AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯ ಸ್ಮಾರಕ ನಿರ್ಮಿಸಬೇಕೆಂದು ಹಣ ಕೇಳಿ ಮಹಿಳೆಗೆ 2.3 ಲಕ್ಷ ರೂ. ವಂಚಿಸಿದ ‘ನಕಲಿ ಡಿಆರ್‌ಡಿಒ’ ಅಧಿಕಾರಿ!

ತಾನು ಡಿಆರ್‌ಡಿಒ ಹಿರಿಯ ಅಧಿಕಾರಿ ಎಂದು ನಂಬಿಸಿ, ತಾಯಿಯ ಸ್ಮಾರಕ ನಿರ್ಮಿಸಲು ಹಣದ ಅಗತ್ಯವಿದೆ ಎಂದು ಸುಳ್ಳು ಹೇಳಿ ಮಹಿಳೆಯೊಬ್ಬರಿಗೆ 2.3 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಣ ಪಡೆದ ನಂತರ ಆರೋಪಿ ಸಂಪರ್ಕಕ್ಕೆ ಸಿಗದಿದ್ದಾಗ ವಂಚನೆ ಬೆಳಕಿಗೆ ಬಂದಿದ್ದು, ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಸೈಬರ್ ಕ್ರೈಮ್ ತನಿಖೆ ಆರಂಭಿಸಿದ್ದಾರೆ.

ತಾಯಿಯ ಸ್ಮಾರಕ ನಿರ್ಮಿಸಬೇಕೆಂದು ಹಣ ಕೇಳಿ ಮಹಿಳೆಗೆ 2.3 ಲಕ್ಷ ರೂ. ವಂಚಿಸಿದ 'ನಕಲಿ ಡಿಆರ್‌ಡಿಒ' ಅಧಿಕಾರಿ!
ಸಾಂದರ್ಭಿಕ ಚಿತ್ರImage Credit source: gettyimages.com
ಭಾವನಾ ಹೆಗಡೆ
|

Updated on: Jul 25, 2026 | 2:00 PM

Share

ಮುಖ್ಯಾಂಶಗಳು

  • ತಾಯಿಯ ಸ್ಮಾರಕ ನಿರ್ಮಾಣದ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ.
  • ನಕಲಿ ಡಿಆರ್‌ಡಿಒ ಅಧಿಕಾರಿ ಎಂದು ನಂಬಿಸಿ ಆರೋಪಿ ವಂಚನೆ ಎಸಗಿದ್ದಾನೆ.
  • ಹಣ ಕಳೆದುಕೊಂಡ ಸಂತ್ರಸ್ತೆ ನೀಡಿರುವ ದೂರಿನನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಜುಲೈ 25: “ನನ್ನ ತಾಯಿಯ ನೆನಪಿನಲ್ಲಿ ಸ್ಮಾರಕ ಕಟ್ಟಿಸಬೇಕು, ಅದಕ್ಕೆ ಹಣದ ಅಭಾವವಿದೆ” ಎಂದು ಸುಳ್ಳು ಹೇಳಿ, ತಾನು ಡಿಆರ್‌ಡಿಒ (DRDO) ಹಿರಿಯ ಅಧಿಕಾರಿ ಎಂದು ನಂಬಿಸಿ ಮಹಿಳೆಯೊಬ್ಬರಿಗೆ 2.3 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣ ಹಾಗೂ ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ ಮೂಲಕ ಮಹಿಳೆಯ ಪರಿಚಯ ಮಾಡಿಕೊಂಡಿದ್ದ ಆರೋಪಿ, ತಾನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (DRDO) ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದ.

ಸ್ಮಾರಕದ ಹೆಸರಲ್ಲಿ ವಂಚನೆ

ಪರಿಚಯ ಬೆಳೆದಂತೆ ಮಹಿಳೆಯ ವಿಶ್ವಾಸ ಗಿಟ್ಟಿಸಿಕೊಂಡ ವಂಚಕ, ತಾಯಿಯ ಅಗಲಿಕೆಯ ಬಗ್ಗೆ ಭಾವುಕವಾಗಿ ಮಾತನಾಡಿ ಅನುಕಂಪ ಗಿಟ್ಟಿಸಿಕೊಂಡಿದ್ದಾನೆ. “ತಾಯಿಯ ಸವಿನೆನಪಿನಲ್ಲಿ ಬೃಹತ್ ಸ್ಮಾರಕ ಒಂದನ್ನು ನಿರ್ಮಿಸುತ್ತಿದ್ದು, ಸದ್ಯಕ್ಕೆ ತುರ್ತಾಗಿ ಹಣದ ಅಗತ್ಯವಿದೆ. ಕೆಲಸ ಮುಗಿದ ತಕ್ಷಣ ಹಣ ಹಿಂತಿರುಗಿಸುತ್ತೇನೆ” ಎಂದು ನಂಬಿಸಿದ್ದಾನೆ. ಆತನ ಮಾತುಗಳನ್ನು ನಿಜವೆಂದು ನಂಬಿದ ಸಂತ್ರಸ್ತ ಮಹಿಳೆ, ಹಂತ ಹಂತವಾಗಿ ಒಟ್ಟು 2.30 ಲಕ್ಷ ರೂಪಾಯಿಗಳನ್ನು ಆತನ ಖಾತೆಗೆ ವರ್ಗಾಯಿಸಿದ್ದಾರೆ.

ಹಣ ಪಡೆದ ಬಳಿಕ ಮುಖವಾಡ ಬಯಲು!

ಹಣ ಕೈಸೇರಿದ ನಂತರ ಆರೋಪಿ ಮೊಬೈಲ್ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಾನೆ. ಅನುಮಾನಗೊಂಡು ಆತನ ಹಿನ್ನೆಲೆ ವಿಚಾರಿಸಿದಾಗ ಆತ ಡಿಆರ್‌ಡಿಒ ಅಧಿಕಾರಿಯೂ ಅಲ್ಲ, ಹೇಳಿದ್ದೆಲ್ಲವೂ ಸುಳ್ಳು ಎಂಬ ಕಹಿ ಸತ್ಯ ಮಹಿಳೆಗೆ ಅರಿವಾಗಿದೆ.

ಇದನ್ನೂ ಓದಿ ಬೆಂಗಳೂರಲ್ಲಿ ಗೂಂಡಾ ಕಾಯ್ದೆಯಡಿ ರೌಡಿ ಶೀಟರ್ ವಿಘ್ನೇಶ್ ಬಂಧನ

ತಾನು ವಂಚನೆಗೊಳಗಾಗಿರುವುದನ್ನು ಅರಿತ ಸಂತ್ರಸ್ತೆ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಸುಳಿವು ಪತ್ತೆಹಚ್ಚಲು ಸೈಬರ್ ಕ್ರೈಮ್ ವಿಭಾಗದ ನೆರವಿನೊಂದಿಗೆ ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us