Namma Metro Blue Line: ನಮ್ಮ ಮೆಟ್ರೋ ಬ್ಲೂ ಲೈನ್ ಉದ್ಘಾಟನೆ ಯಾವಾಗ? ಡೆಡ್​ಲೈನ್ ನಿಗದಿಪಡಿಸಿದ ಬಿಎಂಆರ್​ಸಿಎಲ್

ನಮ್ಮ ಮೆಟ್ರೋ ಬ್ಲೂ ಲೈನ್: ಇದು ರಾಜಧಾನಿ ಬೆಂಗಳೂರಿನ ಅತಿ ಉದ್ದದ ಮೆಟ್ರೋ ಮಾರ್ಗ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಲೈನ್ ಕೂಡ ಹೌದು. ಈ ಮೆಟ್ರೋ ಮಾರ್ಗದ ಕಾಮಗಾರಿ ಮುಗಿಸಲು ಬಿಎಂಆರ್ಸಿಎಲ್, ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದೆ. ಇದರಿಂದ ಪ್ರಯಾಣಿಕರು ಖುಷಿಯಾಗಿದ್ದಾರೆ.

Namma Metro Blue Line: ನಮ್ಮ ಮೆಟ್ರೋ ಬ್ಲೂ ಲೈನ್ ಉದ್ಘಾಟನೆ ಯಾವಾಗ? ಡೆಡ್​ಲೈನ್ ನಿಗದಿಪಡಿಸಿದ ಬಿಎಂಆರ್​ಸಿಎಲ್
ನಮ್ಮ ಮೆಟ್ರೋ ಬ್ಲೂ ಲೈನ್ ಕಾಮಗಾರಿ
Edited By:

Updated on: Sep 03, 2025 | 9:27 AM

ಬೆಂಗಳೂರು, ಸೆಪ್ಟೆಂಬರ್ 3: ನಮ್ಮ ಮೆಟ್ರೋ ಯೆಲ್ಲೋ ಲೈನ್​ (ಆರ್​ವಿ ರಸ್ತೆಯಿಂದ ಬೊಮ್ಮಸಂದ್​ರ ಸಂಪರ್ಕಿಸುವ) ಆಗಸ್ಟ್ 10 ರಂದು ಕೊನೆಗೂ ಲೋಕಾರ್ಪಣೆಯಾಗಿದೆ. ಇದರೊಂದಿಗೆ ನಗರದ ಎಲ್ಲಾ ಮೆಟ್ರೋ (Namma Metro) ಕಾಮಗಾರಿಗಳಿಗೂ ವೇಗ ಸಿಕ್ಕಂತಾಗಿದೆ. ಇದೀಗ ಸೆಂಟ್ರಲ್ ಸಿಲ್ಕ್ ಬೋರ್ಡ್​​ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಮುಗಿಸಿ ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳಿಗೆ ಬಿಎಂಆರ್ಸಿಎಲ್ (BMRCL) ಡೆಡ್ಲೈನ್ ನೀಡಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ 2-A ಕಾಮಗಾರಿ ಮುಗಿಸಲು 2026 ಸೆಪ್ಟೆಂಬರ್, ಕೆ.ಆರ್ ಪುರ ಟು ಕೆಂಪೇಗೌಡ ಅಂತರರಾಷ್ಟ್ರೀಯ ಏರ್ಪೋರ್ಟ್ 2-B ಕಾಮಗಾರಿ ಮುಗಿಸಿ ಮೆಟ್ರೋ ರೈಲು ಸಂಚಾರ ಮಾಡಲು 2027 ರ ಜೂನ್ ಅಥವಾ ಜುಲೈ ಗೆ ಡೆಡ್ಲೈನ್ ನೀಡಲಾಗಿದೆ.

