AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸಿಎಂ ಕೊಟ್ಟ ಡೆಡ್ ಲೈನ್ ಮುಗಿಯುವ ಹಂತ; ರಸ್ತೆಗುಂಡಿ ಮುಚ್ಚುವ ಕೆಲಸಕ್ಕೆ ಪಾಲಿಕೆಯಿಂದ ಮತ್ತಷ್ಟು ವೇಗ

ಸಿಕಾನ್ ಸಿಟಿಯ ರಸ್ತೆಗುಂಡಿಗಳ ಬಗ್ಗೆ ಟಿವಿ 9 ಅಭಿಯಾನದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಡೆಡ್ ಲೈನ್ ಮುಗಿಯೋಕೆ ಕೌಂಟ್ ಡೌನ್ ಶುರುವಾಗಿದೆ. ಡೆಡ್ ಲೈನ್ ಒಳಗೆ ಗುಂಡಿ ಮುಚ್ಚಲು ಫೀಲ್ಡ್ ಗಿಳಿದಿರೋ ಬಿಬಿಎಂಪಿ, ಸತತ 6 ನೇ ದಿನವೂ ಯಲಹಂಕ ವಲಯದಲ್ಲಿ ಗುಂಡಿ ಮುಚ್ಚಿವೆ. ಇತ್ತ ಡಿಕೆಶಿ ಡೆಡ್ ಲೈನ್ ಬಳಿಕ ಹಗಲು-ರಾತ್ರಿ ರೌಂಡ್ಸ್ ಹಾಕ್ತಿರೋ ಪಾಲಿಕೆ ಆಯುಕ್ತರು ನಿನ್ನೆ ಕೂಡ ಫೀಲ್ಡ್ ಗಿಳಿದು ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದ್ದಾರೆ.

ಡಿಸಿಎಂ ಕೊಟ್ಟ ಡೆಡ್ ಲೈನ್ ಮುಗಿಯುವ ಹಂತ; ರಸ್ತೆಗುಂಡಿ ಮುಚ್ಚುವ ಕೆಲಸಕ್ಕೆ ಪಾಲಿಕೆಯಿಂದ ಮತ್ತಷ್ಟು ವೇಗ
ರಸ್ತೆಗುಂಡಿ ಮುಚ್ಚುವ ಕೆಲಸಕ್ಕೆ ಪಾಲಿಕೆಯಿಂದ ಮತ್ತಷ್ಟು ವೇಗ
Follow us
ಶಾಂತಮೂರ್ತಿ
| Updated By: ಆಯೇಷಾ ಬಾನು

Updated on:Sep 15, 2024 | 8:44 AM

ಬೆಂಗಳೂರು, ಸೆ.15: ರಾಜಧಾನಿಯ ರಸ್ತೆಗುಂಡಿಗಳನ್ನ (Potholes) ಮುಚ್ಚುವ ಕೆಲಸ ಆರಂಭಿಸಿರೋ ಬಿಬಿಎಂಪಿ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar)ಕೊಟ್ಟಿದ್ದ ಡೆಡ್ ಲೈನ್ ಹತ್ತಿರವಾಗ್ತಿರೋ ಬೆನ್ನಲ್ಲೆ ಮತ್ತಷ್ಟು ಅಲರ್ಟ್ ಆಗಿದೆ. ಬೆಂಗಳೂರಿನ ರಸ್ತೆಗಳನ್ನ ಗುಂಡಿಮುಕ್ತ ಮಾಡದಿದ್ರೆ ಸಸ್ಪೆಂಡ್ ಮಾಡ್ತೀನಿ ಎಂದಿದ್ದ ಡಿಸಿಎಂ ಎಚ್ಚರಿಕೆಗೆ ಬೆಚ್ಚಿದ ಪಾಲಿಕೆ (BBMP) ಹಗಲು-ರಾತ್ರಿ ಎನ್ನದೇ ಗುಂಡಿ ಮುಚ್ಚುವ ಕೆಲಸ ಮಾಡ್ತಿದೆ. ಸದ್ಯ ಕಳೆದ ಐದು ದಿನಗಳಿಂದ ಗುಂಡಿ ಮುಚ್ಚುವ ಕೆಲಸ ಮಾಡ್ತಿರೋ ಪಾಲಿಕೆ ನಿನ್ನೆ ಯಲಹಂಕ ವಲಯದ ಸಹಕಾರನಗರ ಸುತ್ತಮುತ್ತ ರಸ್ತೈಗುಂಡಿಗಳಿಗೆ ತೇಪೆ ಹಚ್ಚಿದ್ರು. ವಲಯ ಆಯುಕ್ತರು, ಜಂಟಿ ಆಯುಕ್ತರು ಸೇರಿದಂತೆ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಗುಂಡಿ ಮುಚ್ಚಿಸಿದ್ರು.

