AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಎಪಿಎಸ್ ಕಾಲೇಜು ಅಧ್ಯಕ್ಷರಾಗಿದ್ದ ಟಿ.ವಿ ಮಾರುತಿ ನಿಧನ

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಟಿ.ವಿ. ಮಾರುತಿ ಅವರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ, ನಾಯಕರಾಗಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್, ರಾಜ್ಯಸಭಾ ಚುನಾವಣೆಗೂ ಸ್ಪರ್ಧಿಸಿದ್ದರು.‌

ಬೆಂಗಳೂರಿನ ಎಪಿಎಸ್ ಕಾಲೇಜು ಅಧ್ಯಕ್ಷರಾಗಿದ್ದ ಟಿ.ವಿ ಮಾರುತಿ ನಿಧನ
ಟಿ.ವಿ ಮಾರುತಿ
TV9 Web
| Edited By: |

Updated on:Jan 22, 2022 | 5:25 PM

Share

ಬೆಂಗಳೂರು: ಬೆಂಗಳೂರಿನ ಬಸವನಗುಡಿ ಹಾಗೂ ಸೋಮನಹಳ್ಳಿಯಲ್ಲಿರುವ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆ (APS College) ಅಧ್ಯಕ್ಷರಾಗಿದ್ದ ಟಿ.ವಿ. ಮಾರುತಿ‌ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಶಿಕ್ಷಣ, ಸಮಾಜಸೇವೆ, ರಾಜಕೀಯ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಟಿ.ವಿ. ಮಾರುತಿ ಸಕ್ರಿಯರಾಗಿದ್ದರು. ರೇಷ್ಮೆ ಉದ್ದಿಮೆದಾರರೂ ಆಗಿದ್ದ ಟಿ.ವಿ. ಮಾರುತಿ ಅವರು ಬೆಂಗಳೂರಿನ (Bengaluru) ಮೆಜೆಸ್ಟಿಕ್ ಬಳಿ ಇರುವ ಶಾಂತಲಾ ಸಿಲ್ಕ್ ಹೌಸ್ ಮಾಲೀಕರೂ ಕೂಡ ಹೌದು.

ಟಿ.ವಿ ಮಾರುತಿ ಅವರು ಬೆಂಗಳೂರಿನ ವಸಂತ ನಗರದಲ್ಲಿರುವ ಕುಂಚುಟಿಗ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾಗಿ ಗ್ರಾಮೀಣಾ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಉಚಿತ ಹಾಸ್ಟೆಲ್ ಸೌಲಭ್ಯ ಒದಗಿಸಿ ಅದನ್ನು ಅಧ್ಯಕ್ಷರಾಗಿ ಮುನ್ನಡೆಸಿದ್ದರು.‌ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಟಿ.ವಿ. ಮಾರುತಿ ಅವರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ, ನಾಯಕರಾಗಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್, ರಾಜ್ಯಸಭಾ ಚುನಾವಣೆಗೂ ಸ್ಪರ್ಧಿಸಿದ್ದರು.‌

ಟಿ.ವಿ. ಮಾರುತಿ ಅವರ ನಿಧನಕ್ಕೆ ಕುಂಚುಟಿಗ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಬಂಧು ಬಳಗ ಕಂಬನಿ ಮಿಡಿದಿದ್ದಾರೆ.‌

ಇದನ್ನೂ ಓದಿ: ಬೆಂಗಳೂರಿನ ಹೆಣ್ಣೂರು ಠಾಣೆ ಇನ್ಸ್​ಪೆಕ್ಟರ್ ವಿರುದ್ಧ ಮತ್ತೊಂದು ಗಂಭೀರ ಆರೋಪ; ದೂರು ನೀಡಲು ಕಮಿಷನರ್ ಕಚೇರಿಗೆ ಹೋದ ಮಹಿಳೆ

ಗೇಟ್ ವೇ ಆಫ್ ಬೆಂಗಳೂರಿನ ಫ್ಲೈಓವರ್ ದುರಸ್ತಿ ಕಾರ್ಯ ಇನ್ನೂ ಒಂದು ವಾರ ವಿಳಂಬ; ವಾಹನ ಸಂಚಾರಕ್ಕೆ ಸಮಸ್ಯೆ

Published On - 4:20 pm, Sat, 22 January 22