ಈಗಾಗಲೇ ಬ್ಲೂ ಲೈನ್ ಮಾರ್ಗದಲ್ಲಿ ಸಿವಿಲ್ ವರ್ಕ್ ಮುಗಿಯುವ ಹಂತದಲ್ಲಿದ್ದು ಟ್ರ್ಯಾಕ್ ಕೆಲಸ ಆರಂಭವಾಗಿದೆ. ಸಿಲ್ಕ್ ಬೋರ್ಡ್ ಟು ಏರ್ ಪೋರ್ಟ್ (58 ಕಿಮೀ) ಎಲ್ಲವೂ ಎಲಿವೇಟೆಡ್ ಸ್ಟೇಷನ್​ಗಳಾಗಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಟು ಕೆ.ಆರ್ ಪುರ (19.75 ಕಿಮಿ) 13 ಸ್ಟೇಷನ್​ಗಳು.ಕೆಆರ್. ಪುರ ಟು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (38.44) 17 ಸ್ಟೇಷನ್​ಗಳು.

38 ಚಾಲಕರಹಿತ ರೈಲುಗಳಿಗೆ ಆರ್ಡರ್

ಬ್ಲೂ ಲೈನ್ ಮೆಟ್ರೋ ಮಾರ್ಗಕ್ಕೆ ಅಂದಾಜು 38 ಡ್ರೈವರ್ಲೆಸ್​ ಟ್ರೈನ್​ಗಳಿಗೆ ಈಗಾಗಲೇ ಆರ್ಡರ್ ನೀಡಲಾಗಿದೆ. 3 ನೇ ಹಂತದ ಆರೆಂಜ್ ಲೈನ್ ಮತ್ತು 2A-2B ಬ್ಲೂ ಲೈನ್ ಮೆಟ್ರೋ ಪ್ರಯಾಣಿಕರಿಗಾಗಿ ಕೆಂಪಾಪುರದಲ್ಲಿ ಇಂಟರ್ ಚೇಂಜ್‌ ಮೆಟ್ರೋ ಸ್ಟೇಷನ್ ಓಪನ್ ಆಗಲಿದೆ.

ಇದನ್ನೂ ಓದಿ
ಕೆಆರ್​ ಮಾರುಕಟ್ಟೆಯಿಂದ ಹೆಬ್ಬಾಳಕ್ಕೆ ಹೂವಿನ ಮಂಡಿ ಸ್ಥಳಾಂತರ?
ಮಾಡೆಲ್, ಫಿಟ್ನೆಸ್ ಟ್ರೈನರ್ ಕೋಲಾರದ ಸುರೇಶ್ ಫ್ಲೊರಿಡಾದಲ್ಲಿ ಸಾವು
ಗಣೇಶ ವಿಸರ್ಜನೆ ವೇಳೆ ವಿದ್ಯುತ್ ತಂತಿ ಮೇಲೆತ್ತುವಾಗ ಶಾಕ್: ಯುವಕ ಸಾವು
ಗ್ರೇಟರ್ ಬೆಂಗಳೂರು: ಐದು ಪಾಲಿಕೆಗೆ ಆಯುಕ್ತರ ನೇಮಕ, ಆಡಳಿತ ಹೇಗಿರಲಿದೆ?

ಇದನ್ನೂ ಓದಿ: ಮುಂದಿನ ವಾರದಿಂದ ಟ್ರ್ಯಾಕಿಗಿಳಿಯಲಿದೆ ನಮ್ಮ ಮೆಟ್ರೋ ಯೆಲ್ಲೋ ಲೈನ್ ನಾಲ್ಕನೇ ರೈಲು

ಒಟ್ಟಿನಲ್ಲಿ ಸಾವಿರಾರು ಐಟಿ ಪಾರ್ಕ್​ಗಳಿಗೆ ಈ ಬ್ಲೂಲೈನ್ ಸಂಪರ್ಕ ಕಲ್ಪಿಸಲಿದ್ದು, ಇದರಿಂದ ಲಕ್ಷಾಂತರ ಜನರಿಗೆ ಸಹಾಯವಾಗುವುದರ ಜೊತೆಗೆ, ನಗರದಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಕಡಿಮೆ ಆಗುವ ನಿರೀಕ್ಷೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us