ಇನ್ನು ಡಿಸಿಎಂ ಕೊಟ್ಟಿರೋ ಡೆಡ್ ಲೈನ್ ಗೆ ಇನ್ನೊಂದು ದಿನ ಬಾಕಿ ಇರೋ ಬೆನ್ನಲ್ಲೆ ಹಗಲು-ರಾತ್ರಿ ಸಿಟಿ ರೌಂಡ್ಸ್ ಹಾಕ್ತಿರೋ ಬಿಬಿಎಂಪಿ ಕಮಿಷನರ್, ಸಹಕಾರನಗರದಲ್ಲಿ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿದ್ರು. ಈ ವೇಳೆ ರಸ್ತೆಗುಂಡಿಗಳನ್ನ ಮುಚ್ಚುವ ಕೆಲಸ ಭರದಿಂದ ಸಾಗ್ತಿದೆ. ಭಾನುವಾರ ಇದ್ರೂ ರಜೆ ಇಲ್ಲದೇ ಗುಂಡಿ ಮುಚ್ಚುವ ಕೆಲಸ ಮಾಡ್ತಿದ್ದೇವೆ ಬಾಕಿ ಇರೋ ಗುಂಡಿಗಳನ್ನ ಕೂಡ ಮುಚ್ಚಿ ಗುಂಡಿಮುಕ್ತ ರಸ್ತೆ ಕೊಡ್ತೀವೆ ಎಂದರು.

ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಕಡಿಮೆಯಾದ ಮಳೆ, ಬಹುತೇಕ ಕಡೆ ಒಣಹವೆ

ಇತ್ತ ರಸ್ತೆಗುಂಡಿಗಳನ್ನ ಪರಿಶೀಲಿಸೋ ಜೊತೆಗೆ ಏರಿಯಾದ ಫುಟ್ ಪಾತ್, ಇತರೆ ರಸ್ತೆಗಳನ್ನೂ ಪರಿಶೀಲಿಸಿದ ತುಷಾರ್ ಗಿರಿನಾಥ್, ಗುಂಡಿಗಮನ ಆಪ್ ಅಲ್ಲದೇ ಎಲ್ಲೆಲ್ಲಿ ಗುಂಡಿ ಬಿದ್ದಿದೆ ಆ ರಸ್ತೆಗಳನ್ನ ಕೂಡ ಸರಿಪಡಿಸಬೇಕು ಅಂತಾ ಅಧಿಕಾರಿಗಳಿಗೆ ಸೂಚಿಸಿದ್ರು. ಇದೇ ವೇಳೆ ಹಾಟ್ ಮಿಕ್ಸ್ ಬಳಸಿ ಮುಚ್ಚಿದ್ದ ಗುಂಡಿಗಳು ಹಾಗೂ ಏರಿಯಾದ ರಸ್ತೆಗಳನ್ನ ಪರಿಶೀಲಿಸಿದ ಆಯುಕ್ತರು ರಸ್ತೆಗುಂಡಿ ಮುಚ್ಚುವ ಕಾರ್ಯ, ರಸ್ತೆಗಳ ಸ್ಥಿತಿಗತಿ ಪರಿಶೀಲಿಸಿದ್ರು.

ಒಟ್ಟಿನಲ್ಲಿ ಇಷ್ಟು ದಿನ ರಾಜಧಾನಿಯ ರಸ್ತೆಗುಂಡಿಗಳ ಬಗ್ಗೆ ಸೈಲೆಂಟ್ ಆಗಿದ್ದ ಬಿಬಿಎಂಪಿ, ಇದೀಗ ಡಿಸಿಎಂ ಡೆಡ್ ಲೈನ್ ಎಚ್ಚರಿಕೆಯಿಂದ ಹಗಲು ರಾತ್ರಿ ಎನ್ನದೇ ಗುಂಡಿಗಳ ಬಾಯಿ ಮುಚ್ಚಿಸೋಕೆ ಹೊರಟಿದೆ. ಸದ್ಯ ಡೆಡ್ ಲೈನ್ ಮುಗಿಯೋಕೆ ಕೌಂಟ್ ಡೌನ್ ಶುರುವಾಗಿದ್ದು, ಬಾಕಿ ಇರೋ ಗುಂಡಿಗಳಿಗೂ ಟಾರ್ ಭಾಗ್ಯ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:43 am, Sun, 15 September 24

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್