Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿ ಆಸ್ತಿ ತೆರಿಗೆ ಕಟ್ಟಲು ಮಾರ್ಚ್​ 31 ಗಡುವು: 3.49 ಲಕ್ಷ ಜನರ ಆಸ್ತಿ ತೆರಿಗೆ ಬಾಕಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2024-25ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. 6000 ಕೋಟಿ ರೂಪಾಯಿ ಗುರಿಯನ್ನು ಹೊಂದಿರುವ ಬಿಬಿಎಂಪಿ, 3.49 ಲಕ್ಷ ಜನರಿಂದ ತೆರಿಗೆ ಪಾವತಿಯಾಗದೆ 390 ಕೋಟಿ ರೂಪಾಯಿ ಬಾಕಿ ಉಳಿದಿದೆ. ಮಾರ್ಚ್ 31 ಕೊನೆಯ ದಿನಾಂಕವಾಗಿದ್ದು, ನಂತರ 100% ದಂಡ ವಿಧಿಸಲಾಗುವುದು. ಬಿಬಿಎಂಪಿಯ ವಿವಿಧ ವಲಯಗಳಲ್ಲಿನ ತೆರಿಗೆ ಸಂಗ್ರಹದ ಮಾಹಿತಿ ಇಲ್ಲಿದೆ.

ಬಿಬಿಎಂಪಿ ಆಸ್ತಿ ತೆರಿಗೆ ಕಟ್ಟಲು ಮಾರ್ಚ್​ 31 ಗಡುವು: 3.49 ಲಕ್ಷ ಜನರ ಆಸ್ತಿ ತೆರಿಗೆ ಬಾಕಿ
ಬಿಬಿಎಂಪಿ
Follow us
ವಿವೇಕ ಬಿರಾದಾರ
|

Updated on:Mar 23, 2025 | 1:55 PM

ಬೆಂಗಳೂರು, ಮಾರ್ಚ್​ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆ (Proparty Tax) ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬಿಬಿಎಂಪಿ ಇಲ್ಲಿಯವರೆಗೆ 4,566 ಕೋಟಿ ರೂ. ಸಂಗ್ರಹ ಮಾಡಿದೆ. ಪ್ರಸಕ್ತ ಹಣಕಾಸು ವರ್ಷ ಮುಗಿಯುವುದರ ಒಳಗಾಗಿ 6 ಸಾವಿರ ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 20.5 ಲಕ್ಷ ಜನರಲ್ಲಿ 3.49 ಲಕ್ಷ ಜನರು ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಅದರಲ್ಲಿ 1.73 ಲಕ್ಷ ಜನರು ದೀರ್ಘಕಾಲದ ಸುಸ್ತಿದಾರರು ಮತ್ತು 1.76 ಲಕ್ಷ ಜನರು ಪ್ರಸ್ತುತ ವರ್ಷದ ಸುಸ್ತಿದಾರರಿದ್ದು, ಒಟ್ಟು ಬಿಬಿಎಂಪಿ ಖಜಾನೆಗೆ 390 ಕೋಟಿ ರೂ. ಬರಬೇಕಿದೆ ಎಂದು ಕಂದಾಯ ಇಲಾಖೆ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.

ನೋಟಿಸ್‌ಗಳು, ಎಸ್‌ಎಂಎಸ್‌ಗಳು, ಐವಿಆರ್‌ಎಸ್ ಕರೆಗಳು, ವೈಯಕ್ತಿಕ ಕರೆಗಳು, ಲಗತ್ತು ಸೂಚನೆಗಳನ್ನು ನೀಡಿದ ಬಳಿಕವೂ ದೀರ್ಘಕಾಲದ ಸುಸ್ತಿದಾರರು ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಉದ್ದೇಶಪೂರ್ವಕ ಮತ್ತು ದೀರ್ಘಕಾಲದ ಸುಸ್ತಿದಾರರು ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿಯ ಪರಿಹಾರ ಯೋಜನೆಯಡಿ (ಒನ್ ಟೈಮ್ ಸೆಟಲ್​ಮೆಂಟ್) ಕೂಡ ಸದುಪಯೋಗಪಡಿಸಿಕೊಂಡಿಲ್ಲ. ಹಲವು ವರ್ಷಗಳಿಂದ ಅವರು ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ ಎಂದರು.

ಯಾವ್ಯಾವ ವಲಯದಲ್ಲಿ ಎಷ್ಟು ಸಂಗ್ರಹ?

