AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರುಬರಹಳ್ಳಿಯಲ್ಲಿ ಕೊಲೆ ಯತ್ನ: ಒಬ್ಬನ ಕೈ ಕಟ್​, ನಾಯಿ ಕಚ್ಚಿಕೊಂಡು ಹೋದ ಕೈ ಹುಡುಕಾಟದಲ್ಲಿ ಪೊಲೀಸರು!

ಒಂದೇ ಮಚ್ಚಿನೇಟಿಗೆ ಪ್ರಜ್ವಲ್ ಬಲಗೈ ಕಟ್ ಆಗಿ ಬಿದ್ದಿದೆ. ಹಲ್ಲೆ ನಡೆಸಿದ ಎದುರಾಳಿ ಗ್ಯಾಂಗ್ ಕೈ ಕಟ್ ಆಗ್ತಿದ್ದಂತೆ ಎಸ್ಕೇಪ್ ಆಗಿದೆ. ಈ ಮಧ್ಯೆ, ನಾಯಿಯೊಂದು ರಸ್ತೆಯಲ್ಲಿ ಬಿದ್ದಿರುವ ಹಸಿ ಮಾಂಸದ ಕೈಯನ್ನು ಕಚ್ಚಿ ಪರಾರಿಯಾಗಿದೆ. ಪೊಲೀಸರು ಕೈ ಹುಡುಕಾಟದಲ್ಲಿದ್ದಾರೆ.

ಕುರುಬರಹಳ್ಳಿಯಲ್ಲಿ ಕೊಲೆ ಯತ್ನ: ಒಬ್ಬನ ಕೈ ಕಟ್​, ನಾಯಿ ಕಚ್ಚಿಕೊಂಡು ಹೋದ ಕೈ ಹುಡುಕಾಟದಲ್ಲಿ ಪೊಲೀಸರು!
ಕೊಲೆ ಯತ್ನ: ಒಬ್ಬನ ಕೈ ಕಟ್​, ನಾಯಿ ಕಚ್ಚಿಕೊಂಡು ಹೋದ ಕೈನ ಹುಡುಕಾಟದಲ್ಲಿ ಪೊಲೀಸರು!
TV9 Web
| Edited By: |

Updated on:Nov 02, 2022 | 3:54 PM

Share

ಬೆಂಗಳೂರು: ಕುಡಿದ ಅಮಲಿನಲ್ಲಿ ಎರಡು ಗ್ಯಾಂಗ್ ಗಳ ನಡುವೆ ಗಲಾಟೆಯಾಗಿರುವ ಪ್ರಕರಣವೊಂದು ಅಕ್ಟೋಬರ್ 29ರ ರಾತ್ರಿ 12:30 ರ ಸುಮಾರಿಗೆ ನಡೆದಿದೆ. ಕೊಲೆ ಯತ್ನ ಪ್ರಕರಣದಲ್ಲಿ ಮಚ್ಚೇಟಿಗೆ ಪಜ್ವಲ್ (21) ಎಂಬ ಯುವಕನ ಕೈ ಕಟ್ ಆಗಿದೆ. ಕುರುಬರಹಳ್ಳಿಯಲ್ಲಿ ನಡೆದ ಭಯಾನಕ 307 ಕೇಸ್ ಇದಾಗಿದೆ. ಲಗ್ಗೆರೆಯಲ್ಲಿರುವ ಕದಂಬ ಬಾರ್ ನಲ್ಲಿ ಎಣ್ಣೆ ಹೊಡೆಯುತ್ತಿದ್ದ ಪ್ರಜ್ವಲ್ ಗ್ಯಾಂಗ್, ಎಣ್ಣೆ ಏಟಲ್ಲಿ ಎದುರಲ್ಲಿ ಕುಳಿತ ಮತ್ತೊಂದು ಟೀಂ ನೊಂದಿಗೆ ಗಲಾಟೆ ಮಾಡಿಕೊಂಡಿತ್ತು. ಗಲಾಟೆ ನಂತರ ಬಾರ್ ಸಿಬ್ಬಂದಿ ಎರಡೂ ಗ್ಯಾಂಗನ್ನು ಹೊರ ಕಳಿಸಿದ್ದರು.

