AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲೀಕ ಶೌಚಾಲಯಕ್ಕೆ ಹೋಗಿ ಬರುವುದರೊಳಗೆ ಬಂಗಾರದ ಅಂಗಡಿ ಕದ್ದ ಖದೀಮರು; ಹಾಡಹಗಲೇ ಕೃತ್ಯ

ಬೆಂಗಳೂರಿನ ಬನಶಂಕರಿಯ ಬಂಗಾರದ ಅಂಗಡಿಯಲ್ಲಿ ಹಾಡಹಗಲೇ ಭಾರಿ ದರೋಡೆ ನಡೆದಿದೆ. ಮಾಲೀಕ ಶೌಚಾಲಯಕ್ಕೆ ಹೋಗಿದ್ದ ಮೂರೇ ನಿಮಿಷದಲ್ಲಿ ಅಂಗಡಿಗೆ ನುಗ್ಗಿ ಸುಮಾರು 1.8 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ ನಗದನ್ನು ದೋಚಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಮಾಲೀಕ ಶೌಚಾಲಯಕ್ಕೆ ಹೋಗಿ ಬರುವುದರೊಳಗೆ ಬಂಗಾರದ ಅಂಗಡಿ ಕದ್ದ ಖದೀಮರು; ಹಾಡಹಗಲೇ ಕೃತ್ಯ
ಸಾಂದರ್ಭಿಕ ಚಿತ್ರImage Credit source: AI Image
ಪ್ರಸನ್ನ ಹೆಗಡೆ
|

Updated on:Apr 17, 2026 | 2:52 PM

Share

ಬೆಂಗಳೂರು, ಏಪ್ರಿಲ್​​ 17: ರಾಜ್ಯದಲ್ಲಿ ಜ್ಯುವೆಲರಿ ಶಾಪ್​​ಗಳ ದರೋಡೆ ಪ್ರಕರಣ ಮುಂದುವರಿದಿದ್ದು, ಬೆಂಗಳೂರಿನಲ್ಲಿ (Bengaluru) ಹಾಡ ಹಗಲೇ ಬಂಗಾರದ ಅಂಗಡಿಯನ್ನು ಖದೀಮರು ದೋಚಿರುವ ಘಟನೆ ನಡೆದಿದೆ. ಅಂಗಡಿಯ ಮಾಲೀಕ ಶೌಚಾಲಯಕ್ಕೆ ಹೋಗಿ ಬರುವ ಒಳಗೆ ಖದೀಮರು ಕನ್ನ ಹಾಕಿದ್ದು, ಬಂಗಾರ ಮತ್ತು ಬೆಳ್ಳಿ ಆಭರಣಗಳು ಸೇರಿ ನಗದನ್ನು ದೋಚಿ ಎಸ್ಕೇಪ್​​ ಆಗಿದ್ದಾರೆ. ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ಪ್ರಕರಣ ಬೆನ್ನುಹತ್ತಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಬನಶಂಕರಿಯ ಬಂಗಾರದ ಅಂಗಡಿಯೊಂದರ ಮಾಲಕರಾಗಿರುವ ಮೂಕಾಂಬಿಕಾ ನಗರ ನಿವಾಸಿ ಎನ್. ಮಂಜುನಾಥ್ (52) ಹತ್ತಿರದ ಅಂಗನವಾಡಿಯ ಶೌಚಾಲಯಕ್ಕೆ ತೆರಳಿದ್ದರು. ಮಧ್ಯಾಹ್ನ ಸುಮಾರು 3.22ಕ್ಕೆ ಅಂಗಡಿಯನ್ನು ತೆರೆದಿಟ್ಟು ಹೊರಗೆ ಹೋಗಿದ್ದ ಅವರು 3.25ಕ್ಕೆ ಅಂದರೆ ಕೇವಲ 3 ನಿನಿಷಗಳ ಒಳಗೆ ಹಿಂದಿರುಗಿದ್ದಾರೆ. ಆದರೆ ಅಷ್ಟರೊಳಗಾಗಿಯೇ ಖದೀಮರು ಅಂಗಡಿಗೆ ನುಗ್ಗಿದ್ದು ಬೆಲೆ ಬಾಳುವ ಆಭರಣ ಸೇರಿ, ಹಣವನ್ನು ದೋಚಿದ್ದಾರೆ. ಮಂಜುನಾಥ್​​ ಅವರು ಹಿಂದಿರುಗುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಅಂಗಡಿಗೆ ನುಗ್ಗಿ ಪ್ರದರ್ಶನಕ್ಕೆ ಇಡಲಾಗಿದ್ದ ಆಭರಣ ದೋಚುತ್ತಿರುವುದನ್ನು ಗಮನಿಸಿದ್ದಾರೆ. ಇದನ್ನು ನೋಡಿದ ಖದೀಮ ಕೂಡಲೇ ಅಂಗಡಿಯಿಂದ ಕಾಲ್ಕಿತ್ತಿದ್ದು, ಅದಾಗಲೇ ಬೈಕ್​​ನಲ್ಲಿ ಕಾಯುತ್ತಿದ್ದ ಇಬ್ಬರು ಸಹಚರರ ಜೊತೆ ಎಸ್ಕೇಪ್​​ ಆಗಿದ್ದಾನೆ. ಮಂಜುನಾಥ್​​ ಅವರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದರಾದರೂ ಅದು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: KSCA ಸದಸ್ಯನಿಂದಲೇ IPL ಬ್ಲಾಕ್ ಟಿಕೆಟ್ ದಂಧೆ! ಚಿನ್ನಸ್ವಾಮಿ ಸ್ಟೇಡಿಯಂ ಹೋಟೆಲ್ ಕ್ಯಾಪ್ಟನ್ ಜೊತೆ ಸೇರಿ ಕೃತ್ಯ

ಇನ್ನು ಕಳ್ಳತನವಾಗಿರುವ ವಸ್ತುಗಳಲ್ಲಿ ಸುಮಾರು 50 ಗ್ರಾಂ ತೂಕದ ಎರಡು ಪ್ಯಾಕೆಟ್ ಬೆಳ್ಳಿ ಸರಗಳು,  10 ಗ್ರಾಂ ತೂಕದ ಮೂರು ಕಾರ್ಡ್ ಚಿನ್ನದ ಮೂಗುತಿಗಳು ಹಾಗೂ 3,000 ನಗದು ಸೇರಿವೆ. ಇವುಗಳ ಒಟ್ಟು ಮೊತ್ತ ಸುಮಾರು 1.8 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದ್ದು, ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಏ.13ರಂದೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಬಿಎನ್‌ಎಸ್ ಸೆಕ್ಷನ್ 305 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮೂವರು ಆರೋಪಿಗಳ ಬಗ್ಗೆ ಸುಳಿವು ಪತ್ತೆಮಾಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಸ್ಕೂಟರ್ ನಂಬರನ್ನೂ ಪತ್ತೆ ಹಚ್ಚಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:50 pm, Fri, 17 April 26

Follow Us