AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮಹಿಳೆಯ ಅಸ್ತಿಪಂಜರ ಪತ್ತೆ; ಕೊಲೆಯೋ, ಆತ್ಮಹತ್ಯೆಯೋ ಅನ್ನೋ ಅನುಮಾನದಲ್ಲಿ ಹುಳಿಮಾವು ಪೊಲೀಸರು

2022 ರ ಜುಲೈ 13 ರಂದು ನಾಪತ್ತೆಯಾಗಿದ್ದ ಪುಷ್ಪದಾಮಿ ಎಂಬ ಮಹಿಳೆಯ ಅಸ್ತಿಪಂಜರ ಇದೀಗ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಮಹಿಳೆಯ ಅಸ್ತಿಪಂಜರ ಪತ್ತೆ; ಕೊಲೆಯೋ, ಆತ್ಮಹತ್ಯೆಯೋ ಅನ್ನೋ ಅನುಮಾನದಲ್ಲಿ ಹುಳಿಮಾವು ಪೊಲೀಸರು
ಸಾಂದರ್ಭಿಕ ಚಿತ್ರ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Feb 06, 2023 | 2:58 PM

Share

ಬೆಂಗಳೂರು: 2022 ರ ಜುಲೈ 13 ರಂದು ಪುಷ್ಪದಾಮಿ ಎಂಬ ಮಹಿಳೆಯ ಮೇಲೆ ಹುಳಿಮಾವು ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲು ಮಾಡಲಾಗಿತ್ತು. ಆದರೆ ಇದೀಗ ಪುಷ್ಪದಾಮಿ ಎಂಬ ಮಹಿಳೆಯ ಅಸ್ತಿಪಂಜರ ಪತ್ತೆಯಾಗಿದ್ದು, ಕುಟುಂಬಸ್ಥರು ಇದನ್ನ ಕೊಲೆ ಎಂದು ಆರೋಪ ಮಾಡಿದ್ದಾರೆ. ಇದರಿಂದ ಪುಷ್ಪದಾಮಿ ಡೆತ್ ಸೀಕ್ರೇಟ್ ಭೇಧಿಸಲು ಇದೀಗ ಪೊಲೀಸರು ಬೆನ್ನತ್ತಿದ್ದಾರೆ. ಪುಷ್ಪದಾಮಿ ಕೇಸ್​ ತನಿಖೆ ಮಾಡುತ್ತಿರುವ ಪೊಲೀಸರು ಹೇಳುವ ಪ್ರಕಾರ ಪುಷ್ಪದಾಮಿ ನಾಪತ್ತೆಯಾಗಿದ್ದು 13 ನೇ ತಾರೀಖು ಅಲ್ಲ, ಬದಲಾಗಿ ಆಕೆ ಜುಲೈ 8 ರಂದು ನಾಪತ್ತೆಯಾಗಿದ್ದಾಳೆ. ಆದರೆ ಐದು ದಿನಗಳ ಬಳಿಕ ಗಂಡ ಅಮರ್ ದಾಮಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಗಂಡ ಯಾಕೆ ಐದು ದಿನಗಳ ಬಳಿಕ ಬಂದು ದೂರು ಕೊಟ್ಟ ಎಂದು ಗಂಡ ಅಮರ್ ದಾಮಿಯನ್ನು ವಶಕ್ಕೆ ಪಡೆದು ಪ್ರಶ್ನಿಸಿದ್ದು, ಆಕೆ ಊರಿಗೆ ಹೋಗಿರಬಹುದು ಅಂತ ಸುಮ್ಮನಿದ್ದೆ ಎಂದು ಅಂತಿರೋ ಅಮರ್ ದಾಮಿಯ ಅನುಮಾನದ ಹೇಳಿಕೆಯಿಂದ ಆತನನ್ನು ವಿಚಾರಣೆ ಮಾಡುತ್ತಿದ್ದಾರೆ.

