ಬೆಂಗಳೂರಲ್ಲಿ ಮನೆ ಬಾಡಿಗೆ ಬೇಕಾದರೇ ದ್ವಿತೀಯ ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಕಡ್ಡಾಯ, ಪೋಸ್ಟ್​​ ವೈರಲ್​​

ಬೆಂಗಳೂರಲ್ಲಿ ಓರ್ವ ಮನೆ ಮಾಲಿಕ, ಮನೆ ಬಾಡಿಗೆಗೆ ಬೇಕಾದರೇ ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ ಶೇ90 ರಷ್ಟು ಅಂಕ ಪಡೆದಿರಬೇಕು ಎಂಬ ನಿಯಮ ಹಾಕಿದ್ದಾರೆ.

ಬೆಂಗಳೂರಲ್ಲಿ ಮನೆ ಬಾಡಿಗೆ ಬೇಕಾದರೇ ದ್ವಿತೀಯ ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಕಡ್ಡಾಯ, ಪೋಸ್ಟ್​​ ವೈರಲ್​​
ಸಾಂದರ್ಭಿಕ ಚಿತ್ರ (ಎಡಚಿತ್ರ) ವೈರಲ್​ ಆದ ಪೋಸ್ಟ್​ (ಬಲಚಿತ್ರ)
Follow us
|

Updated on:Apr 28, 2023 | 3:28 PM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ (Bengaluru) ಮನೆ ಬಾಡಿಗೆಗೆ (House Rent) ಸಿಗುವುದು ಬಹಳ ಕಷ್ಟಕರ ಸಂಗತಿ. ಬೇರೆ ಬೇರೆ ಊರುಗಳಿಂದ ಬಂದು ನಗರದಲ್ಲಿ ವಾಸಿಸಲು ಬಯಸುವ ಜನರಿಗೆ ಬಾಡಿಗೆ ಮನೆ ಸಿಗುವುದು ದುರ್ಲಭವಾಗಿದೆ. To-Let ಅಂತ ಬೋರ್ಡ್​​​ ಕಂಡಮೇಲೆ ವಿಚಾರಿಸಲೆಂದು ಹೋದರೇ ಮನೆಯ ಮಾಲೀಕರು ಹಾಕುವ ಕಂಡಿಷನ್ಸ್ ಕೇಳಿದ್ರೆನೇ ಮೂರ್ಛೆ ಹೋಗುತ್ತದೆ. ಇತ್ತೀಚಿಗೆ ಮನೆ ಮಾಲೀಕರು ಕೇಳುವ ಡಾಕ್ಯುಮೆಂಟ್ಸ್​​ ಮತ್ತು ಪ್ರಶ್ನೆಗಳನ್ನು ಕೇಳಿಸಿಕೊಂಡರೇ ಜಾಬ್​ ಇಂಟರ್​​ವೀವ್​​ಗೆ​ ಬಂದಿದ್ದೀನಾ ಎಂದು ಅನಿಸದೆ ಇರದು. ಅದೇ ರೀತಿಯಾಗಿ ನಗರದಲ್ಲಿ ಓರ್ವ ಮನೆ ಮಾಲಿಕ, ಮನೆ ಬಾಡಿಗೆಗೆ ಬೇಕಾದರೇ ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ ಶೇ90 ರಷ್ಟು ಅಂಕ ಪಡೆದಿರಬೇಕು ಎಂಬ ನಿಯಮ ಹಾಕಿದ್ದಾರೆ. ​​

