AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಕ್ಲು ಶಿವ ಕೊಲೆ ಕೇಸ್‌: ಬಂಧನ ಭೀತಿ, ಭೈರತಿ ಬಸವರಾಜ್​​ ಬಲಗೈ ಬಂಟ ಎಸ್ಕೇಪ್​​​​

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್​​ ಬಲಗೈ ಬಂಟ ಮಲಿಯಾಳಿ ಅಜಿತ್​​ಗೆ ​ ಪೊಲೀಸರು ನೋಟಿಸ್ ನೀಡಿದ ಬೆನ್ನಲ್ಲೇ ಪರಾರಿಯಾಗಿದ್ದಾರೆ. ಆರೋಪಿ ಕಿರಣ್​ ಮನೆ ಮತ್ತು ಕಚೇರಿಯಲ್ಲಿ ಪರಿಶೀಲಿಸಿದ್ದ ವೇಳೆ ಮಲಿಯಾಳಿ ಅಜಿತ್​ಗೆ ಸೇರಿದ್ದ ಕೆಲವು ದಾಖಲೆಗಳು ಪತ್ತೆ ಆಗಿದ್ದವು.

ಬಿಕ್ಲು ಶಿವ ಕೊಲೆ ಕೇಸ್‌: ಬಂಧನ ಭೀತಿ, ಭೈರತಿ ಬಸವರಾಜ್​​ ಬಲಗೈ ಬಂಟ ಎಸ್ಕೇಪ್​​​​
ಬಿಕ್ಲು ಶಿವ, ಶಾಸಕ ಭೈರತಿ ಬಸವರಾಜ್​​, ಮಲಿಯಾಳಿ ಅಜಿತ್
Shivaprasad B
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 25, 2025 | 9:05 AM

Share

ಬೆಂಗಳೂರು, ಜುಲೈ 25: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ (Biklu Shiva Murder Case) ಶಾಸಕ ಭೈರತಿ ಬಸವರಾಜ್‌ (Byrati Basavaraj) ಎರಡು ಬಾರಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ತನಿಖಾಧಿಕಾರಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಕೊಲೆಗೂ ತಮಗೂ ಸಂಬಂಧವಿಲ್ಲ ಅಂದಿದ್ದಾರೆ. ಈ ಮಧ್ಯೆ ಬಂಧನ ಭೀತಿಯಿಂದ ಮತ್ತೊಬ್ಬ ಆರೋಪಿ ಪರಾರಿ ಆಗಿದ್ದಾನೆ. ಭೈರತಿ ಬಸವರಾಜ್​​ ಬಲಗೈ ಬಂಟ ಮಲಿಯಾಳಿ ಅಜಿತ್ ಎಸ್ಕೇಪ್ ಆದ ಆರೋಪಿ. ಸಾಕಷ್ಟು ಕಡೆ ಪೊಲೀಸರು ಹುಡುಕಾಟ ನಡೆಸಿದರು ಪತ್ತೆ ಆಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿರಣ್​ ಮನೆ ಮತ್ತು ಕಚೇರಿಯಲ್ಲಿ ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ಮಲಿಯಾಳಿ ಅಜಿತ್​ಗೆ ಸೇರಿದ ಕೆಲವು ದಾಖಲೆಗಳು ಪತ್ತೆ ಆಗಿವೆ. ಈ ದಾಖಲೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಲಿಯಾಳಿ ಅಜಿತ್​ಗೆ ಪೊಲೀಸರು ನೋಟಿಸ್ ನೀಡಿದ್ದರು.​ ಆದರೆ ನೋಟಿಸ್ ಸ್ವೀಕರಿಸಿದ್ದ ಅಜಿತ್​ ವಿಳಾಸವಿಲ್ಲದ ಲೆಟರ್​​​​ ಹೆಡ್​​ನಲ್ಲಿ ಉತ್ತರ ನೀಡಿದ್ದ.

ಪೊಲೀಸರಿಗೇ ಅವಾಜ್​ ಹಾಕಿದ್ದ ಅಜಿತ್ 

‘ನಾನು ಹೈಕೋರ್ಟ್ ವಕೀಲ. ನನಗೆ ನೀವು ಸುಖಾಸುಮ್ಮನೆ ತೊಂದರೆ ನೀಡುತ್ತಿದ್ದೀರಿ. ನನಗೆ ಹಾಗೂ ಜಗ್ಗನಿಗೆ ಅಥವಾ ಕೊಲೆಯಾದ ಶಿವನ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲ. ಒಂದು ವೇಳೆ ನೀವು ನನ್ನನ್ನು ಈ ಕೇಸ್​​​ನಲ್ಲಿ ಸಿಲುಕಿಸುವ ಪ್ರಯತ್ನ ಪಟ್ಟರೆ ನಾನು ಕಾನೂನಿನ ರೀತಿಯಲ್ಲಿ ಕ್ರಮಕ್ಕೆ ಮುಂದಾಗುತ್ತೇನೆ’ ಎಂದು ಅಜಿತ್ ಉತ್ತರ ನೀಡಿದ್ದ.

