AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆ ಬರೆದ ಬೆಂಗಳೂರು ಕೃಷಿ ಮೇಳ: ಒಂದೇ ದಿನ 7 ಲಕ್ಷ ಜನ ಭೇಟಿ

ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಲಕ್ಷಕ್ಕೂ ಹೆಚ್ಚು ಜನರು ಕೃಷಿ ಮೇಳದಲ್ಲಿ ಪಾಲ್ಗೊಂಡು ಸ್ಟಾಲ್​ಗಳನ್ನು ಕಣ್ತುಂಬಿಕೊಂಡಿದ್ದಾರೆ.

ದಾಖಲೆ ಬರೆದ ಬೆಂಗಳೂರು ಕೃಷಿ ಮೇಳ: ಒಂದೇ ದಿನ 7 ಲಕ್ಷ ಜನ ಭೇಟಿ
ಬೆಂಗಳೂರಿನ ಕೃಷಿ ಮೇಳಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡಿದ್ದರು.
TV9 Web
| Edited By: |

Updated on: Nov 06, 2022 | 4:18 PM

Share

ಬೆಂಗಳೂರು: ಯಲಹಂಕ ಸಮೀಪದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (Gandhi Krishi Vigyana Kendra – GKVK) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳವು ಈ ಬಾರಿ ಹೊಸ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಲಕ್ಷಕ್ಕೂ ಹೆಚ್ಚು ಜನರು ಕೃಷಿ ಮೇಳದಲ್ಲಿ ಪಾಲ್ಗೊಂಡು ಸ್ಟಾಲ್​ಗಳನ್ನು ಕಣ್ತುಂಬಿಕೊಂಡಿದ್ದಾರೆ. ನಿನ್ನೆ (ನ 5) ಒಂದೇ ದಿನ ಬರೋಬ್ಬರಿ 7.16 ಜನರು ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು. ಪ್ರಸಕ್ತ ಸಾಲಿನ ಕೃಷಿ ಮೇಳವು ಕಳೆದ ಗುರುವಾರದಿಂದ (ನ 3) ಕೃಷಿ ಮೇಳವು ನಡೆಯುತ್ತಿದೆ. ಕೊವಿಡ್ ಬಳಿಕ ಇದೇ ಮೊದಲ ಬಾರಿಗೆ ಕೃಷಿ ಮೇಳಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಇಂದು (ನ 6) ಕೃಷಿ ಮೇಳದ ಕೊನೆಯ ದಿನವಾಗಿದ್ದು, ಸುಮಾರು 9 ಲಕ್ಷ ಜನರು ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಮೊದಲ ದಿನ 1.60 ಲಕ್ಷ, ಎರಡನೇ ದಿನ 2.45 ಲಕ್ಷ ಜನರು ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದರು.

ಬಹೂಪಯೋಗಿ ಡ್ರೋಣ್: ಕೃಷಿ ವಿವಿ ಹಳೇ ವಿದ್ಯಾರ್ಥಿಗಳ ಆವಿಷ್ಕಾರ

ಕೃಷಿ ಚಟುವಟಿಕೆಗೆ ಬಳಸಬಹುದಾದ ಬಹೂಪಯೋಗಿ ಡ್ರೋಣ್​ಗಳು ಕೃಷಿ ಮೇಳದಲ್ಲಿ ರೈತರನ್ನು ಆಕರ್ಷಿಸಿತು. ಡ್ರೋಣ್​ಗಳನ್ನು ಪರಿಣಾಮಕಾರಿಯಾಗಿ ಬಳಸುವುದರಿಂದ ರೈತರ ಶ್ರಮ, ಸಮಯ, ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಸಾಧ್ಯವಿದೆ. ಈ ಡ್ರೋಣ್​ಗಳಿಗೆ ₹ 7 ಲಕ್ಷ ಖರ್ಚಾಗಿದೆ ಎಂದು ಜಿಕೆವಿಕೆಯ ಹಳೆಯ ವಿದ್ಯಾರ್ಥಿಗಳಾದ ಹವ್ಯಾಸ್‌ ಮತ್ತು ನಿತಿನ್‌ ಸಿಂಗ್‌ ಹೇಳಿದರು. ಈ ವಿದ್ಯಾರ್ಥಿಗಳೇ ಈಗ ‘ಬಿಗಿಲ್‌ ಅಗ್ರಿಟೆಕ್‌’ ಎಂಬ ಕಂಪನಿಯನ್ನು ಸ್ಥಾಪಿಸಿ ಡ್ರೋಣ್ ಅಭಿವೃದ್ಧಿಪಡಿಸಿದ್ದಾರೆ.

₹ 2.01 ಲಕ್ಷಕ್ಕೆ ಬನ್ನೂರು ಕುರಿ ಮಾರಾಟ

ರೈತ ಬೋರೇಗೌಡ ಅವರು ತಂದಿದ್ದ 5 ವರ್ಷದ ಬನ್ನೂರು ಕುರಿ ₹ 2.01 ಲಕ್ಷಕ್ಕೆ ಮಾರಾಟವಾಯಿತು. ಮೂಲ ಬನ್ನೂರು ತಳಿಯ ಕುರಿಗಳು ಅಳಿವಿನಂಚಿನಲ್ಲಿದ್ದು, ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಸುಮಾರು 2,500 ಕುರಿಗಳಿವೆ ಎಂದು ಹೇಳಲಾಗುತ್ತಿದೆ. ಕೃಷಿಮೇಳಕ್ಕೆ ಬೋರೇಗೌಡ ಅವರು 3 ತಿಂಗಳ ಕುರಿಮರಿ ಸೇರಿದಂತೆ 22 ಕುರಿಗಳನ್ನು ತಂದಿದ್ದರು. ಈ ತಳಿಯು ಏಳು ಉಪ ವಿಧಗಳನ್ನು ಹೊಂದಿದ್ದು, ಎಲ್ಲವೂ ಅಳಿವಿನಂಚಿನಲ್ಲಿವೆ ಎಂದು ಅವರು ತಿಳಿಸಿದರು.

ಒಂದೇ ವರ್ಷಕ್ಕೆ ಫಸಲು ಕೊಡುವ ಹಲಸು

ನೆಟ್ಟ ಒಂದೇ ವರ್ಷದಲ್ಲಿ ಹಣ್ಣು ಕೊಡುವ ನೆದರ್ಲೆಂಡ್​ನ ಸರ್ವಋತು ಹಲಸು ಈ ವರ್ಷದ ಕೃಷಿಮೇಳದಲ್ಲಿ ಎಲ್ಲರನ್ನೂ ಆಕರ್ಷಿಸಿತು. ಹಲಸಿನ ಮರಗಳು ಸಾಮಾನ್ಯವಾಗಿ ಎತ್ತರಕ್ಕೆ ಬೆಳೆಯುತ್ತವೆ. ಆದರೆ, ಈ ಹಲಸು ಕಡಿಮೆ ಎತ್ತರದಲ್ಲಿ ಪೊದೆಯಾಕಾರದಲ್ಲಿ ಹರಡಿಕೊಳ್ಳುತ್ತದೆ. ಬಹುಬೇಗನೇ ಕಾಯಿ ಬಿಡಲು ಆರಂಭಿಸುತ್ತದೆ. ಅಂಟು ರಹಿತ ತೊಳೆಗಳು ಈ ಹಲಸಿನ ಮತ್ತೊಂದು ವೈಶಿಷ್ಟ್ಯ ಎಂದು ಪುತ್ತೂರಿನ ಸಸಿ ಮಾರಾಟಗಾರ ಫಯಾಜ್‌ ಹೇಳಿದರು.

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು