AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೂ ಹಿಜಬ್ ವಿವಾದ ತರಲು ನಡೆದಿತ್ತಾ ಸಂಚು? ನಮ್ಮ ಶಾಲೆಯ ಪೋಷಕರೇ ಅಲ್ಲದವರು ನಿನ್ನೆ ಗಲಾಟೆ ಮಾಡಿದ್ದಾರೆ ಎಂದ ಡಾ. ರಾಜು

ಕೆಲವರು ಉದ್ದೇಶಪೂರ್ವಕವಾಗಿಯೇ ನಿನ್ನೆ ಗಲಾಟೆ ಮಾಡಿದ್ದಾರೆ. ಚಂದ್ರಾಲೇಔಟ್ ವಿದ್ಯಾಸಾಗರ ಗಲಾಟೆ ಹಿಂದೆ ಕಾಣದ ಕೈಗಳ ಕೈವಾಡ ಇದೆ. ನಿನ್ನೆಯ ಗಲಾಟೆಯಲ್ಲಿ ನಮ್ಮ ಶಾಲೆಯ ಪೋಷಕರ ಹೆಚ್ಚು ಇರಲಿಲ್ಲ. ನಮ್ಮ ಶಾಲೆಯ ಪೋಷಕರೇ ಅಲ್ಲದವರು ನಿನ್ನೆ ಗಲಾಟೆ ಮಾಡಿದ್ದಾರೆ. -ಶಾಲಾ ಆಡಳಿತ ಮಂಡಳಿ ಮಾಲೀಕ ಡಾ. ರಾಜು

ಬೆಂಗಳೂರಿಗೂ ಹಿಜಬ್ ವಿವಾದ ತರಲು ನಡೆದಿತ್ತಾ ಸಂಚು? ನಮ್ಮ ಶಾಲೆಯ ಪೋಷಕರೇ ಅಲ್ಲದವರು ನಿನ್ನೆ ಗಲಾಟೆ ಮಾಡಿದ್ದಾರೆ ಎಂದ ಡಾ. ರಾಜು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 13, 2022 | 1:44 PM

Share

ಬೆಂಗಳೂರು: ದೇಶಾದ್ಯಂತ ದೊಡ್ಡ ಕಿಡಿ ಹೊತ್ತಿಸಿರೋ ಹಿಜಾಬ್(Hijab) ಬೆಂಕಿಯ ಬಿಸಿ ಇಷ್ಟು ದಿನದವರೆಗೆ ಬೆಂಗಳೂರಿಗೆ ತಟ್ಟಿರಲಿಲ್ಲ. ರಾಜಧಾನಿಯಲ್ಲಿ ಹಿಜಾಬ್ ಜ್ವಾಲೆ ಆವರಿಸದಂತೆ ಎಲ್ಲಾ ರೀತಿ ಎಚ್ಚರಿಕೆಯನ್ನೂ ವಹಿಸಲಾಗಿತ್ತು. ಆದ್ರೆ ನಿನ್ನೆ ರಾಜಧಾನಿಗೂ ಈ ಹಿಜಾಬ್ ವಿವಾದ ಎಂಟ್ರಿ ಕೊಟ್ಟಿತ್ತು. ಸದ್ಯ ಈಗ ವಿದ್ಯಾ ಸಾಗರ ಶಾಲಾ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಾಲಾ ಆಡಳಿತ ಮಂಡಳಿ ಮಾಲೀಕರಾದ ಡಾ. ರಾಜು ಸ್ಟೋಟಕ ಸಂಗತಿಯೊಂದನ್ನು ಬಯಲು ಮಾಡಿದ್ದಾರೆ.

ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ ಹಿನ್ನೆಲೆ ಹಿಜಾಬ್ ಆಗಲಿ, ಕೇಸರಿ ಶಾಲನ್ನಾಗಲಿ ಶಾಲೆಗೆ ಧರಿಸಿ ಆಗಮಿಸುವಂತಿಲ್ಲ. ಆದ್ರೆ, ಚಂದ್ರಲೇಔಟ್ನ ಈ ವಿದ್ಯಾಸಾಗರ ಶಾಲೆಗೆ ಕೆಲ ಮಕ್ಕಳು ಹಿಜಾಬ್ ಧರಿಸಿ ಬಂದಿದ್ದರಿಂದ ಶಿಕ್ಷಕಿ ಶಶಿಕಲಾ ಅನ್ನೋರು ಹಿಜಾಬ್ ತೆಗೆಯುವಂತೆ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಪೋಷಕರು ಎಂದು ಹೇಳುತ್ತ ಕೆಲವರು ಪ್ರಿನ್ಸಿಪಾಲ್ ಕಚೇರಿಗೆ ನುಗ್ಗಿ ಶಿಕ್ಷಕಿ ವಿರುದ್ಧ ಹರಿಹಾಯ್ದರು ಶಾಲೆಯ ಪ್ರಿನ್ಸಿಪಾಲ್ ಜೊತೆ ವಾಗ್ವಾದ ನಡೆಸಿದ್ದರು. ಆದ್ರೆ ಘಟನೆ ಬಗ್ಗೆ ಮಾತನಾಡಿರುವ ಶಾಲಾ ಆಡಳಿತ ಮಂಡಳಿ ಮಾಲೀಕರಾದ ಡಾ. ರಾಜು ಘಟನೆ ಸಂಬಂಧ ಮಾತನಾಡಿದ್ದಾರೆ.

ಕೆಲವರು ಉದ್ದೇಶಪೂರ್ವಕವಾಗಿಯೇ ನಿನ್ನೆ ಗಲಾಟೆ ಮಾಡಿದ್ದಾರೆ. ಚಂದ್ರಾಲೇಔಟ್ ವಿದ್ಯಾಸಾಗರ ಗಲಾಟೆ ಹಿಂದೆ ಕಾಣದ ಕೈಗಳ ಕೈವಾಡ ಇದೆ. ನಿನ್ನೆಯ ಗಲಾಟೆಯಲ್ಲಿ ನಮ್ಮ ಶಾಲೆಯ ಪೋಷಕರ ಹೆಚ್ಚು ಇರಲಿಲ್ಲ. ನಮ್ಮ ಶಾಲೆಯ ಪೋಷಕರೇ ಅಲ್ಲದವರು ನಿನ್ನೆ ಗಲಾಟೆ ಮಾಡಿದ್ದಾರೆ. ನಮ್ಮ ಶಾಲೆಯ ಗಲಾಟೆಯಲ್ಲಿ ಕೆಲವರು ಪ್ರಚೋದನೆ ನೀಡಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿದವರು ನಮ್ಮ ಶಾಲೆಯ ಪೋಷಕರಲ್ಲ ಕೆಲವರು ನಿನ್ನೆ ಶಾಲೆಯ ಮುಂದೆ ಅನಾವಶ್ಯಕವಾಗಿ ಗಲಾಟೆ ಮಾಡಿದ್ದಾರೆ. ಶಿಕ್ಷಕಿ ಶಶಿಕಲಾ ಅವರದ್ದು ತಪ್ಪಿಲ್ಲ. ಹಿಜಾಬ್ ಬಗ್ಗೆ ಶಿಕ್ಷಕಿ ಶಶಿಕಲಾ ಮಾತನಾಡಿಲ್ಲ. ಯಾರೋ ಉದ್ದೇಶ ಪೂರ್ವಕವಾಗಿ ಗಲಾಟೆ ಮಾಡಿದ್ದಾರೆ. ಶಾಲೆ ಮುಂದೆ ಗಲಾಟೆ ಮಾಡಿದ ಕೆಲವರ ವಿಡಿಯೋ ಮಾಡಿಕೊಂಡಿದ್ದೇವೆ. ಪೊಷಕರ ಹೊರತಾಗಿ ಗಲಾಟೆ ಮಾಡಿದವರ ಮಾಹಿತಿ ಕಲೆ ಹಾಕ್ತೀದ್ದೀವಿ. ಯಾಕೆ ಗಲಾಟೆ ಮಾಡಿದ್ದಾರೆ? ಯಾರು ಯಾವ ಉದ್ದೇಶ ಎಲ್ಲ ಮಾಹಿತಿ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಎಬಿಜಿ ಶಿಪ್‌ಯಾರ್ಡ್ ಒಂದು ಹಗರಣ ಎಂದು ನಾವು ಮೊದಲೇ ಎಚ್ಚರಿಸಿದ್ದೆವು: ಕಾಂಗ್ರೆಸ್

Published On - 1:39 pm, Sun, 13 February 22

ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