  1. ಬೊಮ್ಮನಹಳ್ಳಿ ವಲಯ: 2,67,088 ಆಸ್ತಿ, 400.55 ಕೋಟಿ ರೂ. ತೆರಿಗೆ ಸಂಗ್ರಹ
  2. ದಾಸರಹಳ್ಳಿ ವಲಯ: 70,700 ಆಸ್ತಿ, 110.22 ಕೋಟಿ ರೂ. ತೆರಿಗೆ ಸಂಗ್ರಹ
  3. ಬಿಬಿಎಂಪಿ ಪೂರ್ವ ವಲಯ: 2,47,440 ಆಸ್ತಿ, 649.40 ಕೋಟಿ ರೂ. ತೆರಿಗೆ ಸಂಗ್ರಹ
  4. ಮಹದೇವಪುರ ವಲಯ: 3,26,747 ಆಸ್ತಿ, 928.56 ಕೋಟಿ ರೂ. ತೆರಿಗೆ ಸಂಗ್ರಹ
  5. ಆರ್​ಆರ್ ನಗರ ವಲಯ: 2,08,302 ಆಸ್ತಿ, 251.10 ಕೋಟಿ ರೂ. ತೆರಿಗೆ ಸಂಗ್ರಹ
  6. ಬಿಬಿಎಂಪಿ ದಕ್ಷಿಣ ವಲಯ: 2,27,270 ಆಸ್ತಿ, 565.62 ಕೋಟಿ ರೂ. ತೆರಿಗೆ ಸಂಗ್ರಹ
  7. ಬಿಬಿರಂಪಿ ಪಶ್ಚಿಮ ವಲಯ: 1,87,715 ಆಸ್ತಿ, 411.56 ಕೋಟಿ ರೂ. ತೆರಿಗೆ ಸಂಗ್ರಹ
  8. ಯಲಹಂಕ ವಲಯ: 17,08,801 ಆಸ್ತಿ, 357.17 ಕೋಟಿ ರೂ. ತೆರಿಗೆ

ಏಪ್ರಿಲ್​ 1 ರಿಂದ 100% ದಂಡ

ಮಾರ್ಚ್​ 31ರೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿಸದಿದ್ದರೆ ಡಬಲ್​ ಹಣ ದಂಡದ ರೂಪದಲ್ಲಿ ಪಾವತಿಸಬೇಕಿದೆ. ಹೌದು, ಮಾರ್ಚ್​ 31 ಆಸ್ತಿ ತೆರಿಗೆ ಪಾವತಿಗೆ ಕಡೆಯ ದಿನವಾಗಿದೆ. ಬಳಿಕ, ಆಸ್ತಿ ತೆರಿಗೆ ಎಷ್ಟು ಬಾಕಿ ಇದೆಯೋ ಅಷ್ಟೇ ದಂಡವನ್ನೂ ಆಸ್ತಿ ಮಾಲೀಕರು ಪಾವತಿಸಬೇಕಿದೆ. ಅಂದರೆ 100 ರೂ. ಆಸ್ತಿ ತೆರಿಗೆ ಬಾಕಿ ಇದ್ದರೆ, ಇದರ ಮೇಲೆ ಮತ್ತೆ 100 ರೂಪಾಯಿ ದಂಡ ಬೀಳಲಿದೆ. ಇದರ ಜೊತೆಗೆ ವಾರ್ಷಿಕ ಶೇ 15 ರಷ್ಟು ಬಡ್ಡಿ ದರವೂ ಇರಲಿದೆ.

ಇದನ್ನೂ ಓದಿ
Image
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
Image
ಬಿಬಿಎಂಪಿ ತೆರಿಗೆ ಬಾಕಿ: ವಿಧಾನಸೌಧ ಸೇರಿ 258 ಸರ್ಕಾರಿ ಕಚೇರಿಗಳಿಗೂ ನೋಟಿಸ್
Image
ಎ ಮತ್ತು ಬಿ ಖಾತಾ ಎಂದರೇನು? ಗುರುತಿಸುವುದು ಹೇಗೆ?
Image
ಆಸ್ತಿ ತೆರಿಗೆದಾರರಿಗೆ ಸಿಹಿಸುದ್ದಿ​: ಶೇಕಡಾ 5 ರಷ್ಟು ರಿಯಾಯಿತಿ

ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಬಿಬಿಎಂಪಿ ಆಸ್ತಿ ತೆರಿಗೆ, ಬೋರ್‌ವೆಲ್‌ ಮುಚ್ಚದಿದ್ದರೆ 1 ವರ್ಷ ಜೈಲು, ಬಿಲ್ ಪಾಸ್

ಆದರೆ ಇದು ಮಾರ್ಚ್ 31ಕ್ಕೆ ಕೊನೆಯಾಗಲಿದೆ. ನಂತರ ಶೇ 100 ರಷ್ಟು ದಂಡ ಹಾಗೂ ಶೇ 15 ರಷ್ಟುಬಡ್ಡಿ ಜೊತೆಗೆ ಆಸ್ತಿ ತೆರಿಗೆ ಪಾವತಿಸಬೇಕು.ಅಂದರೆ 1000 ರೂ ಆಸ್ತಿ ತೆರಿಗೆ ಇದ್ದರೆ, 2000 ರೂ. ಜೊತೆಗೆ 15% ಬಡ್ಡಿ ಕಟ್ಟಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:54 pm, Sun, 23 March 25

ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