Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಭಗ್ನ ಪ್ರೇಮಿಯಿಂದ ಚರ್ಚ್​ನಲ್ಲಿ ದಾಂಧಲೆ: ಅನೇಕ‌ ವಸ್ತುಗಳು ಧ್ವಂಸ

ಪ್ರೇಮ ವೈಫಲ್ಯದಿಂದ ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ, ಇಂದು(ಜೂ.21) ನಸುಕಿನ ಜಾವ 4 ಗಂಟೆಯ ಸುಮಾರಿಗೆ ಕಮ್ಮನಹಳ್ಳಿಯ ಚರ್ಚ್​ನ ಪಾಟ್​ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಒಡೆದು ದಾಂಧಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Bengaluru News: ಭಗ್ನ ಪ್ರೇಮಿಯಿಂದ ಚರ್ಚ್​ನಲ್ಲಿ ದಾಂಧಲೆ: ಅನೇಕ‌ ವಸ್ತುಗಳು ಧ್ವಂಸ
ಕೃತ್ಯ ಎಸಗಿದ ವ್ಯಕ್ತಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 21, 2023 | 1:45 PM

ಬೆಂಗಳೂರು: ಪ್ರೀತಿ ಎಂತಹವರನ್ನು ಬದುಕಿಸುವ ಜೊತೆಗೆ ಹೆಚ್ಚು ಕಮ್ಮಿಯಾದರೇ ಜೀವವನ್ನೇ ತೆಗೆಯುತ್ತದೆ. ಹೌದು ನಾವು ತುಂಬಾ ಪ್ರೀತಿಸುತ್ತಿರುವವರು ಸಡನ್​ ನಮ್ಮನ್ನ ಬಿಟ್ಟು ಹೋದರೇ ಆಗುವಂತಹ ನೋವು ಹೇಳತೀರದು. ಅದರಂತೆ ಇಲ್ಲೊಬ್ಬ ಯುವಕ ಪ್ರೇಮ ವೈಫಲ್ಯ(Love Failure)ದಿಂದ ಮಾನಸಿಕವಾಗಿ ನೊಂದು, ಇಂದು(ಜೂ.21) ನಸುಕಿನ ಜಾವ 4 ಗಂಟೆಯ ಸುಮಾರಿಗೆ ಕಮ್ಮನಹಳ್ಳಿ(Kammanahalli)ಯ ಚರ್ಚ್​ನ ಪಾಟ್​ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಒಡೆದು ದಾಂಧಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮ್ಯಾಥ್ಯೂ ಎಂಬಾತನೇ ಕೃತ್ಯ ಎಸಗಿದ ಯುವಕ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಆರೋಪಿ ಯುವಕನನ್ನ ಬಾಣಸವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಪೊಲೀಸರಿಗೆ ತಲೆನೋವಾದ ಯುವಕ

ಮಾನಸಿಕವಾಗಿ ವರ್ತಿಸುತ್ತಿದ್ದ ಇತನನ್ನ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಹುಚ್ಚನಂತೆ ಹೇಳಿಕೆ ನೀಡಿದ್ದಾನೆ. ಹೌದು ಯಾರು ನೀನು ಎಂದು ಕೇಳಿದಾಗ, ನಾನು ದೇವರು. ನನ್ನ ತಂದೆ ಕೂಡ ದೇವರು ಎಂದಿದ್ದಾನೆ. ಏನು ಕೆಲಸ ಮಾಡುತ್ತಿಯಾ ಎಂದರೇ ‘ದೇವರು ಏನು ಕೆಲಸ ಮಾಡುತ್ತಾನೆ ಎಂದು ತಿರುಗಿ ಪೊಲೀಸರಿಗೆ ಪ್ರಶ್ನಿಸಿದ್ದಾನೆ. ಇನ್ನು ಈ ಕುರಿತು ತಲೆ ಕೆಡಿಸಿಕೊಂಡು ಘಟನಾ ಸ್ಥಳದಲ್ಲಿ ಪರಿಶೀಲನೆ ಮಾಡುತ್ತಿದ್ದ ವೇಳೆ ಯುವಕನ ತಾಯಿ ಬಂದಿದ್ದು, ಬಳಿಕ ಯುವಕನ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ:Goondagiri: ಬೆಂಗಳೂರಿನ ಅವೆನ್ಯೂ ರಸ್ತೆ ಬಳಿ ಹೋಟೆಲ್​ನಲ್ಲಿ 30 ದುಷ್ಕರ್ಮಿಗಳಿಂದ ದಾಂಧಲೆ

ಕೆಲಸಕ್ಕೆ ಹೋಗದ ಮ್ಯಾಥ್ಯೂಗೆ ಪ್ರೇಮ ವೈಫಲ್ಯ

ಕೇರಳ ಮೂಲದ ಇತ 30 ವರ್ಷವಾದರೂ ಕೆಲಸಕ್ಕೆ ಹೊಗುತ್ತಿರಲಿಲ್ಲ. ವಿದೇಶಗಳಲ್ಲಿಯು ಸಹ ಸಾಕಷ್ಟು ಓಡಾಟ ಮಾಡಿರುವ ಮ್ಯಾಥ್ಯೂವ್​ಗೆ ಈ ಹಿಂದೆ ಪ್ರೇಮ ವೈಫಲ್ಯವಾಗಿದೆಯಂತೆ. ಆದರಿಂದಲೇ ಮಾನಸಿಕವಾಗಿ ನೊಂದಿದ್ದ ಆತ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹೌದು ತಾಯಿಯನ್ನ ವಿಚಾರಣೆ ವೇಳೆ ‘ಮನೆಯಲ್ಲಿ ದೇವರನ್ನು ಇಟ್ಟುಕೊಂಡು ಚರ್ಚ್ಗೆ ಯಾಕೆ ಹೋಗ್ತೀಯಾ ಎಂದು ತನ್ನ ತಾಯಿಗೆ ಅವಾಜ್ ಹಾಕುತ್ತಿದ್ದಾನೆ. ಇನ್ನು ಈ ಕುರಿತು ಬಾಣಸವಾಡಿ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?