, ಆದರೆ ಅವರು ನಮ್ಮ ಸಾಮಾನ್ಯ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ನಡೆಯಲು ಎಷ್ಟು ಧೈರ್ಯ ಮಾಡುತ್ತಾರೆ! ಭಾರತೀಯ ಸಮಾಜದ ವಿಶೇಷ ಸ್ತರಗಳು ವರ್ಗೀಕರಣ ಮತ್ತು ಜಾತೀಯತೆಯ ಮತ್ತೊಂದು ಉದಾಹರಣೆ ಇದು. ಈ ಬಗ್ಗೆ ಇನ್ನೊಬ್ಬ ವ್ಯಕ್ತಿ ಹೀಗೆ ಕಮೆಂಟ್​​ ಮಾಡಿದ್ದಾರೆ, ದಯವಿಟ್ಟು ಈ ರೀತಿ ಮಾಡಿದ ಸಮಾಜವನ್ನು ಹೆಸರಿಸಿ ಇದರಿಂದ ನಾವು ಅದನ್ನು ತಪ್ಪಿಸಲು ತಿಳಿಯುತ್ತೇವೆಯೇ? ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:36 am, Fri, 23 June 23

ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್