Bengaluru News: ಭಗ್ನ ಪ್ರೇಮಿಯಿಂದ ಚರ್ಚ್ನಲ್ಲಿ ದಾಂಧಲೆ: ಅನೇಕ ವಸ್ತುಗಳು ಧ್ವಂಸ
ಪ್ರೇಮ ವೈಫಲ್ಯದಿಂದ ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ, ಇಂದು(ಜೂ.21) ನಸುಕಿನ ಜಾವ 4 ಗಂಟೆಯ ಸುಮಾರಿಗೆ ಕಮ್ಮನಹಳ್ಳಿಯ ಚರ್ಚ್ನ ಪಾಟ್ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಒಡೆದು ದಾಂಧಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು: ಪ್ರೀತಿ ಎಂತಹವರನ್ನು ಬದುಕಿಸುವ ಜೊತೆಗೆ ಹೆಚ್ಚು ಕಮ್ಮಿಯಾದರೇ ಜೀವವನ್ನೇ ತೆಗೆಯುತ್ತದೆ. ಹೌದು ನಾವು ತುಂಬಾ ಪ್ರೀತಿಸುತ್ತಿರುವವರು ಸಡನ್ ನಮ್ಮನ್ನ ಬಿಟ್ಟು ಹೋದರೇ ಆಗುವಂತಹ ನೋವು ಹೇಳತೀರದು. ಅದರಂತೆ ಇಲ್ಲೊಬ್ಬ ಯುವಕ ಪ್ರೇಮ ವೈಫಲ್ಯ(Love Failure)ದಿಂದ ಮಾನಸಿಕವಾಗಿ ನೊಂದು, ಇಂದು(ಜೂ.21) ನಸುಕಿನ ಜಾವ 4 ಗಂಟೆಯ ಸುಮಾರಿಗೆ ಕಮ್ಮನಹಳ್ಳಿ(Kammanahalli)ಯ ಚರ್ಚ್ನ ಪಾಟ್ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಒಡೆದು ದಾಂಧಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮ್ಯಾಥ್ಯೂ ಎಂಬಾತನೇ ಕೃತ್ಯ ಎಸಗಿದ ಯುವಕ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಆರೋಪಿ ಯುವಕನನ್ನ ಬಾಣಸವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಪೊಲೀಸರಿಗೆ ತಲೆನೋವಾದ ಯುವಕ
ಮಾನಸಿಕವಾಗಿ ವರ್ತಿಸುತ್ತಿದ್ದ ಇತನನ್ನ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಹುಚ್ಚನಂತೆ ಹೇಳಿಕೆ ನೀಡಿದ್ದಾನೆ. ಹೌದು ಯಾರು ನೀನು ಎಂದು ಕೇಳಿದಾಗ, ನಾನು ದೇವರು. ನನ್ನ ತಂದೆ ಕೂಡ ದೇವರು ಎಂದಿದ್ದಾನೆ. ಏನು ಕೆಲಸ ಮಾಡುತ್ತಿಯಾ ಎಂದರೇ ‘ದೇವರು ಏನು ಕೆಲಸ ಮಾಡುತ್ತಾನೆ ಎಂದು ತಿರುಗಿ ಪೊಲೀಸರಿಗೆ ಪ್ರಶ್ನಿಸಿದ್ದಾನೆ. ಇನ್ನು ಈ ಕುರಿತು ತಲೆ ಕೆಡಿಸಿಕೊಂಡು ಘಟನಾ ಸ್ಥಳದಲ್ಲಿ ಪರಿಶೀಲನೆ ಮಾಡುತ್ತಿದ್ದ ವೇಳೆ ಯುವಕನ ತಾಯಿ ಬಂದಿದ್ದು, ಬಳಿಕ ಯುವಕನ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ಇದನ್ನೂ ಓದಿ:Goondagiri: ಬೆಂಗಳೂರಿನ ಅವೆನ್ಯೂ ರಸ್ತೆ ಬಳಿ ಹೋಟೆಲ್ನಲ್ಲಿ 30 ದುಷ್ಕರ್ಮಿಗಳಿಂದ ದಾಂಧಲೆ
ಕೆಲಸಕ್ಕೆ ಹೋಗದ ಮ್ಯಾಥ್ಯೂಗೆ ಪ್ರೇಮ ವೈಫಲ್ಯ
ಕೇರಳ ಮೂಲದ ಇತ 30 ವರ್ಷವಾದರೂ ಕೆಲಸಕ್ಕೆ ಹೊಗುತ್ತಿರಲಿಲ್ಲ. ವಿದೇಶಗಳಲ್ಲಿಯು ಸಹ ಸಾಕಷ್ಟು ಓಡಾಟ ಮಾಡಿರುವ ಮ್ಯಾಥ್ಯೂವ್ಗೆ ಈ ಹಿಂದೆ ಪ್ರೇಮ ವೈಫಲ್ಯವಾಗಿದೆಯಂತೆ. ಆದರಿಂದಲೇ ಮಾನಸಿಕವಾಗಿ ನೊಂದಿದ್ದ ಆತ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹೌದು ತಾಯಿಯನ್ನ ವಿಚಾರಣೆ ವೇಳೆ ‘ಮನೆಯಲ್ಲಿ ದೇವರನ್ನು ಇಟ್ಟುಕೊಂಡು ಚರ್ಚ್ಗೆ ಯಾಕೆ ಹೋಗ್ತೀಯಾ ಎಂದು ತನ್ನ ತಾಯಿಗೆ ಅವಾಜ್ ಹಾಕುತ್ತಿದ್ದಾನೆ. ಇನ್ನು ಈ ಕುರಿತು ಬಾಣಸವಾಡಿ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