AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜು.31ರೊಳಗೆ ಈದ್ಗಾ ಮೈದಾನ ಸರ್ಕಾರದ ಸ್ವತ್ತೆಂದು ಘೋಷಿಸಬೇಕು; ಬಿಬಿಎಂಪಿ, ಸರ್ಕಾರಕ್ಕೆ ಡೆಡ್​ಲೈನ್​

ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರಿಡಬೇಕು. ಇಲ್ಲದಿದ್ದರೆ ನಾವೇ ಮರುನಾಮಕರಣ ಮಾಡುತ್ತೇವೆ ಎಂದು ನಾಗರಿಕರ ಒಕ್ಕೂಟ ಎಚ್ಚರಿಕೆ ನೀಡಿದೆ.

ಜು.31ರೊಳಗೆ ಈದ್ಗಾ ಮೈದಾನ ಸರ್ಕಾರದ ಸ್ವತ್ತೆಂದು ಘೋಷಿಸಬೇಕು; ಬಿಬಿಎಂಪಿ, ಸರ್ಕಾರಕ್ಕೆ ಡೆಡ್​ಲೈನ್​
ಚಾಮರಾಜಪೇಟೆ ಈದ್ಗಾ ಮೈದಾನ (ಸಂಗ್ರಹ ಚಿತ್ರ)
Follow us
TV9 Web
| Updated By: sandhya thejappa

Updated on:Jul 16, 2022 | 8:56 AM

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನವನ್ನು (Idgah Maidan) ಸರ್ಕಾರದ ಸ್ವತ್ತೆಂದು ಘೋಷಿಸಬೇಕು ಅಂತ ಚಾಮರಾಜಪೇಟೆ ನಾಗರಿಕರ ಒಕ್ಕೂಟ ರಾಜ್ಯ ಸರ್ಕಾರ (Karnataka Government) ಮತ್ತು ಬಿಬಿಎಂಪಿಗೆ (BBMP) ಡೆಡ್​ಲೈನ್​ ನೀಡಿದೆ. ಜು.31ರೊಳಗೆ ಈದ್ಗಾ ಮೈದಾನ ಸರ್ಕಾರದ ಸ್ವತ್ತೆಂದು ಘೋಷಿಸಬೇಕು. ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರಿಡಬೇಕು. ಇಲ್ಲದಿದ್ದರೆ ನಾವೇ ಮರುನಾಮಕರಣ ಮಾಡುತ್ತೇವೆ ಎಂದು ನಾಗರಿಕರ ಒಕ್ಕೂಟ ಎಚ್ಚರಿಕೆ ನೀಡಿದೆ. ಈಗಾಗಲೇ ನಾಗರಿಕರ ಒಕ್ಕೂಟ ಸಂಸದ ಪಿ.ಸಿ ಮೋಹನ್ ಜೊತೆ ತೆರಳಿ ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ನಾಗರೀಕರ ಒಕ್ಕೂಟ ನೀಡಿರುವ ಮನವಿಯಲ್ಲಿ ಏನಿದೆ?:  * ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು. * ಮೈದಾನವನ್ನ ಆಟದ ಮೈದಾನವನ್ನಾಗಿಯೇ ಉಳಿಸಬೇಕು. * ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಒಡೆಯರ್ ಮೈದಾನ ಎಂದು ನಾಮಕರಣಕ ಮಾಡಬೇಕು. * ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ವಹಿಸಬಾರದು. * ಮೈದಾನ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಡಲು ರಮಿತಿ ರಚಿಸಬೇಕು. * ಚಾಮರಾಜಪೇಟೆ ಮೈದಾನದಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ಅನುಮತಿ ನೀಡಬೇಕು.

ಇದನ್ನೂ ಓದಿ: ಪ್ರತಿಭಟನಾನಿರತ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಎಚ್​ಡಿ ರೇವಣ್ಣ ಗರಂ ವಿಡಿಯೋ ವೈರಲ್; ಹಾಸನದಲ್ಲಿ ಶಾಸಕನ ವಿರುದ್ಧ ಧರಣಿಗೆ ನಿರ್ಧಾರ

ಇದನ್ನೂ ಓದಿ
Image
ಪ್ರತಿಭಟನಾನಿರತ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಎಚ್​ಡಿ ರೇವಣ್ಣ ಗರಂ ವಿಡಿಯೋ ವೈರಲ್; ಹಾಸನದಲ್ಲಿ ಶಾಸಕನ ವಿರುದ್ಧ ಧರಣಿಗೆ ನಿರ್ಧಾರ
Image
Happy Birthday Katrina Kaif: ಮದುವೆ ಬಳಿಕ ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾರ್ಬಿ ಡಾಲ್ ಕತ್ರಿನಾ ಕೈಫ್
Image
Viral Video: 2000 ಬಿಯರ್ ಬಾಟಲ್ ರಸ್ತೆಗೆ ಬಿದ್ದು ಪುಡಿಪುಡಿ; ಕ್ಲೀನ್ ಮಾಡಿದ ‘ಹೀರೋಗಳಿಗೆ’ ಧನ್ಯವಾದ ಹೇಳಿದ ಕಂಪನಿ
Image
‘ಕನಸು ಮನಸಲ್ಲೂ ನಾನು ಡೈರೆಕ್ಷನ್ ಮಾಡ್ತೀನಿ ಅಂದುಕೊಂಡಿರಲಿಲ್ಲ’ ಅರ್ಜುನ್ ಜನ್ಯ

ನಾಗರಿಕರ ಒಕ್ಕೂಟಕ್ಕೆ ಬೆದರಿಕೆ ಕರೆ: ಮೈದಾನಕ್ಕಾಗಿ ಹೋರಾಟಕ್ಕೆ ಇಳಿದಿರುವ ನಾಗರಿಕರ ಒಕ್ಕೂಟಕ್ಕೆ ಬೆದರಿಕೆ ಕರೆ ಬರುತ್ತಿರುವ ಆರೋಪ ಕೇಳಿಬಂದಿದೆ. ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆ ಬರುತ್ತಿದ್ದು, ಈ ಬಗ್ಗೆ ಒಕ್ಕೂಟದ ಪ್ರ. ಕಾರ್ಯದರ್ಶಿ ರುಕ್ಮಾಂಗದ ಮಾಹಿತಿ ನೀಡಿದ್ದಾರೆ. ಬೆದರಿಕೆ ಕರೆ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಯಾವುದಕ್ಕೂ ಹೆದರುವುದಿಲ್ಲ, ನಾವು ಧೈರ್ಯವಾಗಿ ಎದುರಿಸ್ತೇವೆ ಎಂದು ರುಕ್ಮಾಂಗದ ಹೇಳಿದ್ದಾರೆ.

ಇದನ್ನೂ ಓದಿ:Karnataka Dams Water Level: ಕೆಆರ್​ಎಸ್ ಶೇ.96ರಷ್ಟು ಭರ್ತಿ, ರಾಜ್ಯದ ಉಳಿದ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿದೆ

Published On - 8:50 am, Sat, 16 July 22