AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಶಾಸಕರ ಬೆನ್ನು ಬಿದ್ದ ಕಾಂಗ್ರೆಸ್; ಬಿಜೆಪಿ ಶಾಸಕರ ಪ್ರಕರಣದ ಮಾಹಿತಿ ಕಲೆಹಾಕಲು ತಯಾರಿ

ಕೆಪಿಸಿಸಿ ಕಾನೂನು ಘಟಕಕ್ಕೆ ಡಿಸಿಎಂ‌ ಡಿಕೆವಶಿವಕುಮಾರ್ ಅವರು ಈ ಟಾಸ್ಕ್ ನೀಡಿದ್ದಾರೆ. ಬಿಜೆಪಿ ಶಾಸಕರ ಮೇಲಿರುವ ಭೂ ವ್ಯವಹಾರ ಪ್ರಕರಣಗಳ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಕೆಪಿಸಿಸಿ ಕಾನೂನು ಘಟಕ ಈಗಾಗಲೇ ಎರಡು ಸುತ್ತು ಸಭೆ ಸೇರಿದ್ದು ಇಂದು ಸಂಜೆ 4 ಗಂಟೆಗೆ ಮತ್ತೊಂದು ಸುತ್ತಿನ ಸಭೆ ನಿಗದಿಯಾಗಿದೆ.

ಬಿಜೆಪಿ ಶಾಸಕರ ಬೆನ್ನು ಬಿದ್ದ ಕಾಂಗ್ರೆಸ್; ಬಿಜೆಪಿ ಶಾಸಕರ ಪ್ರಕರಣದ ಮಾಹಿತಿ ಕಲೆಹಾಕಲು ತಯಾರಿ
ಬಿಜೆಪಿ, ಕಾಂಗ್ರೆಸ್​
ಪ್ರಸನ್ನ ಗಾಂವ್ಕರ್​
| Edited By: |

Updated on: Oct 07, 2024 | 9:42 AM

Share

ಬೆಂಗಳೂರು, ಅ.07: ಮುಡಾ (MUDA) ಬ್ರಹ್ಮಾಂಡ ಭ್ರಷ್ಟಾಚಾರದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ನಿವೃತ್ತ ನ್ಯಾಯಮೂರ್ತಿ ದೇಸಾಯಿ ನೇತೃತ್ವದ ಆಯೋಗ ಅಕ್ರಮ ಕೆದಕ್ತಿದೆ. 8 ಲಕ್ಷ ದಾಖಲಾತಿ ನೀಡುವಂತೆ ಮುಡಾಗೆ ಸೂಚನೆ ಕೊಟ್ಟಿದೆ. ಎಲ್ಲಾ ದಾಖಲೆಗಳು ಸರ್ಟಿಫೈಡ್ ಆಗಿರಬೇಕು ಅಂತನೂ ತಾಕೀತು ಮಾಡಿದೆ. ಮತ್ತೊಂದೆಡೆ ಮುಡಾ ವಿಚಾರವಾಗಿ ಸಿದ್ದರಾಮಯ್ಯ (Siddaramaiah) ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದು ಮುಡಾ ಸಂಕಷ್ಟದಿಂದ ಹೊರಬರಲು ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಅಹಿಂದ ಟ್ರಂಪ್ ಕಾರ್ಡ್ ಬಳಸ್ತಿದ್ದಾರೆ. ಇದೆಲ್ಲಾ ಒಂದು ಕಡೆಯಾದ್ರೆ ಮತ್ತೊಂದೆಡೆ ಕಾಂಗ್ರೆಸ್ (Congress), ಬಿಜೆಪಿಗೆ (BJP)ಕೌಂಟರ್​ ಕೊಡಲು ಮುಂದಾಗಿದ್ದು ಬಿಜೆಪಿ ಶಾಸಕರ ಬೆನ್ನು ಬಿದ್ದಿದೆ. ಬಿಜೆಪಿ ಶಾಸಕರ ಪ್ರಕರಣದ ಮಾಹಿತಿ ಕಲೆಹಾಕಲು ನಿರ್ಧಾರ ಮಾಡಿದೆ.

ಬಿಜೆಪಿ ಮಾಜಿ ಸಚಿವರದ್ದಾಯ್ತು, ಇದೀಗ ಶಾಸಕರ ಸರದಿ. ಬಿಜೆಪಿ ಶಾಸಕರ ಮೇಲಿರುವ ಪ್ರಕರಣಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ಬಿಜೆಪಿ ಶಾಸಕರಿಗೆ ಸಂಬಂಧಿಸಿದ ಭೂ ವ್ಯವಹಾರಗಳನ್ನು ಕೆದಕುತ್ತಿದೆ. ಕೆಪಿಸಿಸಿ ಕಾನೂನು ಘಟಕಕ್ಕೆ ಡಿಸಿಎಂ‌ ಡಿಕೆವಶಿವಕುಮಾರ್ ಅವರು ಈ ಟಾಸ್ಕ್ ನೀಡಿದ್ದಾರೆ. ಬಿಜೆಪಿ ಶಾಸಕರ ಮೇಲಿರುವ ಭೂ ವ್ಯವಹಾರ ಪ್ರಕರಣಗಳ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಕೆಪಿಸಿಸಿ ಕಾನೂನು ಘಟಕ ಈಗಾಗಲೇ ಎರಡು ಸುತ್ತು ಸಭೆ ಸೇರಿದ್ದು ಇಂದು ಸಂಜೆ 4 ಗಂಟೆಗೆ ಮತ್ತೊಂದು ಸುತ್ತಿನ ಸಭೆ ನಿಗದಿಯಾಗಿದೆ.

ಇದನ್ನೂ ಓದಿ: ಕೊಡಗು ದಸರಾ ಉತ್ಸವದಲ್ಲಿ ಆಕರ್ಷಣೆಯ ಕೇಂದ್ರವಾದ ಕಾಫಿ

ಸಿಎಂ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕೆಪಿಸಿಸಿ ಕಾನೂನು ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಆರ್ ಅಶೋಕ್ ವಿರುದ್ಧದ ಬಗರ್ ಹುಕುಂ ಜಮೀನು ಹಂಚಿಕೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಈಗಾಗಲೇ 20ಕ್ಕೂ ಹೆಚ್ಚು ಬಿಜೆಪಿ ಶಾಸಕರ ಮೇಲಿನ ಪ್ರಕರಣಗಳ ವಿವರವನ್ನು ಕಾಂಗ್ರೆಸ್ ನಾಯಕರು ಕೆದಕಿದ್ದಾರೆ. ಮಾಜಿ ಸಚಿವರು ಮಾತ್ರವಲ್ಲ ಶಾಸಕರ ಕೇಸ್ ಗಳ ಮೇಲೂ ದುರ್ಬೀನು ಹಾಕಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