ಇನ್ನು ಅಪಾರ್ಟ್ಮೆಂಟ್​ನಲ್ಲಿರೋ ಸಿಸಿ ಕ್ಯಾಮರಾ ಪರಿಶೀಲನೆಗೆ ಮುಂದಾಗಿದ್ದು, ಆದರೆ ಘಟನೆ ನಡೆದು ಆರು ತಿಂಗಳಾಗಿರೋ ಕಾರಣಕ್ಕೆ ಡೇಟಾ ಡಿಲೀಟ್ ಆಗಿದೆ. ಇದರಿಂದ ಡಿವಿಆರ್ ವಶಕ್ಕೆ ಪಡೆದು ಹಳೇ ಪೂಟೇಜ್ ರಿಟ್ರೀವ್​ಗೆ ಕಳುಹಿಸಿದ್ದಾರೆ. ಆದ್ರೆ ಇದುವರೆಗೂ ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಪೊಲೀಸರಿಗೆ ಸಿಕ್ಕಿಲ್ಲ. ಇನ್ನು ಪುಷ್ಪದಾಮಿ ಮೊಬೈಲ್ ಕಾಲ್ ಲೀಸ್ಟ್ ಮೋರೆ ಹೋದ ಪೊಲೀಸರು. 2022 ರ ಜುಲೈ ತಿಂಗಳಲ್ಲಿ ಪುಷ್ಪದಾಮಿ ಅವರಿಗೆ ಬಂದಿದ್ದ ಇನ್​ಕಮಿಂಗ್ ಹಾಗೂ ಔಟ್ ಗೋಯಿಂಗ್ ಕಾಲ್​ಗಳ ಪರಿಶೀಲನೆ ನಡೆಸಿದ್ದಾರೆ.

ನಾಪತ್ತೆಯಾದ ದಿನದ ಕಾಲ್ ಲೀಸ್ಟ್ ಪ್ರಕಾರ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿ, ಸೆಕ್ಯೂರಿಟಿ ಸೇರಿ 20 ಜನರನ್ನು ಪೊಲೀಸರು ವಿಚಾರಣೆ ಮಾಡಿದ್ದು, ವಿಚಾರಣೆ ವೇಳೆ ಗಂಡನ‌ ಕಿರುಕುಳ ಹಾಗೂ ಕಾಟಕ್ಕೆ ಬೇಸತ್ತಿದ್ದಳು ಎಂಬ ಮಾತು ಕೇಳಿಬಂದಿದೆ. ಇನ್ನು ಕೋರ್ಟ್​ಗೆ ಡಿಎನ್‌ಎ ಪರೀಕ್ಷೆಗೆ ಅನುಮತಿ ಕೋರಿರೋ ಪೊಲೀಸರು, ಅನುಮತಿ ಸಿಕ್ಕ ತಕ್ಷಣವೇ ಕುಟುಂಬಸ್ಥರ ಡಿಎನ್ಎ ಸ್ಯಾಂಪಲ್ ಪಡೆಯಲಿದ್ದಾರೆ. ಇದರ ಜೊತೆಗೆ ಆಕೆಯ ಕುಟುಂಬದವರು ನೇಪಾಳದಲ್ಲಿದ್ದು, ಮಂಗಳವಾರ ಬರೋದಾಗಿ ಹೇಳಿದ್ದಾರಂತೆ.

ಇದನ್ನೂ ಓದಿ:ವಾಣಿ ಜಯರಾಮ್​ ಅವರದ್ದು ಆಕಸ್ಮಿಕ ಸಾವಲ್ಲ, ಕೊಲೆ? ಅನುಮಾನ ಮೂಡಿಸಿದ ಗಾಯಗಳು

ಮೈಸೂರು: ಚೆಕ್​ಬೌನ್ಸ್​ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಸಾವು

ಮೈಸೂರು: ನಗರದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ನರಸಿಂಹ(40) ಎನ್ನುವವರ ಮೇಲೆ ಚೆಕ್​ಬೌನ್ಸ್​ ಕೇಸ್​ ದಾಖಲಾಗಿತ್ತು. ಬಳಿಕ ಜ.4ರಂದು ಚೆಕ್​ಬೌನ್ಸ್​ ಪ್ರಕರಣದಲ್ಲಿ ಜೈಲು ಸೇರಿದ್ದ ಆತ ಸಾವನ್ನಪ್ಪಿದ್ದಾನೆ. ಮೈಸೂರು ಸೆಂಟ್ರಲ್ ಜೈಲು ಸೇರಿದ್ದ ನರಸಿಂಹ ಅನಾರೋಗ್ಯದಿಂದ ಬಳಲುತ್ತಿದ್ದ, ಕೂಡಲೇ ಆತನನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು(ಫೆ.6) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದು, ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:57 pm, Mon, 6 February 23

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!