ಇದನ್ನೂ ಓದಿ
Image
ಬಿಕ್ಲು ಶಿವ ಕೊಲೆ ಕೇಸ್: ಬಗೆದಷ್ಟು ಸ್ಫೋಟಕ ಮಾಹಿತಿ, ನಟ-ನಟಿಯರ ಜತೆಗೂ ನಂಟು
Image
ಬಿಕ್ಲು ಶಿವ ಕೊಲೆ ಕೇಸ್: ಇಬ್ರು ಬಂಧನ, ಭೈರತಿ ಬಸವರಾಜ್ ಸಹೋದರನ ಮಗ ವಶಕ್ಕೆ
Image
ಬಿಜೆಪಿ ಎಂಎಲ್​​ಎಗೆ ನೋಟಿಸ್, ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಮೃತನ ತಾಯಿ
Image
ರೌಡಿಶೀಟರ್​ ಕೊಲೆ: ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್​ಐಆರ್​

ಇದನ್ನೂ ಓದಿ: ಬಿಜೆಪಿ ಶಾಸಕ ಬೈರತಿ ಬಸವರಾಜ್​​ ಗೆ ಸಂಕಷ್ಟ ತಂದಿಟ್ಟ ಬಿಕ್ಲು ಶಿವ ಕೊಲೆ ಪ್ರಕರಣ ಸಿಐಡಿ ಹೆಗಲಿಗೆ

ತಕ್ಷಣವೇ ಪೊಲೀಸರು ಪ್ರತ್ಯುತ್ತರವಾಗಿ ಕೆಲವು ಕೇಸ್ ಅಂಶಗಳನ್ನು ಇಟ್ಟುಕೊಂಡು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಟಿ.ಸಿ ಪಾಳ್ಯದಲ್ಲಿರುವ ಸಿನಿಮಾಸ್​​ ವಿ ಗ್ರೂಪ್​​ನ ಕಚೇರಿಯನ್ನು ಖಾಲಿ ಮಾಡಿ ಎಸ್ಕೇಪ್ ಆಗಿದ್ದಾನೆ. ಸದ್ಯ ಕಚೇರಿ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಡೆಡ್ಲಿ ಮರ್ಡರ್​ಗೂ ಮುನ್ನ ಜಗ್ಗನ ಸ್ಕೆಚ್ ಹೇಗಿತ್ತು?

ಇನ್ನು ಬಿಕ್ಲು ಶಿವ ಕೊಲೆಗೆ ಜಗ್ಗ ಅಲಿಯಾಸ್​ ಜಗದೀಶ್​ ಪ್ರೀಪ್ಲಾನ್​ ಮಾಡಿದ್ದ. ರಾಮಮೂರ್ತಿ ನಗರದ ಬಾರ್ ನಲ್ಲಿ ಹತ್ಯೆಗೆ ಸ್ಕೆಚ್​ ಹಾಕಲಾಗಿತ್ತು. ಜುಲೈ 15ರ ರಾತ್ರಿ ಶಿವನ ಕೊಲೆಗೂ ಮುನ್ನ ಎಂಟು ಜನ ಆರೋಪಿಗಳೊಂದಿಗೆ ಜಗದೀಶ್ ಮೀಟಿಂಗ್ ಮಾಡಿದ್ದ. ಹಂತಕರು ಸ್ಕೆಚ್ ಹಾಕಿದ್ದ ಸಿಸಿ ಕ್ಯಾಮೆರಾ ದೃಶ್ಯವಳಿ ಟಿವಿ9 ಗೆ ಲಭ್ಯವಾಗಿದೆ.

ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್: ಹತ್ಯೆಗೆ ಪ್ರಮುಖ ಕಾರಣ ಪತ್ತೆ ಮಾಡಿದ ಪೊಲೀಸರು! ಮತ್ತಷ್ಟು ರೋಚಕ ಅಂಶ ಬಯಲು

ಬಿಕ್ಲು ಶಿವನ ಕೊಲೆ ಆಗಿ ಕೇವಲ 10 ನಿಮಿಷಕ್ಕೆ ಜಗದೀಶ್​​ ಪರಾರಿ ಆಗಿದ್ದ. ಬಿಕ್ಲು ಶಿವನ ಕೊಲೆಯಾಗಿದ್ದು ರಾತ್ರಿ 8:05 ನಿಮಿಷಕ್ಕೆ. ರಾತ್ರಿ 08:15 ನಿಮಿಷಕ್ಕೆ ಹೆಣ್ಣೂರಿನ ಕ್ಯಾನೋಪಿ ಅಪಾರ್ಟ್‌ಮೆಂಟ್​ನಿಂದ ಆಡಿ ಕಾರಿನಲ್ಲಿ ಅತ್ತಿಬೆಲೆ ಮಾರ್ಗವಾಗಿ ಪರಾರಿ ಆಗಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.