ಹೌದು ವಿಚಿತ್ರವೆನಿಸಿದರು ಇದು ಸತ್ಯ. ಈ ಕುರಿತಾದ ಪೋಸ್ಟ್​​​​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಈ ಕುರಿತಾಗಿ ಶುಭ್ ಎಂಬುವರು ಟ್ವೀಟ್​ ಮಾಡಿ ಮನೆ ಕೊಡಿಸುವ ಬ್ರೋಕರ್​​ನೊಂದಿಗೆ ನಡೆಸಿದ ವಾಟ್ಸಾಪ್​ ಚಾಟ್​ನ್ನು ಸ್ಕ್ರೀನ್​​​​ ಶಾಟ್​ ತೆಗೆದು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ಯಾಚುಲರ್ಸ್​ಗಳಿಗೆ ಬಾಡಿಗೆ ಮನೆ ಏಕೆ ಕೊಡಲ್ಲ ಗೊತ್ತಾ? ಟ್ವಿಟರ್​ನಲ್ಲಿ ಹರಿದಾಡುತ್ತಿರುವ ಫೋಟೋಗಳೇ ಹೇಳುತ್ತಿವೆ ಕಾರಣ

ವಾಟ್ಸಪ್​​ ಚಾಟ್​​ನಲ್ಲಿ ಮನೆ ಕೊಡಿಸುವ ಬ್ರೋಕರ್​​ ಹೇಳಿದ್ದಾರೆ, “ಲಿಂಕ್​ಡಿನ್​​ ಮತ್ತು ಟ್ವಿಟರ್​​ ಪ್ರೋಫೈಲ್​​ ಕಳಸಿ,    ಜೊತೆಗೆ ನಿಮ್ಮ ಕಂಪನಿ ಜಾಯನಿಂಗ್​ ಲೆಟರ್​​, ಅಂಕಪಟ್ಟಿ, ಮತ್ತು ಆಧಾರ್​ ಕಾರ್ಡ್​ ಅಥವಾ ಪ್ಯಾನ್​ ಕಾರ್ಡ್​​​​ ಕೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ 150 ರಿಂದ 300 ಪದಗಳಲ್ಲಿ ನಿಮ್ಮ ಬಗ್ಗೆ ಬರೆದು ಪತ್ರವನ್ನು ಕಳುಹಿಸಿ” ಎಂದು ಮನೆ ಮಾಲಿಕರು ಕಂಡೀಷನ್ಸ್​ ಹಾಕಿದ್ದಾರೆ ಎಂದು ಮನೆ ಪಡೆಯುವವರಿಗೆ ಬ್ರೋಕರ್​​ ಮೆಸೆಜ್​ ಮಾಡಿದ್ದಾರೆ.

ನಂತರ ಮನೆ ಬಾಡಿಗೆ ಪಡೆಯುವವರು ಸರಿ ಎಂದು ಎಲ್ಲ ಡಾಕ್ಯುಮೆಂಟ್ಸ್​​ ​ ಮತ್ತು ಪತ್ರವನ್ನು ಬ್ರೋಕರ್​​ಗೆ ಕಳಸಿದ್ದಾರೆ. ಆ ಕಡೆಯಿಂದ ಬ್ರೋಕರ್​​ನ ರಿಪ್ಲೈ ಬಂದಿದ್ದು, “ನೀವು ದ್ವಿತೀಯ ಪಿಯುಸಿಯಲ್ಲಿ ಶೇ75 ರಷ್ಟು ಮಾತ್ರ ಅಂಕ ಪಡೆದಿದ್ದೀರಿ, ನಾವು ಮನೆ ನೀಡಲು ಕನಿಷ್ಠ ಶೇ90 ರಷ್ಟು ಅಂಕ ಪಡೆಯಬೇಕು. ಹೀಗಾಗಿ ನಿಮಗೆ ಮನೆ ಬಾಡಿಗೆ ಕೊಡಲು ಆಗುವುದಿಲ್ಲ ಎಂದು ಮನೆ ಮಾಲಿಕ ರಿಜೆಕ್ಟ್​​ ಮಾಡಿದ್ದಾರೆ” ಎಂದು ಬ್ರೋಕರ್​ ಹೇಳಿದ್ದಾರೆ. ಇದರಿಂದ ಆಶ್ಚರ್ಯಗೊಂಡ ಮನೆ ಬಾಡಿಗೆ ಪಡೆಯವ ವ್ಯಕ್ತಿ ಟೂ ಫನ್ನಿ ಎಂದು ಮರು ಉತ್ತರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:18 pm, Fri, 28 April 23

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?