ಬೆಂಗಳೂರಿನಲ್ಲಿ ಡೇಂಜರ್ಸ್ ದುಬೈಗಿಡ: ಕೋನೋ ಕಾರ್ಪಸ್ ಮನುಷ್ಯನಿಗೆ ಎಷ್ಟು ಡೇಂಜರ್ ಗೊತ್ತಾ?
ಸುಪ್ರೀಂಕೋರ್ಟ್ ಸೂಚನೆ ನೀಡಿದರೂ ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ನಿಷೇಧಿತ ಡೇಂಜರ್ ದುಬೈ ಗಿಡ ಬೆಳೆಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಈ ನಡೆಗೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಗಿಡಗಳನ್ನ ತೆರವು ಮಾಡುವಂತೆ ಆಗ್ರಹಿಸಿದ್ದಾರೆ. ಹಾಗಾದರೆ ಈ ದುಬೈ ಗಿಡದಿಂದ ಮನುಷ್ಯರಿಗೆ ಹೇಗೆ ಹಾನಿ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 13: ರಾಜಧಾನಿಯ ರಸ್ತೆಗಳಲ್ಲಿ ನಿಷೇಧಿತ ಕೋನೋ ಕಾರ್ಪಸ್ (conocarpus plants) (ದುಬೈ ಗಿಡ) ಬೆಳೆಸಲಾಗುತ್ತಿದೆ. ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ದುಬೈ ಗಿಡವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನೆಟ್ಟು ಪೋಷಿಸುತ್ತಿರುವ ಆರೋಪಗಳು ಕೇಳಿಬಂದಿವೆ. ಪರಿಸರ ಪ್ರಿಯರು ಕಳೆದ ವರ್ಷ ಈ ಗಿಡದ ಬಗ್ಗೆ ದೂರು ಸಲ್ಲಿಸಿದ್ದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೆಂಗಳೂರಿನ ರಸ್ತೆಗಳಲ್ಲಿ ನಿಷೇಧಿತ ದುಬೈ ಗಿಡವನ್ನು ಬೆಳೆಸಿ ಸೈಲೆಂಟ್ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಂಧ್ರ, ಗುಜರಾತ್, ತೆಲಂಗಾಣದಲ್ಲಿ ಈಗಾಗಲೇ ಈ ಡೇಂಜರ್ ಗಿಡವನ್ನು ಬ್ಯಾನ್ ಮಾಡಲಾಗಿದೆ. ಆದರೆ ವರ್ಷ ಕಳೆದರೂ ಬೆಂಗಳೂರಿನ ರಸ್ತೆಗಳಲ್ಲಿ ತೆರವಾಗಿಲ್ಲ. ಒಟ್ಟು 5500 ದುಬೈ ಗಿಡಗಳನ್ನ ತನ್ನ ವ್ಯಾಪ್ತಿಯಲ್ಲಿ ಜಿಬಿಎ ಬೆಳೆಸಿದೆ. ನಿರ್ವಹಣೆ ಸುಲಭ ಎಂದು ಇದೇ ಗಿಡಗಳ ಪೋಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: 4 ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿದ್ದ ಬೆಂಗಳೂರು ಮೂಲದ ವ್ಯಕ್ತಿ, ಅದರಿಂದ ಹೊರಬಂದದ್ದು ಹೇಗೆ ಗೊತ್ತಾ?
ಈಗಾಗಲೇ ಬೆಂಗಳೂರಿನ ರಸ್ತೆಗಳಲ್ಲಿ ದುಬೈ ಗಿಡ ಆಳೆತ್ತರ ಬೆಳೆದು ನಿಂತಿವೆ. ಈ ದುಬೈ ಗಿಡ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಎನ್ನಲಾಗುತ್ತಿದೆ. ಅಸ್ತಮಾ, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಈ ಡೇಂಜರ್ ಟ್ರೀ ಆಕ್ಸಿಜನ್ ಬದಲು ಕಾರ್ಬನ್ ಡೈಆಕ್ಸೈಡ್ ರಿಲೀಸ್ ಮಾಡುತ್ತದೆ.
ಗಿಡ ತೆರವಿಗೆ ಪರಿಸರ ಪ್ರೇಮಿಗಳ ಆಗ್ರಹ
ಸದ್ಯ ರಾಜಧಾನಿಯ ರಸ್ತೆಗಳಲ್ಲಿ ಬೆಳೆಸಿರುವ ಈ ದುಬೈ ಗಿಡ ತೆರವಿಗೆ ಪರಿಸರ ಪ್ರೇಮಿಗಳಿಂದ ಆಗ್ರಹಿಸಲಾಗಿದೆ. ಇತ್ತ ದುಬೈ ಗಿಡ ಬೆಳೆಯದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೂ ರಾಜಧಾನಿಯಲ್ಲಿ ಈವರೆಗೆ ತೆರವಾಗಿಲ್ಲ.
ಸೂಚನೆ ಬಂದ ಮೇಲೆ ಮುಂದಿನ ಕ್ರಮ
ಇನ್ನು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ, ಸರ್ಕಾರದ ಸೂಚನೆ ಬಂದ ಮೇಲೆ ಮುಂದಿನ ಕ್ರಮ ಎನ್ನುತ್ತಿದ್ದಾರೆ. ಸುಪ್ರೀಂಕೋರ್ಟ್ ಸೂಚನೆ ನೀಡಿದೆ, ಇಲ್ಲಿ ಸೂಚನೆ ಬಂದರೆ ಕ್ರಮಕೈಗೊಳ್ಳುತ್ತೇವೆ ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.
ಕೋನೋಕಾರ್ಪಸ್ ಏಕೆ ಡೇಂಜರ್?
- ಈ ಗಿಡ ಆಕ್ಸಿಜನ್ ಬದಲು ಕಾರ್ಬನ್ ಬಿಡುಗಡೆ ಮಾಡುತ್ತೆ
- ಇದರ ಸುತ್ತಮುತ್ತ ವಾಸಿಸುವ ಜನರಿಗೆ ಅಸ್ತಮಾ, ಉಸಿರಾಟ ಸಮಸ್ಯೆ ಬರುತ್ತೆ
- ಬೇರುಗಳಿಂದ ಪೈಪ್ ಲೈನ್ಗಳಿಗೆ ಹಾನಿ ಮಾಡುತ್ತದೆ
- ಅಂತರ್ಜಲ ಮಟ್ಟ ಕುಸಿಯುವಂತೆ ಮಾಡುವ ಸಾಧ್ಯತೆ
- ಅತಿಹೆಚ್ಚು ಆಳದಲ್ಲಿ ಬೇರು ಬಿಡುವುದರಿಂದ ಅಕ್ಕಪಕ್ಕದ ಮರಗಿಡಗಳಿಗೆ ಸಮಸ್ಯೆ ಉಂಟು ಮಾಡುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:58 pm, Mon, 13 October 25



