AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Metro: ನಗರದಾಚೆಗೆ ಬೆಂಗಳೂರು ಮೆಟ್ರೋ ಸಂಪರ್ಕಿಸಲು ಅಧ್ಯಯನಕ್ಕೆ ಟೆಂಡರ್

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಶುಕ್ರವಾರ 118 ಕಿಮೀ ಉದ್ದದ ಮೆಟ್ರೋ ಕಾಮಗಾರಿಯ ನಾಲ್ಕನೇ ಹಂತದ ಕಾರ್ಯಸಾಧ್ಯತೆಯ ಅಧ್ಯಯನ ವರದಿಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ. ಮೂರು ಕಾರಿಡಾರ್‌ಗಳಲ್ಲಿ 50 ಕಿಮೀ ವ್ಯಾಪಿಸಿರುವ ಮೆಟ್ರೋ ರೈಲು ಕಾರಿಡಾರ್‌ಗಳು ಚಲ್ಲಘಟ್ಟದಿಂದ ಬಿಡದಿ, ಸಿಲ್ಕ್ ಇನ್‌ಸ್ಟಿಟ್ಯೂಟ್ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ವಿಸ್ತರಣೆಗಳನ್ನು ಒಳಗೊಂಡಿವೆ.

Bengaluru Metro: ನಗರದಾಚೆಗೆ ಬೆಂಗಳೂರು ಮೆಟ್ರೋ ಸಂಪರ್ಕಿಸಲು ಅಧ್ಯಯನಕ್ಕೆ ಟೆಂಡರ್
ನಗರದಾಚೆಗೆ ಬೆಂಗಳೂರು ಮೆಟ್ರೋ ಸಂಪರ್ಕಿಸಲು ಅಧ್ಯಯನಕ್ಕೆ ಟೆಂಡರ್ ಆಹ್ವಾನಿಸಿದ ಬಿಎಂಆರ್​ಸಿಎಲ್Image Credit source: FILE PHOTO
Rakesh Nayak Manchi
|

Updated on:Feb 25, 2024 | 7:22 AM

Share

ಬೆಂಗಳೂರು, ಫೆ.25: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಶುಕ್ರವಾರ 118 ಕಿಮೀ ಉದ್ದದ ಮೆಟ್ರೋ ಕಾಮಗಾರಿಯ ನಾಲ್ಕನೇ ಹಂತದ ಕಾರ್ಯಸಾಧ್ಯತೆಯ ಅಧ್ಯಯನ ವರದಿಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ. ಮೂರು ಕಾರಿಡಾರ್‌ಗಳಲ್ಲಿ 50 ಕಿಮೀ ವ್ಯಾಪಿಸಿರುವ ಮೆಟ್ರೋ (Bengaluru Metro) ರೈಲು ಕಾರಿಡಾರ್‌ಗಳು ಚಲ್ಲಘಟ್ಟದಿಂದ ಬಿಡದಿ, ಸಿಲ್ಕ್ ಇನ್‌ಸ್ಟಿಟ್ಯೂಟ್ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ವಿಸ್ತರಣೆಗಳನ್ನು ಒಳಗೊಂಡಿವೆ.

ಪ್ಯಾಕೇಜ್ 1ರ ಮೂರು ಕಾರಿಡಾರ್‌ಗಳಲ್ಲಿ 50 ಕಿ.ಮೀ ಉದ್ದದ ಕಾರಿಡಾರ್ ಮತ್ತು ಪ್ಯಾಕೇಜ್ 2 ರಲ್ಲಿ ಒಂದು ಕಾರಿಡಾರ್‌ನಲ್ಲಿ 68 ಕಿ.ಮೀ ಉದ್ದದ ಕಾರಿಡಾರ್‌ಗಳಿಗೆ ಕಾರ್ಯಸಾಧ್ಯತಾ ವರದಿಯನ್ನು ಕೋರಲಾಗಿದೆ. ಈ ಮೆಟ್ರೋ ರೈಲು ಕಾರಿಡಾರ್‌ಗಳು ಚಲ್ಲಘಟ್ಟದಿಂದ ಬಿಡದಿ, ಸಿಲ್ಕ್ ಇನ್‌ಸ್ಟಿಟ್ಯೂಟ್ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗೆ ವಿಸ್ತರಣೆಗಳನ್ನು ಒಳಗೊಂಡಿವೆ. ಇದಲ್ಲದೆ, 68 ಕಿಮೀ ವಿಸ್ತರಣೆಯು ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಜಿಗಣಿ – ಆನೇಕಲ್ – ಅತ್ತಿಬೆಲೆ – ಸರ್ಜಾಪುರ – ವರ್ತೂರು – ಕಾಡುಗೋಡಿ ಟ್ರೀ ಪಾರ್ಕ್ ಅನ್ನು ಸಂಪರ್ಕಿಸುತ್ತದೆ.

ನಗರಕ್ಕೆ ಪ್ರಯಾಣಿಸುವ ವೃತ್ತಿಪರರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ಉಪನಗರಗಳಿಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸಬೇಕೆಂದು ಹೇಳಿದ್ದರು. ಅಲ್ಲದೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಬೆಂಗಳೂರು ನಗರದಾಚೆ ಮೆಟ್ರೋ ವಿಸ್ತರಿಸಲು ಅನುದಾನ ನೀಡುವಂತೆ ಕೋರಿದ್ದರು.

ಇದನ್ನೂ ಓದಿ: ಮೆಜೆಸ್ಟಿಕ್ – ವೈಟ್​ಫೀಲ್ಡ್​ ನಡುವೆ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ಸೇವೆ: ಪ್ರಯಾಣಿಕರಿಗೆ ಬಿಎಂಆರ್​​ಸಿಎಲ್ ಗುಡ್ ನ್ಯೂಸ್

ಆದರೆ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಉಪನಗರ ಪ್ರದೇಶಕ್ಕೆ ಮೆಟ್ರೋ ವಿಸ್ತರಣೆಯನ್ನು ವಿರೋಧಿಸಿದ್ದಾರೆ. ”ನಗರದ ಪ್ರಮುಖ ಪ್ರದೇಶಗಳಿಗೆ ಸಂಪೂರ್ಣ ಸಂಪರ್ಕ ಕಲ್ಪಿಸುವ ಮುನ್ನವೇ ಹೊಸಕೋಟೆ, ಹಾರೋಹಳ್ಳಿ, ಬಿಡದಿ, ನೆಲಮಂಗಲಕ್ಕೆ ಮೆಟ್ರೊ ವಿಸ್ತರಣೆ ಮಾಡುವ ಸಿದ್ದರಾಮಯ್ಯ ಸರಕಾರದ ಪ್ರಸ್ತಾವನೆ ಹಾಸ್ಯಾಸ್ಪದವಾಗಿದೆ. ಮೆಟ್ರೊ ರೈಲುಗಳು ನಗರ ಪ್ರದೇಶಗಳ ದಟ್ಟಣೆಯನ್ನು ನಿವಾರಿಸುತ್ತದೆ. ಆದರೆ ನಗರದ ಹೊರವಲಯದಲ್ಲಿ ಸಾಮಾನ್ಯವಾಗಿ ಉಪನಗರ ರೈಲು ಮೂಲಕ ಸೇವೆಯನ್ನು ನೀಡಲಾಗುತ್ತದೆ ಎಂದು ತೇಜಸ್ವಿ ಸೂರ್ಯ ಈ ಹಿಂದೆ ಹೇಳಿದ್ದರು.

ಪ್ರಸ್ತುತ, ಮೆಟ್ರೋ ಯೋಜನೆಯ ಹಂತ-1 ಈಗಾಗಲೇ 40 ನಿಲ್ದಾಣಗಳನ್ನು ವ್ಯಾಪಿಸಿರುವ 42.3 ಕಿ.ಮೀ. ಪೂರ್ವ-ಪಶ್ಚಿಮ ಕಾರಿಡಾರ್ 18.2 ಕಿಮೀ ಮತ್ತು ಉತ್ತರ-ದಕ್ಷಿಣ ಕಾರಿಡಾರ್ 24.1 ಕಿಮೀ ವಿಸ್ತರಿಸಿದೆ. ಮೆಜೆಸ್ಟಿಕ್‌ನಲ್ಲಿ ಇಂಟರ್‌ಚೇಂಜ್ ಸ್ಟೇಷನ್ ಸೇರಿದಂತೆ ಏಳು ನಿಲ್ದಾಣಗಳೊಂದಿಗೆ 8.8 ಕಿಮೀ ವಿಸ್ತರಿಸುವ ಭೂಗತ ವಿಭಾಗಗಳು ಇವೆರಡೂ ಸೇರಿವೆ.

ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-2 ಅಸ್ತಿತ್ವದಲ್ಲಿರುವ ಮಾರ್ಗಗಳಿಗೆ ನಾಲ್ಕು ವಿಸ್ತರಣೆಗಳನ್ನು ಮತ್ತು 61 ನಿಲ್ದಾಣಗಳೊಂದಿಗೆ (49 ಫ್ಲೈಓವರ್ ಮತ್ತು 12 ಭೂಗತ) ಒಟ್ಟು 72.095 ಕಿಮೀ ಉದ್ದದ ಎರಡು ಹೊಸ ಮಾರ್ಗಗಳನ್ನು ಒಳಗೊಂಡಿದೆ. ಇದರಲ್ಲಿ 27.36 ಕಿಮೀ ಕಾರ್ಯಾಚರಣೆಯಲ್ಲಿದೆ ಮತ್ತು ಉಳಿದವು ನಿರ್ಮಾಣ ಹಂತದಲ್ಲಿದೆ. ಮೆಟ್ರೋ ಯೋಜನೆಯ ಹಂತ-2ಎ (ORR ಮಾರ್ಗವು 13 ಫ್ಲೈ ಓವರ್ ನಿಲ್ದಾಣಗಳೊಂದಿಗೆ 19.75 ಕಿಮೀ ವ್ಯಾಪಿಸಿದೆ) ಮತ್ತು ಹಂತ -2ಬಿ ಕೂಡ ನಿರ್ಮಾಣ ಹಂತದಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:19 am, Sun, 25 February 24

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