AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರುವವರಿಗೆ ಶಾಕ್: ಬೆಂಗಳೂರಿನಲ್ಲಿ ಲೈಸೆನ್ಸ್​​ ಸಿಗದೇ ವ್ಯಾಪಾರಿಗಳು ಕಂಗಾಲು

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ ಏಳು ದಿನಗಳ ರಾಷ್ಟ್ರೀಯ ಶೋಕವನ್ನು ಘೋಷಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆ ಒಂದು ದಿನದ ಮದ್ಯ ಪರವಾನಗಿ ನೀಡಲು ಸರ್ಕಾರ ನಿರಾಕರಿಸಿದೆ. ಇದರಿಂದಾಗಿ ನೂರಾರು ವ್ಯಾಪಾರಿಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರುವವರಿಗೆ ಶಾಕ್: ಬೆಂಗಳೂರಿನಲ್ಲಿ ಲೈಸೆನ್ಸ್​​ ಸಿಗದೇ ವ್ಯಾಪಾರಿಗಳು ಕಂಗಾಲು
1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರುವವರಿಗೆ ಶಾಕ್: ಬೆಂಗಳೂರಿನಲ್ಲಿ ಲೈಸೆನ್ಸ್​​ ಸಿಗದೇ ವ್ಯಾಪಾರಿಗಳು ಕಂಗಾಲು
Kiran HV
| Edited By: |

Updated on: Dec 30, 2024 | 10:56 PM

Share

ಬೆಂಗಳೂರು, ಡಿಸೆಂಬರ್​ 30: ಹೊಸ ವರ್ಷ (New Year) ಸಂಭ್ರಮಾಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. ಬೆಂಗಳೂರಿನಲ್ಲೂ ನ್ಯೂ ಇಯರ್​ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಈ ಮದ್ಯ 1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರುವವರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಪರಿಣಾಮ ಲೈಸೆನ್ಸ್​​ ಸಿಗದೇ ವ್ಯಾಪಾರಿಗಳು ಕಾಂಗಾಲಾಗಿದ್ದಾರೆ.

ನ್ಯೂ ಇಯರ್ ಸೆಲೆಬ್ರೇಷನ್​ಗೆ ಎಂ.ಜಿ ರೋಡ್, ಬ್ರಿಗೇಡ್‌ ರೋಡ್‌ ಸೇರಿದಂತೆ ಪಬ್​ಗಳು, ರೆಸ್ಟೋರೆಂಟ್​ಗಳು ಎಲ್ಲವೂ ಸಜ್ಜಾಗಿವೆ. ಇವುಗಳ ಜೊತೆಗೆ 1 ದಿನದ ಲೈಸೆನ್ಸ್​ ಪಡೆದು ಮದ್ಯ ಮಾರಾಟ ಮಾಡುವವರು ಸಿದ್ಧರಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರ ಲೈಸೆನ್ಸ್​​ಗೆ ಅನುಮತಿ ನೀಡಿಲ್ಲ.

ಇದನ್ನೂ ಓದಿ: ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್

ಮಾಜಿ ಪ್ರಧಾನಿ ಮನಮೋಹನ್​ಸಿಂಗ್ ನಿಧನ ಹಿನ್ನೆಲೆ ದೇಶದಲ್ಲಿ 7 ದಿನ ಶೋಕಚಾರಣೆ ಘೋಷಿಸಲಾಗಿದೆ. ಹಾಗಾಗಿ 1 ದಿನದ ಲೈಸೆನ್ಸ್​​ ನೀಡಲಾಗದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಹಾಗಾಗಿ 100ಕ್ಕೂ ಹೆಚ್ಚು ವ್ಯಾಪಾರಿಗಳು ಒಂದು ದಿನದ ಪರವಾನಗಿ ಸಿಗದೇ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹೊಸ ವರ್ಷಾರಣೆಗೆ ದಿನದ ಲೈಸೆನ್ಸ್​ ​ಇಲ್ಲದೇ ಸಮಸ್ಯೆ ಉಂಟಾಗಿದ್ದು, ಆನ್​ಲೈನ್​ ಮುಖಾಂತರ ಅನುಮತಿಗೆ ಅರ್ಜಿಸಲ್ಲಿಸಿದ್ದರು ಸರ್ಕಾರ ಮಾತ್ರ ಅನುಮತಿ ನೀಡಿಲ್ಲ. ಅನೇಕ ಕಡೆಗಳಲ್ಲಿ ಮೊದಲೇ ಟಿಕೆಟ್​ ಸೋಲ್ಡ್ ​ಔಟ್​ ಆಗಿದ್ದು, ಬರುವ ಜನರಿಗೆ ಟಿಕೆಟ್​​ ಬುಕ್​​ ಮಾಡಿದವರಿಗೆ ಏನು ಮಾಡಬೇಕು ಎಂದು ವ್ಯಾಪಾರಿಗಳು ತಲೆಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಾಳೆ ಸಂಜೆಯಿಂದ ನಂದಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ; ಈ ಪ್ರವಾಸಿ ತಾಣಗಳಿಗೂ ನಿಷೇಧ

ನ್ಯೂ ಇಯರ್ ಸೆಲೆಬ್ರೇಷನ್​ಗೆ ಕ್ಷಣಗಣನೆಗೆ ಶುರುವಾಗ್ತಿದ್ದಂತೆಯೇ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​​ಸ್ಟ್ರೀಟ್​ನಲ್ಲಿ ತಯಾರಿಯೂ ನಡೆದಿದೆ. ಹೆಚ್ಚು ಜನ ಸೇರೋ ಜಾಗಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡೋಕೆ ಖಾಕಿ ಸಜ್ಜಾಗಿದೆ. ಪೊಲೀಸ್ ಇಲಾಖೆ ಕೈ ಜೋಡಿಸಿರೋ ಬಿಬಿಎಂಪಿಯೂ ಗೈಡ್​ಲೈನ್ಸ್ ಜಾರಿ ಮಾಡಿದೆ.

ಫೀಲ್ಡಿಗಿಳಿದ ಪೊಲೀಸ್ ಆಯುಕ್ತ ದಯಾನಂದ್ ರೌಂಡ್ಸ್

ಹೊಸ ವರ್ಷದ ದಿನ ಜನರಿಗೆ ತೊಂದರೆಯಾಗದಿರಲೆಂದು, ಬಿಬಿಎಂಪಿ, ಬೆಸ್ಕಾಂ, BWSSB ಸಿಬ್ಬಂದಿಗೆ ರಜೆ ನೀಡದಂತೆ ಡಿಸಿಎಂ ಡಿಕೆ ಶಿವಕುಮಾರ್​ ಖಡಕ್ ಸೂಚನೆ ನೀಡಿದ್ದಾರೆ. ಇಂದಿನಿಂದ್ಲೇ ಫೀಲ್ಡಿಗಿಳಿದ ಪೊಲೀಸ್ ಆಯುಕ್ತ ದಯಾನಂದ್, ರೌಂಡ್ಸ್ ಹಾಕಿದ್ದಾರೆ. ರಾಜಧಾನಿಯ ಪಬ್, ಬಾರ್ ಮಾಲೀಕರ ಜೊತೆ ಪೊಲೀಸರು ಸಭೆ ನಡೆಸಿದ್ದು, ಪಬ್​​​ಗಳಲ್ಲಿ ಲೇಡಿ ಬೌನ್ಸರ್ಸ್ ನಿಯೋಜಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