ಬಾರ್ ನಿಂದ ಹೊರಬಿದ್ದ ನಂತರ ನಡೆದಿರುವುದೇ ಈ ಗ್ಯಾಂಗ್ ವಾರ್​, ಕೊಲೆ ಯತ್ನ ಪ್ರಕರಣ:

ಬಾರ್ ನಿಂದ ಹೊರಬಿದ್ದ ನಂತರ ಪ್ರಜ್ವಲ್ ಗ್ಯಾಂಗ್ ಕುರುಬರ ಹಳ್ಳಿ ಬಳಿ ಬಂದು ಕುಳಿತಿತ್ತು. ಆ ವೇಳೆಗೆ, ಗಲಾಟೆ ಮಾಡಿಕೊಂಡಿದ್ದ ಮತ್ತೊಂದು ಗ್ಯಾಂಗ್ ಕಾರಲ್ಲಿ ಎಂಟ್ರಿ ಕೊಟ್ಟಿದೆ. ಅವ್ರು ಎಂಟ್ರಿ ಆಗ್ತಿದ್ದಂತೆ ಪ್ರಜ್ವಲ್ ಜೊತೆಗಿದ್ದವರು ಎಸ್ಕೇಪ್ ಆಗಿದ್ದಾರೆ. ಎದುರಾಳಿ ಟೀಂ ಸರಿಯಾಗಿ ಆಗಲೇ ಪ್ರಜ್ವಲ್ ಮೇಲೆ ಮಚ್ಚು ಬೀಸಿದೆ. ಒಂದೇ ಮಚ್ಚಿನೇಟಿಗೆ ಪ್ರಜ್ವಲ್ ಬಲಗೈ ಕಟ್ ಆಗಿ ಬಿದ್ದಿದೆ.

ಹಲ್ಲೆ ನಡೆಸಿದ ಎದುರಾಳಿ ಗ್ಯಾಂಗ್ ಕೈ ಕಟ್ ಆಗ್ತಿದ್ದಂತೆ ಎಸ್ಕೇಪ್ ಆಗಿದೆ. ಈ ಮಧ್ಯೆ, ನಾಯಿಯೊಂದು ರಸ್ತೆಯಲ್ಲಿ ಬಿದ್ದಿರುವ ಹಸಿ ಮಾಂಸದ ಕೈಯನ್ನು ಕಚ್ಚಿ ಪರಾರಿಯಾಗಿದೆ. ಬೀದಿ ನಾಯಿ ಪ್ರಜ್ವಲ್ ಕೈಯನ್ನ ಕಚ್ಚಿಕೊಂಡು ಹೋಗುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಕೊನೆಗೆ, ಪ್ರಜ್ವಲ್ ತನ್ನ ಸ್ನೇಹಿತರ ಸಹಾಯದಿಂದ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದಾನೆ. ಆಸ್ಪತ್ರೆಯಲ್ಲಿ ಜೆಸಿಬಿ ಕೈ ಮೇಲೆ ಹತ್ತಿ ಕಟ್ ಆಯ್ತು ಎಂದು ಕಥೆ ಹೇಳಿದ್ದ ಪ್ರಜ್ವಲ್. ಕುಡಿದ ಅಮಲು ಇಳಿದ ಮೇಲೆ ಮಚ್ಚಿನೇಟಿನ ಮಾಹಿತಿ ಕೊಟ್ಟಿದ್ದ. ಗಾಂಜಾ ಮತ್ತು ಎಣ್ಣೆ ಮತ್ತಲ್ಲಿ ಗ್ಯಾಂಗ್ ಗಳು ಗಲಾಟೆ ಮಾಡಿಕೊಂಡಿದ್ದವು.

ಪ್ರಜ್ವಲ್ ತಾಯಿ ನೀಡಿದ ದೂರಿನ ಮೇರೆಗೆ ಕೇಸ್ ದಾಖಲು:

ವಿಷಯ ತಿಳಿದುಬರುತ್ತಿದ್ದಂತೆ ಆಸ್ಪತ್ರೆಗೆ ಬಂದ ಪ್ರಜ್ವಲ್ ತಾಯಿ, ದೂರು ನೀಡಿ ಕೇಸ್ ದಾಖಲಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ನಾಯಿ ಕಚ್ಚಿಕೊಂಡು ಹೋಗಿರೋ ಪ್ರಜ್ವಲನ ಕೈ ಹುಡುಕಾಟದಲ್ಲಿದ್ದಾರೆ ಪೊಲೀಸರು. ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Published On - 1:38 pm, Wed, 2 November 22

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