AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಪ್ರಧಾನಿ ಮೋದಿಗೆ ಪತ್ರ ಬರೆದ ಪದ್ಮಶ್ರೀ ಪುರಸ್ಕೃತ 70 ವೈದ್ಯರು

ಕೋಲ್ಕತ್ತಾದ ಜಿ.ಆರ್​.ಆಸ್ಪತ್ರೆ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪದ್ಮಶ್ರೀ ಪುರಸ್ಕೃತ 70 ವೈದ್ಯರು ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ‘ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಂದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದ್ದಾರೆ.

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಪ್ರಧಾನಿ ಮೋದಿಗೆ ಪತ್ರ ಬರೆದ ಪದ್ಮಶ್ರೀ ಪುರಸ್ಕೃತ 70 ವೈದ್ಯರು
ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಪ್ರಧಾನಿ ಮೋದಿಗೆ ಪತ್ರ ಬರೆದ ಪದ್ಮಶ್ರೀ ಪುರಸ್ಕೃತ 70 ವೈದ್ಯರು
ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on:Aug 18, 2024 | 8:59 PM

Share

ಬೆಂಗಳೂರು, ಆ.18: ಕೋಲ್ಕತ್ತಾದ ಜಿ.ಆರ್​.ಆಸ್ಪತ್ರೆ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಆಕ್ರೋಶದ ಕಿಚ್ಚು ಹೆಚ್ಚಳವಾಗುತ್ತಿದೆ. ಅದರಂತೆ ವೈದ್ಯರ ಮುಷ್ಕರಕ್ಕೆ ಇದೀಗ ಪದ್ಮಶ್ರೀ ಪುರಸ್ಕೃತ 70 ವೈದ್ಯರು ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ‘ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಂದವರಿಗೆ ಕಠಿಣ ಶಿಕ್ಷೆ ಆಗಬೇಕು. ವೈದ್ಯರ ಮೇಲಿನ ಹಲ್ಲೆ, ದೌರ್ಜನ್ಯ ತಡೆಗೆ ಪ್ರತ್ಯೇಕ ಕಾನೂನು ರೂಪಿಸಿ. ವೈದ್ಯರ ಮೇಲಿನ ದಾಳಿ ತಡೆಯಲು ಕಾನೂನು ಜಾರಿಗೆ ತರಬೇಕು ಎಂದಿದ್ದಾರೆ.

ಪತ್ರದಲ್ಲೇನಿದೆ?

‘ ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಸಂಭವಿಸಿದ ಭಯಾನಕ ಘಟನೆಗಳ ಬಗ್ಗೆ ಕಳವಳ ಮತ್ತು ಆಳವಾದ ವೇದನೆಯಿಂದ ನಿಮಗೆ ಪತ್ರ ಬರೆಯುತ್ತೇವೆ. ನಮ್ಮ ರಾಷ್ಟ್ರದ ಮುಖ್ಯಸ್ಥರಾಗಿ, ಈ ಆತಂಕಕಾರಿ ಪರಿಸ್ಥಿತಿಯನ್ನು ಪರಿಹರಿಸಲು ನಿಮ್ಮ ತಕ್ಷಣದ ಮತ್ತು ವೈಯಕ್ತಿಕ ಹಸ್ತಕ್ಷೇಪವನ್ನು ನಾವು ಬೇಡಿಕೊಳ್ಳುತ್ತೇವೆ. ಇಂತಹ ಕ್ರೂರ ಕೃತ್ಯಗಳು ವೈದ್ಯಕೀಯ ವೃತ್ತಿಪರರ ಸೇವೆಯ ತಳಹದಿಯನ್ನು ಅಲುಗಾಡಿಸುತ್ತವೆ. ಸಂತ್ರಸ್ತರ ಕುಟುಂಬದೊಂದಿಗೆ ನಾವು ನಿಲ್ಲುತ್ತೇವೆ, ಅವರ ನೋವು ಮತ್ತು ನಷ್ಟವನ್ನು ಊಹಿಸಲೂ ಸಾಧ್ಯವಿಲ್ಲ. ತಮ್ಮ ಕೆಲಸದ ಸಂದರ್ಭದಲ್ಲಿ ಇಂತಹ ಹಿಂಸೆಯನ್ನು ಹೆಚ್ಚಾಗಿ ಎದುರಿಸುತ್ತಿರುವ ವೈದ್ಯಕೀಯ ಸಮುದಾಯಕ್ಕೆ ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ. ಆರೋಗ್ಯ ವೃತ್ತಿಪರರ ಸುರಕ್ಷತೆ ಮತ್ತು ಘನತೆಯನ್ನು ಅತ್ಯಂತ ಆದ್ಯತೆಯೊಂದಿಗೆ ರಕ್ಷಿಸಬೇಕು.

ಇದನ್ನೂ ಓದಿ:Kolkata rape-murder: ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ: ಆರ್‌ಜಿ ಕರ್ ಆಸ್ಪತ್ರೆ ತಲುಪಿದ ಸಿಬಿಐ ತಂಡ

ಬಲವಾದ ಕ್ರಮಗಳು ತೀರಾ ಅಗತ್ಯ

ಇಂತಹ ದುಷ್ಕೃತ್ಯಗಳನ್ನು ತಡೆಯಲು ಬಲವಾದ ಕ್ರಮಗಳು ತೀರಾ ಅಗತ್ಯವಿದೆ. ಹೀಗಾಗಿ ಕಾನೂನು ಜಾರಿ ಸಂಸ್ಥೆಗಳು, ನೀತಿ ನಿರೂಪಕರು ಮತ್ತು ಸಮಾಜವು ತಕ್ಷಣವೇ ಈ ಕುರಿತು ಕ್ರಮವನ್ನು ತೆಗೆದುಕೊಳ್ಳುವಂತೆ ನಾವು ಮನವಿ ಮಾಡುತ್ತೇವೆ. ಈ ದುರಂತವು ನಿಜವಾದ, ಶಾಶ್ವತವಾದ ಬದಲಾವಣೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿ. ದಿವಂಗತ ನಿರ್ಭಯಾ ಮತ್ತು ಎಲ್ಲಾ ಲೈಂಗಿಕ ಹಿಂಸೆಯ ಬಲಿಪಶುಗಳಿಗೆ ಮತ್ತು ಭವಿಷ್ಯದ ಪೀಳಿಗೆಗೆ ಅಂತಹ ಭಯಾನಕತೆಯನ್ನು ಯೋಚಿಸಲಾಗದ ಸಮಾಜವನ್ನು ರಚಿಸಲು ನಾವು ಋಣಿಯಾಗಿದ್ದೇವೆ.

ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರು

1. ಡಾ ಹರ್ಷ್ ಮಹಾಜನ್ 2. ಡಾ ಅನೂಪ್ ಮಿಶ್ರಾ 3. ಡಾ ಎ ಕೆ ಗ್ರೋವರ್ 4. ಡಾ ಅಲ್ಕಾ ಕ್ರಿಪ್ಲಾನಿ 5. ಡಾ ಮೊಹ್ಸಿನ್ ವಾಲಿ 6. ಡಾ ಅಂಬ್ರಿಶ್ ಮಿಥಾಲ್ 7. ಡಾ ಪ್ರದೀಪ್ ಚೌಬೆ 8. ಡಾ ಅನಿಲ್ ಕೊಹ್ಲಿ 9. ಡಾ ಅರವಿಂದ್ ಲಾಲ್ 10. ಡಾ ಅಶೋಕ್ ಸೇಠ್ 11. ಡಾ ಬಲರಾಮ್ ಭಾರ್ಗವ 12. ಡಾ ಮಹೇಶ್ ವರ್ಮಾ 13. ಡಾ ಮಹಿಪಾಲ್ ಸಚ್‌ದೇವ್ 14. ಡಾ ಎನ್ ಪಿ ಗುಪ್ತಾ 15. ಡಾ ಪಿ ಕೆ ಜುಲ್ಕಾ 16. ಡಾ ಪ್ರವೀಣ್ ಚಂದ್ರ 17. ಡಾ ರಾಮನ್ ಕಪೂರ್ 18. ಡಾ ರಣದೀಪ್ ಗುಲೇರಿಯಾ 19. ಡಾ ಶಶಾಂಕ್ ಜೋಶಿ 20. ಡಾ ಶಿವಕುಮಾರ್ ಸರಿನ್ 21. ಡಾ ಸುಧೀರ್ ಶಾ 22. ಡಾ ಉಪೇಂದ್ರ ಕೌಲ್ 23. ಡಾ ಯಶ್ ಗುಲಾಟಿ 24. ಡಾ (ಲೆಫ್ಟಿನೆಂಟ್ ಜನರಲ್) ಬಿ ಎನ್ ಶಾಹಿ 25. ಡಾ ದೇವೇಂದ್ರ ತ್ರಿಗುಣ 26. ಡಾ ದಿನೇಶ್ ಭಾರ್ಗವ 27. ಡಾ ಬಲ್ಬೀರ್ ಸಿಂಗ್ 28. ಡಾ ಗಣೇಶ್ ಕೆ ಮಣಿ 29. ಡಾ ಲಲಿತ್ ಕುಮಾರ್ 30. ಡಾ ಎಂ ಖಲೀಲುಲ್ಲಾ 31. ಡಾ ಪುರಶೋತಮ್ ಲಾಲ್ 32. ಡಾ ಆರ್ ಕೆ ಗ್ರೋವರ್ 33. ಡಾ ಎಸ್ ಪಿ ಯಾದವ್ 34. ಡಾ ಅತುಲ್ ಕುಮಾರ್ 35. ಡಾ ಅರವಿಂದರ್ ಸಿಂಗ್ ಸೋಯಿನ್ 36. ಡಾ ಡಿ ಎಸ್ ರಾಣಾ 37. ಡಾ ಟಿ ಎಸ್ ಕ್ಲೇರ್ 38. ಡಾ ದಲ್ಜೀತ್ ಸಿಂಗ್ ಗಂಭೀರ್ 39. ಡಾ ಹಿಮ್ಮತ್ರಾವ್ ಬಾವಸ್ಕರ್ 40. ಡಾ ಜಗದೀಶ್ ಪ್ರಸಾದ್ 41. ಡಾ ಜೀವನ್ ಎಸ್ ತಿತಿಯಾಲ್ 42. ಡಾ ಕೆ ಕೆ ಸೇಥಿ 43. ಡಾ ಕೆ ಕೆ ನಾಯಕ್ 44. ಡಾ ಮಾಳವಿಕಾ ಸಬರ್ವಾಲ್ 45. ಡಾ ಮಂಜುಳಾ ಅನಗಣಿ 46. ಡಾ ನರೇಂದ್ರ ಪಾಂಡೆ 47. ಡಾ ನರೇಶ್ ಟ್ರೆಹಾನ್ 48. ಡಾ ನೀಲಂ ಕ್ಲೆರ್ 49. ಡಾ ನಿಖಿಲ್ ಟಂಡನ್ 50. ಡಾ ಎನ್ ಕೆ ಗಂಗೂಲಿ 51. ಡಾ ನಿತೀಶ್ ನಾಯ್ಕ್ 52. ಡಾ ನೋಶರ್ ಶ್ರಾಫ್ 53. ಏರ್ ಮಾರ್ಷಲ್ ಡಾ ಪದ್ಮಾ ಬಂಡೋಪಾಧ್ಯಾಯ 54. ಡಾ ಪಿ ಕೆ ಸೇಥಿ 55. ಡಾ ಅಶೋಕ್ ಗುಪ್ತಾ 56. ಪ್ರೊ ಜೆ ಎಂ ಹ್ಯಾನ್ಸ್ 57. ಪ್ರೊ ಆರ್ ಕೆ ಗ್ರೋವರ್ 58. ಡಾ ರವೀಂದ್ರ ಕೋಲ್ಹೆ 59. ಡಾ ಸಂದೀಪ್ ಗುಲೇರಿಯಾ 60. ಡಾ ಸಂಜೀವ್ ಬಗೈ 61. ಡಾ ರಣಧೀರ್ ಸುದ್ 62. ಡಾ ದೀಪಕ್ ಸೆಹಗಲ್ 63. ಡಾ ಎಸ್ ಸಿ ಮಂಚಂದ 64. ಡಾ ಸೌಮಿತ್ರಾ ರಾವತ್ 65. ಡಾ ರಮೀಂದರ್ ಗ್ರೋವರ್ 66. ಡಾ ಎಂ.ವಿ ಪದ್ಮಾ ಶ್ರೀವಾಸ್ತವ 67. ಡಾ. ಹರ್ಷ್ ಕುಮಾರ್ 68. ಡಾ. ಎ ಕೆ ಭಲ್ಲಾ 69. ಡಾ. ಬಿ ಕೆ ರಾವ್ 70. ಡಾ ಎಸ್ ಪಿ ಮಂಡಲ್ 71. ಡಾ. ಅಶೋಕ್ ವೈದ್

ದೈಹಿಕ ಹಲ್ಲೆಗಳು ಮತ್ತು ಎಲ್ಲಾ ಆರೋಗ್ಯ ಕಾರ್ಯಕರ್ತರ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗದಂತೆ ವೈದ್ಯಕೀಯ ವೃತ್ತಿಯನ್ನು ರಕ್ಷಿಸಲು ಪತ್ರದ ಮೂಲಕ ಪ್ರಧಾನಿ ಅವರಿಗೆ ಮನಃಪೂರ್ವಕವಾಗಿ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Sun, 18 August 24

Follow Us
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್